Monday 3 March, 2008

ಚಿತ್ರ - ೪೩


ಶ್ರೀನಿಧಿ ಅವರು ತೆಗೆದ ಛಾಯಾಚಿತ್ರ


"ಹೆಜ್ಜೆ ಗುರುತು" ಎನ್ನುವ ಮನೋಜ್ಞವಾದ ಕವಿತೆಯ ಮೂಲಕ ಕುಮಾರ ಸ್ವಾಮಿ ಕಡಾಕೊಳ್ಳ ಅವರು ಈ ಛಾಯಾಚಿತ್ರವನ್ನು ಓದುಗರ ಮುಂದೆ ತೆಗೆದಿಟ್ಟಿದ್ದು ಹೀಗೆ:

ಹತ್ತು ಹಲವು ತಿರುವಿನಲ್ಲಿ
ಸುತ್ತುಹಾಕಿ ಬೆಪ್ಪನಾಗಿ
ನಡೆದು ಬಂದೆ ಹುಟ್ಟಿನಿಂದ
ಬದಕಿನ ದೂರ ದಾರಿಯಲ್ಲಿ

ಬಾಲ್ಯದಾಟ ಸೊಗಸ ದಾಟಿ
ಏರಿಬಂದ ಯವೌನ ಮೀಟಿ
ಕೂಡಿಕೊಂಡು ಸರಸ ಸತಿ
ದಾಟುತಿಹೆನು ಬದುಕ ತಟ

ಕಾಮ ಮೋಹ ಈರ್ಷ್ಯೆ ದ್ವೇಷ
ಸೆಳವಿನಲ್ಲಿ ಸೆಣಸಿ ಬಂದೆ
ಪ್ರೀತಿ ಪ್ರೇಮ ಸ್ನೇಹ ಅನುಭಂದ
ಸಮ್ಮೋಹಿತ ಸಾರ ಹೀರಿ ಬಂದೆ

ಏಳು ಬೀಳು ನಿತ್ಯ ಬಾಳು
ಹಗಲು ರಾತ್ರಿ ಎಲ್ಲ ಗೆದ್ದು
ಎದ್ದು ಬಂದೆ ನೆನಪು ತುಂಬಿ
ಇದ್ದ ದಾರಿ ನಡೆದು ಸವೆಸಲು

ಹುಟ್ಟು ಸಾವು ಎರಡು ತೀರ
ಸುಖ ದುಃಖ ಬದಿ ಅಕ್ಕ ಪಕ್ಕ
ಅರಿವು ಮರೆವು ಮೇಲೆ ಕೆಳಗೆ
ನಡುವೆ ನನ್ನ ಬಾಳ ದಾರಿ

ಹುಟ್ಟು ಅಕಸ್ಮಿಕ ಆರಂಬದಲ್ಲಿ
ಜ್ಞಾನ ದೀಪ ಬೆಳಕಿನಲ್ಲಿ
ಹುಟ್ಟು ಸಾವು ಮಿಲನದಲ್ಲಿ
ಸಾವು ನಿಚ್ಚಿತ ನೆಚ್ಚಿ ಹೊರಟೆ

ಎದ್ದು ಬಿದ್ದು ಉತ್ತು ಬಿತ್ತಿ
ನನ್ನದಲ್ಲದ ಎಲ್ಲ ಬಿಟ್ಟು
ಅನುಭವಗಳ ಹೆಜ್ಜೆ ಗುರುತು
ಬಿಟ್ಟು ಬಂದೆ ಮುಂದೆ ಮುಂದೆ

ಸತೀಶ ಅವರು ತಮ್ಮ " ಸುತ್ತಿ ಸುಳಿವ ಹಾದಿ ಪ್ರಶ್ನೆಗಳ ಏಳುಸುತಿರಬೇಕೆ " ಎನ್ನುವ ಕವನದ ಮೂಲಕ ನಡೆಯುವ ಹಾದಿ ನಮ್ಮನ್ನು ಹೇಗೆ ಅಂತರ್ಮುಖಿಯನ್ನಾಗಿ ಮಾಡಿ ನಾನಾ ವಿಧದ ಪ್ರಶ್ನೆಗಳನ್ನು ನಮ್ಮ ಎದುರಿಗೆ ತೆರೆದಿಡುವುದೆಂದು ಈ ರೀತಿ ಬರೆದಿದ್ದಾರೆ:

ಬಾಗುವ ಈ ರಸ್ತೆಗಳ ಕಥೆಯೇ ಇಷ್ಟು
ಕಂಡಕಂಡಲ್ಲಿ ಧೂಳನೆಬ್ಬಿಸಿ ಅಷ್ಟಿಷ್ಟು
ಅದೂ ತಿಳಿದವರ ಮುಖ ಇಟ್ಟುಕೊಂಡು
ಎರಡೂ ಕಡೆಗೆ ದಿಕ್ಕನು ಹಂಚಿಕೊಂಡು.

ಹಿಂತಿರುಗಿ ನೋಡಿದರೆ ಹಳೆಯ ನೆನಪು
ಮುಂಬರುವ ಹೊಸ ಹಾದಿಯ ಒನಪು
ಎತ್ತಿ ಇಳಿದು ಸುತ್ತಿ ಸುಳಿವ ಹಾದಿಯ
ಏನ ಹೇಳಲಿ ವಿಸ್ಮಯದ ಪರಿಯ.

ಇಳಿಪ್ರಾಯದವರ ಕಥೆಗಳಲಿ ಗುಲ್ಲಿಲ್ಲ
ಹಾಡಿ ಹಲಬುವ ಬಾಯಿಯಲಿ ಹಲ್ಲಿಲ್ಲ
ಮಕ್ಕಳು ದೂರದೂರಿಗೆ ಹೋದ ಕಾರಣ
ಯಾರೋ ಹೇಳಿದ ಎಲ್ಲಿಯ ಉದಾರಿಕರಣ.

ಅವಳೋ ಬೇಯಿಸುತ್ತಲೇ ಇದ್ದಾಳೆ ಕೂಳು
ನನ್ನೊಡನೆ ತೇದು ತೆವಳಿದ ಬಾಳು
ಮೂರು ಸಂಜೆಯ ಧೂಳು ತುಂಬಿದ ಕತ್ತಲೆ
ಎಂದೋ ಬರುವ ಮಕ್ಕಳ ನೆನಪಿನಲೆ.

ಹೊಸತನದ ಪ್ರತೀಕ ದೂರವಿರಲೇ ಬೇಕೆ
ಬದುಕು ಸಾಗಿಸುವುದಕೆ ಎಲ್ಲೋ ಇರಬೇಕೇಕೆ
ಮುಪ್ಪಿನಲಿ ಕಣ್ಣಾಲಿಗಳು ತುಂಬುತಿರಬೇಕೆ
ಸುತ್ತಿ ಸುಳಿವ ಹಾದಿ ಪ್ರಶ್ನೆಗಳ ಏಳುಸುತಿರಬೇಕೆ.

ನಾವೋ ಹಳಬರು ನಮಗೆ ತಿಳಿಯದಿರುವುದು ಹಲವು
ದೂರವಿದೆ ನಮ್ಮಿಂದ ನಮ್ಮ ಕಿರಿಯರ ಒಲವು.

2 comments:

ಕುಕೂಊ.. said...

ಹೆಜ್ಜೆ ಗುರುತು

ಹತ್ತು ಹಲವು ತಿರುವಿನಲ್ಲಿ
ಸುತ್ತುಹಾಕಿ ಬೆಪ್ಪನಾಗಿ
ನಡೆದು ಬಂದೆ ಹುಟ್ಟಿನಿಂದ
ಬದಕಿನ ದೂರ ದಾರಿಯಲ್ಲಿ

ಬಾಲ್ಯದಾಟ ಸೊಗಸ ದಾಟಿ
ಏರಿಬಂದ ಯವೌನ ಮೀಟಿ
ಕೂಡಿಕೊಂಡು ಸರಸ ಸತಿ
ದಾಟುತಿಹೆನು ಬದುಕ ತಟ

ಕಾಮ ಮೋಹ ಈರ್ಷ್ಯೆ ದ್ವೇಷ
ಸೆಳವಿನಲ್ಲಿ ಸೆಣಸಿ ಬಂದೆ
ಪ್ರೀತಿ ಪ್ರೇಮ ಸ್ನೇಹ ಅನುಭಂದ
ಸಮ್ಮೋಹಿತ ಸಾರ ಹೀರಿ ಬಂದೆ

ಏಳು ಬೀಳು ನಿತ್ಯ ಬಾಳು
ಹಗಲು ರಾತ್ರಿ ಎಲ್ಲ ಗೆದ್ದು
ಎದ್ದು ಬಂದೆ ನೆನಪು ತುಂಬಿ
ಇದ್ದ ದಾರಿ ನಡೆದು ಸವೆಸಲು

ಹುಟ್ಟು ಸಾವು ಎರಡು ತೀರ
ಸುಖ ದುಃಖ ಬದಿ ಅಕ್ಕ ಪಕ್ಕ
ಅರಿವು ಮರೆವು ಮೇಲೆ ಕೆಳಗೆ
ನಡುವೆ ನನ್ನ ಬಾಳ ದಾರಿ

ಹುಟ್ಟು ಅಕಸ್ಮಿಕ ಆರಂಬದಲ್ಲಿ
ಜ್ಞಾನ ದೀಪ ಬೆಳಕಿನಲ್ಲಿ
ಹುಟ್ಟು ಸಾವು ಮಿಲನದಲ್ಲಿ
ಸಾವು ನಿಚ್ಚಿತ ನೆಚ್ಚಿ ಹೊರಟೆ

ಎದ್ದು ಬಿದ್ದು ಉತ್ತು ಬಿತ್ತಿ
ನನ್ನದಲ್ಲದ ಎಲ್ಲ ಬಿಟ್ಟು
ಅನುಭವಗಳ ಹೆಜ್ಜೆ ಗುರುತು
ಬಿಟ್ಟು ಬಂದೆ ಮುಂದೆ ಮುಂದೆ

*~ಕುಕೂ...

Satish said...

ಸುತ್ತಿ ಸುಳಿವ ಹಾದಿ ಪ್ರಶ್ನೆಗಳ ಏಳುಸುತಿರಬೇಕೆ

ಬಾಗುವ ಈ ರಸ್ತೆಗಳ ಕಥೆಯೇ ಇಷ್ಟು
ಕಂಡಕಂಡಲ್ಲಿ ಧೂಳನೆಬ್ಬಿಸಿ ಅಷ್ಟಿಷ್ಟು
ಅದೂ ತಿಳಿದವರ ಮುಖ ಇಟ್ಟುಕೊಂಡು
ಎರಡೂ ಕಡೆಗೆ ದಿಕ್ಕನು ಹಂಚಿಕೊಂಡು.

ಹಿಂತಿರುಗಿ ನೋಡಿದರೆ ಹಳೆಯ ನೆನಪು
ಮುಂಬರುವ ಹೊಸ ಹಾದಿಯ ಒನಪು
ಎತ್ತಿ ಇಳಿದು ಸುತ್ತಿ ಸುಳಿವ ಹಾದಿಯ
ಏನ ಹೇಳಲಿ ವಿಸ್ಮಯದ ಪರಿಯ.

ಇಳಿಪ್ರಾಯದವರ ಕಥೆಗಳಲಿ ಗುಲ್ಲಿಲ್ಲ
ಹಾಡಿ ಹಲಬುವ ಬಾಯಿಯಲಿ ಹಲ್ಲಿಲ್ಲ
ಮಕ್ಕಳು ದೂರದೂರಿಗೆ ಹೋದ ಕಾರಣ
ಯಾರೋ ಹೇಳಿದ ಎಲ್ಲಿಯ ಉದಾರಿಕರಣ.

ಅವಳೋ ಬೇಯಿಸುತ್ತಲೇ ಇದ್ದಾಳೆ ಕೂಳು
ನನ್ನೊಡನೆ ತೇದು ತೆವಳಿದ ಬಾಳು
ಮೂರು ಸಂಜೆಯ ಧೂಳು ತುಂಬಿದ ಕತ್ತಲೆ
ಎಂದೋ ಬರುವ ಮಕ್ಕಳ ನೆನಪಿನಲೆ.

ಹೊಸತನದ ಪ್ರತೀಕ ದೂರವಿರಲೇ ಬೇಕೆ
ಬದುಕು ಸಾಗಿಸುವುದಕೆ ಎಲ್ಲೋ ಇರಬೇಕೇಕೆ
ಮುಪ್ಪಿನಲಿ ಕಣ್ಣಾಲಿಗಳು ತುಂಬುತಿರಬೇಕೆ
ಸುತ್ತಿ ಸುಳಿವ ಹಾದಿ ಪ್ರಶ್ನೆಗಳ ಏಳುಸುತಿರಬೇಕೆ.

ನಾವೋ ಹಳಬರು ನಮಗೆ ತಿಳಿಯದಿರುವುದು ಹಲವು
ದೂರವಿದೆ ನಮ್ಮಿಂದ ನಮ್ಮ ಕಿರಿಯರ ಒಲವು.