Wednesday 15 October, 2008

ಚಿತ್ರ ೭೪


ಶ್ವೇತ:
ಇಂದೇತಕೋ ಪ್ರಕೃತಿ ಸೌಂದರ್ಯ ಸವಿಯುವ ಮನಸಾಗಿದೆ.

ಶ್ರೀನಿವಾಸ್:

ರೀಕ್ಷೆ

ಮುಗಿಯಿತೇ ವಾರ್ಷಿಕ ಪರೀಕ್ಷೆ
ಮುಂದಿನ ಎತ್ತ ಕಡೆ ಹೆಜ್ಜೆ ಇಡುಬೇಕೆಂಬ ನಿರೀಕ್ಷೆ
ಮದುವೆಯಾಗಿ ಗಂಡ ಮಕ್ಕಳ ಸಂಭಾಳಿಕೆಯೋ
ಎದುರಿಸುಬೇಕೇ ಅತ್ತೆ ನಾದಿನಿಯರ ದಬ್ಬಾಳಿಕೆಯೋ
ಕೆಲಸ ಸೇರಿ ಲೋಕದ ಸಂಭಾಳಿಕೆಯೋ
ಎದುರಿಸುವುದೇ ಸಹವರ್ತಿಗಳ ತುಂಟಾಟಿಕೆಯೋ

ಮರೆಯಾಗಿ ಹೋಯಿತೇ ಲಂಗ ದಾವಣಿ
ಎಲ್ಲಿ ಹುಡುಕಬೇಕೀಗ ಸೀರೆಯನುಡುವ ನೀರೆ
ಲೋಕದಲಿ ಎಲ್ಲ ತಲೆಕೆಳಗು - ಗಂಡಿನಂತೆ ಕಾಣುವ ಹೆಣ್ಣು
ಹೆಣ್ಣಿನಂತೆ ಕಾಣುವ ಗಂಡು

ಕರದಲಿರುವುದೇನು ಮೊಬೈಲೋ
ಕಾಫಿಯ ಲೋಟವೋ
ಪುಂಖಾನುಪುಂಖವಾಗು ಹೊರಹೊಮ್ಮುತಿಹುದು
ಸಿಗರೇಟಿನ ಹೊಗೆಯೋ

ಎಲ್ಲೆಲ್ಲೂ ಹರಡಿಹುದು
ಸಂಸಾರದಿ ಕಳಚಿದ ತರಗೆಲೆ, ಹಣ್ಣೆಲೆ
ಎನ್ನ ಜೀವನವೂ ಹೀಗೆಯಾ?
ಅಪ್ಪ ಅಮ್ಮ ಅಣ್ಣ ತಂಗಿಯರ ತೊರೆದ
ಅಬ್ಬೇಪಾರಿ ಮುದುಡುತಿಹ ಚಿಗುರೆಲೆ :(

ದಾಮೋದರ:

ತರಗೆಲೆಗಳು ನೆಲಕ್ಕುರುಳುತ್ತಲೇ ಇವೆ, ದಿನ, ವಾರ, ತಿಂಗಳು ಸರಾಗ ಪಯಣದಲ್ಲಿವೆ, ನಮಗೆ ಹೊಸ ಕನಸು,ಹೊಸ ಕ್ಷಣ, ನವ ಉಲ್ಲಾಸಗಳ ನಿರೀಕ್ಷೆಯಲ್ಲೇ ಕಾಯುತ್ತೇವೆ,ನವ ಹರುಷಕ್ಕಾಗಿ.


ಸತೀಶ್:
ಸುಖದ ಚಿಂತನೆ


ಕಳೆದು ಹೋದ ಕಾಲವನು ಹುಡುಕುವೆ ಏಕೆ
ಹಣ್ಣೆಲೆಯ ಪರಿ ಉದುರಿದ ನೆನಪುಗಳು ಬೇಕೆ

ಏರುವಾಗಿಹ ಅರ್ಭಟ ಇಳಿಯುವಲಿ ಕಾಣಲಿಲ್ಲ
ಏರಿ ಇಳಿಯುವ ಸೂತ್ರದ ನಿಷ್ಠೆಗೆ ಭಿನ್ನ ಸಲ್ಲ
ಮುಸ್ಸಂಜೆ ಪದರುಗಳು ಹಗಲ ಕೊನೆ ಉಸಿರು
ಹರಡಿದ ಅವಶೇಷಗಳ ಅಡಿಯ ಹುಲ್ಲ ಹಸಿರು.

ಕುದಿವ ಬದುಕಿನ ಕಟ್ಟಕಡೆಗಿಹುದು ಬಿಳಿಯ ಕಟ್ಟೆ
ಸಿಕ್ಕ ಕಾವಿಗೆ ಬಿರುಕು ಬಿಡುವ ಶಾಂತಿ ಮೊಟ್ಟೆ
ಸುತ್ತುವ ಆತ್ಮಗಳ ನಡುವೆ ಏಳುಬೀಳುವ ಕಲ್ಪನೆ
ನಾಳೆ ಹೋಗುವ ದೇಹದ ಸುಖದ ಚಿಂತನೆ.

5 comments:

ಶ್ವೇತ said...

Nota..:
"Indethako prakruthi saundaryava saviyuva manasaagide..."

bhadra said...

ಈ ಸಲ ನನ್ನ ಮನದಲಿ ಈ ಚಿತ್ರದ ಬಗ್ಗೆ ಬರೆಯಲೇನೂ ಸರಿಯಾಗಿ ಹೊಳೆಯುತ್ತಿಲ್ಲ. :( - ಆದರೂ ಪ್ರಯತ್ನಿಸುತ್ತಿರುವೆ

ನಿರೀಕ್ಷೆ

ಮುಗಿಯಿತೇ ವಾರ್ಷಿಕ ಪರೀಕ್ಷೆ
ಮುಂದಿನ ಎತ್ತ ಕಡೆ ಹೆಜ್ಜೆ ಇಡುಬೇಕೆಂಬ ನಿರೀಕ್ಷೆ
ಮದುವೆಯಾಗಿ ಗಂಡ ಮಕ್ಕಳ ಸಂಭಾಳಿಕೆಯೋ
ಎದುರಿಸುಬೇಕೇ ಅತ್ತೆ ನಾದಿನಿಯರ ದಬ್ಬಾಳಿಕೆಯೋ
ಕೆಲಸ ಸೇರಿ ಲೋಕದ ಸಂಭಾಳಿಕೆಯೋ
ಎದುರಿಸುವುದೇ ಸಹವರ್ತಿಗಳ ತುಂಟಾಟಿಕೆಯೋ

ಮರೆಯಾಗಿ ಹೋಯಿತೇ ಲಂಗ ದಾವಣಿ
ಎಲ್ಲಿ ಹುಡುಕಬೇಕೀಗ ಸೀರೆಯನುಡುವ ನೀರೆ
ಲೋಕದಲಿ ಎಲ್ಲ ತಲೆಕೆಳಗು - ಗಂಡಿನಂತೆ ಕಾಣುವ ಹೆಣ್ಣು
ಹೆಣ್ಣಿನಂತೆ ಕಾಣುವ ಗಂಡು

ಕರದಲಿರುವುದೇನು ಮೊಬೈಲೋ
ಕಾಫಿಯ ಲೋಟವೋ
ಪುಂಖಾನುಪುಂಖವಾಗು ಹೊರಹೊಮ್ಮುತಿಹುದು
ಸಿಗರೇಟಿನ ಹೊಗೆಯೋ

ಎಲ್ಲೆಲ್ಲೂ ಹರಡಿಹುದು
ಸಂಸಾರದಿ ಕಳಚಿದ ತರಗೆಲೆ, ಹಣ್ಣೆಲೆ
ಎನ್ನ ಜೀವನವೂ ಹೀಗೆಯಾ?
ಅಪ್ಪ ಅಮ್ಮ ಅಣ್ಣ ತಂಗಿಯರ ತೊರೆದ
ಅಬ್ಬೇಪಾರಿ ಮುದುಡುತಿಹ ಚಿಗುರೆಲೆ :(

damodara dondole said...

yharegelegalu nelakuruluthele ive
dina vara thingalu saraga payanadallive
namage hosa kanasu..hosa kshna nava ullasagalla neerikshyalle tea kudiyuthha kala ganteya arivillade kayutheve...nava harushakkagi
damu

shivu.k said...

ಚಿತ್ರ ಏನನ್ನು ಹೇಳಲು ಪ್ರಯತ್ನಿಸುತ್ತಿದೆಯೋ ತಿಳಿಯದು ಮುಖ್ಯವಾಗಿ Sharpness ಇರುವ ಚಿತ್ರ ಹಾಕಿ.

Satish said...

ಸುಖದ ಚಿಂತನೆ

ಕಳೆದು ಹೋದ ಕಾಲವನು ಹುಡುಕುವೆ ಏಕೆ
ಹಣ್ಣೆಲೆಯ ಪರಿ ಉದುರಿದ ನೆನಪುಗಳು ಬೇಕೆ

ಏರುವಾಗಿಹ ಅರ್ಭಟ ಇಳಿಯುವಲಿ ಕಾಣಲಿಲ್ಲ
ಏರಿ ಇಳಿಯುವ ಸೂತ್ರದ ನಿಷ್ಠೆಗೆ ಭಿನ್ನ ಸಲ್ಲ
ಮುಸ್ಸಂಜೆ ಪದರುಗಳು ಹಗಲ ಕೊನೆ ಉಸಿರು
ಹರಡಿದ ಅವಶೇಷಗಳ ಅಡಿಯ ಹುಲ್ಲ ಹಸಿರು.

ಕುದಿವ ಬದುಕಿನ ಕಟ್ಟಕಡೆಗಿಹುದು ಬಿಳಿಯ ಕಟ್ಟೆ
ಸಿಕ್ಕ ಕಾವಿಗೆ ಬಿರುಕು ಬಿಡುವ ಶಾಂತಿ ಮೊಟ್ಟೆ
ಸುತ್ತುವ ಆತ್ಮಗಳ ನಡುವೆ ಏಳುಬೀಳುವ ಕಲ್ಪನೆ
ನಾಳೆ ಹೋಗುವ ದೇಹದ ಸುಖದ ಚಿಂತನೆ.