ಚಿತ್ರ ೭೬
ತಿರುಕ ಅವರ ಕವನ:
ಎರಡು ದೀಪಗಳು
ನಾವು ಹಚ್ಚಿಟ್ಟ ಹಾಗೆ ಉರಿವ
ಉರಿದು, ಬೆಳಗುವ ಈ ದೀಪ
ಆ ದೀಪ ಪ್ರದೀಪ - ಸಂದೀಪ
ತನ್ನತನವ ಬದಿಗೊತ್ತಿ
ಜಗವ ಬೆಳಗಿಸುವ ಈ ದೀಪಗಳು
ಒಂದಕೆ ಬೆಂಕಿಯೆಂಬ ಹೊತ್ತಿಸುವಿಕೆ
ಇನ್ನೊಂದಕೆ ಆತ್ಮವೆಂಬ ಜಾಗೃತಗೊಳಿಸುವಿಕೆ
ಇದು ಕ್ಷಣಗಳಲಿ ನಂದುವ ದೀಪ
ಅದು ಯುಗಗಳವರೆವಿಗೆ ತೋರುವ ದೀಪ
ವಯಸ್ಸು ಕಳೆದುಕೊಳ್ಳುತಿಹ ಈ ದೀಪ
ವಯಸ್ಸು ತುಂಬಿಕೊಳ್ಳುತಿಹ ಆ ತೇಜೋದೀಪ
ತೋರಿದ ಕಡೆಗೆ ಹರಿವ ನೋಟಗಳು
ತನ್ನತನವ ತೋರ್ಪಡದಿಹ ಈ ದೀಪ
ದಿಗಂತಕೂ ಅಂತ ತೋರುವ
ಕಾತರ, ನಿರೀಕ್ಷೆ ಹೊಂದಿರುವ ಆ ದೀಪ
ಪುಟ್ಟ ದೀಪ
ಬೆಳಗುತಿಹುದು
ದೊಡ್ಡ ಕೋಣೆ
ಬೆಳಗಬಲ್ಲದು ದೊಡ್ಡ ಜಗತ್ತು
ತನ್ನ ಮನೆಯ ಕತ್ತಲಲಿಟ್ಟು
ಊರೆಲ್ಲಾ ಬೆಳಗುವುದು
ಅವುಗಳ ನಂದದಂತೆ ಕಾಪಾಡುವ
ಜಗದ ಒಳಿತಿಗಾಗಿ, ಆ ಸರ್ವಶಕ್ತನಲಿ ಬೇಡುವೆ - ಎಂದಿಗೂ ದೀಪಗಳು ನಂದದಿರಲಿ
ಹೊಳೆಯುತ, ಹೊಳೆಸುತ, ನಳಿಸುತ ದೇದೀಪ್ಯಮಾನವಾಗಿರಲಿ
ಈ ದೀಪ - ಮೋಂಬತ್ತಿ
ಆ ದೀಪ - ಪುಟ್ಟ ಪೋರ
ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಬೆಳಗುಂಟು ಕತ್ತೆಲೆಯ ಒಡಲಾಳದಿ
ಕತ್ತಲೆಯುಂಟು ಬೆಳಗಿನ ಬುಡದಲ್ಲಿ
ನಗುವುಂಟು ನೋವಿನಾಟದಲೂ
ಏನುಂಟು ಏನಿಲ್ಲ ಬದುಕಲ್ಲಿ ತಿಳಿಯಲಾಗದು
ಹಸಿವುಂಟು ಹಂಬಲಿಸಿ ಕೂಳು ಹುಡುಕಲು
ನೋವುಂಟು ಕಳೆದ ನಲಿವನುಡುಕಿಸಲು
ಅಳುವುಂಟು ನಗುವಿನ ದಾರಿ ತೋರಲು
ಬವಣೆಯುಂಟು ಬದುಕಿನ ಹೆದ್ದಾರಿಯಾಗಲು
ಬೆಳಗಿದೆ ನನಗಿರುವ ಕತ್ತಲಾದಿಯಲ್ಲಿ
ನಡೆವೆ ದೂರ ದೂರಕೆ ಅಷ್ಟೆ ಸಾಕಲ್ಲವೆ?
ಕಣ್ಣಲ್ಲಿ ಗೆಲುವುಂಟು ಕಾಣುವ ಕಾತುರ ಉಂಟು
ಕಾದಾಡುವೆ ಬದುಕಿನಲಿ ಗುರಿಯ ಕಾಣಲು
ಬವಣೆಯಲ್ಲೂ ಬಳಲಿಕೆಯಲ್ಲೂ ಕಾಣುವೆ ಬೆಳಕನು
ಕಿರಿದಾದರೇನು ಹಿರಿದಾದರೇನು ದಾರಿತೋರದೇನು?
ಹುಟ್ಟಿರುವೆ ಗೆಲುವಲು, ಇದುವೆ ನಾಕಾಣುವೆ
ಗೆಲುವೆಂದು ನನ್ನದು ಈ ಬೆಳಕೇ ಮುನ್ನಡೆಸುವುದು
ಜೀವನವಿಷ್ಟೇ!
ಇದೇ ಕೈಲಾಸ ಇದೇ ವೈಕುಂಠ
ಇಲ್ಲೇ ಸ್ವರ್ಗ ಇಲ್ಲೆ ನರಕ
ಜೀವನವಿಷ್ಟೇ!
ಏಳು, ತೊಳೆ, ಸಾರಿಸು, ಬಾಡಿಸು
ಇಟ್ಟು ಉರ್ಳಿ ಸಾರು
ಅಬ್ಬಕ್ಕೆ ಮಾತ್ರ ಬಾಡು
ಒಲದಾಗೆ ಗೇಯುತಿಹರು ಮಗ ಅವರು
ಸಿಲ್ವಾರ ತಟ್ಟೆ ಪಾತ್ರೆ (ಅಲ್ಯೂಮಿನಿಯಮ್)
ತಲೆಗೇರಿಸಿದೆ ಸಿಂಬಿ
ಒತ್ತು ಉಣ್ಣಕ್ಕಿಕ್ಕಲು ನಾ ಒಂಟೆ
ಹಾದಿಯಲಿ ಹಳ್ಳ ಕೊಳ್ಳ
ಅವುಗಳ ಅರಿವಿಲ್ಲದೇ ನಡೆದಿಹ ನಾ ಮಳ್ಳ
ತುಂಬಿಸಬೇಕಲ್ಲ ಬಳ್ಳ
ತೂರಬೇಕಲ್ಲ ಜೊಳ್ಳ
ನಾವೆಂದಿಗೂ ಆಗೆವು ಕಳ್ಳ
ಎತ್ತುಗಳಿಗೆ ಉಣಿಸು ನೀರು ಕಟ್ಟು
ಮನೆಗೆ ಬಂದು ಎರಡಗುಳು ಗತುಕು
ಹಸುವಿಗೆ ತಿನ್ನಲು ಹುಲ್ಲು, ಬೂಸಾ
ಪಸೆಯಾರಿಸಲು ಬಾನಿಗೆ ನೀರು
ಸಂಜೆ ಬರುವ ಎತ್ತುಗಳಿಗಾಗಿ
ಕೊಟ್ಟಿಗೆಯಲಿ ಎಲ್ಲ ಒತ್ತಟ್ಟು
ಗಂಗೆ ಕೊಡುವ ಹಾಲು ಕರೆ
ಗಂಡ ಮಕ್ಕಳ ಆರೈಕೆ
ಸವೆಸಿದ್ದೇ ಹಾದಿ
ಇಟ್ಟದ್ದೇ ಹೆಜ್ಜೆ
ಆಲಿಸಿದ್ದೇ ಗೆಜ್ಜೆ
ಬಸ್ವೇಸರ ಜಾತ್ರೆಯಲಿ
ಆತ ಕೊಡಿಸಿದ ಕಾಸಿನ ಸರ
ಅಮ್ಮ ಇತ್ತ ಕಾಲುಂಗುರು ಮೂಗುತಿ
ತೆಲಿಗೆ ಹಚ್ಚುವೆ ಕೈಯೆಣ್ಣೆ
ಕಾಲಿಗೆ ಮೆಟ್ಟುವೆ ಹವಾಯಿ
ಕಾಸಿನಗಲದ ಕುಂಕುಮ ಹಣೆಯಲಿ
ಅರಿಸಿನ ಪಟ್ಟೆ ಕೆನ್ನೆಯಲಿ
ಮುನಿಯನೇ ಎನ್ನ ದೈವ
ಚಂದ್ರಿ ಸೋಮರಲ್ಲೇ ಎನ್ನ ಭಾವ
ಎನ್ನ ರಕ್ಷಕ ಹುಣಿಸೇ ಬರಲು
ಎಮಗೆ ಆರ ಚಿಂತೆಯಿಲ್ಲ
ಯಾರಿಗೂ ನಮ್ಮ ಚಿಂತೆಯಿಲ್ಲ
ಹಂಗಿಲ್ಲ
ಜೀವ ಯಾತ್ರೆಗೆ ಎಣೆಯಿಲ್ಲ
ಜೀವನವಿಷ್ಟೇ!