Thursday 20 November, 2008

ಚಿತ್ರ ೭೯



ತಿರುಕ ಅವರ ಕವನ:

ಅರ್ಜುನನ ರಥದ ಮೇಲೆ
ಕೃಷ್ಣನ ಸಾರಥ್ಯದೊಂದಿಗೆ
ಅನಾದಿ ಕಾಲದಿಂದ
ಎಂದೂ ಇಳಿಯಲಿಲ್ಲ
ಇಳಿಯುವುದಿಲ್ಲ
ಹಾರದೇ ಇರುವುದಿಲ್ಲ
ಆಗಿರುವೆ ರಾಷ್ಟ್ರದ ಲಾಂಛನ
ತ್ಯಾಗ ಬಲಿದಾನಗಳ ಸಂಕೇತ

ಏರುತಿಹುದು
ಹಾರುತಿಹುದು
ಭಗವಾ ಧ್ವಜ
ಮಂದಿರದ ಸಂಕೇತ
ಜನಜೀವನದ ದ್ಯೋತಕ
ಉದ್ದಗಲ ಅಲೆಯುತ್ತಿರುವ
ಅಳೆಯುತ್ತಿರುವ ಸಮುದ್ರಕೆ
ಮಿತಿಯ ತೋರುತಿಹೆ

ಒಂದೆಡೆ ಕಮರಿ,
ಕಬಳಿಸಲು ಸಂಚು ಹಾಕುತಿಹ ಸಮುದ್ರ
ಅದರ ಭೋರ್ಗರೆತ
ಆಸರೆಗೆ ಬಂಡೆಯೊಂದಿಹುದು
ಅದೊಂದುದಿನ ಕರಗಬಹುದು
ಇನ್ನೊಂದೆಡೆ ಭಕ್ತರ ಹೊಳೆ
ಎನ್ನ ಮೇಲಿನ ಅಪಾರ ಭಕ್ತಿ
ಅವರ ಮೇಲೆ ಎನಗಿಹುದು ನಿಸ್ಸಂದೇಹ ನಂಬುಗೆ
ಸಮುದ್ರದಿಂದ ಕಾಪಾಡುವುದು
ಭಗವಾಧ್ವಜ ರಕ್ಷತಿ ರಕ್ಷಿತಃ

ರವಿಯು ಇಳಿದರೇನು
ಏರಿದರೇನು
ಧ್ವಜ ಹಾರುತಲೇ ಇರುವುದು
ಜನರಲಿ ನಂಬುಗೆಯ ಮೂಡಿಸುವುದು
ಭಗವಾಧ್ವಜ ರಕ್ಷತಿ ರಕ್ಷಿತಃ

1 comment:

Unknown said...

ಅರ್ಜುನನ ರಥದ ಮೇಲೆ
ಕೃಷ್ಣನ ಸಾರಥ್ಯದೊಂದಿಗೆ
ಅನಾದಿ ಕಾಲದಿಂದ
ಎಂದೂ ಇಳಿಯಲಿಲ್ಲ
ಇಳಿಯುವುದಿಲ್ಲ
ಹಾರದೇ ಇರುವುದಿಲ್ಲ
ಆಗಿರುವೆ ರಾಷ್ಟ್ರದ ಲಾಂಛನ
ತ್ಯಾಗ ಬಲಿದಾನಗಳ ಸಂಕೇತ

ಏರುತಿಹುದು
ಹಾರುತಿಹುದು
ಭಗವಾ ಧ್ವಜ
ಮಂದಿರದ ಸಂಕೇತ
ಜನಜೀವನದ ದ್ಯೋತಕ
ಉದ್ದಗಲ ಅಲೆಯುತ್ತಿರುವ
ಅಳೆಯುತ್ತಿರುವ ಸಮುದ್ರಕೆ
ಮಿತಿಯ ತೋರುತಿಹೆ

ಒಂದೆಡೆ ಕಮರಿ,
ಕಬಳಿಸಲು ಸಂಚು ಹಾಕುತಿಹ ಸಮುದ್ರ
ಅದರ ಭೋರ್ಗರೆತ
ಆಸರೆಗೆ ಬಂಡೆಯೊಂದಿಹುದು
ಅದೊಂದುದಿನ ಕರಗಬಹುದು
ಇನ್ನೊಂದೆಡೆ ಭಕ್ತರ ಹೊಳೆ
ಎನ್ನ ಮೇಲಿನ ಅಪಾರ ಭಕ್ತಿ
ಅವರ ಮೇಲೆ ಎನಗಿಹುದು ನಿಸ್ಸಂದೇಹ ನಂಬುಗೆ
ಸಮುದ್ರದಿಂದ ಕಾಪಾಡುವುದು
ಭಗವಾಧ್ವಜ ರಕ್ಷತಿ ರಕ್ಷಿತಃ

ರವಿಯು ಇಳಿದರೇನು
ಏರಿದರೇನು
ಧ್ವಜ ಹಾರುತಲೇ ಇರುವುದು
ಜನರಲಿ ನಂಬುಗೆಯ ಮೂಡಿಸುವುದು
ಭಗವಾಧ್ವಜ ರಕ್ಷತಿ ರಕ್ಷಿತಃ