Friday 13 June, 2008

ಚಿತ್ರ ೫೮



ಚಿತ್ರ ೫೮ ಕ್ಕೆ ತಿರುಕ ಮತ್ತು ಸತೀಶ್ ಅವರು ಕವನಗಳನ್ನ ಬರೆದಿದ್ದಾರೆ.

ತಿರುಕ ಅವರ ಕವನ -

ಪಾಣಿಗ್ರಹಣ

ಗೃಭ್ಣಾಮಿ ತೇ ಸೌಭಗತ್ಯಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯತಾ ಸಃ|
ಭಗೋ ಅರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾದುರ್ಗಾರ್ಹಪತ್ಯಾಯ ದೇವಾಃ||
ಗೃಭ್ಣಾಮಿ ತೇ ಸೌಭಗತ್ಯಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯತಾ ಸಃ|
ಭಗೋ ಅರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾದುರ್ಗಾರ್ಹಪತ್ಯಾಯ ದೇವಾಃ||

ಋಗ್ವೇದ ಸಂಹಿತಾ 10.85.36


ಆಹಾಆ ನನ್ಮದ್ವೆಯಂತೆ| ಆಹಾಆ ನನ್ಮದ್ವೆಯಂತೆ ...

ಹೆಜ್ಜೆಯ ಗುರುತ ನೀ ಛಾಪಿಸುತಿರೆ
ಅದರೊಳು ಎನ್ನ ಹೆಜ್ಜೆ ಇಟ್ಟು
ಹಿಂದೆ ಹಿಂದೆ ಬರುವೆ ನಾ

ನೂರ್ಕಾಲ ಜೊತೆ ಜೊತೆಯಾಗಿ ಬಾಳುವ
ಜೋಡಿ ಬೇರ್ಪಡುವುದು ಬೇಡ ಎಂದು ಬೇಡುವ
ಮುಕ್ಕೋಟಿ ದೇವತೆಗಳ ಕರುಣೆಯ ಕೋರುವ
ಸಂಸಾರ ಸಾಗರದಲಿ ಜೊತೆಜೊತೆಯಾಗಿ ಈಸುವಾ

ಹತ್ತು ಹತ್ತು ಪವನು ಬಳೆಗಳು
ತೊಡಿಸಿಹೆ
ಆಗಲಿ ಅದು ಎನಗೆ ಕೈಕೋಳ
ನನ್ನಲಿಯ ಕೋಳ ನಿನ್ನ ಸುಪರ್ದಿಯಲಿ
ನಿನ್ನಲಿಹ ಕೋಳ ನನ್ನ ಸುಪರ್ದಿಯಲಾಗಲಿ
ಅದರ ಕೀಲಿ ಕೈ ಕೈಗೆ ಸಿಗದಂತಿರಲಿ


ನಕಲೀ ಶಶಿರೇಖನಾಗಿ ದುರ್ಯೋಧನ
ಪುತ್ರ ಲಕ್ಷ್ಮಣಕುಮಾರನ ಲೇವಡಿಪಡಿಸಿದ
ಅಭಿಮನ್ಯು ವಿವಾಹಕೆ ಸಹಾಯಿಸಿದ
ಕೈ ಹಿಂಡುವ ಆ ಚೇಷ್ಟೆಯ ಮಾಡದಿರು ವೀರ
ನೀ ಎಂದಿಗೂ ನನ್ನ ಜೊತೆಗಾರ


ಸತೀಶ್ ಅವರ ಕವನ -
ಇಂದಿನ ಜೋಡಿಯ ಸವಾಲುಗಳು ಹಲವು

ಇಂದಿನ ಜೋಡಿಯ ಸವಾಲುಗಳು ಹಲವು
ನೊಗವನು ಕಟ್ಟಿ ಒಟ್ಟಿಗೆಳೆದರಷ್ಟು ಸಾಲದು
ಜೀವನ ಪೂರ್ತಿ ಬಿಗಿ ಜೋಡಿಯ ಬದುಕನು
ಎದುರಿಸಿ ಮುಂದೆ ಏನೇ ಬರಲಿ ಆದದ್ದು.

ಈ ಬಂಧಕೆ ಯಾವುದೇ ದೃಷ್ಟಿ ತಾಗದಿರಲಿ
ಸಂಸಾರದಲಿ ಅನ್ಯೋನ್ಯತೆ ಬಲು ಮುಖ್ಯ
ಏನೇ ಏಳು ಬೀಳು ಬಂದರೂ ಎದುರಿಸುತಿರಲಿ
ಒಬ್ಬರಿಗೊಬ್ಬರು ಅರಿತು ಬಾಳುವ ಸಖ್ಯ.

ಹೊಸತು ಹಳೆಯದರ ನಡುವೆ ಬೆರೆತು ಬಾಳುವ
ಜೋಡಿಗೋ ಹಲವು ಅವಿನಾಭಾವ ಸಂಬಂಧಗಳು
ಇಬ್ಬದಿಯ ನೆಂಟರು ಇಷ್ಟರು ಮೂಗು ತೋರಿಸದಿರಲಿ
ಇನ್ನೂ ಬೆಳೆದು ಬಾಳಬೇಕು ಮೊಳೆತ ಚಿಗುರುಗಳು.

ಬಿಳುಪಿನ ಬೆನ್ನಲೆ ಕಪ್ಪಿರೊ ಹಾಗೆ ಮುಪ್ಪಿನ ಮಾತು
ನೋಟಕೆ ಹೀಗೆ ಬೆರೆತು ಬಾಳುವುದಾಗಲಿ ದಿನಮಂತ್ರ
ಅಲ್ಲಲ್ಲಿ ಕಷ್ಟಗಳು ಬರುವುದು ಸಹಜವೆನ್ನುವುದಾದರೆ
ಅವಕೆ ಒಡನೆಯೇ ಹುಟ್ಟಲಿ ಎದುರಿಸೋ ಜಯತಂತ್ರ.

2 comments:

Unknown said...

ಪಾಣಿಗ್ರಹಣ

ಗೃಭ್ಣಾಮಿ ತೇ ಸೌಭಗತ್ಯಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯತಾ ಸಃ|
ಭಗೋ ಅರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾದುರ್ಗಾರ್ಹಪತ್ಯಾಯ ದೇವಾಃ||
ಗೃಭ್ಣಾಮಿ ತೇ ಸೌಭಗತ್ಯಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯತಾ ಸಃ|
ಭಗೋ ಅರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾದುರ್ಗಾರ್ಹಪತ್ಯಾಯ ದೇವಾಃ||

ಋಗ್ವೇದ ಸಂಹಿತಾ 10.85.36


ಆಹಾಆ ನನ್ಮದ್ವೆಯಂತೆ| ಆಹಾಆ ನನ್ಮದ್ವೆಯಂತೆ ...

ಹೆಜ್ಜೆಯ ಗುರುತ ನೀ ಛಾಪಿಸುತಿರೆ
ಅದರೊಳು ಎನ್ನ ಹೆಜ್ಜೆ ಇಟ್ಟು
ಹಿಂದೆ ಹಿಂದೆ ಬರುವೆ ನಾ

ನೂರ್ಕಾಲ ಜೊತೆ ಜೊತೆಯಾಗಿ ಬಾಳುವ
ಜೋಡಿ ಬೇರ್ಪಡುವುದು ಬೇಡ ಎಂದು ಬೇಡುವ
ಮುಕ್ಕೋಟಿ ದೇವತೆಗಳ ಕರುಣೆಯ ಕೋರುವ
ಸಂಸಾರ ಸಾಗರದಲಿ ಜೊತೆಜೊತೆಯಾಗಿ ಈಸುವಾ

ಹತ್ತು ಹತ್ತು ಪವನು ಬಳೆಗಳು
ತೊಡಿಸಿಹೆ
ಆಗಲಿ ಅದು ಎನಗೆ ಕೈಕೋಳ
ನನ್ನಲಿಯ ಕೋಳ ನಿನ್ನ ಸುಪರ್ದಿಯಲಿ
ನಿನ್ನಲಿಹ ಕೋಳ ನನ್ನ ಸುಪರ್ದಿಯಲಾಗಲಿ
ಅದರ ಕೀಲಿ ಕೈ ಕೈಗೆ ಸಿಗದಂತಿರಲಿ


ನಕಲೀ ಶಶಿರೇಖನಾಗಿ ದುರ್ಯೋಧನ
ಪುತ್ರ ಲಕ್ಷ್ಮಣಕುಮಾರನ ಲೇವಡಿಪಡಿಸಿದ
ಅಭಿಮನ್ಯು ವಿವಾಹಕೆ ಸಹಾಯಿಸಿದ
ಕೈ ಹಿಂಡುವ ಆ ಚೇಷ್ಟೆಯ ಮಾಡದಿರು ವೀರ
ನೀ ಎಂದಿಗೂ ನನ್ನ ಜೊತೆಗಾರ

Satish said...

ಇಂದಿನ ಜೋಡಿಯ ಸವಾಲುಗಳು ಹಲವು

ಇಂದಿನ ಜೋಡಿಯ ಸವಾಲುಗಳು ಹಲವು
ನೊಗವನು ಕಟ್ಟಿ ಒಟ್ಟಿಗೆಳೆದರಷ್ಟು ಸಾಲದು
ಜೀವನ ಪೂರ್ತಿ ಬಿಗಿ ಜೋಡಿಯ ಬದುಕನು
ಎದುರಿಸಿ ಮುಂದೆ ಏನೇ ಬರಲಿ ಆದದ್ದು.

ಈ ಬಂಧಕೆ ಯಾವುದೇ ದೃಷ್ಟಿ ತಾಗದಿರಲಿ
ಸಂಸಾರದಲಿ ಅನ್ಯೋನ್ಯತೆ ಬಲು ಮುಖ್ಯ
ಏನೇ ಏಳು ಬೀಳು ಬಂದರೂ ಎದುರಿಸುತಿರಲಿ
ಒಬ್ಬರಿಗೊಬ್ಬರು ಅರಿತು ಬಾಳುವ ಸಖ್ಯ.

ಹೊಸತು ಹಳೆಯದರ ನಡುವೆ ಬೆರೆತು ಬಾಳುವ
ಜೋಡಿಗೋ ಹಲವು ಅವಿನಾಭಾವ ಸಂಬಂಧಗಳು
ಇಬ್ಬದಿಯ ನೆಂಟರು ಇಷ್ಟರು ಮೂಗು ತೋರಿಸದಿರಲಿ
ಇನ್ನೂ ಬೆಳೆದು ಬಾಳಬೇಕು ಮೊಳೆತ ಚಿಗುರುಗಳು.

ಬಿಳುಪಿನ ಬೆನ್ನಲೆ ಕಪ್ಪಿರೊ ಹಾಗೆ ಮುಪ್ಪಿನ ಮಾತು
ನೋಟಕೆ ಹೀಗೆ ಬೆರೆತು ಬಾಳುವುದಾಗಲಿ ದಿನಮಂತ್ರ
ಅಲ್ಲಲ್ಲಿ ಕಷ್ಟಗಳು ಬರುವುದು ಸಹಜವೆನ್ನುವುದಾದರೆ
ಅವಕೆ ಒಡನೆಯೇ ಹುಟ್ಟಲಿ ಎದುರಿಸೋ ಜಯತಂತ್ರ.