Monday 6 August, 2007

ಚಿತ್ರ - 13



ಭಾವಜೀವಿ ಮಾರ್ಮಿಕವಾಗಿ ಬರೆದಿದ್ದು ಹೀಗೆ :
*ಮುಚ್ಚುಳವಿಲ್ಲದ ಕ್ಯಾನ್*
ಬಟ್ಟೆಯೆ ಖುರ್ಚಿ, ಬಟ್ಟೆಯೆ ಮಂಚ
ತಣ್ಣೀರಿಗದ್ದಿದ ಬಟ್ಟೆಯೆ ನಮ್ಮ ಹೊಟ್ಟೆಗೆ ಒಮ್ಮೊಮ್ಮೆ
ಟ್ಯಾಕ್ಸಿಲ್ಲ, ಬಿಡಾರದ ಬಾಡಿಗೆಯೆ ಗೋಳಿಲ್ಲ
ಮನೆಯಿಂದ ಕದ್ದೊಯ್ಯಲು ಏನೂ ಇಲ್ಲ
ಸುಟ್ಟ ಪಾತ್ರೆ, ಮುಚ್ಚುಳಿರದ ಕ್ಯಾನ್ ,
ಸವೆದು ಕುಬ್ಜಗೊಂಡ ಪೂರಕೆಯೇ ನಮಗೆಲ್ಲ
ದೂರದೆಲ್ಲಿಂದನೂ ನೀರು ಹೊತ್ತು
ಆಕಾಶದ ಸೂರಿನಡಿ, ರಸ್ತೆಯ ಬದಿಯಲ್ಲೆ ಸ್ನಾನಿಸಿ
ಖಾಲಿಯಾದ ಸುಟ್ಟ ಪಾತ್ರೆ ಕ್ಯಾನಲ್ಲೆಲ್ಲಾ
ಪ್ರೀತಿಯನ್ನು ತುಂಬಿಡುತ್ತೇವೆ
ಕದ್ದು ಹೋದೀತೆಂಬ ಭಯವಿಲ್ಲದೆ!

ಪಾರಿಜಾತ ಅವರು ನೂತನ ಶೈಲಿಯಲ್ಲಿ ಸಂಸ್ಕೃತದಲ್ಲಿ ಬರೆದಿದ್ದು ಹೀಗೆ :
वीथीतटेष्वुशितमस्तु सुरालये वा
चीनाम्बरं धरतु वाथ विदीर्णचीरम् ।
अश्नातु मृष्टमनिशं बत वा कुभैक्ष्यम्
माता सदैव सुतलालन एव तृप्ता ॥

ರಸ್ತೆಬದಿಯಲ್ಲಿರಲಿ ಸುರರ ಮನೆಯಲ್ಲಿರಲಿ, ಚೀನಾಂಬರ ಧರಿಸಿರಲಿ
ಹರಿದುದನ್ನುಟ್ಟಿರಲಿ, ಮೃಷ್ಟಾನ್ನವುಣ್ಣಲಿ ಭಿಕ್ಷೆಯನು ಭಕ್ಷಿಸಲಿ,ತಾಯಿಗೆ
ತೃಪ್ತಿ ಸಿಗುವುದು ಮಗುವಿನ ಲಾಲನೆಯಲ್ಲಿಯೇ ಅಲ್ಲವೇ!

" ನಾವು ಬಡುವ್ರಲ್ಲಾ ಸಾಮೀ " ಅಂಥ ಹೇಳಿದ್ದು ಸತೀಶ ಅವರು :
ಏನ್ ಸಾಮೀ ನೀವೂ ತಗಡಿನ್ ಡಬ್ಬೀ ಒಳಗೆ
ಬಡ್‍ತನದ ಚಿತ್ರ ತೆಗಿತೀನಿ ಅಂತ ಕುಂತೀರಲ್ಲಾ
ನಾವಿರೋ ಸೀಮೇ ಜನ ಎಲ್ಲಾ ಹಿಂಗೇಯಾ
ಗೊತ್ತಿದ್ದೂ ಎಲ್ಲ ಅರಿದೋರಂಗ್ ಆಡ್ತೀರಲ್ಲಾ.

ತಲಿಮ್ಯಾಗೆ ಸೂರು ಸುತ್ಲೂ ಗ್ವಾಡೆ ಇಲ್ಲದೇನೂ
ನಮ್ ಬದ್ಕೇ ನಮ್ಮನ್ ನಡಸ್ತಾ ಇಲ್ವೇನು?
ಎಲ್ಲಾನೂ ತೆರೆದ ಬಯಲಲ್ಲೇ ನಡೆಸೋ ಜನ್ರ
ಸೊಂಟದ ದಾರಾನೂ ಗಟ್ಟೀ ಅಲ್ವೇನು?

ನೀರೂ-ನಿಡಿ ಉಳ್ಸೀ ಬೆಳ್ಸೋ ದೊಡ್ಡ್ ಮಾತು ಗೊತ್ತಿಲ್ಲ
ನಮ್ ಜನ್ರ ಶೋಕಿ-ಜೋಕಿ ಇವೆಲ್ಲ ಇರೋವೇಯಾ
ಹಾಳ್ ಗ್ವಾಡೇ ನೋಡುದ್ರೇನೇ ತಿಳಿಯಾಕಿಲ್ವಾ
ಈ ಸುತ್ಲೂ ನಮ್ಮಂಥೋರ್ಗೇನೂ ಕಮ್ಮೀ ಇಲ್ಲಾ.

ನಾವು ಬಡುವ್ರಲ್ಲಾ ಸಾಮೀ ನಾವಿರೋದೇ ಹಿಂಗೆ
ನಿಮ್ ಕಣ್ಣಿಗ್ ಕಂಡು ಕರುಳು ಚುರುಕ್ ಅಂದ್ರೆ ಹೆಂಗೆ?

ರಾಘವೇಂದ್ರ ಪ್ರಸಾದ.ಪಿ ಸಿನಿಕರಾಗಿ ಹೇಳಿದ್ದು ಹೀಗೆ :
ಭಾರತ ಪ್ರಕಾಶಿಸುತ್ತಿದೆ
ತಳ ಸುಟ್ಟ ಪಾತ್ರೆಯಲ್ಲಿ
ಬಟ್ಟೆ ಕಾಣದ ಬೆತ್ತಲೆ ದೇಹದಲ್ಲಿ
ಹೊಟ್ಟೆ ಹಸಿದ ಕರುಳ ಕುಡಿಯಲ್ಲಿ
ಕನಸೇ ಕಾಣದ ಫುಟ್ ಪಾತ್ ಕಂಗಳಲಿ ನಿಜ ಭಾರ ಪ್ರಕಾಶಿಸುತ್ತಿದೆ !

4 comments:

ಭಾವಜೀವಿ... said...

*ಮುಚ್ಚುಳವಿಲ್ಲದ ಕ್ಯಾನ್*
ಬಟ್ಟೆಯೆ ಖುರ್ಚಿ, ಬಟ್ಟೆಯೆ ಮಂಚ
ತಣ್ಣೀರಿಗದ್ದಿದ ಬಟ್ಟೆಯೆ ನಮ್ಮ ಹೊಟ್ಟೆಗೆ ಒಮ್ಮೊಮ್ಮೆ
ಟ್ಯಾಕ್ಸಿಲ್ಲ, ಬಿಡಾರದ ಬಾಡಿಗೆಯೆ ಗೋಳಿಲ್ಲ
ಮನೆಯಿಂದ ಕದ್ದೊಯ್ಯಲು ಏನೂ ಇಲ್ಲ
ಸುಟ್ಟ ಪಾತ್ರೆ, ಮುಚ್ಚುಳಿರದ ಕ್ಯಾನ್ ,
ಸವೆದು ಕುಬ್ಜಗೊಂಡ ಪೂರಕೆಯೇ ನಮಗೆಲ್ಲ
ದೂರದೆಲ್ಲಿಂದನೂ ನೀರು ಹೊತ್ತು
ಆಕಾಶದ ಸೂರಿನಡಿ, ರಸ್ತೆಯ ಬದಿಯಲ್ಲೆ ಸ್ನಾನಿಸಿ
ಖಾಲಿಯಾದ ಸುಟ್ಟ ಪಾತ್ರೆ ಕ್ಯಾನಲ್ಲೆಲ್ಲಾ
ಪ್ರೀತಿಯನ್ನು ತುಂಬಿಡುತ್ತೇವೆ
ಕದ್ದು ಹೋದೀತೆಂಬ ಭಯವಿಲ್ಲದೆ!

parijata said...

वीथीतटेष्वुशितमस्तु सुरालये वा
चीनाम्बरं धरतु वाथ विदीर्णचीरम् ।
अश्नातु मृष्टमनिशं बत वा कुभैक्ष्यम्
माता सदैव सुतलालन एव तृप्ता ॥

ರಸ್ತೆಬದಿಯಲ್ಲಿರಲಿ ಸುರರ ಮನೆಯಲ್ಲಿರಲಿ, ಚೀನಾಂಬರ ಧರಿಸಿರಲಿ ಹರಿದುದನ್ನುಟ್ಟಿರಲಿ, ಮೃಷ್ಟಾನ್ನವುಣ್ಣಲಿ ಭಿಕ್ಷೆಯನು ಭಕ್ಷಿಸಲಿ,ತಾಯಿಗೆ ತೃಪ್ತಿ ಸಿಗುವುದು ಮಗುವಿನ ಲಾಲನೆಯಲ್ಲಿಯೇ ಅಲ್ಲವೇ!

Satish said...

ನಾವು ಬಡುವ್ರಲ್ಲಾ ಸಾಮೀ

ಏನ್ ಸಾಮೀ ನೀವೂ ತಗಡಿನ್ ಡಬ್ಬೀ ಒಳಗೆ
ಬಡ್‍ತನದ ಚಿತ್ರ ತೆಗಿತೀನಿ ಅಂತ ಕುಂತೀರಲ್ಲಾ
ನಾವಿರೋ ಸೀಮೇ ಜನ ಎಲ್ಲಾ ಹಿಂಗೇಯಾ
ಗೊತ್ತಿದ್ದೂ ಎಲ್ಲ ಅರಿದೋರಂಗ್ ಆಡ್ತೀರಲ್ಲಾ.

ತಲಿಮ್ಯಾಗೆ ಸೂರು ಸುತ್ಲೂ ಗ್ವಾಡೆ ಇಲ್ಲದೇನೂ
ನಮ್ ಬದ್ಕೇ ನಮ್ಮನ್ ನಡಸ್ತಾ ಇಲ್ವೇನು?
ಎಲ್ಲಾನೂ ತೆರೆದ ಬಯಲಲ್ಲೇ ನಡೆಸೋ ಜನ್ರ
ಸೊಂಟದ ದಾರಾನೂ ಗಟ್ಟೀ ಅಲ್ವೇನು?

ನೀರೂ-ನಿಡಿ ಉಳ್ಸೀ ಬೆಳ್ಸೋ ದೊಡ್ಡ್ ಮಾತು ಗೊತ್ತಿಲ್ಲ
ನಮ್ ಜನ್ರ ಶೋಕಿ-ಜೋಕಿ ಇವೆಲ್ಲ ಇರೋವೇಯಾ
ಹಾಳ್ ಗ್ವಾಡೇ ನೋಡುದ್ರೇನೇ ತಿಳಿಯಾಕಿಲ್ವಾ
ಈ ಸುತ್ಲೂ ನಮ್ಮಂಥೋರ್ಗೇನೂ ಕಮ್ಮೀ ಇಲ್ಲಾ.

ನಾವು ಬಡುವ್ರಲ್ಲಾ ಸಾಮೀ ನಾವಿರೋದೇ ಹಿಂಗೆ
ನಿಮ್ ಕಣ್ಣಿಗ್ ಕಂಡು ಕರುಳು ಚುರುಕ್ ಅಂದ್ರೆ ಹೆಂಗೆ?

ರಾಘವೇಂದ್ರ ಪ್ರಸಾದ್ ಪಿ said...

bharata prakashisuttide
tala suuta patreyalli,
batte kanada bettale dehadalli,
hotte hasida karula kudiyalli,
kanase kanada footpath kangalali nija bharata prakashisuttide