Tuesday 22 July, 2008

ಚಿತ್ರ ೬೩



ಚಿತ್ರ ೬೩ ಕ್ಕೆ ತಿರುಕ,ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ತಿರುಕ ಅವರ ಕವನ -

ನಿಸರ್ಗ ಉಳಿಸಿರಿ
ಛಳಿಯಾದರೇನು
ಮಳೆ ಇದ್ದರೇನು
ತಲೆ ಎತ್ತಿ ನಿಲ್ಲಬಲ್ಲೆನೇ ನಾನು
ಬಿಸಿಲಿನ ಭರಾಟೆಗೂ ತಲೆ ಬಗ್ಗಿಸಲಾರೆ

ನೀವಿನ್ನೂ ಕಂದ
ನನ್ನ ನೆರಳಲಿ ಬೆಳೆಯಬೇಕಿಂದಿನಿಂದ
ಕಲಿಯುವುದು ಬಹಳವಿದೆಯೆಂದೆ
ನನ್ನೆತ್ತರಕೆ ಈಗಲೇ ನೀವೇರಲಾರೆ!
ಸ್ವಲ್ಪ ಕಾಲ ಯಾಕೆ ಕಾಯಲಾರೆ?

ಹಿಂದೊಮ್ಮೆ
ನಮ್ಮದೂ ಆಗಿತ್ತು
ತುಂಬಿದ ಕುಟುಂಬ
ಅಕ್ಕ ಅಣ್ಣ, ತಮ್ಮ ತಂಗಿ
ಅಪ್ಪ ಅಮ್ಮರ ಕೂಡಿದ
ತುಂಬು ಸಂಸಾರ

ಕ್ರೂರಿಗೆ ತನ್ನ ಹೊಟ್ಟೆಪಾಡಿನ ಚಿಂತೆ
ದೋಚಿದ್ದು ವನರಾಶಿಯ ಕಂತೆ ಕಂತೆ
ತುಂಬಿದ್ದು ತಮ್ಮೊಡಲೆಂಬ ಬೊಂತೆ
ಯಾರಿಗಾದರೂ ಇದೆಯಾ ನಿಸರ್ಗದ ಚಿಂತೆ

ಕಚಕ್ಕನೆ ಒಡಹುಟ್ಟಿದವರ,
ಹುಟ್ಟಿಸಿದವರ ಕತ್ತರಿಸುವಿಕೆ
ಬೆಳೆಯುವುದರ ಜೊತೆಗೆ
ಹೆಗಲ ಮೇಲೆ ಎರಡು ಕಂದಮ್ಮಗಳ ಸಲಹುವಿಕೆ

ನನ್ನೊಡನಿರುವುದೆರಡೇ ಕಂದ
ನಾ ಕಾಪಾಡಬೇಕಿರುವುದು ಇಂದಿನಿಂದ
ನಿಮ್ಮಂತೆ ನಾವೂ ತಿಳಿಯುವಿರೆಂದೆ
ನಮ್ಮೆಲ್ಲರಲಿಹ ಚೈತನ್ಯ ಒಂದೇ

ಒಂದರೆಚಣ ಚಿಂತಿಸು
ನಿನ್ನ ಚೈತನ್ಯ ಎನಗಿಂತ
ಭಿನ್ನ ಹೇಗೆಂದು?


ಎಮ್ಮ ನೆಲಸಮ ಮಾಡಹೊರಟಿರುವಿರೇ
ಅದರಿಂದ ನಿಮ್ಮ ಉಳಿಗಾಲವಿದೆಯೇ
ಮತ್ತೆ ಕಾಣಬಲ್ಲಿರೇ ನಿಸರ್ಗ ಸೌಂದರ್ಯ
ತಣ್ಣನೆ ನೀರೊಡಲ ವಾತಾವರಣದ ಔದಾರ್ಯ

ಚಿಂತಿಸಿ
ಚಿಂತಿಸಿ ಮಥಿಸಿ ಮುನ್ನಡೆಯಿರಿ
ಎಮಗೂ ಜೀವಿಸಲವಕಾಶ ನೀಡಿರಿ


ಸತೀಶ್ ಅವರ ಕವನ -

ಒಂಟಿ ಮರದ ಸ್ವಗತ
ಮೋಡದ ಮಳೆ ನಾಡಿನಲ್ಲಿ
ಹೇಳ ಹೆಸರಿಗೆ ಇರುವ ಮರ
ಸುತ್ತಲೂ ಇದ್ದವರನು ಕಳೆದುಕೊಂಡು
ಒಬ್ಬಂಟಿಯಾಗಿ ಕರೆವ ಮರ.

ದಿನವೂ ಮೋಡಗಳು ಬಂದರೇನು
ಹೋದರೇನು ಹೆಸರಿಗೆ
ಹನಿಯ ನೀರು ಸುರಿಸಲಿಲ್ಲ
ಆರ್ತನಾದೆ ಬರವಿಗೆ.

ತೆಳುವಾದ ಇಬ್ಬನಿ ಹನಿ
ತಡೆದೀತು ಸೂರ್ಯ ರಶ್ಮಿ
ಹಾಳೂರಿಗೆ ಉಳಿದ ನಾನು
ನನಗೊಬ್ಬನಿಗೇನು ಕಮ್ಮಿ.

ಎಲ್ಲೆಲ್ಲೂ ಕುರುಚಲು ಹಮ್ಮಿಕೊಂಡು
ಬೋಳು ಬೋಳಾದ ಬೆಟ್ಟ ಕಣಿವೆ
ಇದ್ದಂತೆ ಇರುವಲ್ಲಿಂದ ಹಿಡಿದು ದೂರದ
ಖಾಲಿ ನಭಕೆ ಏರುವ ಗುರಿಯ ಬಾಳ್ವೆ.

ನಾನೊಬ್ಬನೇ ಇರುವ ನಾಡಿಗೆ
ಮೋಡಗಳು ಬಂದರಷ್ಟು ಹೋದರೆಷ್ಟು
ಇರುವಷ್ಟು ದಿನವು ಇಲ್ಲಿ ಮುಂದೆ
ಬಿದ್ದು ಹೋಗುವ ಬದುಕಿಗಷ್ಟು.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -

ಮುತ್ತಿತು ಮೋಡ
ಕವಿದಂತೆ ಕತ್ತಲು
ಹನಿಯಾಗಿ ಹವೆ
ಜಿನುಗಿ ಮಳೆಯಾಗಿ
ಇಳಿಯುತಿದೆ ಧರೆಗೆ
ಜೀವ ಸೆಲೆಯಾಗಿ
ಹಸಿರಾಗಿ ಮೂಡಿ
ಉಸಿರಾಯಿತು ಬದುಕು


3 comments:

Unknown said...

ನಿಸರ್ಗ ಉಳಿಸಿರಿ

ಛಳಿಯಾದರೇನು
ಮಳೆ ಇದ್ದರೇನು
ತಲೆ ಎತ್ತಿ ನಿಲ್ಲಬಲ್ಲೆನೇ ನಾನು
ಬಿಸಿಲಿನ ಭರಾಟೆಗೂ ತಲೆ ಬಗ್ಗಿಸಲಾರೆ

ನೀವಿನ್ನೂ ಕಂದ
ನನ್ನ ನೆರಳಲಿ ಬೆಳೆಯಬೇಕಿಂದಿನಿಂದ
ಕಲಿಯುವುದು ಬಹಳವಿದೆಯೆಂದೆ
ನನ್ನೆತ್ತರಕೆ ಈಗಲೇ ನೀವೇರಲಾರೆ!
ಸ್ವಲ್ಪ ಕಾಲ ಯಾಕೆ ಕಾಯಲಾರೆ?

ಹಿಂದೊಮ್ಮೆ
ನಮ್ಮದೂ ಆಗಿತ್ತು
ತುಂಬಿದ ಕುಟುಂಬ
ಅಕ್ಕ ಅಣ್ಣ, ತಮ್ಮ ತಂಗಿ
ಅಪ್ಪ ಅಮ್ಮರ ಕೂಡಿದ
ತುಂಬು ಸಂಸಾರ

ಕ್ರೂರಿಗೆ ತನ್ನ ಹೊಟ್ಟೆಪಾಡಿನ ಚಿಂತೆ
ದೋಚಿದ್ದು ವನರಾಶಿಯ ಕಂತೆ ಕಂತೆ
ತುಂಬಿದ್ದು ತಮ್ಮೊಡಲೆಂಬ ಬೊಂತೆ
ಯಾರಿಗಾದರೂ ಇದೆಯಾ ನಿಸರ್ಗದ ಚಿಂತೆ

ಕಚಕ್ಕನೆ ಒಡಹುಟ್ಟಿದವರ,
ಹುಟ್ಟಿಸಿದವರ ಕತ್ತರಿಸುವಿಕೆ
ಬೆಳೆಯುವುದರ ಜೊತೆಗೆ
ಹೆಗಲ ಮೇಲೆ ಎರಡು ಕಂದಮ್ಮಗಳ ಸಲಹುವಿಕೆ

ನನ್ನೊಡನಿರುವುದೆರಡೇ ಕಂದ
ನಾ ಕಾಪಾಡಬೇಕಿರುವುದು ಇಂದಿನಿಂದ
ನಿಮ್ಮಂತೆ ನಾವೂ ತಿಳಿಯುವಿರೆಂದೆ
ನಮ್ಮೆಲ್ಲರಲಿಹ ಚೈತನ್ಯ ಒಂದೇ

ಒಂದರೆಚಣ ಚಿಂತಿಸು
ನಿನ್ನ ಚೈತನ್ಯ ಎನಗಿಂತ
ಭಿನ್ನ ಹೇಗೆಂದು?


ಎಮ್ಮ ನೆಲಸಮ ಮಾಡಹೊರಟಿರುವಿರೇ
ಅದರಿಂದ ನಿಮ್ಮ ಉಳಿಗಾಲವಿದೆಯೇ
ಮತ್ತೆ ಕಾಣಬಲ್ಲಿರೇ ನಿಸರ್ಗ ಸೌಂದರ್ಯ
ತಣ್ಣನೆ ನೀರೊಡಲ ವಾತಾವರಣದ ಔದಾರ್ಯ

ಚಿಂತಿಸಿ
ಚಿಂತಿಸಿ ಮಥಿಸಿ ಮುನ್ನಡೆಯಿರಿ
ಎಮಗೂ ಜೀವಿಸಲವಕಾಶ ನೀಡಿರಿ

Satish said...

ಒಂಟಿ ಮರದ ಸ್ವಗತ

ಮೋಡದ ಮಳೆ ನಾಡಿನಲ್ಲಿ
ಹೇಳ ಹೆಸರಿಗೆ ಇರುವ ಮರ
ಸುತ್ತಲೂ ಇದ್ದವರನು ಕಳೆದುಕೊಂಡು
ಒಬ್ಬಂಟಿಯಾಗಿ ಕರೆವ ಮರ.

ದಿನವೂ ಮೋಡಗಳು ಬಂದರೇನು
ಹೋದರೇನು ಹೆಸರಿಗೆ
ಹನಿಯ ನೀರು ಸುರಿಸಲಿಲ್ಲ
ಆರ್ತನಾದೆ ಬರವಿಗೆ.

ತೆಳುವಾದ ಇಬ್ಬನಿ ಹನಿ
ತಡೆದೀತು ಸೂರ್ಯ ರಶ್ಮಿ
ಹಾಳೂರಿಗೆ ಉಳಿದ ನಾನು
ನನಗೊಬ್ಬನಿಗೇನು ಕಮ್ಮಿ.

ಎಲ್ಲೆಲ್ಲೂ ಕುರುಚಲು ಹಮ್ಮಿಕೊಂಡು
ಬೋಳು ಬೋಳಾದ ಬೆಟ್ಟ ಕಣಿವೆ
ಇದ್ದಂತೆ ಇರುವಲ್ಲಿಂದ ಹಿಡಿದು ದೂರದ
ಖಾಲಿ ನಭಕೆ ಏರುವ ಗುರಿಯ ಬಾಳ್ವೆ.

ನಾನೊಬ್ಬನೇ ಇರುವ ನಾಡಿಗೆ
ಮೋಡಗಳು ಬಂದರಷ್ಟು ಹೋದರೆಷ್ಟು
ಇರುವಷ್ಟು ದಿನವು ಇಲ್ಲಿ ಮುಂದೆ
ಬಿದ್ದು ಹೋಗುವ ಬದುಕಿಗಷ್ಟು.

ಕುಕೂಊ.. said...

ಮುತ್ತಿತು ಮೋಡ
ಕವಿದಂತೆ ಕತ್ತಲು
ಹನಿಯಾಗಿ ಹವೆ
ಜಿನುಗಿ ಮಳೆಯಾಗಿ
ಇಳಿಯುತಿದೆ ಧರೆಗೆ
ಜೀವ ಸೆಲೆಯಾಗಿ
ಹಸಿರಾಗಿ ಮೂಡಿ
ಉಸಿರಾಯಿತು ಬದುಕು