Thursday 16 July, 2009

ಚಿತ್ರ ೧೧೧


ತವಿಶ್ರೀ :

ಪತ್ತೇದಾರ ಪುರುಷೋತ್ತಮ ಲಾಂಗ್ ಓವರ್ ಕೋಟು, ಫೇಲ್ಟ್ ಹ್ಯಾಟು, ಕಪ್ಪು ಕನ್ನಡಕ, ಗಮ್ ಬೂಟ್ಸ್ ಧರಿಸಿ ಹೊರಟಿದ್ದಾನೆ. ಜನ ದನ ಯಾವುವೂ ಇಲ್ಲದ ಈ ಪ್ರದೇಶದಲ್ಲಿ ಇವನಿಗೇಕೀ ವೇಷ? ಜನನಿಬಿಡ ಈ ಕಾಡು ಗುಡ್ಡ ಬೆಟ್ಟದಲಿ ಇವನಿಗೇನು ಕೆಲಸ? ಜೀವನದಲ್ಲೆಂದೂ ಟ್ರೆಕ್ಕಿಂಗ್ ಹೋಗದವನಿಗೆ ಈ ವೇಷ ಎಲ್ಲಿ ಸಿಕ್ಕಿತೋ ಏನೋ? ಅದೂ ಅಲ್ಲದೇ ಅವನೊಬ್ಬನೇ ಯಾಕೆ ಟ್ರೆಕ್ಕಿಂಗ್ ಹೋಗುತ್ತಿದ್ದಾನೆ. ಸಾಮಾನ್ಯವಾಗಿ ಅವನೆಲ್ಲಿಗೇ ಹೊರಟರೂ ಅವನ ಅಸಿಸ್ಟೆಂಟ್ ಕಿರಾತಕ ಕಿಟ್ಟಣ್ಣ ಬೆಂಗಾವಲಾಗಿ ಇದ್ದೇ ಇರುತ್ತಾನೆ. ಆದರಿವತ್ತು ಪುರುಷೋತ್ತಮನೊಬ್ಬನೇ ಹೋಗುತ್ತಿದ್ದಾನೆ. ಏನೋ ವಿಚಿತ್ರವಾಗಿದೆಯಲ್ಲ, ಎಂದು ನಾನವನನ್ನು ಹಿಂಬಾಲಿಸಿದೆ.

ಭರ ಭರ ದಾಪುಗಾಲು ಹಾಕಿ ಹೋಗುತ್ತಿದ್ದವನನ್ನು ಸಮೀಪಿಸಲು ನಾನು ಓಡಲೇ ಬೇಕಾಯಿತು. ಈ ಮಧ್ಯೆ ಓಡುತ್ತಿರುವಾಗ ನನ್ನ ಚಪ್ಪಲಿಯ ಉಂಗುಷ್ಠ ಕಿತ್ತು ಹೋಯಿತು. ಚಪ್ಪಲಿಗಳನ್ನು ಅಲ್ಲಿಯೇ ಬಿಸಾಕಿ ಹಿಂದೆ ಓಡಿದೆ. ಅನತಿ ದೂರದಲ್ಲಿರಲು, ಪುರುಷೀ ಅಂತ ಕೂಗಿದೆ. ಚಿರಪರಿಚಿತ ಧ್ವನಿ ಕೇಳಿದರೂ ಆತ ಹಿಂದೆ ನೋಡಲಿಲ್ಲ. ಏನೋ ಅಚಾತುರ್ಯ ಸಂಭವಿಸಿದೆ ಎಂದಂದುಕೊಂಡು, ಇನ್ನೂ ರಭಸದಿಂದ ಓಡಿ, ಆತನ ಓವರ್ ಕೋಟನ್ನು ಹಿಂಭಾಗದಿಂದ ಜಗ್ಗಿ ಆತನನ್ನು ನಿಲ್ಲಿಸಿದೆ.

’ಏನಯ್ಯಾ ಇದು ವೇಷ? ಯಾಕಯ್ಯಾ ನನ್ನ ಕರೆಗೂ ಓಗೊಡುತ್ತಿಲ್ಲ? ಎಲ್ಲಯ್ಯಾ ನಿನ್ನ ಕಿರಾತಕ ಹಿಂಬಾಲಕ?’ ಎಂದೆಲ್ಲ ಪ್ರಶ್ನೆಗಳನ್ನೂ ಒಂದೇ ಉಸುರಿನಲ್ಲಿ ಉಸುರಿದೆ. ಓಡು ನಡಿಗೆಯಲ್ಲಿದ್ದ ಆತನೂ ಏದುಸಿರು ಬಿಡುತ್ತಿದ್ದ. ಮೇಲಕ್ಕೆ ಬೆರಳೆತ್ತಿ, ಖಿನ್ನ ಮುಖವನ್ನು ನನ್ನೆಡೆಗೆ ಪ್ರದರ್ಶಿಸಿದ. ಒಂದೆರಡು ಕ್ಷಣಗಳ ತರುವಾಯ, ’ಇನ್ನೆಲ್ಲಿಯ್ಯ ಕಿಟ್ಟಣ್ಣನಯ್ಯಾ? ಆತನ ಕೊಲೆ ಆಗಿದೆ. ನಿನಗೇ ಗೊತ್ತಿರುವಂತೆ ನಿನ್ನೆ ನಾನೂ ಮತ್ತು ಕಿಟ್ಟಣ್ಣ ಇದೇ ಕಾಡಿನ ಸರಹದ್ದಿನಲಿ, ಯಾವುದೋ ಕೇಸೊಂದಕ್ಕಾಗಿ ಬಂದೆವು. ಕಾಡಿನ ಮುಖದಲ್ಲಿಯೇ ಇರುವ ಪಾಳು ಬಂಗಲೆಯಲ್ಲಿ ಉಳಿದುಕೊಂಡಿದ್ದೆವು. ಇಂದು ಬೆಳಗಿನ ಜಾವ ನಾಲ್ಕು ಘಂಟೆಯ ವೇಳೆಯಲ್ಲಿ, ಬಹಿರ್ದೆಶೆಗೆಂದು ಹೋಗಿದ್ದ ಕಿಟ್ಟಣ್ಣನನ್ನು, ಹಿಂದಿನಿಂದ ಯಾರೋ ಮಚ್ಚಿನಲ್ಲಿ ಹೊಡೆದು, ಸಾಯಿಸಿದ್ದಾರೆ. ಆತನ ರುಂಡವೊಂದು ಮಾತ್ರ ಈ ಕಾಡಿನ ಬಂಗಲೆಯ ಹಿಂಭಾಗದಲ್ಲಿ ಸಿಕ್ಕಿದೆ. ಆತನ ಮುಂಡ ಎಲ್ಲಿ ಹೋಯಿತೋ ತಿಳಿಯದಾಗಿದೆ. ಅದನ್ನು ಹುಡುಕ ಹೊರಟಿರುವೆ. ಅದಕ್ಕಾಗಿಯೇ ಯಾರಿಗೂ ಹೇಳದೇ, ಎಲ್ಲಿಯೂ ನಿಲ್ಲದೇ ನಾನೊಬ್ಬನೇ ಹೊರಟು ಬಂದಿರುವೆ. ಈಗ ಪೊಲೀಸರೂ ನನ್ನ ಕಡೆ ಸಂಶಯಾಸ್ಪದವಾಗಿ ನೋಡುತ್ತಿದ್ದು, ನನ್ನ ಹಿಂದೆಯೇ ಬಿದ್ದಿದ್ದಾರೆ. ಮೊದಲೀಗ ನಾನು ನನ್ನನ್ನು ಪೊಲೀಸರಿಂದ ರಕ್ಷಿಸಿಕೊಳ್ಳಬೇಕು. ನಂತರ ಕಿಟ್ಟಣ್ಣನ ಮುಂಡವನ್ನು ದೊರಕಿಸಿಕೋಬೇಕು. ಇದುವರೆವಿಗೆ ಯಾರಿಗೂ ಈ ವಿಷಯವನ್ನು ಅರುಹಿಲ್ಲ. ನೀನೇ ಮೊದಲಿಗ. ನನಗೆ ಸಾಥಿ ನೀಡುವೆಯಾ? ಆಗುವುದಿಲ್ಲ ಎಂದು ಮಾತ್ರ ಹೇಳಬೇಡ’.

ಏನೂ ಕೆಲಸವಿಲ್ಲದೇ, ಬರಹಕ್ಕೂ ಮನಸಿಲ್ಲದ ನಾನು ಪುರುಷೋತ್ತಮನೊಂದಿಗೆ ಹೊರಡಲು ತಕ್ಷಣ ಒಪ್ಪಿಗೆ ನೀಡಿದೆ.

ಇದು ಇಲ್ಲಿಯವರೆವಿಗೆ ನಡೆದಿರುವ ಪ್ರಸಂಗ. ನಮ್ಮ ಕೆಲಸ ಆದ ನಂತರ ಮುಂದಿನ ವರದಿಯನ್ನು ನಿಮ್ಮ ಮುಂದಿಡುವೆ. ಅಲ್ಲಿಯವರೆವಿಗೆ ತಾಳ್ಮೆಯಿಂದಿರಿ. ಯಾರಿಗಾದರೂ ನನಗಿಂತ ಮೊದಲೇ ಈ ಕೇಸಿನ ಬಗ್ಗೆ ಗೊತ್ತಾದರೆ, ಅವರು ಇಲ್ಲಿ ಬರಹವನ್ನು ಮುಂದುವರೆಸಬೇಕೆಂದು ಕೋರುವ

ಇತಿ ನಿಮ್ಮ

೯೯೯

2 comments:

Unknown said...

ಪತ್ತೇದಾರ ಪುರುಷೋತ್ತಮ ಲಾಂಗ್ ಓವರ್ ಕೋಟು, ಫೇಲ್ಟ್ ಹ್ಯಾಟು, ಕಪ್ಪು ಕನ್ನಡಕ, ಗಮ್ ಬೂಟ್ಸ್ ಧರಿಸಿ ಹೊರಟಿದ್ದಾನೆ. ಜನ ದನ ಯಾವುವೂ ಇಲ್ಲದ ಈ ಪ್ರದೇಶದಲ್ಲಿ ಇವನಿಗೇಕೀ ವೇಷ? ಜನನಿಬಿಡ ಈ ಕಾಡು ಗುಡ್ಡ ಬೆಟ್ಟದಲಿ ಇವನಿಗೇನು ಕೆಲಸ? ಜೀವನದಲ್ಲೆಂದೂ ಟ್ರೆಕ್ಕಿಂಗ್ ಹೋಗದವನಿಗೆ ಈ ವೇಷ ಎಲ್ಲಿ ಸಿಕ್ಕಿತೋ ಏನೋ? ಅದೂ ಅಲ್ಲದೇ ಅವನೊಬ್ಬನೇ ಯಾಕೆ ಟ್ರೆಕ್ಕಿಂಗ್ ಹೋಗುತ್ತಿದ್ದಾನೆ. ಸಾಮಾನ್ಯವಾಗಿ ಅವನೆಲ್ಲಿಗೇ ಹೊರಟರೂ ಅವನ ಅಸಿಸ್ಟೆಂಟ್ ಕಿರಾತಕ ಕಿಟ್ಟಣ್ಣ ಬೆಂಗಾವಲಾಗಿ ಇದ್ದೇ ಇರುತ್ತಾನೆ. ಆದರಿವತ್ತು ಪುರುಷೋತ್ತಮನೊಬ್ಬನೇ ಹೋಗುತ್ತಿದ್ದಾನೆ. ಏನೋ ವಿಚಿತ್ರವಾಗಿದೆಯಲ್ಲ, ಎಂದು ನಾನವನನ್ನು ಹಿಂಬಾಲಿಸಿದೆ.

ಭರ ಭರ ದಾಪುಗಾಲು ಹಾಕಿ ಹೋಗುತ್ತಿದ್ದವನನ್ನು ಸಮೀಪಿಸಲು ನಾನು ಓಡಲೇ ಬೇಕಾಯಿತು. ಈ ಮಧ್ಯೆ ಓಡುತ್ತಿರುವಾಗ ನನ್ನ ಚಪ್ಪಲಿಯ ಉಂಗುಷ್ಠ ಕಿತ್ತು ಹೋಯಿತು. ಚಪ್ಪಲಿಗಳನ್ನು ಅಲ್ಲಿಯೇ ಬಿಸಾಕಿ ಹಿಂದೆ ಓಡಿದೆ. ಅನತಿ ದೂರದಲ್ಲಿರಲು, ಪುರುಷೀ ಅಂತ ಕೂಗಿದೆ. ಚಿರಪರಿಚಿತ ಧ್ವನಿ ಕೇಳಿದರೂ ಆತ ಹಿಂದೆ ನೋಡಲಿಲ್ಲ. ಏನೋ ಅಚಾತುರ್ಯ ಸಂಭವಿಸಿದೆ ಎಂದಂದುಕೊಂಡು, ಇನ್ನೂ ರಭಸದಿಂದ ಓಡಿ, ಆತನ ಓವರ್ ಕೋಟನ್ನು ಹಿಂಭಾಗದಿಂದ ಜಗ್ಗಿ ಆತನನ್ನು ನಿಲ್ಲಿಸಿದೆ.

’ಏನಯ್ಯಾ ಇದು ವೇಷ? ಯಾಕಯ್ಯಾ ನನ್ನ ಕರೆಗೂ ಓಗೊಡುತ್ತಿಲ್ಲ? ಎಲ್ಲಯ್ಯಾ ನಿನ್ನ ಕಿರಾತಕ ಹಿಂಬಾಲಕ?’ ಎಂದೆಲ್ಲ ಪ್ರಶ್ನೆಗಳನ್ನೂ ಒಂದೇ ಉಸುರಿನಲ್ಲಿ ಉಸುರಿದೆ. ಓಡು ನಡಿಗೆಯಲ್ಲಿದ್ದ ಆತನೂ ಏದುಸಿರು ಬಿಡುತ್ತಿದ್ದ. ಮೇಲಕ್ಕೆ ಬೆರಳೆತ್ತಿ, ಖಿನ್ನ ಮುಖವನ್ನು ನನ್ನೆಡೆಗೆ ಪ್ರದರ್ಶಿಸಿದ. ಒಂದೆರಡು ಕ್ಷಣಗಳ ತರುವಾಯ, ’ಇನ್ನೆಲ್ಲಿಯ್ಯ ಕಿಟ್ಟಣ್ಣನಯ್ಯಾ? ಆತನ ಕೊಲೆ ಆಗಿದೆ. ನಿನಗೇ ಗೊತ್ತಿರುವಂತೆ ನಿನ್ನೆ ನಾನೂ ಮತ್ತು ಕಿಟ್ಟಣ್ಣ ಇದೇ ಕಾಡಿನ ಸರಹದ್ದಿನಲಿ, ಯಾವುದೋ ಕೇಸೊಂದಕ್ಕಾಗಿ ಬಂದೆವು. ಕಾಡಿನ ಮುಖದಲ್ಲಿಯೇ ಇರುವ ಪಾಳು ಬಂಗಲೆಯಲ್ಲಿ ಉಳಿದುಕೊಂಡಿದ್ದೆವು. ಇಂದು ಬೆಳಗಿನ ಜಾವ ನಾಲ್ಕು ಘಂಟೆಯ ವೇಳೆಯಲ್ಲಿ, ಬಹಿರ್ದೆಶೆಗೆಂದು ಹೋಗಿದ್ದ ಕಿಟ್ಟಣ್ಣನನ್ನು, ಹಿಂದಿನಿಂದ ಯಾರೋ ಮಚ್ಚಿನಲ್ಲಿ ಹೊಡೆದು, ಸಾಯಿಸಿದ್ದಾರೆ. ಆತನ ರುಂಡವೊಂದು ಮಾತ್ರ ಈ ಕಾಡಿನ ಬಂಗಲೆಯ ಹಿಂಭಾಗದಲ್ಲಿ ಸಿಕ್ಕಿದೆ. ಆತನ ಮುಂಡ ಎಲ್ಲಿ ಹೋಯಿತೋ ತಿಳಿಯದಾಗಿದೆ. ಅದನ್ನು ಹುಡುಕ ಹೊರಟಿರುವೆ. ಅದಕ್ಕಾಗಿಯೇ ಯಾರಿಗೂ ಹೇಳದೇ, ಎಲ್ಲಿಯೂ ನಿಲ್ಲದೇ ನಾನೊಬ್ಬನೇ ಹೊರಟು ಬಂದಿರುವೆ. ಈಗ ಪೊಲೀಸರೂ ನನ್ನ ಕಡೆ ಸಂಶಯಾಸ್ಪದವಾಗಿ ನೋಡುತ್ತಿದ್ದು, ನನ್ನ ಹಿಂದೆಯೇ ಬಿದ್ದಿದ್ದಾರೆ. ಮೊದಲೀಗ ನಾನು ನನ್ನನ್ನು ಪೊಲೀಸರಿಂದ ರಕ್ಷಿಸಿಕೊಳ್ಳಬೇಕು. ನಂತರ ಕಿಟ್ಟಣ್ಣನ ಮುಂಡವನ್ನು ದೊರಕಿಸಿಕೋಬೇಕು. ಇದುವರೆವಿಗೆ ಯಾರಿಗೂ ಈ ವಿಷಯವನ್ನು ಅರುಹಿಲ್ಲ. ನೀನೇ ಮೊದಲಿಗ. ನನಗೆ ಸಾಥಿ ನೀಡುವೆಯಾ? ಆಗುವುದಿಲ್ಲ ಎಂದು ಮಾತ್ರ ಹೇಳಬೇಡ’.

ಏನೂ ಕೆಲಸವಿಲ್ಲದೇ, ಬರಹಕ್ಕೂ ಮನಸಿಲ್ಲದ ನಾನು ಪುರುಷೋತ್ತಮನೊಂದಿಗೆ ಹೊರಡಲು ತಕ್ಷಣ ಒಪ್ಪಿಗೆ ನೀಡಿದೆ.

ಇದು ಇಲ್ಲಿಯವರೆವಿಗೆ ನಡೆದಿರುವ ಪ್ರಸಂಗ. ನಮ್ಮ ಕೆಲಸ ಆದ ನಂತರ ಮುಂದಿನ ವರದಿಯನ್ನು ನಿಮ್ಮ ಮುಂದಿಡುವೆ. ಅಲ್ಲಿಯವರೆವಿಗೆ ತಾಳ್ಮೆಯಿಂದಿರಿ. ಯಾರಿಗಾದರೂ ನನಗಿಂತ ಮೊದಲೇ ಈ ಕೇಸಿನ ಬಗ್ಗೆ ಗೊತ್ತಾದರೆ, ಅವರು ಇಲ್ಲಿ ಬರಹವನ್ನು ಮುಂದುವರೆಸಬೇಕೆಂದು ಕೋರುವ

ಇತಿ ನಿಮ್ಮ

೯೯೯

ಕನ್ನಡಿಗನೊಬ್ಬನ ತೆರೆದ ಹಾಳೆ said...

ನೀವು ಯಾಕೆ ಒಂದು ಪತ್ತೇದಾರಿ ಕಾದಂಬರಿಯನ್ನು ಬರೆಯಬಾರದು. ನಿಜ... ತಾಳ್ಮೆಯಿಂದ ಒಂದು ತಿಂಗಳಾದರೂ ಪರವಾಗಿಲ್ಲ. ಮುಂದುವರೆಸಿ ಗುರುಗಳೇ...