Wednesday 24 December, 2008

ಚಿತ್ರ ೮೪



ತವಿಶ್ರೀ:

ಬಂಜೆ

ಮಾನವ:
ಎಷ್ಟು ಮೇಲೆ ದೃಷ್ಟಿ ಹರಿಸಿದರೇನಂತೆ
ನೀ ಮೇಲ ಹೋಗಲಾರೆ,
ಬೆಳೆಯಲಾರೆ, ಟಿಸಿಲೊಡೆಯಲಾರೆ
ಬದುಕ ನೀಡಲಾರೆ
ನೀನೊಂದು ಬಂಜೆ
ಆದರೂ ಯಾರಿಗೂ ಅಂಜೆ
ಉಗ್ರವಾದ, ಭೂಕಂಪ ನಿಸರ್ಗ ಕೋಪ ಎಲ್ಲವನ್ನೂ ಸಹಿಸೆ
ಬಂಜೆಯ ಪಟ್ಟದ ಮುಂದೆ ಅವೆಲ್ಲ ತೃಣಮಾತ್ರ

ಮರದ ಅಳಲು:

ಇನಿತು ಕಾಲ ನಿನ್ನ ಸಲುಹಿದುದ ಮರೆತೆಯಾ?
ಅಂದು ಅನ್ನ ಉಣಿಸಲು
ಎನ್ನ ಹೊಗಳಿ ಅಟ್ಟಕೇರಿಸಿದೆ
ನಾ ದೇವ ಸಮಾನ ಎಂದುಲಿದೆ
ಹಿಂದಿನಿಂದಲೇ ಎನ್ನ ಕರುಳ ಬಳ್ಳಿಯ ಕಡಿದೆ
ಅಂಗೋಂಪಾಂಗಗಳ ಕತ್ತರಿಸಿ
ತತ್ತರಿಸುವಂತಾಗಿಸಿದೆ
ಎನ್ನುಸಿರ ನಿಲ್ಲಿಸಿದೆ

ಮಾನವ:

ಕಡು ಕಷ್ಟವೇ ನಿನ್ನಾಹಾರ
ಸುಖವೆಂದರೇನೆಂದೇ ನೀ ತಿಳಿಯೇ
ಈ ಭೂಮಿಗೆ ನೀ ಭಾರ
ಎಷ್ಟು ನೇಸರನ ಶಕ್ತಿ
ಉಂಡರೇನಂತೆ
ಎಷ್ಟು ನೀರು ಗೊಬ್ಬರ
ಉಣಿಸಿದರೇನಂತೆ
ಉರುವಲಿಗೆ ಮಾತ್ರ ಬರುವ
ನೀನೊಂದು ಬಂಜೆ

ಮರದ ಅಳಲು:

ಯಾಕಿಂಥ ಬೆರಕಿತನ ನಿನಗೆ
ನಿನ್ನ ಸುಖದೆಡೆಗೇ ಆಲೋಚನೆ
ನಾನಿರುವುದು ಕೇವಲ ಯಾಚನೆಗೆಯೇ?
ಇಲ್ಲಿಯವರೆವಿಗೆ ನಾ ಜಗವ
ಸಲುಹಿದುದ ಮರೆಯುವುದಾ?
ಎನ್ನ ಈ ಸ್ಥಿತಿಗೆ ಯಾರು
ಕಾರಣ? ನೀನಲ್ಲವೇ?
ನಿನ್ನ ಕೃತ್ರಿಮತನಕ್ಕೆ
ಎನ್ನ ಹೀಗಳೆವುದು ಸರಿಯೇ!

1 comment:

Unknown said...

ಬಂಜೆ

ಮಾನವ:

ಎಷ್ಟು ಮೇಲೆ ದೃಷ್ಟಿ ಹರಿಸಿದರೇನಂತೆ
ನೀ ಮೇಲ ಹೋಗಲಾರೆ,
ಬೆಳೆಯಲಾರೆ, ಟಿಸಿಲೊಡೆಯಲಾರೆ
ಬದುಕ ನೀಡಲಾರೆ
ನೀನೊಂದು ಬಂಜೆ
ಆದರೂ ಯಾರಿಗೂ ಅಂಜೆ
ಉಗ್ರವಾದ, ಭೂಕಂಪ ನಿಸರ್ಗ ಕೋಪ ಎಲ್ಲವನ್ನೂ ಸಹಿಸೆ
ಬಂಜೆಯ ಪಟ್ಟದ ಮುಂದೆ ಅವೆಲ್ಲ ತೃಣಮಾತ್ರ

ಮರದ ಅಳಲು:

ಇನಿತು ಕಾಲ ನಿನ್ನ ಸಲುಹಿದುದ ಮರೆತೆಯಾ?
ಅಂದು ಅನ್ನ ಉಣಿಸಲು
ಎನ್ನ ಹೊಗಳಿ ಅಟ್ಟಕೇರಿಸಿದೆ
ನಾ ದೇವ ಸಮಾನ ಎಂದುಲಿದೆ
ಹಿಂದಿನಿಂದಲೇ ಎನ್ನ ಕರುಳ ಬಳ್ಳಿಯ ಕಡಿದೆ
ಅಂಗೋಂಪಾಂಗಗಳ ಕತ್ತರಿಸಿ
ತತ್ತರಿಸುವಂತಾಗಿಸಿದೆ
ಎನ್ನುಸಿರ ನಿಲ್ಲಿಸಿದೆ

ಮಾನವ:

ಕಡು ಕಷ್ಟವೇ ನಿನ್ನಾಹಾರ
ಸುಖವೆಂದರೇನೆಂದೇ ನೀ ತಿಳಿಯೇ
ಈ ಭೂಮಿಗೆ ನೀ ಭಾರ
ಎಷ್ಟು ನೇಸರನ ಶಕ್ತಿ
ಉಂಡರೇನಂತೆ
ಎಷ್ಟು ನೀರು ಗೊಬ್ಬರ
ಉಣಿಸಿದರೇನಂತೆ
ಉರುವಲಿಗೆ ಮಾತ್ರ ಬರುವ
ನೀನೊಂದು ಬಂಜೆ

ಮರದ ಅಳಲು:

ಯಾಕಿಂಥ ಬೆರಕಿತನ ನಿನಗೆ
ನಿನ್ನ ಸುಖದೆಡೆಗೇ ಆಲೋಚನೆ
ನಾನಿರುವುದು ಕೇವಲ ಯಾಚನೆಗೆಯೇ?
ಇಲ್ಲಿಯವರೆವಿಗೆ ನಾ ಜಗವ
ಸಲುಹಿದುದ ಮರೆಯುವುದಾ?
ಎನ್ನ ಈ ಸ್ಥಿತಿಗೆ ಯಾರು
ಕಾರಣ? ನೀನಲ್ಲವೇ?
ನಿನ್ನ ಕೃತ್ರಿಮತನಕ್ಕೆ
ಎನ್ನ ಹೀಗಳೆವುದು ಸರಿಯೇ!