Monday 29 October, 2007

ಚಿತ್ರ - ೨೫




ಸಾಂಗತ್ಯದ ರಾಗವ ಹಾಡೋಣ ಎಂದು ಸತೀಶ ಪರಿಸರದ ಬಗ್ಗೆ ಕಳಕಳಿಯನ್ನು ಸೂಚಿಸಿದ್ದು...

ಬೆಟ್ಟವ ಕಡಿದು ಬೋಳು ಮಾಡಿದರು
ತುಂಬದು ತೀರದು ಹಾಹಾಕಾರ
ಮನೆಯನು ಮಾಡಲು ಜಾಗವ ಕೊಟ್ಟರು
ಮರೆಯುವ ಮಾನವ ಉಪಕಾರ.
ನುಣ್ಣಗೆ ಇದ್ದ ದೂರದ ಬೆಟ್ಟವು

ಮೋಡದ ಮಿತ್ರನು ಆಗಿತ್ತು
ಇದ್ದ ಕಾಡನು ಕಳೆಯಲು ನಾವು
ಜಲವದು ದೂರವೇ ಹೋಗಿತ್ತು.

ಕೋಟೆ ಕೊತ್ತಲ ಜೈಲಿನ ಕಂಬಿ
ಎಲ್ಲವು ಮನುಷ್ಯನ ಸೃಷ್ಟಿಗಳು
ದೂರದಿ ನಗುವ ದೇವನ ನಂಬಿ
ಹಾದು ಹೋಗುವವು ಮೋಡಗಳು.

ಆಗಿದ್ದಾಯ್ತು ಏತಕೆ ಚಿಂತೆ
ಬೆಳಕಿನೆಡೆಗೆ ನಾವು ನೋಡೋಣ
ಸೃಷ್ಟಿಯ ಸೊಬಗಿಗೆ ಕೈ ಮುಗಿಯುತೆ
ನಾವು ಸಾಂಗತ್ಯದ ರಾಗವ ಹಾಡೋಣ.


ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯನ್ನು ನೆನೆಪಿಸುವಂತೆ ಸೀಮಾ ಬರೆದಿದ್ದು...

ದೂರದಲ್ಲಿ ಕಾಣುತ್ತಿರುವ ಗುಡ್ಡಗಳಲ್ಲಿ ಹಸಿರು ಹಾಸು,
ಇಲ್ಲಿಯ ಗುಡ್ಡಗಳಲ್ಲೋ ಬರಿದೇ ಕಲ್ಲು, ಮಣ್ಣು, ಬಿಸಿಲು.
ಅಲ್ಲಿ ಹೋಗಿ ವಿರಮಿಸುವೆ ಎಂದುಕೊಂಡಿತು ಹೃದಯ.
ಅಷ್ಟರಲ್ಲಿಯೇ ಹೃದಯಕ್ಕೆ ತಿಳಿ ಹೇಳಿತು ಮನಸ್ಸು.
ಸುಮ್ಮನಿರು,
'ದೂರದಲ್ಲಿರುವುದು ಯಾವತ್ತೂ ಸುಂದರ.
ಹತ್ತಿರ ಹೋದರೆ ಅದಕ್ಕೂ ಇದಕ್ಕೂ ಇಲ್ಲ ಹೆಚ್ಚಿನ ಅಂತರ.'

2 comments:

Satish said...

ಸಾಂಗತ್ಯದ ರಾಗವ ಹಾಡೋಣ

ಬೆಟ್ಟವ ಕಡಿದು ಬೋಳು ಮಾಡಿದರು
ತುಂಬದು ತೀರದು ಹಾಹಾಕಾರ
ಮನೆಯನು ಮಾಡಲು ಜಾಗವ ಕೊಟ್ಟರು
ಮರೆಯುವ ಮಾನವ ಉಪಕಾರ.

ನುಣ್ಣಗೆ ಇದ್ದ ದೂರದ ಬೆಟ್ಟವು
ಮೋಡದ ಮಿತ್ರನು ಆಗಿತ್ತು
ಇದ್ದ ಕಾಡನು ಕಳೆಯಲು ನಾವು
ಜಲವದು ದೂರವೇ ಹೋಗಿತ್ತು.

ಕೋಟೆ ಕೊತ್ತಲ ಜೈಲಿನ ಕಂಬಿ
ಎಲ್ಲವು ಮನುಷ್ಯನ ಸೃಷ್ಟಿಗಳು
ದೂರದಿ ನಗುವ ದೇವನ ನಂಬಿ
ಹಾದು ಹೋಗುವವು ಮೋಡಗಳು.

ಆಗಿದ್ದಾಯ್ತು ಏತಕೆ ಚಿಂತೆ
ಬೆಳಕಿನೆಡೆಗೆ ನಾವು ನೋಡೋಣ
ಸೃಷ್ಟಿಯ ಸೊಬಗಿಗೆ ಕೈ ಮುಗಿಯುತೆ
ನಾವು ಸಾಂಗತ್ಯದ ರಾಗವ ಹಾಡೋಣ.

Seema S. Hegde said...

ದೂರದಲ್ಲಿ ಕಾಣುತ್ತಿರುವ ಗುಡ್ಡಗಳಲ್ಲಿ ಹಸಿರು ಹಾಸು,
ಇಲ್ಲಿಯ ಗುಡ್ಡಗಳಲ್ಲೋ ಬರಿದೇ ಕಲ್ಲು, ಮಣ್ಣು, ಬಿಸಿಲು.
ಅಲ್ಲಿ ಹೋಗಿ ವಿರಮಿಸುವೆ ಎಂದುಕೊಂಡಿತು ಹೃದಯ.
ಅಷ್ಟರಲ್ಲಿಯೇ ಹೃದಯಕ್ಕೆ ತಿಳಿ ಹೇಳಿತು ಮನಸ್ಸು.
ಸುಮ್ಮನಿರು,
'ದೂರದಲ್ಲಿರುವುದು ಯಾವತ್ತೂ ಸುಂದರ.
ಹತ್ತಿರ ಹೋದರೆ ಅದಕ್ಕೂ ಇದಕ್ಕೂ ಇಲ್ಲ ಹೆಚ್ಚಿನ ಅಂತರ.'