Sunday 1 July, 2007

ಚಿತ್ರ - ೮

ಈ ವಾರ ಮತ್ತೆ ಜಗಲಿ ಭಾಗವತರ ಸಂಚಿಯಿಂದ ಬಂದ ಚಿತ್ರ. ಕವನವಲ್ಲದೆ ಪುಟ್ಟ ಬರಹಗಳನ್ನೂ ಬರೀಬಹುದು.

=======================================
ಈ ಪುಟಾಣಿಗಳು ಪ್ರೇರೇಪಿಸಿದ ಭಾವದೋಟ ಇಲ್ಲಿದೆ...
=======================================

ಬಾಲ್ಯದ ಸ್ವಚ್ಛಂದವನ್ನು ನಿರಾತಂಕವಾಗಿ ಅನುಭವಿಸಲು ಹೇಳುತ್ತಾರೆ ಸುಪ್ತದೀಪ್ತಿ...

ಆನಂದ, ಸ್ವಚ್ಛಂದ ಈಗಲೇ ಅನುಭವಿಸು ಕಂದ
ಮುಂದೆ ಇದ್ದದ್ದೇ ಕಟ್ಟುಪಾಡುಗಳ ಬಂಧ
ಅದು ಸರಿ, ಇದು ತಪ್ಪುಗಳ ಹೊರೆ
ತೊಳೆಯದಿರಲಿ ನಿನ್ನ ಕ್ರಿಯಾಶೀಲತೆಯ ತೊರೆ

ಪ್ರಭೆ ಮುಗ್ಧ ಮಕ್ಕಳಿಗೆ ಶುಭ ಹಾರೈಸುತ್ತಾರೆ...

ಹರಿವ ನೀರ ತೊರೆಯಲಾಟ
ಆಡುತಿಹರು ಚಿಣ್ಣರು,
ಕಾಣದಿವರ ಮೊಗದಿ ಕಪಟ
ಮಕ್ಕಳೆಂದೂ ಮುಗ್ಧರು.

ಹೊಟ್ಟೆ ಬಟ್ಟೆ ಚಿಂತೆಯಿಲ್ಲ ಇವಕೆ
ಆಟವೊಂದೆ ಜೀವನ,
ಕೆಸರ ನೀರ ಮದ್ಯದಲ್ಲು
ಕಾಣ್ವರಿವರು ನಲಿವನ.

ಮಂದಹಾಸ ಹೀಗೆ ಇರಲಿ
ಇವರ ಮುಖದಲೆಂದಿಗೂ,
ಹರಿವ ನೀರಿನಂತೆ ಇರಲಿ
ಇವರ ಬದುಕು ಎಂದಿಗೂ.

ಮಕ್ಕಳ ತುಂಟತನ, ತರ್ಕರಹಿತ ವಿಚಾರಲಹರಿಗಳ ಮೇಲೆ ವಿನೂತನ ಸಂಭಾಷಣೆ ರೂಪದ ಪುಟ್ಟ ಕಥೆ ಹೆಣೆದಿದ್ದಾರೆ ಸುಶ್ರುತ...

ಚಿತ್ರಕ್ಕೂ ಮುಂಚೆ:

"ಏ, ನೀರಾಟ ಆಡನ ಬಾರಾ ಮಹೇಶಾ..."
"ಎಲ್ಲಿ?"
"ಕಾದ್ಗೆಲಿ.. ಯಾವ್ಥರ ನೀರು ಹರೀತಾ ಇದ್ದು ಗೊತ್ತಿದಾ?"
"ಹೂಂ, ನಾ ಆಗ್ಲೆ ಅಪ್ಪಯ್ಯನ ಜೊತಿಗೆ ತ್ವಾಟಕ್ಕೆ ಹೋಗಕ್ಕರೆ ನೋಡಿದಿ.."
"ನಾನೂ ಅಷ್ಟೇ.. ಸುಮಾರು ಮೀನೂ ಇದ್ವಲೇ.."
"ಏ, ಮೀನು ಹಿಡಿಯನಾ?"
"ಅಪ್ಪಯ್ಯಂಗೆ ಗೊತ್ತಾದ್ರೆ ಬೈತ.."
"ಏ ಬಾರಾ ಮಾರಾಯಾ.. ಬೇಗ ಬಪ್ಪನ.."
"ಅಮ್ಮ ಸ್ನಾನ ಮಾಡುಸ್ತಿ ಅಂತ ಹೇಳಿ ಅಂಗಿ-ಚಡ್ಡಿ ಎಲ್ಲ ಬಿಚ್ಸಿ ಹಾಕಿದ್ದು..!"
"ಥೋ ಅಡ್ಡಿಲ್ಲೆ ಬಾರಾ ಮಾರಾಯಾ... ನಾನೂ ದುಂಡಗೇ ಇಲ್ಯನಾ?"
"ನೆಡಿ ಹಂಗರೆ ಹೋಪನ.."
"ಏ ಗೌತಮಾ, ನಿಮ್ಮನೆಲಿ ಒಂದು ದೊಡ್ಡ ಸೌಟು ಇದ್ದಲಾ.. ಭಟ್ರು ಜಿಲೇಬಿ ಎತ್ತೋ ಸೌಟು.. ಜಾಲ್ರಿ ಸೌಟು.. ಅದ್ನ ತಗಂಬಾರಲೇ.."
"ಅದು ಎಂಥಕೆ?"
"ಅದ್ರಗೆ ಮೀನು ಹಿಡಿಯದು ಸುಲ್ಭ.."
"ಓಹ್ ಹೌದು..! ತರ್ತಿ ತಡಿ.."

ಚಿತ್ರದಲ್ಲಿ:

"ಏ ಇಲ್ಲಿ ಬಾರಾ.. ಇಲ್ಲಿ ಸುಮಾರು ಮೀನು ಇದ್ದು.."
"ಏ ನಂಗೆ ಹೆದ್ರಿಕೆ ಆಗ್ತು.. ಮೀನು ಕಚ್ತಲ್ಯನಾ?"
"ಥೋ ಎಂಥು ಆಗ್ತಲ್ಲೆ ಮರಾಯ.. ನಮ್ಮನೆ ಆಳು ದ್ಯಾವಪ್ಪ ಅವ್ರೆಲ್ಲ ಇದ್ನೇ ತಿಂತ"
"ಶೀ! ಹೆಂಗೆ ತಿಂತ್ವೇನ ಮೀನು..!"
"ನಾವು ಹಿಡ್ದು ನಮ್ಮನೆ ಬಾವಿಗೆ ಹಾಕನ.. ಚನಾಗಿರ್ತು.."
"ಹೌದು ಹೌದು, ಬಾ.. ಏ, ಇದೇ, ಇಲ್ನೋಡು.. ಗುಂಪಿಗೆ ಗುಂಪೇ ಇದ್ದು ಇಲ್ಲಿ.. ಇಲ್ಲಿ ಬಾರಾ ಗೌತಮಾ.."
"ವ್ಹಾವ್! ತಡಿ, ಸೌಟು ಹಾಕ್ತಿ... ಶ್... ಸುಮ್ನಿರು.. ನೀರು ಕಲಕಡ.."
"ಸಿಕ್ಚನಾ?"
"ಹಾ! ಬಂತು ನೋಡು.. ಎರ್ಡು ಪುಟಾಣಿ ಮೀನು.. ಹೇ..!"
"ಅಯ್ಯೋ.. ಒದ್ದಾಡ್ತಾ ಇದ್ದು.."
"ಆ ಹೊಂಬಾಳೆ ತಗಳಲೇ.. ಅದ್ರಗೆ ಇಟ್ಕಂಡು ಹೋಪನ.."

ಮನದಲ್ಲಿ ಮುಂದುವರೆದ ಚಿತ್ರ:

"ಇವತ್ತು ಅಮ್ಮ ನೀರು ಸೇದಕ್ಕರೆ ಕೊಡಪಾನದಲ್ಲಿ ಒಂದು ಮೀನು ಬಂದುಬಿಟ್ಟಿತ್ತು..!!"
"ಓಹ! ಇದು ಹಂಗರೆ ನಾವು ಅವತ್ತು ತಂದು ಬಿಟ್ಟಿದ್ದೇ ಮೀನು..?"
"ಹೂಂ, ಅದೇಯ.. ಅವತ್ತು ಮರಿ ಇತ್ತಲಾ? ಇವತ್ತು ಸುಮಾರು ದೊಡ್ಡಕಾಗಿತ್ತು.."
"ಕೊನಿಗೆ ಎಂಥ ಮಾಡಿದಿ ಅದನ್ನ?"
"ಅಮ್ಮಂಗೆ ಗಾಭ್ರಿ ಆಗಿ ಮತ್ತೆ ಬಾವಿಗೇ ಹಾಕ್ಬುಡ್ಚು!"
"ಓಹ್! ಇನ್ನೊಂದು ದಿನ ಸಿಕ್ಕಿರೆ ಅದ್ನ ಹೊಂಬಾಳೆಲಿ ಹಾಕ್ಯಂಡು ಮತ್ತೆ ತಗಂಡ್ ಹೋಗಿ ಕಾದ್ಗೆಲೆ ಬಿಡನ ಅಕಾ?"
"ಹೂಂ, ಅಡ್ಡಿಲ್ಲೆ, ಹಂಗೇ ಮಾಡನ.."


ಬಟ್ಟೆ - ಬೆತ್ತಲೆ - ಬಾಲ್ಯ - ಮುಪ್ಪುಗಳ ಸರಪಣಿಯ ಬಗ್ಗೊಂದು ಸ್ಥಿತಪ್ರಜ್ಞ ನೋಟ ವಿಕ್ರಮ್ ಹತ್ವಾರ್-ರಿಂದ

ಬೆತ್ತಲೆ

ನೀರಿದ್ದರೆ ಸಾಕು ಆಟಕ್ಕೆ,
ನೋಟದೆಲ್ಲೆಡೆ ಬೆರಗು
ಬಾಲ್ಯ ಬದುಕಿರುವವರೆಗೆ.

ಬೆತ್ತಲೆಯ ಮುಜುಗರ,
ಕೆಟ್ಟ ಕುತೂಹಲ,
ಬಟ್ಟೆ ಮೇಲಿನ ಮೋಹ-
ಬಾಲ್ಯ ತೀರಿದ ಮೇಲೆ
ಮುಪ್ಪು ಹುಟ್ಟುವವರೆಗೆ.

’ಮುಪ್ಪು ಹುಟ್ಟುವವರೆಗೆ’,
ಕೆಲವರಿಗದು ಹುಟ್ಟುವುದೇ ಇಲ್ಲ.


ಸತೀಶ್ ಬರಹದಲ್ಲಿ ಅಣ್ಣ ತಮ್ಮನಿಗೆ 'ಈಗೇಕೆ ಯೋಚ್ನೆ' ಅನ್ನುತ್ತಾನೆ...

ಈಗೇಕೆ ಯೋಚ್ನೆ

ಏನ್ ಅಣ್ಣಾ ನೀನು, ಮೀನ್ ಹಿಡಿಯೋಕೆ ಅಂತ
ಕರಕೊಂಡ್ ಬಂದು ಹರಿಯೋ ನೀರಿಗೆ ದೊಣ್ಣೇ
ನಾಯ್ಕನ ಅಪ್ಪಣೇ ಯಾಕೆ ಅಂತ ಕೇಳೋದೂ ಅಲ್ದೇ
ಈಗ ರೂಲರ್ ಹಾಕಿ ಹರಿತಾ ಇರೋದನ್ನ ಅಳಿತೀನೀ ಅಂತ
ಕೂತಿದ್ದೀಯ್ಯಲ್ಲಾ...
ನಿನಗೇನಾದ್ರೂ ಬುದ್ಧೀ ಇದೆಯಾ ಅಂತ
ನಾನೇನಾದ್ರೂ ಕೇಳಿ
ನೀನೇನಾದ್ರೂ ಸಿಟ್ನಲ್ಲಿ ನನ್ನ ಹೊಡೆಯೋಕಂತ
ಬರೋದಿಲ್ವಲ್ಲಾ, ಕೊನೆಗೆ...ಏನಾದ್ರೂ ಆಗ್ಲಿ
ನಾವ್ ಮೀನ್ ಹಿಡಿಯೋಕ್ ಹೋಗಿದ್ವೀ ಅಂತ
ಯಾರ್ ಹತ್ರಾನೂ ಹೇಳ್ದೇ ಇದ್ರೆ ಸಾಕು, ಅಷ್ಟೇ.

ತಮ್ಮಾ ಕೇಳು, ಬಗ್ಗಡದ ನೀರಲ್ಲಿ ಬಗ್ಗಿಸಿ ಸೊಂಟಾ
ಕೆಲ್ಸಾ ಮಾಡೋರ್ ಗೋಳು
ಗದ್ದೇ ನಾಟಿ ಮಾಡೋರೆಲ್ಲ, ಬೀಜ ಬಿತ್ತಿ ಬೆಳೆಯೋರೆಲ್ಲ
ಇಂಥಾ ಕೆಸರನ್ನ ನಂಬಿ ನಾಚೋದಿಲ್ಲ... ಅಲ್ದೇ
ಬೇರೆ ದೇಶದ್ ಜನ್ರೆಲ್ಲ ಅದೇನೇನೆಲ್ಲ ತಿಂದ್ಕೊಂಡು
ಎಲುಬಿನ್ ಹಂದ್ರಾನ್ ಮುಚ್ಕೊಂಡು
ಉಳಿದೋರ್ ಕಷ್ಟಾನ್ ಅರಿದೋರ್ ಹಾಗೆ
ದಪ್ಪಾ ಚರ್ಮಾನ್ ಬೆಳೆಸ್ಕೊಂಡು
ಬತ್ತಲೆಯಾಗಿ ನಿಲ್ಲೋದಕ್ಕೂ ಹೇಸೋದಿಲ್ಲ ಅಂತ
ನಮ್ಮ್ ಮೇಷ್ಟ್ರು ಹೇಳ್ತಿದ್ರು... ಜೊತೆಗೆ
ನಾನೂ ನೀನೂ ಈ ದಿನ
ನಮ್ಮಯ ನೋಟವ ನೋಡೋಣ
ನೀರಲಿ ಆಟವ ಆಡೋಣ
ಸಿಕ್ಕೋ ಮೀನು ಸಿಕ್ಕಿದ್ರೂನೂ
ತಗೊಂಡ್‌ಹೋಗಿ ಸಾಕೋದಿನ್ನೂ
ನಮ್ಮಲಿ ಉತ್ತರವಿರದಂಥ ಬಲುದೊಡ್ಡಾ ಪ್ರಶ್ನೆ
ಅಂಥಾ ಕಷ್ಟದ ಕೆಲ್ಸಕ್ಕೀಗೇಕೆ ಯೋಚ್ನೆ.

ನೀರಲ್ಲಿ ಆಡುತ್ತಿರುವ ಮಕ್ಕಳನ್ನು ತಡೆಯದಂತೆ ಸಿಂಧು ಮಕ್ಕಳ ಅಮ್ಮನಿಗೆ ಹೇಳುತ್ತಾರೆ..

ನೀರಾಡಲಿ, ಥಂಡಿಯಾದ್ರೆ ಕಷಾಯ ಕೊಡಬಹುದು..

ಬೆರಗು ಕಣ್ಣು ಕಂಡ ನೋಟ
ಒದ್ದೆ ಮೈಲಿ ಹೊಳೆವ ಮಾಟ
ಚಳಿಯಲ್ಲೂ ಏನೋ ಆಟ,
ಅಣ್ಣನ ಕೈಗೆ ಸಿಕ್ಕಿಬಿದ್ದ ಅಚ್ಚರಿ-
-ಯನ್ನು, ತಮ್ಮನ ಅರ್ಥವಾಗದ ಕುತೂಹಲ
ಮುದ್ದಿಸುತ್ತಿದೆ..
ಒಂದೇ ಅಚ್ಚರಿಗೆ ಹಲನೋಟ
ಮತ್ತೆ ಮತ್ತೆ ನೋಡಬೇಕೆನಿಸುವ ಸೆಳೆತ

ಬೇಡ ಮಕ್ಕಳ ಅಮ್ಮಾ
ಸ್ವಲ್ಪ ಹೊತ್ತು ಅಲ್ಲೇ ನಿಲ್ಲು,
ನೀರಾಡಲಿ, ಥಂಡಿಯಾದ್ರೆ ಕಷಾಯ ಕೊಡಬಹುದು,
ಇವತ್ತು ಅವರ ಚಿಲ್ಟೂ ಕೈಗಳಲ್ಲಿ
ನೀರು,ಮರಳು,ಪುಟ್ಟ ಗಪ್ಪಿ ಮೀನು ಹಿಡಿಯಲು ಬಿಡದೇ ಇದ್ದರೆ,
ನಾಳೆ ನಮ್ಮಂತೆಯೇ ದೊಡ್ಡವರಾಗಿ
ಬಾಲ್ಯದ ಖುಷಿ ಬೆರಳ ಸಂದಿಯಲ್ಲಿ ಸೋರಿಹೋಗಿ
ಆ ಪುಟ್ಟ ಕೈಗೆ ಲೇಖನಿ ಮಾತ್ರ ಗೊತ್ತಿರುತ್ತದೆ,
ನೀರಿನಾಳ, ಮೀನಿನ ನುಣುಪು, ಮರಳ ಬಿಸುಪು,
ಬದುಕಿನ ತಂಪು,
ಮನದಲ್ಲಿ ನೆಲಸದೆ
ಅಲ್ಲೆ ಹೊಳೆಬದಿಯಲ್ಲೆ ಉಳಿದುಬಿಡುತ್ತದೆ.

ಸ್ವಲ್ಪ ಹೊತ್ತು ಅಲ್ಲೇ ನಿಲ್ಲು,
ನೀರಾಡಲಿ, ಥಂಡಿಯಾದ್ರೆ ಕಷಾಯ ಕೊಡಬಹುದು

6 comments:

ಸುಪ್ತದೀಪ್ತಿ suptadeepti said...

ಆನಂದ, ಸ್ವಚ್ಛಂದ ಈಗಲೇ ಅನುಭವಿಸು ಕಂದ
ಮುಂದೆ ಇದ್ದದ್ದೇ ಕಟ್ಟುಪಾಡುಗಳ ಬಂಧ
ಅದು ಸರಿ, ಇದು ತಪ್ಪುಗಳ ಹೊರೆ
ತೊಳೆಯದಿರಲಿ ನಿನ್ನ ಕ್ರಿಯಾಶೀಲತೆಯ ತೊರೆ

ಪ್ರಭೆ said...

ಹರಿವ ನೀರ ತೊರೆಯಲಾಟ
ಆಡುತಿಹರು ಚಿಣ್ಣರು,
ಕಾಣದಿವರ ಮೊಗದಿ ಕಪಟ
ಮಕ್ಕಳೆಂದೂ ಮುಗ್ಧರು.

ಹೊಟ್ಟೆ ಬಟ್ಟೆ ಚಿಂತೆಯಿಲ್ಲ ಇವಕೆ
ಆಟವೊಂದೆ ಜೀವನ,
ಕೆಸರ ನೀರ ಮದ್ಯದಲ್ಲು
ಕಾಣ್ವರಿವರು ನಲಿವನ.

ಮಂದಹಾಸ ಹೀಗೆ ಇರಲಿ
ಇವರ ಮುಖದಲೆಂದಿಗೂ,
ಹರಿವ ನೀರಿನಂತೆ ಇರಲಿ
ಇವರ ಬದುಕು ಎಂದಿಗೂ.

Sushrutha Dodderi said...

ಚಿತ್ರಕ್ಕೂ ಮುಂಚೆ:

"ಏ, ನೀರಾಟ ಆಡನ ಬಾರಾ ಮಹೇಶಾ..."
"ಎಲ್ಲಿ?"
"ಕಾದ್ಗೆಲಿ.. ಯಾವ್ಥರ ನೀರು ಹರೀತಾ ಇದ್ದು ಗೊತ್ತಿದಾ?"
"ಹೂಂ, ನಾ ಆಗ್ಲೆ ಅಪ್ಪಯ್ಯನ ಜೊತಿಗೆ ತ್ವಾಟಕ್ಕೆ ಹೋಗಕ್ಕರೆ ನೋಡಿದಿ.."
"ನಾನೂ ಅಷ್ಟೇ.. ಸುಮಾರು ಮೀನೂ ಇದ್ವಲೇ.."
"ಏ, ಮೀನು ಹಿಡಿಯನಾ?"
"ಅಪ್ಪಯ್ಯಂಗೆ ಗೊತ್ತಾದ್ರೆ ಬೈತ.."
"ಏ ಬಾರಾ ಮಾರಾಯಾ.. ಬೇಗ ಬಪ್ಪನ.."
"ಅಮ್ಮ ಸ್ನಾನ ಮಾಡುಸ್ತಿ ಅಂತ ಹೇಳಿ ಅಂಗಿ-ಚಡ್ಡಿ ಎಲ್ಲ ಬಿಚ್ಸಿ ಹಾಕಿದ್ದು..!"
"ಥೋ ಅಡ್ಡಿಲ್ಲೆ ಬಾರಾ ಮಾರಾಯಾ... ನಾನೂ ದುಂಡಗೇ ಇಲ್ಯನಾ?"
"ನೆಡಿ ಹಂಗರೆ ಹೋಪನ.."
"ಏ ಗೌತಮಾ, ನಿಮ್ಮನೆಲಿ ಒಂದು ದೊಡ್ಡ ಸೌಟು ಇದ್ದಲಾ.. ಭಟ್ರು ಜಿಲೇಬಿ ಎತ್ತೋ ಸೌಟು.. ಜಾಲ್ರಿ ಸೌಟು.. ಅದ್ನ ತಗಂಬಾರಲೇ.."
"ಅದು ಎಂಥಕೆ?"
"ಅದ್ರಗೆ ಮೀನು ಹಿಡಿಯದು ಸುಲ್ಭ.."
"ಓಹ್ ಹೌದು..! ತರ್ತಿ ತಡಿ.."

ಚಿತ್ರದಲ್ಲಿ:

"ಏ ಇಲ್ಲಿ ಬಾರಾ.. ಇಲ್ಲಿ ಸುಮಾರು ಮೀನು ಇದ್ದು.."
"ಏ ನಂಗೆ ಹೆದ್ರಿಕೆ ಆಗ್ತು.. ಮೀನು ಕಚ್ತಲ್ಯನಾ?"
"ಥೋ ಎಂಥು ಆಗ್ತಲ್ಲೆ ಮರಾಯ.. ನಮ್ಮನೆ ಆಳು ದ್ಯಾವಪ್ಪ ಅವ್ರೆಲ್ಲ ಇದ್ನೇ ತಿಂತ"
"ಶೀ! ಹೆಂಗೆ ತಿಂತ್ವೇನ ಮೀನು..!"
"ನಾವು ಹಿಡ್ದು ನಮ್ಮನೆ ಬಾವಿಗೆ ಹಾಕನ.. ಚನಾಗಿರ್ತು.."
"ಹೌದು ಹೌದು, ಬಾ.. ಏ, ಇದೇ, ಇಲ್ನೋಡು.. ಗುಂಪಿಗೆ ಗುಂಪೇ ಇದ್ದು ಇಲ್ಲಿ.. ಇಲ್ಲಿ ಬಾರಾ ಗೌತಮಾ.."
"ವ್ಹಾವ್! ತಡಿ, ಸೌಟು ಹಾಕ್ತಿ... ಶ್... ಸುಮ್ನಿರು.. ನೀರು ಕಲಕಡ.."
"ಸಿಕ್ಚನಾ?"
"ಹಾ! ಬಂತು ನೋಡು.. ಎರ್ಡು ಪುಟಾಣಿ ಮೀನು.. ಹೇ..!"
"ಅಯ್ಯೋ.. ಒದ್ದಾಡ್ತಾ ಇದ್ದು.."
"ಆ ಹೊಂಬಾಳೆ ತಗಳಲೇ.. ಅದ್ರಗೆ ಇಟ್ಕಂಡು ಹೋಪನ.."

ಮನದಲ್ಲಿ ಮುಂದುವರೆದ ಚಿತ್ರ:

"ಇವತ್ತು ಅಮ್ಮ ನೀರು ಸೇದಕ್ಕರೆ ಕೊಡಪಾನದಲ್ಲಿ ಒಂದು ಮೀನು ಬಂದುಬಿಟ್ಟಿತ್ತು..!!"
"ಓಹ! ಇದು ಹಂಗರೆ ನಾವು ಅವತ್ತು ತಂದು ಬಿಟ್ಟಿದ್ದೇ ಮೀನು..?"
"ಹೂಂ, ಅದೇಯ.. ಅವತ್ತು ಮರಿ ಇತ್ತಲಾ? ಇವತ್ತು ಸುಮಾರು ದೊಡ್ಡಕಾಗಿತ್ತು.."
"ಕೊನಿಗೆ ಎಂಥ ಮಾಡಿದಿ ಅದನ್ನ?"
"ಅಮ್ಮಂಗೆ ಗಾಭ್ರಿ ಆಗಿ ಮತ್ತೆ ಬಾವಿಗೇ ಹಾಕ್ಬುಡ್ಚು!"
"ಓಹ್! ಇನ್ನೊಂದು ದಿನ ಸಿಕ್ಕಿರೆ ಅದ್ನ ಹೊಂಬಾಳೆಲಿ ಹಾಕ್ಯಂಡು ಮತ್ತೆ ತಗಂಡ್ ಹೋಗಿ ಕಾದ್ಗೆಲೆ ಬಿಡನ ಅಕಾ?"
"ಹೂಂ, ಅಡ್ಡಿಲ್ಲೆ, ಹಂಗೇ ಮಾಡನ.."

ವಿಕ್ರಮ ಹತ್ವಾರ said...

ಬೆತ್ತಲೆ
****

ನೀರಿದ್ದರೆ ಸಾಕು ಆಟಕ್ಕೆ,
ನೋಟದೆಲ್ಲೆಡೆ ಬೆರಗು
ಬಾಲ್ಯ ಬದುಕಿರುವವರೆಗೆ.

ಬೆತ್ತಲೆಯ ಮುಜುಗರ,
ಕೆಟ್ಟ ಕುತೂಹಲ,
ಬಟ್ಟೆ ಮೇಲಿನ ಮೋಹ-
ಬಾಲ್ಯ ತೀರಿದ ಮೇಲೆ
ಮುಪ್ಪು ಹುಟ್ಟುವವರೆಗೆ.

’ಮುಪ್ಪು ಹುಟ್ಟುವವರೆಗೆ’,
ಕೆಲವರಿಗದು ಹುಟ್ಟುವುದೇ ಇಲ್ಲ.

Satish said...

ಈಗೇಕೆ ಯೋಚ್ನೆ

ಏನ್ ಅಣ್ಣಾ ನೀನು, ಮೀನ್ ಹಿಡಿಯೋಕೆ ಅಂತ
ಕರಕೊಂಡ್ ಬಂದು ಹರಿಯೋ ನೀರಿಗೆ ದೊಣ್ಣೇ
ನಾಯ್ಕನ ಅಪ್ಪಣೇ ಯಾಕೆ ಅಂತ ಕೇಳೋದೂ ಅಲ್ದೇ
ಈಗ ರೂಲರ್ ಹಾಕಿ ಹರಿತಾ ಇರೋದನ್ನ ಅಳಿತೀನೀ ಅಂತ
ಕೂತಿದ್ದೀಯ್ಯಲ್ಲಾ...
ನಿನಗೇನಾದ್ರೂ ಬುದ್ಧೀ ಇದೆಯಾ ಅಂತ
ನಾನೇನಾದ್ರೂ ಕೇಳಿ
ನೀನೇನಾದ್ರೂ ಸಿಟ್ನಲ್ಲಿ ನನ್ನ ಹೊಡೆಯೋಕಂತ
ಬರೋದಿಲ್ವಲ್ಲಾ, ಕೊನೆಗೆ...ಏನಾದ್ರೂ ಆಗ್ಲಿ
ನಾವ್ ಮೀನ್ ಹಿಡಿಯೋಕ್ ಹೋಗಿದ್ವೀ ಅಂತ
ಯಾರ್ ಹತ್ರಾನೂ ಹೇಳ್ದೇ ಇದ್ರೆ ಸಾಕು, ಅಷ್ಟೇ.

ತಮ್ಮಾ ಕೇಳು, ಬಗ್ಗಡದ ನೀರಲ್ಲಿ ಬಗ್ಗಿಸಿ ಸೊಂಟಾ
ಕೆಲ್ಸಾ ಮಾಡೋರ್ ಗೋಳು
ಗದ್ದೇ ನಾಟಿ ಮಾಡೋರೆಲ್ಲ, ಬೀಜ ಬಿತ್ತಿ ಬೆಳೆಯೋರೆಲ್ಲ
ಇಂಥಾ ಕೆಸರನ್ನ ನಂಬಿ ನಾಚೋದಿಲ್ಲ... ಅಲ್ದೇ
ಬೇರೆ ದೇಶದ್ ಜನ್ರೆಲ್ಲ ಅದೇನೇನೆಲ್ಲ ತಿಂದ್ಕೊಂಡು
ಎಲುಬಿನ್ ಹಂದ್ರಾನ್ ಮುಚ್ಕೊಂಡು
ಉಳಿದೋರ್ ಕಷ್ಟಾನ್ ಅರಿದೋರ್ ಹಾಗೆ
ದಪ್ಪಾ ಚರ್ಮಾನ್ ಬೆಳೆಸ್ಕೊಂಡು
ಬತ್ತಲೆಯಾಗಿ ನಿಲ್ಲೋದಕ್ಕೂ ಹೇಸೋದಿಲ್ಲ ಅಂತ
ನಮ್ಮ್ ಮೇಷ್ಟ್ರು ಹೇಳ್ತಿದ್ರು... ಜೊತೆಗೆ
ನಾನೂ ನೀನೂ ಈ ದಿನ
ನಮ್ಮಯ ನೋಟವ ನೋಡೋಣ
ನೀರಲಿ ಆಟವ ಆಡೋಣ
ಸಿಕ್ಕೋ ಮೀನು ಸಿಕ್ಕಿದ್ರೂನೂ
ತಗೊಂಡ್‌ಹೋಗಿ ಸಾಕೋದಿನ್ನೂ
ನಮ್ಮಲಿ ಉತ್ತರವಿರದಂಥ ಬಲುದೊಡ್ಡಾ ಪ್ರಶ್ನೆ
ಅಂಥಾ ಕಷ್ಟದ ಕೆಲ್ಸಕ್ಕೀಗೇಕೆ ಯೋಚ್ನೆ.

ಸಿಂಧು sindhu said...

ನೀರಾಡಲಿ, ಥಂಡಿಯಾದ್ರೆ ಕಷಾಯ ಕೊಡಬಹುದು..

ಬೆರಗು ಕಣ್ಣು ಕಂಡ ನೋಟ
ಒದ್ದೆ ಮೈಲಿ ಹೊಳೆವ ಮಾಟ
ಚಳಿಯಲ್ಲೂ ಏನೋ ಆಟ,
ಅಣ್ಣನ ಕೈಗೆ ಸಿಕ್ಕಿಬಿದ್ದ ಅಚ್ಚರಿ-
-ಯನ್ನು, ತಮ್ಮನ ಅರ್ಥವಾಗದ ಕುತೂಹಲ
ಮುದ್ದಿಸುತ್ತಿದೆ..
ಒಂದೇ ಅಚ್ಚರಿಗೆ ಹಲನೋಟ
ಮತ್ತೆ ಮತ್ತೆ ನೋಡಬೇಕೆನಿಸುವ ಸೆಳೆತ

ಬೇಡ ಮಕ್ಕಳ ಅಮ್ಮಾ
ಸ್ವಲ್ಪ ಹೊತ್ತು ಅಲ್ಲೇ ನಿಲ್ಲು,
ನೀರಾಡಲಿ, ಥಂಡಿಯಾದ್ರೆ ಕಷಾಯ ಕೊಡಬಹುದು,
ಇವತ್ತು ಅವರ ಚಿಲ್ಟೂ ಕೈಗಳಲ್ಲಿ
ನೀರು,ಮರಳು,ಪುಟ್ಟ ಗಪ್ಪಿ ಮೀನು ಹಿಡಿಯಲು ಬಿಡದೇ ಇದ್ದರೆ,
ನಾಳೆ ನಮ್ಮಂತೆಯೇ ದೊಡ್ಡವರಾಗಿ
ಬಾಲ್ಯದ ಖುಷಿ ಬೆರಳ ಸಂದಿಯಲ್ಲಿ ಸೋರಿಹೋಗಿ
ಆ ಪುಟ್ಟ ಕೈಗೆ ಲೇಖನಿ ಮಾತ್ರ ಗೊತ್ತಿರುತ್ತದೆ,
ನೀರಿನಾಳ, ಮೀನಿನ ನುಣುಪು, ಮರಳ ಬಿಸುಪು,
ಬದುಕಿನ ತಂಪು,
ಮನದಲ್ಲಿ ನೆಲಸದೆ
ಅಲ್ಲೆ ಹೊಳೆಬದಿಯಲ್ಲೆ ಉಳಿದುಬಿಡುತ್ತದೆ.

ಸ್ವಲ್ಪ ಹೊತ್ತು ಅಲ್ಲೇ ನಿಲ್ಲು,
ನೀರಾಡಲಿ, ಥಂಡಿಯಾದ್ರೆ ಕಷಾಯ ಕೊಡಬಹುದು