Tuesday 22 April, 2008

ಚಿತ್ರ- 50





ಈ ಬಾರಿಯ ಚಿತ್ರಕ್ಕೆ ಭಿನ್ನ ಭಾವಗಳ, ಆದರೆ ಹೆಚ್ಚೂ ಕಡಿಮೆ ಒಂದೇ ವಿಷಯದ ಆಲೋಚನೆಯ ಬರಹಗಳನ್ನು ಆಸಕ್ತರು ಬರೆದಿದ್ದಾರೆ. ಅವುಗಳು ಇಂತಿವೆ:

ತವಿಶ್ರೀರವರ ಕವನ:

ಅಕ್ಕ ತಂಗಿ ಸಂವಾದ
ರಂಗಮ್ಮ

ನಿನಗೊಂದು ಆಸರೆ
ನನಗೊಂದು ಆಸರೆ
ಎನಗಿರುವುದು ನಿನಗಿಲ್ಲ
ನಿನಗಿರುವುದು ಎನಗಿಲ್ಲ
ನಿನಗಿಹುದು
ನೊಸಲಿನಲಿ ನಗುತಿಹ ಕುಂಕುಮವೇ ಆಸರೆ
ಎನಗೆ
ಕೈ ಹಿಡಿದು ನಿಲ್ಲಲು ಮರವೇ ಆಸರೆ
ಅದಿಲ್ಲವಾಗಲು ನಿನ್ನ
ಮಡಿಲ ಬೊಡ್ಡೆಯೇ ಆಸರೆ
ನಾನಾಗಬಲ್ಲೆನೇ ನಿನಗಾಸರೆ

ಲಕ್ಷ್ಮಮ್ಮ

ನಾ ನಿನಗೆ ಲಕ್ಕಿಯಾದರೇನು
ಪೂರ್ಣ ನರೆತಿಹ ಕೂದಲು
ಎನಗೆ
ಇನ್ನೂ ಎಳೆತನ ತೋರಿಸುತಿಹ
ಅರೆ ಕಪ್ಪಿರುವ ಕೂದಲು
ನಾ ಅಕ್ಕನಾದರೇನಂತೆ
ನೀನಲ್ಲವೇ ತಂಗಿ
ಜೀವನದಿ ಬೆಂದು ಬೇಯ್ದು ಬಸವಳಿದಳಿದ
ಜೀವನ ಮರ್ಮದ ಅರಿತ ನೀ ನನ್ನ ರಂಗಿ

ರಂಗಮ್ಮ

ನೀ ಅಕ್ಕ ನಾ ತಂಗಿ
ಆತ್ಮ ಒಂದೇ ಬೇರೆ ಬೇರೆ ಅಂಗಿ
ನಿನಗಿಹುದು ತಾಳಿ ಅರಿಶಿನ ಕುಂಕುಮ
ಭಾಗ್ಯ
ಹಿರಿಯ ಮುತ್ತೈದೆಗೆ ಹೂವೀಳ್ಯದಲಿ
ಮೊದಲ ಪ್ರಾಶಸ್ತ್ಯ

ಲಕ್ಷ್ಮಮ್ಮ

ನನ್ನ ಬಳಿಯಲಿರಲೇನಂತೆ
ಮಣ ಚಿನ್ನ
ಖಾಲಿ ಕೊರಳಿನ ಜೀವನವೇ ಚೆನ್ನ
ಏನಾದರೇನಂತೆ ನೀ ಅಕ್ಕ ನಾ ತಂಗಿ
ನಿನ್ನ ಪಕ್ಕದಲ್ಲಿರಲು ನಾನಾಗೆನು ಮಂಗಿ

ಕುಮಾರಸ್ವಾಮಿ ಕಡಾಕೊಳ್ಳಮುಂಡೆ ನಿಯಮ ಕವನ:

ಸಿರಿವಂತಿಕೆಯ ಹೆಣ್ಣಿನ ಮನೋಹರ ಅಂದವನ
ಅಳಿಸಿದರು, ಜೊತೆಗೆ ಅಳಿಸಿ ನನ್ನಣೆಯ ಚೆಲುವನ್ನ
ಯಾರೋ ಮಾಡಿದ ಧರ್ಮದ ನಿಯಮವಂತೆ
ಒಂಟಿ ಭಾವಕ್ಕೆ ಮುಂಡೆ ನಿಯಮದ ಬರೆಯಂತೆ

ಜೊತೆಗಿದ್ದು ಚಿಗುರಿಸಿ ನೂರು ಭಾವನೆಗಳನ್ನ
ಬೆಸಗೊಂಡು ಸರಸದಲಿ ನಲಿಸಿ ನನ್ನ ಬದುಕನ್ನ
ಬಿಟ್ಟು ಹೋದನು ಅವನು ಮರಳಿಬಾರದ ತೀರಕೆ
ಇದ್ದವರು ಕಿತ್ತುಕೊಂಡರು ಮುಡಿಯ ಚೆಲುವನ್ನ

ಬದುಕಿದ್ದರು ಸುಮಂಗಲೆ ನಾನಲ್ಲವಂತೆ
ಶುಭಕಾರ್ಯಗಳಲ್ಲಿ ನಾಸೇರಬಾರದಂತೆ
ಇದ್ದು ಎಲ್ಲ ಭಾವ ಎಲ್ಲರಿಗಿಂತ ನಾ ಬೆರೆಯಂತೆ
ಬದುಕುವ ಚಿಗುರನ್ನು ನಿಯಮದಲಿ ಮಿಟುಕುವರು

ಅವಳಂತೆ ನಾನಿರುವೆ ಅವಳ ಭಾವ ನನಗೂ ಇದೆ
ಅವಳ್ಯಾಕೆ ಮೂದಲಿಸುವಳು? ಕೊಂಕಿನಲಿ ಹಿಂದೂಡುವಳು
ಅರಿಯಳೇನು ನನ್ನೆದೆಯ ನೋವ!
ಮರೆತಳೇನು ನಾನು ಹೆಣ್ಣೆಂಬುದನ್ನ

ಯಾರು ಮಾಡಿದರು ಈ ಕುಟಿಲ ನಿಯಮ
ಬದುಕಿಸಿ ಕೊಲ್ಲುವ ಈ ಜನಗಳ ನಿಯಮ
ಬರಿ ಹೆಣ್ಣಿಗ್ಯಾಕೋ ಈ ನೀತಿ ಅನ್ವಯ
ಅರಿಯನು ನಾನು ಕರುಣಿಸೋ ದೇವ



ಸತೀಶರ ಕವನ:ನಮ್ಮ ಮನಸಿನ ನೆಲೆ

ಅನೇಕ ಕತ್ತಿ ಕೊಡಲಿ ಏಟು ತಿಂದ ಮರ
ಸುತ್ತುವರಿದೋ ಮುತ್ತುವ ಮನಸು ಭಾರ
ಹಳೆಯದದು ಮಾಗಿ ಹೊಸತನು ತೋರುವ ಕಳೆ
ಒಂದೊಂದು ಸಂಬಂಧದ ಅದೇನೇನೋ ಎಳೆ.

ಎಲ್ಲ ಸಮವೆಂದುಕೊಂಡು ಮೇಲೇರುವ ಏಣಿ
ಬೆಳಕಿನ ಹಿಂದೆಯೇ ಇರುವ ನೆರಳಿನಾ ಗಣಿ
ಎಲ್ಲ ಸ್ಥಿತಿಗತಿಗಳಲ್ಲೂ ಅಡರಿಕೊಳ್ಳುವ ಸುಕ್ಕು
ಪಕ್ಕದ ಎಂದೋ ಚಿಗುರಿ ಬೆಳೆದ ಮರವು ನಕ್ಕು
ಬೆಳೆದು ಏಟು ತಿಂದ ಹಾಗೆಲ್ಲ ಬರಬಹುದು ಅನುಭವ
ಕೆಟ್ಟದಾಗಿ ಕಲಿತದ್ದನ್ನೇ ಹೊಸತಾಗಿ ಕರೆವ ಭಾವ
ಒಂದು ಸ್ಥಿತಿಯಲಿ ಒಂದು ಎಳೆ ಇನ್ನೊಂದರಲಿ ಮೂರು
ಹಣೆಯಲಿ ಕೈಯಲಿ ಇಲ್ಲವೇ ಇಲ್ಲ ಮೂಗುತಿ ಚೂರು.

ಅನುಕಂಪವೆನ್ನುವುದು ನಮ್ಮ ಮನಸಿನ ನೆಲೆ
ನಾವು ಬದುಕಲು ಬೇಕು ಸ್ಪೂರ್ತಿಯಾ ಸೆಲೆ
ಅದರ ಬೆನ್ನಿಗೆ ಹುಟ್ಟಿದ ನಂಬಿಕೆಗಳು ಹಲವು
ಉಳಿದವರಿಗೆ ತೆರೆದುಕೊಳ್ಳಬೇಕು ನಮ್ಮ ನಾವು

ವಿಜಯಾ ರ ಚುಟುಕ:

ತಲೆ ನೆರೆತು ಮುಖ ಸುಕ್ಕಾದರೇನು
ದೇಹ ಬಳಲಿ ಮರಕ್ಕೆ ಒರಗಿದರೇನು
ಮಮತೆಗೆ ಮುಪ್ಪಿಲ್ಲ ಪ್ರೀತಿಗೆ ವಯಸಿಲ್ಲ
ಹಿರಿಯರೆರೆಯುವ ತಂಪಿಗೆ ಸಾಟಿಯೇನು

ಸುಪ್ತ ದೀಪ್ತಿಯವರ ಲಹರಿ:

ತಂಗಿಯ ಸ್ವಗತ:

ಅಕ್ಕ, ನಾನು ಎಂದಿಗೂ ನಿನ್ನ ಬೆನ್ನಿಗೆ ಬಿದ್ದವಳು. ಎಲ್ಲದರಲ್ಲೂ ನೀನೇ ನನಗೆ ಮುಂದಾಳು. ನನಗೆ ನಡೆ-ನುಡಿ ಕಲಿಸಿದವಳು, ಆಟ-ಪಾಠ ಕಲಿಸಿದವಳು ನೀನೇ. ಕಿರಿಯ ವಯಸ್ಸಿನಲ್ಲೇ ಕನಸರಿಯುವ ಮೊದಲೇ ಮದುವೆಯ ಬಂಧನಕ್ಕೆ ಇಬ್ಬರೂ ಜೊತೆಯಾಗಿಯೇ ಒಳಗಾದೆವಲ್ಲ! ಒಂದೇ ಮನೆಯ ಹಿರಿ-ಕಿರಿ ಸೊಸೆಯರಾಗಿ ಸೇರಿದಾಗಲೂ ನೀನು ನನಗೆ ಮುಂದಾಳಾಗಿಯೇ ನಡೆದೆ. ಆದರೆ, ನೋಡಕ್ಕಾ... ವಿಧಿ ವಿಲಾಸ ಹೇಗಿತ್ತು? ಕಾಲುಂಗುರವಿಟ್ಟ ವರುಷದೊಳಗೆ ನಾನು ಬಳೆ-ಹೂ ಕಳೆದುಕೊಂಡೆ, ನೀನು ಮೊದಲ ಬಾರಿಗೆ ಅಮ್ಮನಾದೆ. ಅಷ್ಟೇ ಏನು ವ್ಯತ್ಯಾಸ? ಅತ್ತೆ ಮನೆಯಿಂದ ನನ್ನನ್ನು ಕಳುಹಿಸದೆ ನಿನ್ನ ಬೆನ್ನಿಗೇ ಕಟ್ಟಿಕೊಂಡೆಯಲ್ಲ, ಯಾಕೆಂದು ನನಗೀಗ ಅರ್ಥವಾಗುತ್ತಿದೆ. ಆರು ದಶಕಗಳ ನಂತರದ ಹಿನ್ನೋಟಕ್ಕೆ ಎಷ್ಟೊಂದು ಮುಖಗಳಿರುತ್ತವೆ!?

ಮನೆಯ ಕತ್ತಲ ಮೂಲೆಗೆ ಸೇರಬೇಕಾಗಿದ್ದ ನನ್ನನ್ನು ನಿನ್ನ ಸರಿಸಮಾನವಾಗಿಯೇ ಎಳೆದುಕೊಂಡೆ. ಅತ್ತೆ-ಮಾವ-ಭಾವನವರ ವಿರೋಧಗಳ ನಡುವೆಯೇ ನಿನ್ನ ಮಕ್ಕಳ ಪೋಷಣೆಯನ್ನು ನನಗೊಪ್ಪಿಸಿದೆ. ನನ್ನ ಬಾಳಿಗೂ ಒಂದು ಸಾರ್ಥಕತೆಯನ್ನು ಕಲ್ಪಿಸಿದೆ. ಅತ್ತೆಯ ಗೊಣಗುಗಳನ್ನು ನನ್ನ ಕಿವಿಯಿಂದ ದೂರವಿರಿಸಲು ನೀನು ಮಾಡದ್ದೇನು? ನಿಜ, ನಿನ್ನಂಥ ಬಣ್ಣ, ಮಾತುಗಾರಿಕೆ, ನಾಜೂಕುತನ ನನ್ನಲ್ಲಿಲ್ಲ. ಆದರೂ ತಂಗಿಯೆನ್ನುವ ಒಂದೇ ಕಾರಣಕ್ಕೆ ನನ್ನನ್ನು ಆದರಿಸಿದ ನಿನ್ನನ್ನು ದೇವಿಯೆನ್ನಲೆ? ಅತ್ತಿಗೆ-ನಾದಿನಿಯರ ಚುಚ್ಚುಮಾತುಗಳನ್ನೂ ನೀನೇ ಎದುರಿಸಿದ್ದು ನನಗರಿವಿಲ್ಲ ಅಂದುಕೊಂಡೆಯಾ? ನನ್ನನ್ನು ಯಾಕೆ ಅಷ್ಟೊಂದು ಅಂಟಿಕೊಂಡಿದ್ದೀಯಾ? ನಾನಿಲ್ಲದಿದ್ದರೆ ನಿನಗೆ ಅಸ್ಥಿತ್ವವೇ ಇಲ್ಲವೆನ್ನುವಂತೆ ನಡೆದುಕೊಳ್ಳುತ್ತೀಯಲ್ಲ, ಅಂದಿಗೂ, ಇಂದಿಗೂ ಹಾಗೇ ಇದ್ದೀಯಲ್ಲ. ಇಂಥ ಪ್ರೀತಿಯನ್ನು ಆತ್ಮ ಸಂಗಾತವೆನ್ನಲೆ? ಅವಳಿಗಳಾಗಿ ಹುಟ್ಟದಿದ್ದರೂ ಅವಳಿ ಆತ್ಮಗಳಾಗಿದ್ದೇವೇನೋ ಅನ್ನುವಷ್ಟು ಪ್ರೀತಿ ನಿನ್ನಿಂದ. ನನ್ನ ಜೀವನ ನಿನ್ನಿಂದ ಪಾವನವಾಗಿದೆ, ಅಕ್ಕಾ. ನಿನ್ನ ಕುಂಕುಮ, ಹೂ, ಬಳೆ, ನಿನ್ನ ಕಳಿಕಳಿಯ ಕಿರುನಗುವಿನ ಜೊತೆ ಎಂದೆಂದೂ ಇರಲೆಂದು ಹಾರೈಸುವೆ. ಬೆಳಕು ಸದಾ ನಿನ್ನೆಡೆಗಿರಲಿ.

5 comments:

bhadra said...

ಅಕ್ಕ ತಂಗಿ ಸಂವಾದ

ರಂಗಮ್ಮ

ನಿನಗೊಂದು ಆಸರೆ
ನನಗೊಂದು ಆಸರೆ
ಎನಗಿರುವುದು ನಿನಗಿಲ್ಲ
ನಿನಗಿರುವುದು ಎನಗಿಲ್ಲ
ನಿನಗಿಹುದು
ನೊಸಲಿನಲಿ ನಗುತಿಹ ಕುಂಕುಮವೇ ಆಸರೆ
ಎನಗೆ
ಕೈ ಹಿಡಿದು ನಿಲ್ಲಲು ಮರವೇ ಆಸರೆ
ಅದಿಲ್ಲವಾಗಲು ನಿನ್ನ
ಮಡಿಲ ಬೊಡ್ಡೆಯೇ ಆಸರೆ
ನಾನಾಗಬಲ್ಲೆನೇ ನಿನಗಾಸರೆ

ಲಕ್ಷ್ಮಮ್ಮ

ನಾ ನಿನಗೆ ಲಕ್ಕಿಯಾದರೇನು
ಪೂರ್ಣ ನರೆತಿಹ ಕೂದಲು
ಎನಗೆ
ಇನ್ನೂ ಎಳೆತನ ತೋರಿಸುತಿಹ
ಅರೆ ಕಪ್ಪಿರುವ ಕೂದಲು
ನಾ ಅಕ್ಕನಾದರೇನಂತೆ
ನೀನಲ್ಲವೇ ತಂಗಿ
ಜೀವನದಿ ಬೆಂದು ಬೇಯ್ದು ಬಸವಳಿದಳಿದ
ಜೀವನ ಮರ್ಮದ ಅರಿತ ನೀ ನನ್ನ ರಂಗಿ

ರಂಗಮ್ಮ

ನೀ ಅಕ್ಕ ನಾ ತಂಗಿ
ಆತ್ಮ ಒಂದೇ ಬೇರೆ ಬೇರೆ ಅಂಗಿ
ನಿನಗಿಹುದು ತಾಳಿ ಅರಿಶಿನ ಕುಂಕುಮ
ಭಾಗ್ಯ
ಹಿರಿಯ ಮುತ್ತೈದೆಗೆ ಹೂವೀಳ್ಯದಲಿ
ಮೊದಲ ಪ್ರಾಶಸ್ತ್ಯ

ಲಕ್ಷ್ಮಮ್ಮ

ನನ್ನ ಬಳಿಯಲಿರಲೇನಂತೆ
ಮಣ ಚಿನ್ನ
ಖಾಲಿ ಕೊರಳಿನ ಜೀವನವೇ ಚೆನ್ನ
ಏನಾದರೇನಂತೆ ನೀ ಅಕ್ಕ ನಾ ತಂಗಿ
ನಿನ್ನ ಪಕ್ಕದಲ್ಲಿರಲು ನಾನಾಗೆನು ಮಂಗಿ

ಕುಕೂಊ.. said...

** ಮುಂಡೆ ನಿಯಮ **

ಸಿರಿವಂತಿಕೆಯ ಹೆಣ್ಣಿನ ಮನೋಹರ ಅಂದವನ
ಅಳಿಸಿದರು, ಜೊತೆಗೆ ಅಳಿಸಿ ನನ್ನಣೆಯ ಚೆಲುವನ್ನ
ಯಾರೋ ಮಾಡಿದ ಧರ್ಮದ ನಿಯಮವಂತೆ
ಒಂಟಿ ಭಾವಕ್ಕೆ ಮುಂಡೆ ನಿಯಮದ ಬರೆಯಂತೆ

ಜೊತೆಗಿದ್ದು ಚಿಗುರಿಸಿ ನೂರು ಭಾವನೆಗಳನ್ನ
ಬೆಸಗೊಂಡು ಸರಸದಲಿ ನಲಿಸಿ ನನ್ನ ಬದುಕನ್ನ
ಬಿಟ್ಟು ಹೋದನು ಅವನು ಮರಳಿಬಾರದ ತೀರಕೆ
ಇದ್ದವರು ಕಿತ್ತುಕೊಂಡರು ಮುಡಿಯ ಚೆಲುವನ್ನ

ಬದುಕಿದ್ದರು ಸುಮಂಗಲೆ ನಾನಲ್ಲವಂತೆ
ಶುಭಕಾರ್ಯಗಳಲ್ಲಿ ನಾಸೇರಬಾರದಂತೆ
ಇದ್ದು ಎಲ್ಲ ಭಾವ ಎಲ್ಲರಿಗಿಂತ ನಾ ಬೆರೆಯಂತೆ
ಬದುಕುವ ಚಿಗುರನ್ನು ನಿಯಮದಲಿ ಮಿಟುಕುವರು

ಅವಳಂತೆ ನಾನಿರುವೆ ಅವಳ ಭಾವ ನನಗೂ ಇದೆ
ಅವಳ್ಯಾಕೆ ಮೂದಲಿಸುವಳು? ಕೊಂಕಿನಲಿ ಹಿಂದೂಡುವಳು
ಅರಿಯಳೇನು ನನ್ನೆದೆಯ ನೋವ!
ಮರೆತಳೇನು ನಾನು ಹೆಣ್ಣೆಂಬುದನ್ನ

ಯಾರು ಮಾಡಿದರು ಈ ಕುಟಿಲ ನಿಯಮ
ಬದುಕಿಸಿ ಕೊಲ್ಲುವ ಈ ಜನಗಳ ನಿಯಮ
ಬರಿ ಹೆಣ್ಣಿಗ್ಯಾಕೋ ಈ ನೀತಿ ಅನ್ವಯ
ಅರಿಯನು ನಾನು ಕರುಣಿಸೋ ದೇವ
** ಕುಕೂ...
ಪುಣೆ (26/04/08)

Satish said...

ನಮ್ಮ ಮನಸಿನ ನೆಲೆ

ಅನೇಕ ಕತ್ತಿ ಕೊಡಲಿ ಏಟು ತಿಂದ ಮರ
ಸುತ್ತುವರಿದೋ ಮುತ್ತುವ ಮನಸು ಭಾರ
ಹಳೆಯದದು ಮಾಗಿ ಹೊಸತನು ತೋರುವ ಕಳೆ
ಒಂದೊಂದು ಸಂಬಂಧದ ಅದೇನೇನೋ ಎಳೆ.

ಎಲ್ಲ ಸಮವೆಂದುಕೊಂಡು ಮೇಲೇರುವ ಏಣಿ
ಬೆಳಕಿನ ಹಿಂದೆಯೇ ಇರುವ ನೆರಳಿನಾ ಗಣಿ
ಎಲ್ಲ ಸ್ಥಿತಿಗತಿಗಳಲ್ಲೂ ಅಡರಿಕೊಳ್ಳುವ ಸುಕ್ಕು
ಪಕ್ಕದ ಎಂದೋ ಚಿಗುರಿ ಬೆಳೆದ ಮರವು ನಕ್ಕು
ಬೆಳೆದು ಏಟು ತಿಂದ ಹಾಗೆಲ್ಲ ಬರಬಹುದು ಅನುಭವ
ಕೆಟ್ಟದಾಗಿ ಕಲಿತದ್ದನ್ನೇ ಹೊಸತಾಗಿ ಕರೆವ ಭಾವ
ಒಂದು ಸ್ಥಿತಿಯಲಿ ಒಂದು ಎಳೆ ಇನ್ನೊಂದರಲಿ ಮೂರು
ಹಣೆಯಲಿ ಕೈಯಲಿ ಇಲ್ಲವೇ ಇಲ್ಲ ಮೂಗುತಿ ಚೂರು.

ಅನುಕಂಪವೆನ್ನುವುದು ನಮ್ಮ ಮನಸಿನ ನೆಲೆ
ನಾವು ಬದುಕಲು ಬೇಕು ಸ್ಪೂರ್ತಿಯಾ ಸೆಲೆ
ಅದರ ಬೆನ್ನಿಗೆ ಹುಟ್ಟಿದ ನಂಬಿಕೆಗಳು ಹಲವು
ಉಳಿದವರಿಗೆ ತೆರೆದುಕೊಳ್ಳಬೇಕು ನಮ್ಮ ನಾವು.

Vijaya said...

ತಲೆ ನೆರೆತು ಮುಖ ಸುಕ್ಕಾದರೇನು
ದೇಹ ಬಳಲಿ ಮರಕ್ಕೆ ಒರಗಿದರೇನು
ಮಮತೆಗೆ ಮುಪ್ಪಿಲ್ಲ ಪ್ರೀತಿಗೆ ವಯಸಿಲ್ಲ
ಹಿರಿಯರೆರೆಯುವ ತಂಪಿಗೆ ಸಾಟಿಯೇನು

ಸುಪ್ತದೀಪ್ತಿ suptadeepti said...

ತಂಗಿಯ ಸ್ವಗತ:

ಅಕ್ಕ, ನಾನು ಎಂದಿಗೂ ನಿನ್ನ ಬೆನ್ನಿಗೆ ಬಿದ್ದವಳು. ಎಲ್ಲದರಲ್ಲೂ ನೀನೇ ನನಗೆ ಮುಂದಾಳು. ನನಗೆ ನಡೆ-ನುಡಿ ಕಲಿಸಿದವಳು, ಆಟ-ಪಾಠ ಕಲಿಸಿದವಳು ನೀನೇ. ಕಿರಿಯ ವಯಸ್ಸಿನಲ್ಲೇ ಕನಸರಿಯುವ ಮೊದಲೇ ಮದುವೆಯ ಬಂಧನಕ್ಕೆ ಇಬ್ಬರೂ ಜೊತೆಯಾಗಿಯೇ ಒಳಗಾದೆವಲ್ಲ! ಒಂದೇ ಮನೆಯ ಹಿರಿ-ಕಿರಿ ಸೊಸೆಯರಾಗಿ ಸೇರಿದಾಗಲೂ ನೀನು ನನಗೆ ಮುಂದಾಳಾಗಿಯೇ ನಡೆದೆ. ಆದರೆ, ನೋಡಕ್ಕಾ... ವಿಧಿ ವಿಲಾಸ ಹೇಗಿತ್ತು? ಕಾಲುಂಗುರವಿಟ್ಟ ವರುಷದೊಳಗೆ ನಾನು ಬಳೆ-ಹೂ ಕಳೆದುಕೊಂಡೆ, ನೀನು ಮೊದಲ ಬಾರಿಗೆ ಅಮ್ಮನಾದೆ. ಅಷ್ಟೇ ಏನು ವ್ಯತ್ಯಾಸ? ಅತ್ತೆ ಮನೆಯಿಂದ ನನ್ನನ್ನು ಕಳುಹಿಸದೆ ನಿನ್ನ ಬೆನ್ನಿಗೇ ಕಟ್ಟಿಕೊಂಡೆಯಲ್ಲ, ಯಾಕೆಂದು ನನಗೀಗ ಅರ್ಥವಾಗುತ್ತಿದೆ. ಆರು ದಶಕಗಳ ನಂತರದ ಹಿನ್ನೋಟಕ್ಕೆ ಎಷ್ಟೊಂದು ಮುಖಗಳಿರುತ್ತವೆ!?

ಮನೆಯ ಕತ್ತಲ ಮೂಲೆಗೆ ಸೇರಬೇಕಾಗಿದ್ದ ನನ್ನನ್ನು ನಿನ್ನ ಸರಿಸಮಾನವಾಗಿಯೇ ಎಳೆದುಕೊಂಡೆ. ಅತ್ತೆ-ಮಾವ-ಭಾವನವರ ವಿರೋಧಗಳ ನಡುವೆಯೇ ನಿನ್ನ ಮಕ್ಕಳ ಪೋಷಣೆಯನ್ನು ನನಗೊಪ್ಪಿಸಿದೆ. ನನ್ನ ಬಾಳಿಗೂ ಒಂದು ಸಾರ್ಥಕತೆಯನ್ನು ಕಲ್ಪಿಸಿದೆ. ಅತ್ತೆಯ ಗೊಣಗುಗಳನ್ನು ನನ್ನ ಕಿವಿಯಿಂದ ದೂರವಿರಿಸಲು ನೀನು ಮಾಡದ್ದೇನು? ನಿಜ, ನಿನ್ನಂಥ ಬಣ್ಣ, ಮಾತುಗಾರಿಕೆ, ನಾಜೂಕುತನ ನನ್ನಲ್ಲಿಲ್ಲ. ಆದರೂ ತಂಗಿಯೆನ್ನುವ ಒಂದೇ ಕಾರಣಕ್ಕೆ ನನ್ನನ್ನು ಆದರಿಸಿದ ನಿನ್ನನ್ನು ದೇವಿಯೆನ್ನಲೆ? ಅತ್ತಿಗೆ-ನಾದಿನಿಯರ ಚುಚ್ಚುಮಾತುಗಳನ್ನೂ ನೀನೇ ಎದುರಿಸಿದ್ದು ನನಗರಿವಿಲ್ಲ ಅಂದುಕೊಂಡೆಯಾ? ನನ್ನನ್ನು ಯಾಕೆ ಅಷ್ಟೊಂದು ಅಂಟಿಕೊಂಡಿದ್ದೀಯಾ? ನಾನಿಲ್ಲದಿದ್ದರೆ ನಿನಗೆ ಅಸ್ಥಿತ್ವವೇ ಇಲ್ಲವೆನ್ನುವಂತೆ ನಡೆದುಕೊಳ್ಳುತ್ತೀಯಲ್ಲ, ಅಂದಿಗೂ, ಇಂದಿಗೂ ಹಾಗೇ ಇದ್ದೀಯಲ್ಲ. ಇಂಥ ಪ್ರೀತಿಯನ್ನು ಆತ್ಮ ಸಂಗಾತವೆನ್ನಲೆ? ಅವಳಿಗಳಾಗಿ ಹುಟ್ಟದಿದ್ದರೂ ಅವಳಿ ಆತ್ಮಗಳಾಗಿದ್ದೇವೇನೋ ಅನ್ನುವಷ್ಟು ಪ್ರೀತಿ ನಿನ್ನಿಂದ. ನನ್ನ ಜೀವನ ನಿನ್ನಿಂದ ಪಾವನವಾಗಿದೆ, ಅಕ್ಕಾ. ನಿನ್ನ ಕುಂಕುಮ, ಹೂ, ಬಳೆ, ನಿನ್ನ ಕಳಿಕಳಿಯ ಕಿರುನಗುವಿನ ಜೊತೆ ಎಂದೆಂದೂ ಇರಲೆಂದು ಹಾರೈಸುವೆ. ಬೆಳಕು ಸದಾ ನಿನ್ನೆಡೆಗಿರಲಿ.