Monday 17 March, 2008

ಚಿತ್ರ - ೪೫



ಟೋಕಿಯೋದ ಉವೇನೋ ಪಾರ್ಕಿನಲ್ಲಿ ಅನಿಕೇತನ ಅವರ ಕ್ಯಾಮರಾದ ಕಣ್ಣಿಗೆ ಬಿದ್ದ ದೃಶ್ಯ


ಯಾವ ಕಿರಿಕಿರಿಗೂ ಬಗ್ಗದ ಪಿಸುಮಾತನ್ನು ಕುಮಾರ ಸ್ವಾಮಿ ಕಡಾಕೊಳ್ಳ ವರ್ಣಿಸುವುದು ಹೀಗೆ...

ಪಿಸುಮಾತು

ಹೆಜ್ಜೆ ಹೆಜ್ಜೆ ಹೆಜ್ಜೆಗೊಂದು
ಗುಜು ಗುಜು ಪಿಸುಮಾತು
ಗಟ್ಟಿಯಾಗಿ ಆಡದೆ ತಮ್ಮೊಳಗೆ
ನಡೆದಿದೆ ಗುಟ್ಟಿನ ಕಸರತ್ತು

ಯಾರಮಾತು ಯಾವಮಾತು
ಅವರಿವರ ನಡುವಿನ ಮಾತು
ಅವಕೇಳಿಸಿಕೊಂಡರೇಗೆ ಆತಂಕ
ಅನುಮಾನ ತಮ್ಮತಮ್ಮೊಳಗೆ

ಸುತ್ತೆಲ್ಲ ಬರಿ ಬೋಳುತರು
ನಡುವೆಯಲ್ಲೊಂದು ಹಸಿರ ಟೊಂಗೆ
ಮತ್ತೆಲ್ಲೊ ಕೂಗುತ್ತ ಕುಳಿತಕಾಗೆ
ಮಾಡಿತ್ತು ಕಿರಿಕಿರಿ ಪಿಸುಮಾತಿಗೆ

ಎತ್ತರದ ದೇಹದಾಂಡಿಗ
ಹೊತ್ತೊಂದು ಹಸುಗೂಸನು
ಬಿರಬಿರನೆ ಹೆಜ್ಜೆ ಹಾಕುತ
ನಡೆದಿಹನು ಅವರಿವರನು ದಾಟುತ

ಪಿಸುಮಾತು ತಮ್ಮೊಳಗೆ
ಜೊತೆಗೂಡಿದ ಪ್ರೇಮಿಗಳೊಳಗೆ
ಬಣ್ಣದ ಕನಸುಗಳಲಿ ಬೀಗುವ
ನವ ಭಾವನೆಗಳ ಜೊತೆಗೆ

ಸತೀಶ್ ’ಅವರ ಕಷ್ಟ ಅವರಿಗೆ’ ಅನ್ನುತ್ತಾರೆ...

ಬಳ್ಳಿಯ ಹಾಗೆ ತೆಳ್ಳಗೆ ಹಬ್ಬಿ
ನಭವನ್ನು ಮುಚ್ಚೋ ಹುನ್ನಾರ
ಎಲೆಗಳು ಇರದ ಮರವಾದ್ರೇನು
ಹೊಮ್ಮುವುದಕ್ಕೆ ಕಾಕ ಸ್ವರ.

ಬಾಗೋ ಹಾದಿಯ ತಾನು ನಂಬಿ
ಸುತ್ತಲು ಹಬ್ಬಿದ ಬೇಲಿ
ಎರಡೂ ಪಕ್ಕಕೂ ನೆಟ್ಟವರಂತೆ
ಥರಥರ ಗಿಡಗಳ ಮಾಲಿ.

ಅವರವರ ಕಷ್ಟ ಅವರಿಗೆ ಅನ್ನೋ
ಬೆನ್ನಿನ ಮೇಲಿನ ಭಾರ
ಕಷ್ಟಾ ಕೊಡುವ ಕಾಣದ ಮನಸಿನ
ಕರುಣೆಯ ಲೆಕ್ಕವು ಅಪಾರ.

ನಿಂತರೆ ಬದುಕು ನಡೆವುದೆಂತು
ಚಲನೆ ಪ್ರಗತಿಯ ಸ್ವರೂಪವು
ಬಳಲಿಕೆಗಳವು ಹುಟ್ಟಿದರೇನಂತೆ
ತನುಮನದಾರೈಕೆ ಕ್ಷೇಮವು.

2 comments:

ಕುಕೂಊ.. said...

ಪಿಸುಮಾತು

ಹೆಜ್ಜೆ ಹೆಜ್ಜೆ ಹೆಜ್ಜೆಗೊಂದು
ಗುಜು ಗುಜು ಪಿಸುಮಾತು
ಗಟ್ಟಿಯಾಗಿ ಆಡದೆ ತಮ್ಮೊಳಗೆ
ನಡೆದಿದೆ ಗುಟ್ಟಿನ ಕಸರತ್ತು

ಯಾರಮಾತು ಯಾವಮಾತು
ಅವರಿವರ ನಡುವಿನ ಮಾತು
ಅವಕೇಳಿಸಿಕೊಂಡರೇಗೆ ಆತಂಕ
ಅನುಮಾನ ತಮ್ಮತಮ್ಮೊಳಗೆ

ಸುತ್ತೆಲ್ಲ ಬರಿ ಬೋಳುತರು
ನಡುವೆಯಲ್ಲೊಂದು ಹಸಿರ ಟೊಂಗೆ
ಮತ್ತೆಲ್ಲೊ ಕೂಗುತ್ತ ಕುಳಿತಕಾಗೆ
ಮಾಡಿತ್ತು ಕಿರಿಕಿರಿ ಪಿಸುಮಾತಿಗೆ

ಎತ್ತರದ ದೇಹದಾಂಡಿಗ
ಹೊತ್ತೊಂದು ಹಸುಗೂಸನು
ಬಿರಬಿರನೆ ಹೆಜ್ಜೆ ಹಾಕುತ
ನಡೆದಿಹನು ಅವರಿವರನು ದಾಟುತ

ಪಿಸುಮಾತು ತಮ್ಮೊಳಗೆ
ಜೊತೆಗೂಡಿದ ಪ್ರೇಮಿಗಳೊಳಗೆ
ಬಣ್ಣದ ಕನಸುಗಳಲಿ ಬೀಗುವ
ನವ ಭಾವನೆಗಳ ಜೊತೆಗೆ

** ಕುಕೂ

Satish said...

ಅವರ ಕಷ್ಟ ಅವರಿಗೆ

ಬಳ್ಳಿಯ ಹಾಗೆ ತೆಳ್ಳಗೆ ಹಬ್ಬಿ
ನಭವನ್ನು ಮುಚ್ಚೋ ಹುನ್ನಾರ
ಎಲೆಗಳು ಇರದ ಮರವಾದ್ರೇನು
ಹೊಮ್ಮುವುದಕ್ಕೆ ಕಾಕ ಸ್ವರ.

ಬಾಗೋ ಹಾದಿಯ ತಾನು ನಂಬಿ
ಸುತ್ತಲು ಹಬ್ಬಿದ ಬೇಲಿ
ಎರಡೂ ಪಕ್ಕಕೂ ನೆಟ್ಟವರಂತೆ
ಥರಥರ ಗಿಡಗಳ ಮಾಲಿ.

ಅವರವರ ಕಷ್ಟ ಅವರಿಗೆ ಅನ್ನೋ
ಬೆನ್ನಿನ ಮೇಲಿನ ಭಾರ
ಕಷ್ಟಾ ಕೊಡುವ ಕಾಣದ ಮನಸಿನ
ಕರುಣೆಯ ಲೆಕ್ಕವು ಅಪಾರ.

ನಿಂತರೆ ಬದುಕು ನಡೆವುದೆಂತು
ಚಲನೆ ಪ್ರಗತಿಯ ಸ್ವರೂಪವು
ಬಳಲಿಕೆಗಳವು ಹುಟ್ಟಿದರೇನಂತೆ
ತನುಮನದಾರೈಕೆ ಕ್ಷೇಮವು.