ಚಿತ್ರ - ೨೦
ಸತೀಶ ಅವರು 'ನೆರಳಿಗೊಂದು ನೆಲೆ' ಯಲ್ಲಿ ಬರೆದದ್ದು ಹೀಗೆ...
ಜನರೆಲ್ಲ ನಗರಗಳಲ್ಲೇ ತುಂಬಿಹರೇ ಹೊರತು
ಸ್ವಚ್ಛಂದ ಗಾಳಿಯಾಡುವಲ್ಲಲ್ಲ
ಈಗಾಗಲೇ ಕುಳಿತ ಆಸನಗಳ ಆಸೆಯೇ ಹೊರತು
ಖಾಲಿ ಬಿದ್ದ ಆಸನಗಳ ಮೇಲಲ್ಲ.
ಪ್ರತಿ ಆಸನಕೂ ಪಕ್ಕದಲಿ ನೆರಳನೊಡ್ಡಿದರೂ
ಬಿಸಿಲಲಿ ಬೇಯುವ ಬಯಕೆ
ಎಂದೂ ಕೆಸರಾಗದ ಇಟ್ಟಿಗೆ ಹಾಸಿದರೂ
ಹಿಂಗದ ದಾಹ ನೆಲಕೆ.
ಕೆಸರೂ-ಮಣ್ಣೂ ನಿಧಾನವಾಗಿ ನೆಲವ ಕ್ರಮಿಸಿ
ಜೊತೆಗೆ ಅದೆಲ್ಲೆಲ್ಲಿಂದಲೋ ಎಲೆಗಳು ಹಾರಿ
ಬಾಗಿದ ರೆಂಬೆಕೊಂಬೆಗಳು ಒಂದನ್ನೊಂದು ರಮಿಸಿ
ಹಸಿರಾಗಿರುವ ಎಲೆಗಳ ತುದಿಯಿಂದ ನೀರು ಜಾರಿ.
ನೆರಳಿದೆ ಆಸನವಿದೆ ಕೆಸರಿರದ ಜಾಗವಿದೆಯೆಂದರೂ
ಕೂತು ಸ್ವಚ್ಛಂದವನು ಆಸ್ವಾದಿಸುವ ಮನವಿಲ್ಲ
ನೆರಳ ಸೂಸುವ ನೆಪದಲ್ಲಿ ಕೊಂಬೆಗಳು ಬಳುಕಿವೆಯಾದರೂ
ನೆರಳಿಗೊಂದು ನೆಲೆ ತೋರಿಸೋ ಬಿಸಿಲಿಲ್ಲ.
