Monday 19 November, 2007

ಚಿತ್ರ - ೨೮




ಸತೀಶ ಅವರ ಕೀಲಿಮಣೆಯಿಂದ... ಏನವ್ವಾ ತಾಯಿ...

ಏನವ್ವಾ ತಾಯಿ ಆಸೆ ಆಮಿಷ ಹೊತ್ಕೊಂಡ್ ಕುಂತೀ
ಆಸೆ ಆಮಿಷ ಇದ್ದೋರ್ ಯಾರೂ ತೋರ್ಸೋದಂತೂ ಇಲ್ಲ
ಸಾಲಾ ಮೈಮೇಲ್ ಬಿದ್ದು ರೌದ್ರ ನರ್ತನ ಮಾಡೋ ಮುನ್ನ
ಸರತೀ ಸಾಲಲ್ಲಿ ನಿಂತ್ಕೊಳೋದು ಒಳಿತು ನೀನು ನಿನ್ನತನವನ್ನ.

ಏನವ್ವಾ ನೀನು ಎಲ್ಲಾರ್ ಮುಂದ ಅಂಗಡಿ ತಕ್ಕೊಂಡ್ ಕುಂತೀ
ಕನ್ಸೂ ಮನ್ಸುಗಳನೆಲ್ಲಾ ಯಾರೂ ಬಿಚ್ಕೊಂಡ್ ಕೂರೋದಿಲ್ಲ
ಕಾಲಾ ಎದ್ದೂ ಮುಂದಿನ ಮನೆಗೆ ಹೋಗೋ ಒಳಗೇ ತನ್ನ
ಕಾಲ ಮೇಲೆ ನಿಂತ್ಕೊಳೋದ್ ನೀನು ನೋಡೋದ್ ಚೆನ್ನ.

ಏನವ್ವಾ ಮಗಳೇ ಸಂಪ್ರದಾಯ ಮೈ ಮೇಲ್ ಹೊದ್ಕೊಂಡ್ ಕುಂತೀ
ಆಚಾರ ವಿಚಾರಗಳೆಲ್ಲ ಇಂದು ದಿಣ್ಣನೆ ಬದಲಾಗ್ತಿರೋ ಕಾಲ್ದಲ್ಲಿ
ನಿನಗೊಬ್ಳಿಗೇ ಏಕೆ ಹಿಂದಿನದನ್ನು ಮುಂದಕ್ಕೊಯ್ಯುವ ತವ್ಕಾ
ಕೇಳಿಲ್ಲೇನೂ ನಿನ್ನ ವಾರಿಗೆಯವರ ಹಡೆದವ್ವರೂ ಮರುಹುಟ್ಟಿರೋ ಗಮ್ಕಾ.

ಏನವ್ವಾ ನೀನು ಮುರಾ ಸಂಜೆಗೆ ರಂಗನು ಮೆತ್ತೋರ್ ಹಾಗೆ ಕುಂತೀ
ಅಪ್ಪಾ ಅಣ್ಣಾ ಮನೇಗ್ ಇನ್ನೇನ್ ಬಂದೇ ಬಿಟ್ರೂ ಅನ್ನೋ ಹೊತ್ನಲ್ಲಿ
ಹೊಟ್ಟೇ ಪಾಡಿನ್ ರಾತ್ರೀ ರೊಟ್ಟೀ ಹುಡುಕೋ ನಮ್ಮ ಬೀಡಲ್ಲಿ
ಬದಲೀ ಯಾಕೆ ಹೆಣ್ಣು ಮಕ್ಳೂ ಹಿಂಗೇ ಇರ್ಲಿ ಎನ್ನೋ ನಮ್ಮ ನಾಡಲ್ಲಿ.


ಸಿಂಧು ಅವರ ನೋಟ... ಬದುಕು!

ಕವಡೆ ಬೀಸಿದಾಗಲೆಲ್ಲ
ಬಿದ್ದಿದ್ದು ವಚ್ಚಿ
ಒಂದೊಂದೇ ಹೆಜ್ಜೆ ಇಟ್ಟು
ಮುನ್ನಡೆದ ಬದುಕ
ಹಾದಿಯ ತುಂಬ
ಬಿಸಿಲು ನೆರಳಾಟ
ಯಾರದೋ ಕಣ್ ಸೆಳೆದು
ಕವಡೆ ಜೋತಿಷ ನುಡಿಯೆ
ಬರುವ ದಕ್ಷಿಣೆಗೆ
ಸರಿಹೋದೀತು
ಸೆಟ್ಟರಂಗಡಿಯ ಲೆಕ್ಕ
ದಿನಕೊಂದು ಹೊತ್ತು ಉಂಡರೆ
ಅದೇ ಸುಖ.

ಕವಡೆಯ ಬೀಸಿ
ತಮ್ಮ ನಾಳೆಯ ತಾವೆ ತಿಳಿವವರು
ಕೂರುವರು ಇಲ್ಯಾಕ
ನಮ್ಮ ನಾಳೆ ನಿನ್ನೆಗಳೆಲ್ಲ ಒಂದೇ,
ಇಂದೇ!
ತಿಳಿಯುವ ತಿಣುಕಾಟವಿಲ್ಲ
ಬರಿದೆ
ಬದುಕಬೇಕಿದೆ!

ಜೋತಿಷ ಕೇಳಿದ ಮಂದಿ
ಪಾರ್ಕು ದಾಟುವ ಮುನ್ನವೆ
ಮರೆತವರು
ನಾನು ಮರೆಯುವ ಹಾಗಿಲ್ಲ
ನನ್ನ ಮೂಗಿಗೇ ಕವಡೆ!

ಬೀಳಲಿ ಒಂದಾದರೂ
ಚಿತ್ತ!! ಭಾರ!! ಎಂಬಾಸೆ
ಉಂಹೂಂ
ಬರೀ ವಚ್ಚಿ
ಪ್ರತೀ ಸಲಿಯೂ
ಬೆರಳಸಂದಿಯಲೆ ನುಸಿದು ಹೋಗುವ
ಗಿಚ್ಚಿ..


ಮನಸ್ವಿನಿ ಅವರ ಕಲ್ಪನೆಯಲ್ಲಿ...

ದೀಪದ ಬೆಳಕಲ್ಲಿ
ಹಳೆಯ ಸಾಮಾನು
ಹರಡಿ ಕೂತಿದ್ದೇನೆ
ಚಂದದ ಗೊಂಬೆಗಳಲ್ಲ
ಅಂದದ ಬಳೆಗಳಲ್ಲ
ನನ್ನ ಮಣೆ,ಕವಡೆ
ಆಡುವ ಹೊತ್ತಲ್ಲ
ಜೊತೆಯಲಿ ಯಾರಿಲ್ಲ
ಹಿಂದೆ ಮಲಗಿರೋ ಅವ್ವ
ದೀಪವಾರಿಸಹತ್ತಿದ್ದಾಳೆ
ಬೈಯುತ್ತಿದ್ದಾಳೆ
ಸಾಮಾನು ಕಟ್ಟಿಟ್ಟು
ಆಸೆಗಳನ್ನ ಮುಚ್ಚಿಟ್ಟು
ಮಲಗುತ್ತೇನೆ ಈಗ!

3 comments:

Satish said...

ಏನವ್ವಾ ತಾಯಿ...

ಏನವ್ವಾ ತಾಯಿ ಆಸೆ ಆಮಿಷ ಹೊತ್ಕೊಂಡ್ ಕುಂತೀ
ಆಸೆ ಆಮಿಷ ಇದ್ದೋರ್ ಯಾರೂ ತೋರ್ಸೋದಂತೂ ಇಲ್ಲ
ಸಾಲಾ ಮೈಮೇಲ್ ಬಿದ್ದು ರೌದ್ರ ನರ್ತನ ಮಾಡೋ ಮುನ್ನ
ಸರತೀ ಸಾಲಲ್ಲಿ ನಿಂತ್ಕೊಳೋದು ಒಳಿತು ನೀನು ನಿನ್ನತನವನ್ನ.

ಏನವ್ವಾ ನೀನು ಎಲ್ಲಾರ್ ಮುಂದ ಅಂಗಡಿ ತಕ್ಕೊಂಡ್ ಕುಂತೀ
ಕನ್ಸೂ ಮನ್ಸುಗಳನೆಲ್ಲಾ ಯಾರೂ ಬಿಚ್ಕೊಂಡ್ ಕೂರೋದಿಲ್ಲ
ಕಾಲಾ ಎದ್ದೂ ಮುಂದಿನ ಮನೆಗೆ ಹೋಗೋ ಒಳಗೇ ತನ್ನ
ಕಾಲ ಮೇಲೆ ನಿಂತ್ಕೊಳೋದ್ ನೀನು ನೋಡೋದ್ ಚೆನ್ನ.

ಏನವ್ವಾ ಮಗಳೇ ಸಂಪ್ರದಾಯ ಮೈ ಮೇಲ್ ಹೊದ್ಕೊಂಡ್ ಕುಂತೀ
ಆಚಾರ ವಿಚಾರಗಳೆಲ್ಲ ಇಂದು ದಿಣ್ಣನೆ ಬದಲಾಗ್ತಿರೋ ಕಾಲ್ದಲ್ಲಿ
ನಿನಗೊಬ್ಳಿಗೇ ಏಕೆ ಹಿಂದಿನದನ್ನು ಮುಂದಕ್ಕೊಯ್ಯುವ ತವ್ಕಾ
ಕೇಳಿಲ್ಲೇನೂ ನಿನ್ನ ವಾರಿಗೆಯವರ ಹಡೆದವ್ವರೂ ಮರುಹುಟ್ಟಿರೋ ಗಮ್ಕಾ.

ಏನವ್ವಾ ನೀನು ಮುರಾ ಸಂಜೆಗೆ ರಂಗನು ಮೆತ್ತೋರ್ ಹಾಗೆ ಕುಂತೀ
ಅಪ್ಪಾ ಅಣ್ಣಾ ಮನೇಗ್ ಇನ್ನೇನ್ ಬಂದೇ ಬಿಟ್ರೂ ಅನ್ನೋ ಹೊತ್ನಲ್ಲಿ
ಹೊಟ್ಟೇ ಪಾಡಿನ್ ರಾತ್ರೀ ರೊಟ್ಟೀ ಹುಡುಕೋ ನಮ್ಮ ಬೀಡಲ್ಲಿ
ಬದಲೀ ಯಾಕೆ ಹೆಣ್ಣು ಮಕ್ಳೂ ಹಿಂಗೇ ಇರ್ಲಿ ಎನ್ನೋ ನಮ್ಮ ನಾಡಲ್ಲಿ.

ಸಿಂಧು sindhu said...

ಬದುಕು!

ಕವಡೆ ಬೀಸಿದಾಗಲೆಲ್ಲ
ಬಿದ್ದಿದ್ದು ವಚ್ಚಿ
ಒಂದೊಂದೇ ಹೆಜ್ಜೆ ಇಟ್ಟು
ಮುನ್ನಡೆದ ಬದುಕ
ಹಾದಿಯ ತುಂಬ
ಬಿಸಿಲು ನೆರಳಾಟ
ಯಾರದೋ ಕಣ್ ಸೆಳೆದು
ಕವಡೆ ಜೋತಿಷ ನುಡಿಯೆ
ಬರುವ ದಕ್ಷಿಣೆಗೆ
ಸರಿಹೋದೀತು
ಸೆಟ್ಟರಂಗಡಿಯ ಲೆಕ್ಕ
ದಿನಕೊಂದು ಹೊತ್ತು ಉಂಡರೆ
ಅದೇ ಸುಖ.

ಕವಡೆಯ ಬೀಸಿ
ತಮ್ಮ ನಾಳೆಯ ತಾವೆ ತಿಳಿವವರು
ಕೂರುವರು ಇಲ್ಯಾಕ
ನಮ್ಮ ನಾಳೆ ನಿನ್ನೆಗಳೆಲ್ಲ ಒಂದೇ,
ಇಂದೇ!
ತಿಳಿಯುವ ತಿಣುಕಾಟವಿಲ್ಲ
ಬರಿದೆ
ಬದುಕಬೇಕಿದೆ!

ಜೋತಿಷ ಕೇಳಿದ ಮಂದಿ
ಪಾರ್ಕು ದಾಟುವ ಮುನ್ನವೆ
ಮರೆತವರು
ನಾನು ಮರೆಯುವ ಹಾಗಿಲ್ಲ
ನನ್ನ ಮೂಗಿಗೇ ಕವಡೆ!

ಬೀಳಲಿ ಒಂದಾದರೂ
ಚಿತ್ತ!! ಭಾರ!! ಎಂಬಾಸೆ
ಉಂಹೂಂ
ಬರೀ ವಚ್ಚಿ
ಪ್ರತೀ ಸಲಿಯೂ
ಬೆರಳಸಂದಿಯಲೆ ನುಸಿದು ಹೋಗುವ
ಗಿಚ್ಚಿ..

ಮನಸ್ವಿನಿ said...

ದೀಪದ ಬೆಳಕಲ್ಲಿ
ಹಳೆಯ ಸಾಮಾನು
ಹರಡಿ ಕೂತಿದ್ದೇನೆ
ಚಂದದ ಗೊಂಬೆಗಳಲ್ಲ
ಅಂದದ ಬಳೆಗಳಲ್ಲ
ನನ್ನ ಮಣೆ,ಕವಡೆ
ಆಡುವ ಹೊತ್ತಲ್ಲ
ಜೊತೆಯಲಿ ಯಾರಿಲ್ಲ
ಹಿಂದೆ ಮಲಗಿರೋ ಅವ್ವ
ದೀಪವಾರಿಸಹತ್ತಿದ್ದಾಳೆ
ಬೈಯುತ್ತಿದ್ದಾಳೆ
ಸಾಮಾನು ಕಟ್ಟಿಟ್ಟು
ಆಸೆಗಳನ್ನ ಮುಚ್ಚಿಟ್ಟು
ಮಲಗುತ್ತೇನೆ ಈಗ!