Monday 24 December, 2007

ಚಿತ್ರ- ೩೩



ಪುಣೆಯ ಕುಮಾರಸ್ವಾಮಿ, ತಮ್ಮ 'ರಣಧೀರ ಶಿವಾಜಿ' ಕವನದಲ್ಲಿ ಅಜ್ಜ ತನ್ನ ಮೊಮ್ಮಗನಿಗೆ ಇತಿಹಾಸ ಪುಟಗಳನ್ನು ತೆರೆದಿಟ್ಟಿದ್ದು ಹೀಗೆ:

ಅಜ್ಜ ಯಾರ ಮೂರ್ತಿ ಇದು
ಎಷ್ಟೊಂದು ಗಂಭೀರ ವರ್ಚಸ್ಸು
ಯಾರು ಈ ತೇಜೋ ಪುರುಷ
ಹೇಳು ನನಗೆ ಮೂರ್ತಿಯ ಕಥೆಯನ್ನ

ಮೊಘಲರ ಅಟ್ಟಹಾಸ ಹುಟ್ಟಡಗಿಸಿ
ಪಶ್ಚಿಮ ದೇಶದ ಕೆಂಪು ಮೂತಿಗಳ ತೇಜೋವದೆ ಮಾಡುತ್ತ
ಆಹತಕೆ ಸಿಕ್ಕು ನರಳಿದ ಹಿಂದೂನೆಲವನ್ನು
ಮತ್ತೇ ಸಲಹಿದ ಧೀರೋತ್ತಮ ಶಿವಾಜಿ ಈತನು

ಅಳಿದ ವಿಜಯನಗರ ಸಾರ್ಮಾಜ್ಯದ ನೆಲದಲ್ಲಿ
ಬಸವಳಿದು ಹೋಗಿದ್ದ ಹಿಂದುಗಳ ಹಿಂಡಲ್ಲಿ
ಗಂಡುಗಲಿಯಂತೆ ಗರ್ವದಿಂದ ಮೇಲೆದ್ದು ಬಂದು
ನರ ರಾಕ್ಷಸರ ಒಡಲ ಸೀಳಿದ ಅಂಜದ ಗಂಡಿವನು

ರಾಮಧಾಸರಿಂದ ಧರ್ಮ ರಕ್ಷಣೆಯ ದೀಕ್ಷೆತೊಟ್ಟು
ಮಾವಳಿಗಳಿಂದ ಸೈನಿಕ ದಂಡು ಕಟ್ಟಿ
ಸಯ್ಯಾದ್ರಿ ಶಿಕರದಲ್ಲಿ ಕೋಟೆಗಳ ಕಟ್ಟಿ
ಶತ್ರುಗಳ ರಟ್ಟೆಯನು ಹುಟ್ಟಡಗಿಸಿದ ರಣಧೀರನು

ಜೀಜಾಮಾತೆಯ ಶ್ರೀರಕ್ಷೆಯಲ್ಲಿ
ದಾದಾಜಿ ಕೊಂಡದೇವ ಗುರು ಮಾರ್ಗದರ್ಶನದಲ್ಲಿ
ವೇದ ಶಾಸ್ತ್ರ ಪುರಾಣಗಳ ಅರಿತ ನಿಪುಣನು
ಇಂದು ನಮೆಲ್ಲರಿಗಾಗಿಹನು ಮಾರ್ಗದರ್ಶಕನು

ಸಯ್ಯಾದ್ರಿಯ ಶಿಕರದಲ್ಲಿ ಕೋಟೆ ಕೊತ್ತಲಗಳಲಿ
ಗುಡಿ ಗೋಪುರದಲ್ಲಿ ಕಾಡು ಕೊಲ್ಲಿಗಳಲ್ಲಿ
ಹಿಂದೂ ದರ್ಮದ ಕೀರ್ತಿದ್ವಜವ ಹಾರಿಸಿದ
ಅಮರ ಕೀರ್ತಿವಂತನು ಈ ಶಿವಾಬನು

ಮೊಮ್ಮಗ ಸಿನಿಕನಾಗಿ ಇತಿಹಾಸದ ಬಗ್ಗೆ ಹೇಳಿದ ತಾತನ ಮೇಲೆ ಹರಿಹಾಯ್ದಿದ್ದು, ಸತೀಶ ಅವರು ನಮ್ಮ ಎದುರಿಗೆ 'ಅದೇನು ಕಥೆ ಅಂತ ಹೇಳ್ತೀರೋ ತಾತ?' ಎನ್ನುವ ಕವನದಲ್ಲಿ ಓದುಗರಿಗೆ ಹೇಳಿದ್ದು :

ತೋಪು ಮತಾಪು ಪಿರಂಗಿಗಳನೆಲ್ಲ ಎತ್ತರದ
ಕಟ್ಟೆ ಏರಿಸಿ ಸುತ್ತಲನು ನಂದನವನವ ಮಾಡಿ
ಅದೆಷ್ಟೋ ಜನರು ರಕ್ತ ಸುರಿಸಿ ಬೆಳೆದ ನಾಡ
ನೆಲವ ಹಸಿರಿನಿಂದ ಕಂಗೊಳಿಸಿ ಅದೇನು
ಕಥೆ ಅಂತ ಹೇಳ್ತೀರೋ ತಾತ?

ಸ್ವಾತಂತ್ರ್ಯಾ ಅಂತ ಅದೇನೇನೋ ಹೇಳ್ತೀರಾ
ಅದು ನಮ್ಮೊಳಗಿದೆಯೋ ಅಥವಾ ಹೊರಗೋ
ಕಥೆ ಹೇಳೋರ್ ಪ್ರತಿಮೆಗಳನೆಲ್ಲ ಏರಿಸಿಡ್ತೀರಾ
ಮೇಲಿನ ಕೊಳೆಯನು ತೊಳೆಯದ ಅದೇನು
ಕಥೆ ಅಂತ ಹೇಳ್ತೀರೋ ತಾತ?

ಪರಂಗಿಯವ್ರನ್ನ ಒಳಗಡೆ ಯಾಕ್ ಬಿಟ್‌ಗೊಂಡ್ರಿ
ಹಾಗೆ ಬಂದೋರನ್ನ ಬೆಳೆಯೋಕ್ ಯಾಕ್ ಬಿಟ್ರಿ
ಅಂದೇ ನಿಮ್ಮೊಳಗಿರದಿದ್ದ ಒಗ್ಗಟಿನಿಂದ ಕಲಿತದ್ದೇನು
ಏನೇನೋ ಪ್ರಶ್ನೆಗೆ ಉತ್ತರವೇ ಸಿಗದ ಅದೇನು
ಕಥೆ ಅಂತ ಹೇಳ್ತೀರೋ ತಾತ?

ಅಂದು ಸಿಡಿಯದೇ ಉಳಿದ ತೋಪು ಮತಾಪುಗಳು
ನೀರು ನೆಲವ ಕಂಡಿರದ ಅದೆಷ್ಟೋ ಬೀಜಗಳು
ಇಂದು ಜಗವನ್ನೇ ಜನರು ಸಣ್ಣದನಾಗಿ ಮಾಡುವ ಹೊತ್ತಿಗೆ
ಎಲ್ಲಿಂದೆಲ್ಲಿಗೆ ಹೊರಡುತ್ತಿದ್ದೇವೆಂದು ತೋರದ ಅದೇನು
ಕಥೆ ಅಂತ ಹೇಳ್ತೀರೋ ತಾತ?

2 comments:

ಕುಕೂಊ.. said...

~~``~~ ರಣಧೀರ ಶಿವಾಜಿ ~~``~~

ಅಜ್ಜ ಯಾರ ಮೂರ್ತಿ ಇದು
ಎಷ್ಟೊಂದು ಗಂಭೀರ ವರ್ಚಸ್ಸು
ಯಾರು ಈ ತೇಜೋ ಪುರುಷ
ಹೇಳು ನನಗೆ ಮೂರ್ತಿಯ ಕಥೆಯನ್ನ

ಮೊಘಲರ ಅಟ್ಟಹಾಸ ಹುಟ್ಟಡಗಿಸಿ
ಪಶ್ಚಿಮ ದೇಶದ ಕೆಂಪು ಮೂತಿಗಳ ತೇಜೋವದೆ ಮಾಡುತ್ತ
ಆಹತಕೆ ಸಿಕ್ಕು ನರಳಿದ ಹಿಂದೂನೆಲವನ್ನು
ಮತ್ತೇ ಸಲಹಿದ ಧೀರೋತ್ತಮ ಶಿವಾಜಿ ಈತನು

ಅಳಿದ ವಿಜಯನಗರ ಸಾರ್ಮಾಜ್ಯದ ನೆಲದಲ್ಲಿ
ಬಸವಳಿದು ಹೋಗಿದ್ದ ಹಿಂದುಗಳ ಹಿಂಡಲ್ಲಿ
ಗಂಡುಗಲಿಯಂತೆ ಗರ್ವದಿಂದ ಮೇಲೆದ್ದು ಬಂದು
ನರ ರಾಕ್ಷಸರ ಒಡಲ ಸೀಳಿದ ಅಂಜದ ಗಂಡಿವನು

ರಾಮಧಾಸರಿಂದ ಧರ್ಮ ರಕ್ಷಣೆಯ ದೀಕ್ಷೆತೊಟ್ಟು
ಮಾವಳಿಗಳಿಂದ ಸೈನಿಕ ದಂಡು ಕಟ್ಟಿ
ಸಯ್ಯಾದ್ರಿ ಶಿಕರದಲ್ಲಿ ಕೋಟೆಗಳ ಕಟ್ಟಿ
ಶತ್ರುಗಳ ರಟ್ಟೆಯನು ಹುಟ್ಟಡಗಿಸಿದ ರಣಧೀರನು

ಜೀಜಾಮಾತೆಯ ಶ್ರೀರಕ್ಷೆಯಲ್ಲಿ
ದಾದಾಜಿ ಕೊಂಡದೇವ ಗುರು ಮಾರ್ಗದರ್ಶನದಲ್ಲಿ
ವೇದ ಶಾಸ್ತ್ರ ಪುರಾಣಗಳ ಅರಿತ ನಿಪುಣನು
ಇಂದು ನಮೆಲ್ಲರಿಗಾಗಿಹನು ಮಾರ್ಗದರ್ಶಕನು

ಸಯ್ಯಾದ್ರಿಯ ಶಿಕರದಲ್ಲಿ ಕೋಟೆ ಕೊತ್ತಲಗಳಲಿ
ಗುಡಿ ಗೋಪುರದಲ್ಲಿ ಕಾಡು ಕೊಲ್ಲಿಗಳಲ್ಲಿ
ಹಿಂದೂ ದರ್ಮದ ಕೀರ್ತಿದ್ವಜವ ಹಾರಿಸಿದ
ಅಮರ ಕೀರ್ತಿವಂತನು ಈ ಶಿವಾಬನು

ಕುಮಾರ ಸ್ವಾಮಿ ಕಡಾಕೊಳ್ಳ
ಪುಣೆ

Satish said...

ಅದೇನು ಕಥೆ ಅಂತ ಹೇಳ್ತೀರೋ ತಾತ?

ತೋಪು ಮತಾಪು ಪಿರಂಗಿಗಳನೆಲ್ಲ ಎತ್ತರದ
ಕಟ್ಟೆ ಏರಿಸಿ ಸುತ್ತಲನು ನಂದನವನವ ಮಾಡಿ
ಅದೆಷ್ಟೋ ಜನರು ರಕ್ತ ಸುರಿಸಿ ಬೆಳೆದ ನಾಡ
ನೆಲವ ಹಸಿರಿನಿಂದ ಕಂಗೊಳಿಸಿ ಅದೇನು
ಕಥೆ ಅಂತ ಹೇಳ್ತೀರೋ ತಾತ?

ಸ್ವಾತಂತ್ರ್ಯಾ ಅಂತ ಅದೇನೇನೋ ಹೇಳ್ತೀರಾ
ಅದು ನಮ್ಮೊಳಗಿದೆಯೋ ಅಥವಾ ಹೊರಗೋ
ಕಥೆ ಹೇಳೋರ್ ಪ್ರತಿಮೆಗಳನೆಲ್ಲ ಏರಿಸಿಡ್ತೀರಾ
ಮೇಲಿನ ಕೊಳೆಯನು ತೊಳೆಯದ ಅದೇನು
ಕಥೆ ಅಂತ ಹೇಳ್ತೀರೋ ತಾತ?

ಪರಂಗಿಯವ್ರನ್ನ ಒಳಗಡೆ ಯಾಕ್ ಬಿಟ್‌ಗೊಂಡ್ರಿ
ಹಾಗೆ ಬಂದೋರನ್ನ ಬೆಳೆಯೋಕ್ ಯಾಕ್ ಬಿಟ್ರಿ
ಅಂದೇ ನಿಮ್ಮೊಳಗಿರದಿದ್ದ ಒಗ್ಗಟಿನಿಂದ ಕಲಿತದ್ದೇನು
ಏನೇನೋ ಪ್ರಶ್ನೆಗೆ ಉತ್ತರವೇ ಸಿಗದ ಅದೇನು
ಕಥೆ ಅಂತ ಹೇಳ್ತೀರೋ ತಾತ?

ಅಂದು ಸಿಡಿಯದೇ ಉಳಿದ ತೋಪು ಮತಾಪುಗಳು
ನೀರು ನೆಲವ ಕಂಡಿರದ ಅದೆಷ್ಟೋ ಬೀಜಗಳು
ಇಂದು ಜಗವನ್ನೇ ಜನರು ಸಣ್ಣದನಾಗಿ ಮಾಡುವ ಹೊತ್ತಿಗೆ
ಎಲ್ಲಿಂದೆಲ್ಲಿಗೆ ಹೊರಡುತ್ತಿದ್ದೇವೆಂದು ತೋರದ ಅದೇನು
ಕಥೆ ಅಂತ ಹೇಳ್ತೀರೋ ತಾತ?