Tuesday 13 January, 2009

ಚಿತ್ರ ೮೭



ಕುಮಾರಸ್ವಾಮಿ ಕಡಾಕೊಳ್ಳ:

ರಾಗಿ ಬೆಳಸೆ
ರಾಗಿಯ ಹೊಲ ನೋಡು
ತೂಗೋ ತೆನೆ ಕಾಣು
ಬೆಳೆಸೆಯ ಬಯಕೆ ಬಂತು
ಬಾಯಲ್ಲ ನೀರು ತುಂಬ್ತು

ಉತ್ತರೆ ಮಳೆ ಬಂತು
ಒತ್ತಾಗಿ ಕಾಳ್ ತುಂಬ್ತು
ಮ್ಯಾರ್ಯಾಗೆ ಮೆದೆ ನಿಂನ್ತು
ಸುಗ್ಗಿ ಸೊಗಸು ಅಂತು

ಹಕ್ಕಿಗಳ ಹಿಂಡು ಬಂತು
ಇರುವೆಗಳು ಸಾಲುಕಂಡ್ತು
ಹುಟ್ಟೆಲ್ಲ ತಿಂದುಉಡ್ತು
ಉಳಿದಿದ್ದು ನಮಗಂತು

ಒಕ್ಕಲಿಗನ ಕಣತುಂಬ್ತು
ತುರುಗಳಿಗೆ ಮೇವಾಯ್ತು
ವರುಶಕ್ಕೆ ಕೂಳಾಯ್ತು
ನಾಳೆನ ತಲ್ಲಣ ಬಿಡ್ತು

ಹೆಂಗಪ್ಪಿನ ರಾಗಿಕಾಳು
ತಿಂದರೆ ಬ್ಯಾನೇ ದೂರು
ರಾಗಿತಿಂದವನ ನೋಡು
ಬೀಮನೇ ಅಂತೆ ಕೇಳು

ಕುಡಿಯ ಬೆಳಸಿದ ಕಾಳು
ಬಿಸಿಲು ಮಳೆಯಲಿ ಮಿಂದು
ಉತ್ತುಬಿತ್ತಿ ಬೆವರ ಹುಯ್ದು
ಹೊತ್ತು ಹೊತ್ತಿನಲಿ ಎದ್ದು

ಕುಡಿಯಾನ ಕೆಲಸದಾಗ
ನಾಡಿನ ಬದುಕೇ ಐತಿ
ಅಂತ ಒಕ್ಕಲಿಗನಿಗೆ
ನೂರು ಸಾಣು ಹೇಳು

ಕುಡಿಯ-ಒಕ್ಕಲಿಗ
ಸಾಣು- ವಂದನೆ, ನಮನ
ಹುಟ್ಟು- ಸೃಷ್ಠಿ

ಕುಕೂಊ(ಕುಮಾರಸ್ವಾಮಿ ಕಡಾಕೊಳ್ಳ)

ತವಿಶ್ರೀ:

ಭೂದೇವಿ
ಪುಟ್ಟ ಪುಟ್ಟ ಕಾಳು
ಕಪ್ಪು ಕಂದು ಬಣ್ಣದ ಕಾಳು
ಜೀವಿಗಳೆಲ್ಲವುಕೂ ಕೂಳು
ಕಣ್ಣು ಹಾಯುವವರೆವಿಗೆ ಸಾಲು ಸಾಲು

ಕೋಟಿ ಕೋಟಿ ಜೀವಿಗಳ ಶಕ್ತಿದಾತ
ಅಣುವಿನಲಣುವಿನ ರೂಪ
ಇದನರಿಯದೇ ಹತ್ತಿಕ್ಕುವವನು ಗಾಂಪ
ಜಗದಳಿವುಳಿವಿಗೆ ಆಗುವನು ಶಾಪ

ತುಂಬಿ ತುಳುಕುತ್ತಿದೆ ರಾಗಿ ತೆನೆ
ಬಡವನ ಹೊಟ್ಟೆ ತುಂಬುವ ಹಾಲ್ಗೆನೆ
ಕಟಾವಿಗೆ ಕಾಯುತ್ತಿದೆ
ಜೊಳ್ಳು ತೂರಿ ಗಟ್ಟಿ ಇಳಿಸಲು ಕಾಯುತ್ತಿದೆ
ಮಾರುಕಟ್ಟೆಯಲ್ಲಿ ರಾರಾಜಿಸಲು ಹವಣಿಸುತ್ತಿದೆ
ಮುದ್ದೆಯ ನುಂಗಲು ಲೋಕದ ಬಾಯಿ ಕಾಯುತ್ತಿದೆ

ಇದಲ್ಲವೇ ಭೂ ತಾಯಿಯ ಕರುಣೆ
ಹೊರುವಳು ಒಂದು ಕಾಳಿಗೆ ಕೋಟಿ ಕಾಳು ಕೊಡುವ ಬವಣೆ
ಕಡು ಕಷ್ಟಗಳ ಕೊಡಲೂ, ಹೊಮ್ಮಿಸುವಳು ಶಾಂತಿ ರೂಪ
ತಿಳಿ ಈಕೆಯೇ ದೈವ ಸ್ವರೂಪ

3 comments:

sunaath said...

ಚಿತ್ರದರ್ಶಿಯು ಕುಶಲನಿದ್ದಾಗ, ಮುಳ್ಳುಕುಮಾರಿಯೂ ಸುಂದರ
ರೂಪದರ್ಶಿಯಾಗಬಲ್ಲಳು!

ಕುಕೂಊ.. said...

** ರಾಗಿ ಬೆಳಸೆ **

ರಾಗಿಯ ಹೊಲ ನೋಡು
ತೂಗೋ ತೆನೆ ಕಾಣು
ಬೆಳೆಸೆಯ ಬಯಕೆ ಬಂತು
ಬಾಯಲ್ಲ ನೀರು ತುಂಬ್ತು

ಉತ್ತರೆ ಮಳೆ ಬಂತು
ಒತ್ತಾಗಿ ಕಾಳ್ ತುಂಬ್ತು
ಮ್ಯಾರ್ಯಾಗೆ ಮೆದೆ ನಿಂನ್ತು
ಸುಗ್ಗಿ ಸೊಗಸು ಅಂತು

ಹಕ್ಕಿಗಳ ಹಿಂಡು ಬಂತು
ಇರುವೆಗಳು ಸಾಲುಕಂಡ್ತು
ಹುಟ್ಟೆಲ್ಲ ತಿಂದುಉಡ್ತು
ಉಳಿದಿದ್ದು ನಮಗಂತು

ಒಕ್ಕಲಿಗನ ಕಣತುಂಬ್ತು
ತುರುಗಳಿಗೆ ಮೇವಾಯ್ತು
ವರುಶಕ್ಕೆ ಕೂಳಾಯ್ತು
ನಾಳೆನ ತಲ್ಲಣ ಬಿಡ್ತು

ಹೆಂಗಪ್ಪಿನ ರಾಗಿಕಾಳು
ತಿಂದರೆ ಬ್ಯಾನೇ ದೂರು
ರಾಗಿತಿಂದವನ ನೋಡು
ಬೀಮನೇ ಅಂತೆ ಕೇಳು

ಕುಡಿಯ ಬೆಳಸಿದ ಕಾಳು
ಬಿಸಿಲು ಮಳೆಯಲಿ ಮಿಂದು
ಉತ್ತುಬಿತ್ತಿ ಬೆವರ ಹುಯ್ದು
ಹೊತ್ತು ಹೊತ್ತಿನಲಿ ಎದ್ದು

ಕುಡಿಯಾನ ಕೆಲಸದಾಗ
ನಾಡಿನ ಬದುಕೇ ಐತಿ
ಅಂತ ಒಕ್ಕಲಿಗನಿಗೆ
ನೂರು ಸಾಣು ಹೇಳು

ಕುಡಿಯ-ಒಕ್ಕಲಿಗ
ಸಾಣು- ವಂದನೆ, ನಮನ
ಹುಟ್ಟು- ಸೃಷ್ಠಿ

ಕುಕೂಊ(ಕುಮಾರಸ್ವಾಮಿ ಕಡಾಕೊಳ್ಳ)
ಪುಣೆ

Unknown said...

ಭೂದೇವಿ

ಪುಟ್ಟ ಪುಟ್ಟ ಕಾಳು
ಕಪ್ಪು ಕಂದು ಬಣ್ಣದ ಕಾಳು
ಜೀವಿಗಳೆಲ್ಲವುಕೂ ಕೂಳು
ಕಣ್ಣು ಹಾಯುವವರೆವಿಗೆ ಸಾಲು ಸಾಲು

ಕೋಟಿ ಕೋಟಿ ಜೀವಿಗಳ ಶಕ್ತಿದಾತ
ಅಣುವಿನಲಣುವಿನ ರೂಪ
ಇದನರಿಯದೇ ಹತ್ತಿಕ್ಕುವವನು ಗಾಂಪ
ಜಗದಳಿವುಳಿವಿಗೆ ಆಗುವನು ಶಾಪ

ತುಂಬಿ ತುಳುಕುತ್ತಿದೆ ರಾಗಿ ತೆನೆ
ಬಡವನ ಹೊಟ್ಟೆ ತುಂಬುವ ಹಾಲ್ಗೆನೆ
ಕಟಾವಿಗೆ ಕಾಯುತ್ತಿದೆ
ಜೊಳ್ಳು ತೂರಿ ಗಟ್ಟಿ ಇಳಿಸಲು ಕಾಯುತ್ತಿದೆ
ಮಾರುಕಟ್ಟೆಯಲ್ಲಿ ರಾರಾಜಿಸಲು ಹವಣಿಸುತ್ತಿದೆ
ಮುದ್ದೆಯ ನುಂಗಲು ಲೋಕದ ಬಾಯಿ ಕಾಯುತ್ತಿದೆ

ಇದಲ್ಲವೇ ಭೂ ತಾಯಿಯ ಕರುಣೆ
ಹೊರುವಳು ಒಂದು ಕಾಳಿಗೆ ಕೋಟಿ ಕಾಳು ಕೊಡುವ ಬವಣೆ
ಕಡು ಕಷ್ಟಗಳ ಕೊಡಲೂ, ಹೊಮ್ಮಿಸುವಳು ಶಾಂತಿ ರೂಪ
ತಿಳಿ ಈಕೆಯೇ ದೈವ ಸ್ವರೂಪ