Friday 8 August, 2008

ಚಿತ್ರ ೬೫



ಅನ್ನದಾತ ಚಿತ್ರಕ್ಕೆ ಸ್ಪಂದಿಸಿದವರು ಸತೀಶ್ ,ಕುಮಾರ ಸ್ವಾಮಿ ಕಡಾಕೊಳ್ಳ ಮತ್ತು ತಿರುಕ.

ಸತೀಶ್ ಅವರ ಕವನ-
ರೈತನ ಹಾಡು


ಇಷ್ಟಾ ಇರ್ಲಿ ಕಷ್ಟಾ ಇರ್ಲಿ
ದಿನವೂ ಗೆಯ್ಯೋ ಕಾಯ್ಕ
ದೇವ್ರು ಕೊಟ್ಟ ಭೂಮೀ ಮೇಲೆ
ಈ ಮನ್ಷನ್ದೇನು ಮಾಯ್ಕ.

ಮಣ್ಣಿಗ್ ನೀರು ಹಾಯ್ಸಿ ತೊಯ್ಸಿ
ನಾಟಿ ನೆಡೋ ಕೆಸ್ರು
ಬೀಜಾ ಬಿತ್ತಿ ಪಸ್ಲು ಬೆಳೆದು ಒಂದೇ
ದಿನಕ್ ಬರೋದಿಲ್ಲ ಹಸ್ರು.

ಸೂರ್ಯಾ ಹುಟ್ಟಿ ಬರೋಕ್ ಮುನ್ನ
ಎದ್ದು ಹೊಲದ್ ಕಡೆ ನಡ್ದು
ಇಂದು ದುಡ್ದು ಎಂದೋ ತಿನ್ನೋ
ನಮ್ ಬಾಳೇ ದೊಡ್ದು.

ಕೈಯಲ್ ಕಸುವು ಮೈಯಲ್ ಉಸ್ರು
ಇರೋವಾಗ್ಲೇ ಕಾಲ
ಇಂದು ದುಡ್ದು ಇಡ್ದೇ ಹೋದ್ರೆ
ತುಂಬೇಕಲ್ಲ ಹೊಟ್ಟೇ ಅನ್ನೋ ಚೀಲ.

ಆಟಕ್ಕುಂಟು ಲೆಕ್ಕಕ್ಕಿಲ್ಲ
ಈ ರೈತಾಪಿ ಸಂಸಾರ
ಸತ್ಯಾ-ನ್ಯಾಯಕ್ ಎಂದೂ ಉಳಿವು
ಅನ್ನೋ ಪಾಪಿ ವಿಚಾರ.

ದೇಶ ದೊಡ್ಡಕ್ ಮೇಲಕ್ ಬಂದ್ರು
ಎಲ್ರೂ ತಿನ್ನೋದ್ ಅನ್ನಾನೇ
ಅನ್ನವ ಕೊಟ್ಟ ಕೈಯನು ಮರೆತವ
ತನ್ನನು ತಾನೇ ಮರಿತಾನೆ.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಶ್ರಾವಣ ಮಳೆ

ಶ್ರಾವಣ ಬಂತು
ಹದಮಳೆ ತಂದಿತು
ಒಡ್ಡೆಲ್ಲ ತುಂಬಿತು
ಗದ್ದೆ ಕೆಸರಾಯಿತು

ತಪ್ಪಿದರೆ ಹದ
ಕೈಕೊಟ್ಟೀತು ಪೈರು
ಇಲ್ಲವಾದೀತು ಮುಂದೆ
ಸುಗ್ಗಿಯ ಕೂಳು

ನೇಗಿಲ ಹೊಡೆಯೋಣ
ಹೊಲ ಹದಮಾಡೋಣ
ಒಡ್ಡು ಹಾಕೋಣ
ಮಡಿಗಳ ಕಟ್ಟೋಣ

ಹಸಿರು ಸರಬು
ತುಳಿಯುತ್ತ ಮಡಿಯಲ್ಲಿ
ಬದುವು ಸವರುತ್ತ
ಎಂಡೆ ಹಾಕೋಣ

ಬತ್ತದ ಅಗೆ ಕೀತ್ತು
ಗೊಬ್ಬರ ಹಾಕುತ್ತ
ನಾಟಿ ಮಾಡೋಣ
ಪೈರು ಬೆಳೆಯೋಣ

ಕೈಕೆಸರಾದರೆ
ಬಾಯಿಮೊಸರಂತೆ
ಕೆಸರಲ್ಲಿ ನೆಟ್ಟು ಸಸಿಯ
ಬೆಳೆಯೋಣ ನಾವು ಬತ್ತ

ಕೂತು ಉಂಡರೆ
ಕುಡಿಕೆ ಹೊನ್ನು ಸಾಲದು
ಮೈಬಗ್ಗಿಸಿ ದುಡಿಯೋಣ
ದೇಶಕೆ ಅನ್ನವ ನೀಡೋಣ

** ಕುಕೂಊ...

ತಿರುಕ ಅವರ ಕವನ -
ನಾ ಹೆಚ್ಚೋ ಇವ ಹೆಚ್ಚೋ?!


ಆಗಸ ತೂತಾಗಿದೆ
ಜಾಲರಿಯಿಂದ ನೀರು ತೊಟ್ಟಿಕ್ಕುತ್ತಿದೆ
ಕೈ ತುಂಬಾ ಕೆಲಸ ಕಾಯುತ್ತಿದೆ
ಆಗಬೇಕಿದೆ
ಸಮಯಕೆ ಸರಿಯಾಗಿ ಉತ್ತು ಬಿತ್ತುವಿಕೆ
ನಾನಲ್ಲ ಕೆಲಸಗಳ್ಳ
ಮೈ ಮುರಿದು ಕಾಯಕ ಮಾಡುವೆ
ಉಣಿಸಿ ತಣಿಸಿ ಭೂತಾಯಿಯ ಕಾಪಾಡುವೆ
ಕೈತುಂಬ ಅನ್ನ ಉಣುವೆ
ನಂಬಿದವರ ಕಾಪಾಡುವೆ
ಮುಂಬರುವ ಬಿತ್ತನೆಗೆ
ಬೀಜ ಗೊಬ್ಬರ ಅಣಿ ಮಾಡುವೆ
ಹೆಚ್ಚಾದುದ ಮಂಡಿಗೆ ಹಾಕುವೆ
ಉಣ್ಣಲು ಉಡಲು ಕೈ ಬಿಚ್ಚುವೆ
ಎನ್ನ ಜೇಬು ಮಾತ್ರ ಖಾಲಿ ಖಾಲಿ
ತಲೆಯಿಟ್ಟಲ್ಲಿ ಹೊಡೆಯುವೆ ಜೋಲಿ

ಮಂಡಿಯವ ಹೆಚ್ಚಿನ ಹಣಕೆ ಮಾರುವ
ಕುಂಡಿ ಎತ್ತದೇ ಒಂದೆಡೆ ಕುಳಿತಿರುವವ
ಒಂದೂ ಹನಿ ಬೆವರು ಸುರಿಸಿದವ
ಬೊಕ್ಕಸ ಮೇಲೆ ಮೇಲೆ ಏರಿಸುತಿಹ
ಎನ್ನ ಹೆಚ್ಚಿನ ಖರ್ಚಿಗೆ ಹಣ ಕೊಡುವ
ಚಕ್ರಬಡ್ಡಿ ಸುಸ್ತಿಬಡ್ಡಿ ಹೇರಿ ಸುಸ್ತಾಗಿಸುವ
ದುಡಿದು ಬೆಳೆದ ಸಿರಿಯ
ಹೀನಾಯ ಬೆಲೆಗೆ ಸೆಳೆವ
ಮನ ಬಂದ ಬೆಲೆಗೆ ಮಾರಿ ದೊಡ್ಡವನಾಗುವ
ಕಾಣದ ದೇವನ ಕೃಪೆ ಪಡೆಯುವ
ಮತದಾರನ ಒಡೆಯನ ಸಲಹುವ
ತನ್ನ ಸಂತತಿಯ ತನ್ನಂತೆ ಇರಿಸುವ
ನನ್ನ ಸಂತತಿಯ ನನ್ನಂತೆ ಇಳಿಸುವ

ನಾ ಹೆಚ್ಚೋ ಇವ ಹೆಚ್ಚೋ?!

3 comments:

Satish said...

ರೈತನ ಹಾಡು

ಇಷ್ಟಾ ಇರ್ಲಿ ಕಷ್ಟಾ ಇರ್ಲಿ
ದಿನವೂ ಗೆಯ್ಯೋ ಕಾಯ್ಕ
ದೇವ್ರು ಕೊಟ್ಟ ಭೂಮೀ ಮೇಲೆ
ಈ ಮನ್ಷನ್ದೇನು ಮಾಯ್ಕ.

ಮಣ್ಣಿಗ್ ನೀರು ಹಾಯ್ಸಿ ತೊಯ್ಸಿ
ನಾಟಿ ನೆಡೋ ಕೆಸ್ರು
ಬೀಜಾ ಬಿತ್ತಿ ಪಸ್ಲು ಬೆಳೆದು ಒಂದೇ
ದಿನಕ್ ಬರೋದಿಲ್ಲ ಹಸ್ರು.

ಸೂರ್ಯಾ ಹುಟ್ಟಿ ಬರೋಕ್ ಮುನ್ನ
ಎದ್ದು ಹೊಲದ್ ಕಡೆ ನಡ್ದು
ಇಂದು ದುಡ್ದು ಎಂದೋ ತಿನ್ನೋ
ನಮ್ ಬಾಳೇ ದೊಡ್ದು.

ಕೈಯಲ್ ಕಸುವು ಮೈಯಲ್ ಉಸ್ರು
ಇರೋವಾಗ್ಲೇ ಕಾಲ
ಇಂದು ದುಡ್ದು ಇಡ್ದೇ ಹೋದ್ರೆ
ತುಂಬೇಕಲ್ಲ ಹೊಟ್ಟೇ ಅನ್ನೋ ಚೀಲ.

ಆಟಕ್ಕುಂಟು ಲೆಕ್ಕಕ್ಕಿಲ್ಲ
ಈ ರೈತಾಪಿ ಸಂಸಾರ
ಸತ್ಯಾ-ನ್ಯಾಯಕ್ ಎಂದೂ ಉಳಿವು
ಅನ್ನೋ ಪಾಪಿ ವಿಚಾರ.

ದೇಶ ದೊಡ್ಡಕ್ ಮೇಲಕ್ ಬಂದ್ರು
ಎಲ್ರೂ ತಿನ್ನೋದ್ ಅನ್ನಾನೇ
ಅನ್ನವ ಕೊಟ್ಟ ಕೈಯನು ಮರೆತವ
ತನ್ನನು ತಾನೇ ಮರಿತಾನೆ.

ಕುಕೂಊ.. said...

** ಶ್ರಾವಣ ಮಳೆ **

ಶ್ರಾವಣ ಬಂತು
ಹದಮಳೆ ತಂದಿತು
ಒಡ್ಡೆಲ್ಲ ತುಂಬಿತು
ಗದ್ದೆ ಕೆಸರಾಯಿತು

ತಪ್ಪಿದರೆ ಹದ
ಕೈಕೊಟ್ಟೀತು ಪೈರು
ಇಲ್ಲವಾದೀತು ಮುಂದೆ
ಸುಗ್ಗಿಯ ಕೂಳು

ನೇಗಿಲ ಹೊಡೆಯೋಣ
ಹೊಲ ಹದಮಾಡೋಣ
ಒಡ್ಡು ಹಾಕೋಣ
ಮಡಿಗಳ ಕಟ್ಟೋಣ

ಹಸಿರು ಸರಬು
ತುಳಿಯುತ್ತ ಮಡಿಯಲ್ಲಿ
ಬದುವು ಸವರುತ್ತ
ಎಂಡೆ ಹಾಕೋಣ

ಬತ್ತದ ಅಗೆ ಕೀತ್ತು
ಗೊಬ್ಬರ ಹಾಕುತ್ತ
ನಾಟಿ ಮಾಡೋಣ
ಪೈರು ಬೆಳೆಯೋಣ

ಕೈಕೆಸರಾದರೆ
ಬಾಯಿಮೊಸರಂತೆ
ಕೆಸರಲ್ಲಿ ನೆಟ್ಟು ಸಸಿಯ
ಬೆಳೆಯೋಣ ನಾವು ಬತ್ತ

ಕೂತು ಉಂಡರೆ
ಕುಡಿಕೆ ಹೊನ್ನು ಸಾಲದು
ಮೈಬಗ್ಗಿಸಿ ದುಡಿಯೋಣ
ದೇಶಕೆ ಅನ್ನವ ನೀಡೋಣ

** ಕುಕೂಊ...
12/08/08

Unknown said...

ನಾ ಹೆಚ್ಚೋ ಇವ ಹೆಚ್ಚೋ?!

ಆಗಸ ತೂತಾಗಿದೆ
ಜಾಲರಿಯಿಂದ ನೀರು ತೊಟ್ಟಿಕ್ಕುತ್ತಿದೆ
ಕೈ ತುಂಬಾ ಕೆಲಸ ಕಾಯುತ್ತಿದೆ
ಆಗಬೇಕಿದೆ
ಸಮಯಕೆ ಸರಿಯಾಗಿ ಉತ್ತು ಬಿತ್ತುವಿಕೆ
ನಾನಲ್ಲ ಕೆಲಸಗಳ್ಳ
ಮೈ ಮುರಿದು ಕಾಯಕ ಮಾಡುವೆ
ಉಣಿಸಿ ತಣಿಸಿ ಭೂತಾಯಿಯ ಕಾಪಾಡುವೆ
ಕೈತುಂಬ ಅನ್ನ ಉಣುವೆ
ನಂಬಿದವರ ಕಾಪಾಡುವೆ
ಮುಂಬರುವ ಬಿತ್ತನೆಗೆ
ಬೀಜ ಗೊಬ್ಬರ ಅಣಿ ಮಾಡುವೆ
ಹೆಚ್ಚಾದುದ ಮಂಡಿಗೆ ಹಾಕುವೆ
ಉಣ್ಣಲು ಉಡಲು ಕೈ ಬಿಚ್ಚುವೆ
ಎನ್ನ ಜೇಬು ಮಾತ್ರ ಖಾಲಿ ಖಾಲಿ
ತಲೆಯಿಟ್ಟಲ್ಲಿ ಹೊಡೆಯುವೆ ಜೋಲಿ

ಮಂಡಿಯವ ಹೆಚ್ಚಿನ ಹಣಕೆ ಮಾರುವ
ಕುಂಡಿ ಎತ್ತದೇ ಒಂದೆಡೆ ಕುಳಿತಿರುವವ
ಒಂದೂ ಹನಿ ಬೆವರು ಸುರಿಸಿದವ
ಬೊಕ್ಕಸ ಮೇಲೆ ಮೇಲೆ ಏರಿಸುತಿಹ
ಎನ್ನ ಹೆಚ್ಚಿನ ಖರ್ಚಿಗೆ ಹಣ ಕೊಡುವ
ಚಕ್ರಬಡ್ಡಿ ಸುಸ್ತಿಬಡ್ಡಿ ಹೇರಿ ಸುಸ್ತಾಗಿಸುವ
ದುಡಿದು ಬೆಳೆದ ಸಿರಿಯ
ಹೀನಾಯ ಬೆಲೆಗೆ ಸೆಳೆವ
ಮನ ಬಂದ ಬೆಲೆಗೆ ಮಾರಿ ದೊಡ್ಡವನಾಗುವ
ಕಾಣದ ದೇವನ ಕೃಪೆ ಪಡೆಯುವ
ಮತದಾರನ ಒಡೆಯನ ಸಲಹುವ
ತನ್ನ ಸಂತತಿಯ ತನ್ನಂತೆ ಇರಿಸುವ
ನನ್ನ ಸಂತತಿಯ ನನ್ನಂತೆ ಇಳಿಸುವ

ನಾ ಹೆಚ್ಚೋ ಇವ ಹೆಚ್ಚೋ?!