Thursday, 27 August 2009
Thursday, 20 August 2009
Friday, 14 August 2009
ಚಿತ್ರ ೧೧೫

ತವಿಶ್ರೀ:

ದೇಗುಲದ ಗೂಡಿನಲಿ ತುಂಬಿಹುದು
ಜೀವನಾನುನುಭವದ ಮೆಲುಕು
ತಿಮ್ಮಕ್ಕನ ಮೇಲ್ವಿಚಾರಿಕೆಯಲಿ ಹುಡುಕು
ದೇಗುಲದಿ ಸ್ವಾಮಿಗೆ ಮಂದಿಯ ಸೇವೆ
ಸ್ವಾಮಿಯ ಕೃಪೆಗಾಗಿ ಬೇಡಿಕೆ
ಮಂದಿಗೆ ತಿಮ್ಮಕ್ಕ ಅಮ್ಮಕ್ಕರ ಸೇವೆ
ಅವರಿಗಿಲ್ಲ ಯಾವುದೂ ಕೋರಿಕೆ
ದೈವ ಸೇವೆಗೆ ಬಂದಿಹರ ಸೇವೆಯೇ ಅವರ ಧ್ಯೇಯ
ಅನವರತ ದುಡಿಮೆಯೇ ಕಾಯ
ಭಕುತರು ಹುಡುಕುತಿಹರು ಕಾಣದ ದೈವವ ಅಲ್ಲಿ ಇಲ್ಲಿ
ಹುಡುಕದೇ ಅನುಭವಿಸುತಿಹರು ತಿಮ್ಮಕ್ಕ ಅಮ್ಮಕ್ಕರು ದೈವ ಸಾನ್ನಿಧ್ಯ
ಬದುಕು ಈರುಳ್ಳಿಯಂತೆ (ನೀರುಳ್ಳಿ ಅಥವಾ ಉಳ್ಳಾಗಡ್ಡಿ)
ಬಲು ಘಾಟು, ಕತ್ತರಿಸಲು ಕಣ್ಣಿನಲ್ಲಿ ನೀರು
ಸುಲಿದಷ್ಟೂ ಪದರಗಳು
ಗಟ್ಟಿಯಾದ ಸಾರವಿಲ್ಲವೇ ಇಲ್ಲ
ತಿರುಳೇ ಇಲ್ಲದ ಸುರುಳಿ
ಸವಿಯಲು ಬಲು ಆನಂದ
ಜೊತೆಗೆ ಬಾಯಿ ವಾಸನೆ
ಬದುಕೂ ಬಲು ಘಾಟು,
ಹಾದಿಯಲ್ಲಿ ಕೆಲವೊಮ್ಮೆ ಕಣ್ಣಿನಲ್ಲಿ ನೀರು
ದಿನಗಳು ಸವೆಯುತ್ತಲೇ ಇರುವುದು
ಆದರೂ ಸಾರ್ಥಕ್ಯದ ದಿನಗಳು ಕಾಣಸಿಗದು
ಬದುಕೂ ಸವಿಯಲು ಬಲು ಆನಂದ
ಆ ಸವಿಯ ಹಿಂದೆಯೇ ದುರ್ವಾಸನೆ (ಕರ್ಮಫಲ ಎನ್ನೋಣವೇ)
ದುರ್ವಾಸನೆಯಲೂ ದೈವ ಸಾಕ್ಷಾತ್ಕಾರ
ಅದನು ಅಮ್ಮಕ್ಕ ತಿಮ್ಮಕ್ಕರು ತೋರುತಿಹರು
Posted by ಅಮರ at 1:25 pm 1 ಕವನ/ಬರಹಗಳು
Wednesday, 5 August 2009
Subscribe to:
Posts (Atom)