Monday 24 March, 2008

ಚಿತ್ರ - 46

ಶ್ರೀನಿವಾಸ್ ಅವರು ಚಿಂತನೆಗೆ ಚೈತನ್ಯ ಅನ್ನುವ ಕವನದ ಮೂಲಕ ಹೀಗೆ ಹೇಳುತ್ತಾರೆ.

ಅಬ್ಬೇಪಾರಿಯಾಗಿ
ಮಲಗಿರುವೆಯಾ ನೀ ನನ್ನ ಕಂದ
ನಿನ್ನ ಎತ್ತಾಡಿದರೆ ಮನಕಾನಂದ
ಮೂಡಿಸಬಲ್ಲೆ
ಓದುಗರಲಿ
ಮಂದಹಾಸ, ಮುಗುಳ್ನಗೆ,
ಉಲ್ಕಾಪಾತಕ ಕಂಗಳು,
ಭುಗಿಲೇಳುವ ಮನಗಳು,ಭಯಾನಕ ಚಿಂತನೆಗಳು,
ಇನ್ನೂ ಹಲವಾರು ನವರಸಗಳು
ಏಳು, ಎದ್ದೇಳು
ಹರಿಬಿಡು ಹೆಪ್ಪುಗಟ್ಟುತ್ತಿರುವ
ರಕ್ತವರ್ಣದ ಓಕುಳಿಯ ಬಣ್ಣ
ಧಮನಿಗಳಲಿ ಹರಿದಾಡಲಿ
ನೆತ್ತರಿನ ಪ್ರವಾಹ
ಹೆಪ್ಪುಗಡದಿರಲಿ
ಅಂಗವೈಕಲ್ಯವ ನೀಡದಿರಲಿ
ನೀ ಮೂಡಿಸುವಅಕ್ಷರದಿ ಹರಿದಾಡಲಿ
ನೆತ್ತರಿನ ಪ್ರವಾಹ
ಭುಗಿಲೇಳಲಿ
ಚಿಂತನೆಗಳು
ಏಳು, ಎದ್ದೇಳು
ಹರಿಬಿಡು, ಮನದ ಚಿಂತನೆಗಳ
ಸಮಾಜದ ಒಳಿತಿಗಾಗಿ
ಕುಮಾರ ಕಡಕೊಳ್ಳರು ಲೇಖನಿಯ ಬಗ್ಗೆ ಹೇಳುವುದು ಹೀಗೆ:
ಚಿಕ್ಕದಾದರು ನನ್ನ ದೇಹಗಾತ್ರ
ಖಡ್ಗಕ್ಕಿಂತ ತಿಕ್ಷ್ಣ ನನ್ನ ಹರಿತ
ಕ್ರಾಂತಿಯ ಸಿಡಿಲಕಿಡಿ ಸಿಡಿಸಬಲ್ಲೆ
ಶಾಂತಿ ಮಂತ್ರವ ಸಾರಬಲ್ಲೆ
ಹಗಲು ರಾತ್ರಿಯ ಪರಿವಿಲ್ಲ
ಸುಖ ದುಃಖಗಳ ತೊಡುಕಿಲ್ಲ
ಹಿರಿಕಿರಿಯರ ಗರಿವಿಲ್ಲ
ಬರೆಯುವುದೊಂದೇ ನನ್ನ ನಿಷ್ಠೆ

ಅರ್ಥ ಕಾಮದ ಬೇಧವಿಲ್ಲ
ಉಚ್ಚನೀಚತುಚ್ಛಗಳ ತಿಳಿವಿಲ್ಲ
ರಾಗಭೋಗಸಾರದ ಸೆಳವಿಲ್ಲ
ರೂಪಾಂತರಿಸುವುದೆನ್ನ ಕಾಯಕ

ರಕ್ತಕೋಡಿ ಹರಿಯಲು ಬಹುದು
ಕ್ರಾಂತಿ ಕಹಳೆ ಮೊಳಗಲುಬಹುದು
ಸಳ್ಳುಸಾರಗಳು ಮೆರೆಯಲು ಬಹುದು
ನಾಕೊಟ್ಟ ರೂಪಕ್ಕೆ ಹತ್ತಾರು ಮುಖಗಳು

ಗತದಲ್ಲಿ ಕಳೆದ ನೂರುಕಾಲದ
ಇತಿಹಾಸ ಸೆರೆಹಿಡಿದಕ್ಷರದಲಿ
ಒತ್ತಿಗೆಯಲಿ ಒಟ್ಟಾಗಿ ಸೇರಿಸಬಲ್ಲೆ
ಜನ್ಮಜನ್ಮಾಂತರ ಮುನ್ನಡೆಸಬಲ್ಲೆ

ಮನದ ಭಾವನೆಗೆ ಪದರೂಪಕೊಡುವ
ಸಾಧನ ನಾನಾಗಿ ಕಾರ್ಯಮಾಡುವೆ
ಪ್ರೇಮಿಗಳ ಒಲವಗುಟ್ಟು ಮೊದಲು
ಕೇಳುವ ರಾಯಭಾರಿನಾನಾಗುವೆ

ತೊದಲಾಡುವ ಮುದ್ದು ಮಕ್ಕಳ
ಅಂಕುಡೊಂಕಿನಕ್ಷರಗಳ ಸಾರಥಿ
ನಾನುವೇದಸಾರ ವಿವರಿಸುವ ತತ್ವಜ್ಞಾನಿ
ಸಾರಮಾತುಗಳಿಗೆ ದಾರಿತೊರುವೆನು

ಉತ್ಕರ್ಷಿಸುವ ಕಲ್ಪನೆಯ ಉನ್ಮಾದಕೆ
ಬಂದಿಸುವೆನ್ನ ಬೆರಳಿನ ಸಂದಿಯಲಿ
ಬಿರಿದೇಳುವ ನಿನ್ನ ಭಾವಕೆ
ನನ್ನೆದೆಯ ರಸವ ಬಸಿಯುವೆ

ಕುಲ,ಧರ್ಮ ಮೇಲು ಕೀಳೆನಗಿಲ್ಲ
ಬಡವಬಲ್ಲಿದ ಹೀನಭಾವದ ಸೊಲ್ಲಿಲ್ಲ
ದೇಹ ಊನಾವಾದ ವಿಕಲಾಂಗನನ್ನೂ
ನನ್ನಜೊತೆಸೇರಿದರೆ ಯೋಧನನ್ನಾಗಿಸಬಲ್ಲೆ

ಅಪರಾಧಿಯ ಸಾವಿನ ಸೂಚಕವ ಬರೆವ
ಹಕ್ಕುದಾರ ನಾನಾಗಿಮೆರೆದಿರುವೆ,ಮೆರೆವೆ
ನಾ ಕೇವಲ ಬರೆಯುವ ಸಾಧನವಲ್ಲ
ಮೂಡಿದ ಭಾವಕ್ಕೆ ಶಾಶ್ವತ ರೂಪಕೊಡುವವನು


...ಬರೆಯುವವರು ಬೇಕು ಅನ್ನುತ್ತಾರೆ ಸತೀಶ್...

ಮೈ ಬಗ್ಗಿಸಿ ಕೈ ಕೆಸರಾಗಿಸಿ
ದುಡಿವ ದಿನಗಳು ನಮಗಿಲ್ಲ
ಕೂತು ಯೋಚಿಸುವ ದಿನವು
ಬೆನ್ನು ಬಾಗಿದ ನಿಲುವು ಹೊಸತಲ್ಲ.

ತಾಳೆಗರಿಯ ಮೇಲೆ ಅದೇನನ್ನೋ
ಬರೆದರಂತೆ ಥರಥರನ ಬಣ್ಣವಿಲ್ಲದೆ
ಹಲವಾರು ಮಾದರಿ ದೇಸೀ-ವಿದೇಶಿ
ರೂಪವಿದ್ದೂ ಒಕ್ಕಣಿಕೆಯ ಬರ ಹುಟ್ಟಿದೆ.

ಅನುಕೂಲಕ್ಕೆಂದು ಬರೆವುದರಷ್ಟುದ್ದ
ಬಿಳಿಹಲಗೆಗಳಿವೆ ಬರೆವವರು ಯಾರು
ಕೋಟೆ ಕೊತ್ತಲ ಕಾದು ಮಹಲುಗಳು
ಉರುಳಿದ ಕಥೆಯ ನಾಳೆ ಹೇಳುವರಾರು.

ಕ್ಷೋಭೆ ಇರದ ಮನ ಸ್ವಚ್ಛಂದ ಗಾನ
ಮುಗಿಲನು ಮೀರಿಸೋ ಧೀರರಿಹ ಕಾಲ
ದೂರದ ದೂರಗಳು ಹತ್ತಿರ ಹತ್ತಿರವಾಗಿ
ಜಗವೇ ಒಂದು ಸಂತೆಯ ಮಾಯಾಜಾಲ.

ಕುಟ್ಟುವ ಜನ ಶಿಲೆಯನ್ನು ಕಡೆಯದಂತೆ
ಬರೆಯುತ್ತಿದ್ದ ಮನ ಲೇಖನಿಯ ಮುಟ್ಟದಾಗಿ
ಹಿಮ್ಮೇಳದ ಹಲವಾರು ಗಾನಗಳಲ್ಲೊಂದೂ
ಹಬ್ಬದಾಗಿದೆ ಬೆಟ್ಟವನರಸುವ ಬಳ್ಳಿಯಾಗಿ.

ಬರೆಯುವವರಿಗೆ ಬೇಕು ಧೀರ ನಡವಳಿಕೆ
ನಾಗಾಲೋಟ ಎಲ್ಲವನ್ನೂ ಗೆಲ್ವೆನೆಂಬ ಬಿಮ್ಮು
ಬರೆಯುವವರು ಬೇಕು ಮಸಿಯ ಬಣ್ಣವನ್ನೂ
ಮೀರಿ ತೆಗೆದಿರಿಸಿ ಒಡಳೊಳಗಿನ ಹಮ್ಮು.

3 comments:

bhadra said...

ಚಿಂತನೆಗೆ ಚೈತನ್ಯ

ಅಬ್ಬೇಪಾರಿಯಾಗಿ
ಮಲಗಿರುವೆಯಾ ನೀ ನನ್ನ ಕಂದ
ನಿನ್ನ ಎತ್ತಾಡಿದರೆ
ಮನಕಾನಂದ
ಮೂಡಿಸಬಲ್ಲೆ
ಓದುಗರಲಿ
ಮಂದಹಾಸ, ಮುಗುಳ್ನಗೆ,
ಉಲ್ಕಾಪಾತಕ ಕಂಗಳು,
ಭುಗಿಲೇಳುವ ಮನಗಳು,
ಭಯಾನಕ ಚಿಂತನೆಗಳು,
ಇನ್ನೂ ಹಲವಾರು ನವರಸಗಳು

ಏಳು, ಎದ್ದೇಳು
ಹರಿಬಿಡು ಹೆಪ್ಪುಗಟ್ಟುತ್ತಿರುವ
ರಕ್ತವರ್ಣದ ಓಕುಳಿಯ ಬಣ್ಣ
ಧಮನಿಗಳಲಿ ಹರಿದಾಡಲಿ
ನೆತ್ತರಿನ ಪ್ರವಾಹ
ಹೆಪ್ಪುಗಡದಿರಲಿ
ಅಂಗವೈಕಲ್ಯವ ನೀಡದಿರಲಿ

ನೀ ಮೂಡಿಸುವ
ಅಕ್ಷರದಿ ಹರಿದಾಡಲಿ
ನೆತ್ತರಿನ ಪ್ರವಾಹ
ಭುಗಿಲೇಳಲಿ
ಚಿಂತನೆಗಳು

ಏಳು, ಎದ್ದೇಳು
ಹರಿಬಿಡು, ಮನದ ಚಿಂತನೆಗಳ
ಸಮಾಜದ ಒಳಿತಿಗಾಗಿ

ಕುಕೂಊ.. said...

** ಹತ್ತಾರು ಮುಖಹೊತ್ತ ಲೇಖನಿ **

ಚಿಕ್ಕದಾದರು ನನ್ನ ದೇಹಗಾತ್ರ
ಖಡ್ಗಕ್ಕಿಂತ ತಿಕ್ಷ್ಣ ನನ್ನ ಹರಿತ
ಕ್ರಾಂತಿಯ ಸಿಡಿಲಕಿಡಿ ಸಿಡಿಸಬಲ್ಲೆ
ಶಾಂತಿ ಮಂತ್ರವ ಸಾರಬಲ್ಲೆ

ಹಗಲು ರಾತ್ರಿಯ ಪರಿವಿಲ್ಲ
ಸುಖ ದುಃಖಗಳ ತೊಡುಕಿಲ್ಲ
ಹಿರಿಕಿರಿಯರ ಗರಿವಿಲ್ಲ
ಬರೆಯುವುದೊಂದೇ ನನ್ನ ನಿಷ್ಠೆ

ಅರ್ಥ ಕಾಮದ ಬೇಧವಿಲ್ಲ
ಉಚ್ಚನೀಚತುಚ್ಛಗಳ ತಿಳಿವಿಲ್ಲ
ರಾಗಭೋಗಸಾರದ ಸೆಳವಿಲ್ಲ
ರೂಪಾಂತರಿಸುವುದೆನ್ನ ಕಾಯಕ

ರಕ್ತಕೋಡಿ ಹರಿಯಲು ಬಹುದು
ಕ್ರಾಂತಿ ಕಹಳೆ ಮೊಳಗಲುಬಹುದು
ಸಳ್ಳುಸಾರಗಳು ಮೆರೆಯಲು ಬಹುದು
ನಾಕೊಟ್ಟ ರೂಪಕ್ಕೆ ಹತ್ತಾರು ಮುಖಗಳು

ಗತದಲ್ಲಿ ಕಳೆದ ನೂರುಕಾಲದ
ಇತಿಹಾಸ ಸೆರೆಹಿಡಿದಕ್ಷರದಲಿ
ಒತ್ತಿಗೆಯಲಿ ಒಟ್ಟಾಗಿ ಸೇರಿಸಬಲ್ಲೆ
ಜನ್ಮಜನ್ಮಾಂತರ ಮುನ್ನಡೆಸಬಲ್ಲೆ

ಮನದ ಭಾವನೆಗೆ ಪದರೂಪಕೊಡುವ
ಸಾಧನ ನಾನಾಗಿ ಕಾರ್ಯಮಾಡುವೆ
ಪ್ರೇಮಿಗಳ ಒಲವಗುಟ್ಟು ಮೊದಲು
ಕೇಳುವ ರಾಯಭಾರಿನಾನಾಗುವೆ

ತೊದಲಾಡುವ ಮುದ್ದು ಮಕ್ಕಳ
ಅಂಕುಡೊಂಕಿನಕ್ಷರಗಳ ಸಾರಥಿನಾನು
ವೇದಸಾರ ವಿವರಿಸುವ ತತ್ವಜ್ಞಾನಿ
ಸಾರಮಾತುಗಳಿಗೆ ದಾರಿತೊರುವೆನು

ಉತ್ಕರ್ಷಿಸುವ ಕಲ್ಪನೆಯ ಉನ್ಮಾದಕೆ
ಬಂದಿಸುವೆನ್ನ ಬೆರಳಿನ ಸಂದಿಯಲಿ
ಬಿರಿದೇಳುವ ನಿನ್ನ ಭಾವಕೆ
ನನ್ನೆದೆಯ ರಸವ ಬಸಿಯುವೆ

ಕುಲ,ಧರ್ಮ ಮೇಲು ಕೀಳೆನಗಿಲ್ಲ
ಬಡವಬಲ್ಲಿದ ಹೀನಭಾವದ ಸೊಲ್ಲಿಲ್ಲ
ದೇಹ ಊನಾವಾದ ವಿಕಲಾಂಗನನ್ನೂ
ನನ್ನಜೊತೆಸೇರಿದರೆ ಯೋಧನನ್ನಾಗಿಸಬಲ್ಲೆ

ಅಪರಾಧಿಯ ಸಾವಿನ ಸೂಚಕವ ಬರೆವ
ಹಕ್ಕುದಾರ ನಾನಾಗಿಮೆರೆದಿರುವೆ,ಮೆರೆವೆ
ನಾ ಕೇವಲ ಬರೆಯುವ ಸಾಧನವಲ್ಲ
ಮೂಡಿದ ಭಾವಕ್ಕೆ ಶಾಶ್ವತ ರೂಪಕೊಡುವವನು

** ಕುಕೂ....

Satish said...

...ಬರೆಯುವವರು ಬೇಕು

ಮೈ ಬಗ್ಗಿಸಿ ಕೈ ಕೆಸರಾಗಿಸಿ
ದುಡಿವ ದಿನಗಳು ನಮಗಿಲ್ಲ
ಕೂತು ಯೋಚಿಸುವ ದಿನವು
ಬೆನ್ನು ಬಾಗಿದ ನಿಲುವು ಹೊಸತಲ್ಲ.

ತಾಳೆಗರಿಯ ಮೇಲೆ ಅದೇನನ್ನೋ
ಬರೆದರಂತೆ ಥರಥರನ ಬಣ್ಣವಿಲ್ಲದೆ
ಹಲವಾರು ಮಾದರಿ ದೇಸೀ-ವಿದೇಶಿ
ರೂಪವಿದ್ದೂ ಒಕ್ಕಣಿಕೆಯ ಬರ ಹುಟ್ಟಿದೆ.

ಅನುಕೂಲಕ್ಕೆಂದು ಬರೆವುದರಷ್ಟುದ್ದ
ಬಿಳಿಹಲಗೆಗಳಿವೆ ಬರೆವವರು ಯಾರು
ಕೋಟೆ ಕೊತ್ತಲ ಕಾದು ಮಹಲುಗಳು
ಉರುಳಿದ ಕಥೆಯ ನಾಳೆ ಹೇಳುವರಾರು.

ಕ್ಷೋಭೆ ಇರದ ಮನ ಸ್ವಚ್ಛಂದ ಗಾನ
ಮುಗಿಲನು ಮೀರಿಸೋ ಧೀರರಿಹ ಕಾಲ
ದೂರದ ದೂರಗಳು ಹತ್ತಿರ ಹತ್ತಿರವಾಗಿ
ಜಗವೇ ಒಂದು ಸಂತೆಯ ಮಾಯಾಜಾಲ.

ಕುಟ್ಟುವ ಜನ ಶಿಲೆಯನ್ನು ಕಡೆಯದಂತೆ
ಬರೆಯುತ್ತಿದ್ದ ಮನ ಲೇಖನಿಯ ಮುಟ್ಟದಾಗಿ
ಹಿಮ್ಮೇಳದ ಹಲವಾರು ಗಾನಗಳಲ್ಲೊಂದೂ
ಹಬ್ಬದಾಗಿದೆ ಬೆಟ್ಟವನರಸುವ ಬಳ್ಳಿಯಾಗಿ.

ಬರೆಯುವವರಿಗೆ ಬೇಕು ಧೀರ ನಡವಳಿಕೆ
ನಾಗಾಲೋಟ ಎಲ್ಲವನ್ನೂ ಗೆಲ್ವೆನೆಂಬ ಬಿಮ್ಮು
ಬರೆಯುವವರು ಬೇಕು ಮಸಿಯ ಬಣ್ಣವನ್ನೂ
ಮೀರಿ ತೆಗೆದಿರಿಸಿ ಒಡಳೊಳಗಿನ ಹಮ್ಮು.