ಚಿತ್ರ - 15
ಅಗೋಚರತೆಯಲಿ ಅರ್ಥ ಹುಡುಕುವ ಬದುಕಿನ ಸಂಜೆಯಲ್ಲಿರುವವರ ಅನಿಸಿಕೆ -ಬರೆದಿದ್ದು ಆರ್ಬಿ
ನಾನು ಪ್ರತಿ ಸಾಯಂಕಾಲವೂ ಇವತ್ತು ಏನಾದರೋದು ಘಟಿಸುತ್ತದೆ ಎಂದು ಕೊಂಡೇ ಸೂರ್ಯನ ಸಾವನ್ನು ಕಣ್ಣಾರೆ ನೋಡುತ್ತಾ ಅಗೋಚರವಾದದ್ಯಾವುದಕ್ಕೋ ಕಾಯುತ್ತಿರುತ್ತೇನೆ.
ಯಾವುದಕ್ಕಾಗಿ ?
ಯಾರಿಗಾಗಿ ?
ಯಾವತ್ತಿನಿಂದ?
ಮತ್ತು ಯಾವತ್ತಿನ ತನಕ ?
ಎಂಬ ಪ್ರಶ್ನೆಗಳಿಗೆ ಉತ್ತರವನ್ನೇ ಹುಡುಕದೆ ಸುಮ್ಮನೆ ಕಾಯುತ್ತೇನೆ.
ಬೇಸಿಗೆಯ ಬಿಸಿಲಿಗೆ ತಿಂಗಳುಗಳ ಕಾಲ ಕಾದು ಕಾಯ್ದ ಬಂಡೆಗಳು, ಗುಡ್ಡಗಳು , ಸಸ್ಯಗಳು ಮಳೆಗಾಳದ ಮಳೆಗೆ ತಣ್ಣಗಾದರೂ ಆಗುತ್ತವೆ.
ಆದರೆ ನಾನು ? ......
(ಕೊನೆಗೆ ಮತ್ತೆ ಮೊದಲಿನಂತೆ ಪ್ರಶ್ನೆ - ನನ್ನ ಗೂನು ಬೆನ್ನಿನಂತೆ !)
ನಾನು ಕಾಯುತ್ತಲೇ ಇರುತ್ತೇನೆ.
ನನ್ನ ನಾಳೆ ಕಾಣದ ಜೀವನದ ಹಾದಿಯಲ್ಲಿ ....
ತಮ್ಮದೆ ಆದ ಲಯದಲ್ಲಿ ಎಂದಿನಂತೆ ಅರ್ಥಪೂರ್ಣವಾಗಿ ಸತೀಶ 'ಕಪ್ಪು ಬಿಳುಪು ಕತ್ತಲು ' ಎನ್ನುತ್ತಾ ಹೇಳಿದ್ದು :
ಕಪ್ಪು ಬಿಳುಪು ಕತ್ತಲಲ್ಲಿ ನಾಳೆ ಚಿಂತೆ ಚಿತ್ತದಲ್ಲಿ
ಎತ್ತ ದಾರಿ ಎತ್ತ ಪಯಣ ಎನ್ನುವಂತೆ ಆಗಿದೆ.
ಮಾರ್ಕ್ಸ್ ಗಡ್ಡ ಹಳೆಯದಾಯ್ತು ಮುದುಕ ಗಡ್ಡ ಬೆಳೆದು ನಿಂತು
ಕಪ್ಪು ಬಿಳುಪು ಕತ್ತಲಲ್ಲಿ ಒಬ್ಬೊಂಟಿ ಯಹೂದಿಯಾಗಿ
ಮುಂದೆ ಎಂದೋ ಬೂದಿಯಾಗಿ.
ಹಣೆಯ ಮೇಲೆ ಸಣ್ಣ ನೆರಿಗೆ ಯಾರೋ ಕರೆಯದಿದ್ದ ಕರೆಗೆ
ಕಪ್ಪು ಬಿಳುಪು ಕತ್ತಲಲ್ಲಿ ನಿರಾಶ್ರಿತವಾದ ಚಿಂತನೆ
ನೆಲದ ದೃಷ್ಟಿ ಮಂಥನೆ.
ಆಸೆ ಅಮರಿ ಬೆಳೆಯುತಿಲ್ಲ ಬಾಸೆ ಕೊಸರಿ ಮೊಳೆಯುತಿಲ್ಲ
ಕಪ್ಪು ಬಿಳುಪು ಕತ್ತಲಲ್ಲಿ ಒಂದೇ ಒಂದು ರಾಗವು
ಸಹಜವಾದ ಯೋಗವು.
ಚೀಲದಲ್ಲಿ ಚಿಂತೆ ಕೆಲವು ಬೆನ್ನ ಮೇಲೆ ಭಾರ ಹಲವು
ಕಪ್ಪು ಬಿಳುಪು ಕತ್ತಲಲ್ಲಿ ಶೂನ್ಯದಾಚೆ ಲೋಕದ
ಕಣ್ಣ ತಣಿಸೋ ಮಾಟದ.
ಕಪ್ಪು ಬಿಳುಪು ಕತ್ತಲಲ್ಲಿ ನಾಳೆ ಚಿಂತೆ ಚಿತ್ತದಲ್ಲಿ
ನೋವು ನಲಿವು ಎರಡೂ ಸೇರಿ ಹೊಸತು ಭಾವ ಹುಟ್ಟಿದೆ.
ದ್ವಂದ್ವದಲ್ಲಿರುವವನ ಮನಸ್ಥಿತಿ/ಆಲೋಚನೆಯ ಬಗ್ಗೆ ಹೇಳಿದ್ದು -ಸೀಮಾ
ಎಡವಿದೆನೇಕೆ?
ಎಡವಿದೆ ನಿಜ; ಎಂದೂ ಮಾಡದ ತಪ್ಪನ್ನು
ಇಂದೇಕೆ ಮಾಡಿದೆ? ನನ್ನ ಅಗಾಧ ತಾಳ್ಮೆ ಎಲ್ಲಿ ಹೋಯಿತು?
ಆದರೂ ಹಿಂತಿರುಗಿ ಅವಲೋಕಿಸಲು ಏನೋ ಆತಂಕ, ಭಯ.
ಹಿಂತಿರುಗಿ ನೋಡದಿರಲು ಕಾಡುವುದು ಪಾಪ ಪ್ರಜ್ಞೆ.
ಮುಂದಿರುವ ಜೀವನ ಬರೀ ಕತ್ತಲು...
ಹಿಂದಿರುವ ಬೆಳಕಿನ ಕಡೆಗೆ ಮತ್ತೊಮ್ಮೆ ತಿರುಗಿ ನೋಡಲೇ?
ಕಳೆದು ಹೋದ ಜೀವನದಬಗ್ಗೆ ಆಲೋಚಿಸುವವನ ಶೈಲಿಯಲಿ ರಾಘವೇಂದ್ರ ಪ್ರಸಾದ ಬರೆದಿದ್ದು :
ಏಲ್ ಮರ್ತೆ ಕೋಣೆ ಬೀಗ?
ಗಲ್ಲಿ ಮರೀಲಿಲ್ಲ
ಗೂಡ್ ಮರೀಲಿಲ್ಲ
ಏಲ್ಲೊ ಮರ್ತೆ ಕೋಣೆ ಬೀಗ.
ಏಲ್ ಹೊದ್ವು ನನ್ ಮರಿಹಕ್ಕಿಗಳು?
ರೆಕ್ಕೆ ಬಲ್ತಿಲ್ಲ
ಕೊಕ್ಕೆ ಬನ್ದಿಲ್ಲ
ಏಲ್ಲೊ ಹೊದ್ವು ನನ್ ಮರಿಹಕ್ಕಿಗಳು.
ಏಲ್ ಕಳ್ದ್ಹೊಯ್ತು ನನ್ ಟೈಮು?
ನೋವು ಮರ್ರ್ತಿಲ್ಲ
ಗಾಯ ಮಾಸಿಲ್ಲ
ಏಲ್ಲೊ ಕಳ್ದ್ಹೊಯ್ತ್ ನನ್ ಟೈಮು.
ರವಿ ಬೆಳಗೆರೆಯವರ 'ಮಾಂಡೋವಿ' ನೆನಪಿಸುವ ಶೈಲಿಯಲಿ ಸಿಂಧು ಅವರು ಹೇಳಿದ್ದು ಈ ರೀತಿ :
ಹುಡುಕಲೇ..ಬೇಡವೇ?
ಎಲ್ಲವಳೆಲ್ಲವಳೆಲ್ಲವಳೂ?
ಈ ಕಂಬದಲ್ಲೂ ಇಲ್ಲ..!
ದಿನಾ ದೇಗುಲದ ಅಂಗಳದಲ್ಲಿ
ಆಡುವಾಗ ಈ ಕಂಬದ ಹಿಂದೇ
ಅಡಗುವ ಅವಳೆಲ್ಲಿ?
ಯಾವ ಗಿಡದ ಹಿಂದೆ ನಿಂತಿರಬಹುದು
ಯಾವ ಮೊಗ್ಗಿನ ತೆರೆಹೊದ್ದು..?
ಯಾವ ಕಟ್ಟೆಯ ಕೆಳಗೆ ಅವಿತಿರಬಹುದು
ಯಾವ ಕುಸುರಿಯ ಕಲೆ ಹೊದ್ದು?
ಇನ್ನೆಲ್ಲಿ ಹೋಗಿರಬಹುದು
ಅಲ್ಲಿ ಬಲೂನಿನವನ ಬಳಿ ಮಕ್ಕಳಿಲ್ಲ..
ಜೋಕಾಲಿಯಿರುವೆಡೆ ಪ್ರವೇಶದ ಸಮಯವಲ್ಲ..
ಹುಡುಕಲೇ..ಬೇಡವೇ?
ಸುಮ್ಮನೆ ಕೂತರೆ
ಅವಳ ಕೈಗಳೇ ಬಂದು ಬಳಸವೇ?
ಯಾವುದಕ್ಕೂ ಇರಲಿ
ಒಮ್ಮೆ ನಶ್ಯವ ಸೇದಿಬಿಡಲೆ
ಆಕ್ಷೀ ಕೇಳಿದರೆ ಓಡಿಬರಬಹುದು.
ಬೆಟ್ಟವೇ ಮೊಹಮ್ಮದನ ಬಳಿಗೆ ಬಂದಂತೆ
ಅವಳೇ ಕರುಣಿಸಿ ಒಲಿಯಬಹುದು..
ಗುಣವಿರುವ ಮಗುವಲ್ಲವೇ
ಗುಡಿಯ ದೇವರಿಗಿಂತ ಮಿಗಿಲಹುದು..
'ನಾನಿನ್ನು ಯುವಕ ' ಎನ್ನುತ್ತಾ ಶ್ರೀತ್ರಿಯವರು ಹೇಳಿದ್ದು :
ನಾನಿನ್ನೂ ಯುವಕ!
ಹಾಲುಗಲ್ಲದ ಹಸುಳೆ ಇದ್ದಾಗ
"ಮಗು" ಎಂದು ಕರೆದು
ಅಪ್ಪಿ ಮುದ್ದಿಸಿದಿರಿ ;
ಅಂಗಿ ಚಡ್ಡಿ ತೊಟ್ಟು
ಸ್ಲೇಟು ಬಳಪ ಹಿಡಿದು
ಶಾಲೆಗೆ ಹೊರಟು ನಿಂತಾಗ
"ಹುಡುಗ" ಎಂದು ಹುರಿದುಂಬಿಸಿದಿರಿ ;
ಮೀಸೆ ಮೊಳೆತು ಆಸೆ ಬೆಳೆದು
ಹರಯದ ಹುರುಪು
ತೋಳುಗಳಲ್ಲಿ ಖಂಡಗಟ್ಟಿದಾಗ
"ಯುವಕ" ಎಂದು ಉಬ್ಬಿಸಿದಿರಿ ;
ಈಗಲೂ ಹಾಗೇ ಇದೆ
ನನ್ನ ಮಗುವಿನ ಮನಸ್ಸು
ಈಗಲೂ ಹಾಗೇ ಇದೆ
ಕಂಡಿದ್ದೆಲ್ಲ ಕಲಿಯುವ ಹುಮ್ಮಸ್ಸು
ಈಗಲೂ ಕಣ್ಮುಂದೆ ಬರತ್ತೆ
ಹರಯದಲ್ಲಿ ಕಂಡ ಕನಸು
ಮತ್ತೆ ಈಗೇಕೆ ನೀವೆಲ್ಲ
ನನ್ನ "ಮುದುಕ" ಅಂತೀರಿ?
6 comments:
ನಾನು ಪ್ರತಿ ಸಾಯಂಕಾಲವೂ ಇವತ್ತು ಏನಾದರೋದು ಘಟಿಸುತ್ತದೆ ಎಂದು ಕೊಂಡೇ ಸೂರ್ಯನ ಸಾವನ್ನು ಕಣ್ಣಾರೆ ನೋಡುತ್ತಾ ಅಗೋಚರವಾದದ್ಯಾವುದಕ್ಕೋ ಕಾಯುತ್ತಿರುತ್ತೇನೆ.
ಯಾವುದಕ್ಕಾಗಿ ?
ಯಾರಿಗಾಗಿ ?
ಯಾವತ್ತಿನಿಂದ?
ಮತ್ತು ಯಾವತ್ತಿನ ತನಕ ?
ಎಂಬ ಪ್ರಶ್ನೆಗಳಿಗೆ ಉತ್ತರವನ್ನೇ ಹುಡುಕದೆ ಸುಮ್ಮನೆ ಕಾಯುತ್ತೇನೆ.
ಬೇಸಿಗೆಯ ಬಿಸಿಲಿಗೆ ತಿಂಗಳುಗಳ ಕಾಲ ಕಾದು ಕಾಯ್ದ ಬಂಡೆಗಳು, ಗುಡ್ಡಗಳು , ಸಸ್ಯಗಳು ಮಳೆಗಾಳದ ಮಳೆಗೆ ತಣ್ಣಗಾದರೂ ಆಗುತ್ತವೆ.
ಆದರೆ ನಾನು ? ......
(ಕೊನೆಗೆ ಮತ್ತೆ ಮೊದಲಿನಂತೆ ಪ್ರಶ್ನೆ - ನನ್ನ ಗೂನು ಬೆನ್ನಿನಂತೆ !)
ನಾನು ಕಾಯುತ್ತಲೇ ಇರುತ್ತೇನೆ.
ನನ್ನ ನಾಳೆ ಕಾಣದ ಜೀವನದ ಹಾದಿಯಲ್ಲಿ .....
ಕಪ್ಪು ಬಿಳುಪು ಕತ್ತಲು
ಕಪ್ಪು ಬಿಳುಪು ಕತ್ತಲಲ್ಲಿ ನಾಳೆ ಚಿಂತೆ ಚಿತ್ತದಲ್ಲಿ
ಎತ್ತ ದಾರಿ ಎತ್ತ ಪಯಣ ಎನ್ನುವಂತೆ ಆಗಿದೆ.
ಮಾರ್ಕ್ಸ್ ಗಡ್ಡ ಹಳೆಯದಾಯ್ತು ಮುದುಕ ಗಡ್ಡ ಬೆಳೆದು ನಿಂತು
ಕಪ್ಪು ಬಿಳುಪು ಕತ್ತಲಲ್ಲಿ ಒಬ್ಬೊಂಟಿ ಯಹೂದಿಯಾಗಿ
ಮುಂದೆ ಎಂದೋ ಬೂದಿಯಾಗಿ.
ಹಣೆಯ ಮೇಲೆ ಸಣ್ಣ ನೆರಿಗೆ ಯಾರೋ ಕರೆಯದಿದ್ದ ಕರೆಗೆ
ಕಪ್ಪು ಬಿಳುಪು ಕತ್ತಲಲ್ಲಿ ನಿರಾಶ್ರಿತವಾದ ಚಿಂತನೆ
ನೆಲದ ದೃಷ್ಟಿ ಮಂಥನೆ.
ಆಸೆ ಅಮರಿ ಬೆಳೆಯುತಿಲ್ಲ ಬಾಸೆ ಕೊಸರಿ ಮೊಳೆಯುತಿಲ್ಲ
ಕಪ್ಪು ಬಿಳುಪು ಕತ್ತಲಲ್ಲಿ ಒಂದೇ ಒಂದು ರಾಗವು
ಸಹಜವಾದ ಯೋಗವು.
ಚೀಲದಲ್ಲಿ ಚಿಂತೆ ಕೆಲವು ಬೆನ್ನ ಮೇಲೆ ಭಾರ ಹಲವು
ಕಪ್ಪು ಬಿಳುಪು ಕತ್ತಲಲ್ಲಿ ಶೂನ್ಯದಾಚೆ ಲೋಕದ
ಕಣ್ಣ ತಣಿಸೋ ಮಾಟದ.
ಕಪ್ಪು ಬಿಳುಪು ಕತ್ತಲಲ್ಲಿ ನಾಳೆ ಚಿಂತೆ ಚಿತ್ತದಲ್ಲಿ
ನೋವು ನಲಿವು ಎರಡೂ ಸೇರಿ ಹೊಸತು ಭಾವ ಹುಟ್ಟಿದೆ.
ಎಡವಿದೆನೇಕೆ?
ಎಡವಿದೆ ನಿಜ; ಎಂದೂ ಮಾಡದ ತಪ್ಪನ್ನು
ಇಂದೇಕೆ ಮಾಡಿದೆ? ನನ್ನ ಅಗಾಧ ತಾಳ್ಮೆ ಎಲ್ಲಿ ಹೋಯಿತು?
ಆದರೂ ಹಿಂತಿರುಗಿ ಅವಲೋಕಿಸಲು ಏನೋ ಆತಂಕ, ಭಯ.
ಹಿಂತಿರುಗಿ ನೋಡದಿರಲು ಕಾಡುವುದು ಪಾಪ ಪ್ರಜ್ಞೆ.
ಮುಂದಿರುವ ಜೀವನ ಬರೀ ಕತ್ತಲು...
ಹಿಂದಿರುವ ಬೆಳಕಿನ ಕಡೆಗೆ ಮತ್ತೊಮ್ಮೆ ತಿರುಗಿ ನೋಡಲೇ?
ಹುಡುಕಲೇ..ಬೇಡವೇ?
ಎಲ್ಲವಳೆಲ್ಲವಳೆಲ್ಲವಳೂ?
ಈ ಕಂಬದಲ್ಲೂ ಇಲ್ಲ..!
ದಿನಾ ದೇಗುಲದ ಅಂಗಳದಲ್ಲಿ
ಆಡುವಾಗ ಈ ಕಂಬದ ಹಿಂದೇ
ಅಡಗುವ ಅವಳೆಲ್ಲಿ?
ಯಾವ ಗಿಡದ ಹಿಂದೆ ನಿಂತಿರಬಹುದು
ಯಾವ ಮೊಗ್ಗಿನ ತೆರೆಹೊದ್ದು..?
ಯಾವ ಕಟ್ಟೆಯ ಕೆಳಗೆ ಅವಿತಿರಬಹುದು
ಯಾವ ಕುಸುರಿಯ ಕಲೆ ಹೊದ್ದು?
ಇನ್ನೆಲ್ಲಿ ಹೋಗಿರಬಹುದು
ಅಲ್ಲಿ ಬಲೂನಿನವನ ಬಳಿ ಮಕ್ಕಳಿಲ್ಲ..
ಜೋಕಾಲಿಯಿರುವೆಡೆ ಪ್ರವೇಶದ ಸಮಯವಲ್ಲ..
ಹುಡುಕಲೇ..ಬೇಡವೇ?
ಸುಮ್ಮನೆ ಕೂತರೆ
ಅವಳ ಕೈಗಳೇ ಬಂದು ಬಳಸವೇ?
ಯಾವುದಕ್ಕೂ ಇರಲಿ
ಒಮ್ಮೆ ನಶ್ಯವ ಸೇದಿಬಿಡಲೆ
ಆಕ್ಷೀ ಕೇಳಿದರೆ ಓಡಿಬರಬಹುದು.
ಬೆಟ್ಟವೇ ಮೊಹಮ್ಮದನ ಬಳಿಗೆ ಬಂದಂತೆ
ಅವಳೇ ಕರುಣಿಸಿ ಒಲಿಯಬಹುದು..
ಗುಣವಿರುವ ಮಗುವಲ್ಲವೇ
ಗುಡಿಯ ದೇವರಿಗಿಂತ ಮಿಗಿಲಹುದು..
ಏಲ್ ಮರ್ತೆ ಕೋಣೆ ಬೀಗ?
ಗಲ್ಲಿ ಮರೀಲಿಲ್ಲ
ಗೂಡ್ ಮರೀಲಿಲ್ಲ
ಏಲ್ಲೊ ಮರ್ತೆ ಕೋಣೆ ಬೀಗ.
ಏಲ್ ಹೊದ್ವು ನನ್ ಮರಿಹಕ್ಕಿಗಳು?
ರೆಕ್ಕೆ ಬಲ್ತಿಲ್ಲ
ಕೊಕ್ಕೆ ಬನ್ದಿಲ್ಲ
ಏಲ್ಲೊ ಹೊದ್ವು ನನ್ ಮರಿಹಕ್ಕಿಗಳು.
ಏಲ್ ಕಳ್ದ್ಹೊಯ್ತು ನನ್ ಟೈಮು?
ನೋವು ಮರ್ರ್ತಿಲ್ಲ
ಗಾಯ ಮಾಸಿಲ್ಲ
ಏಲ್ಲೊ ಕಳ್ದ್ಹೊಯ್ತ್ ನನ್ ಟೈಮು.
ನಾನಿನ್ನೂ ಯುವಕ!
ಹಾಲುಗಲ್ಲದ ಹಸುಳೆ ಇದ್ದಾಗ
"ಮಗು" ಎಂದು ಕರೆದು
ಅಪ್ಪಿ ಮುದ್ದಿಸಿದಿರಿ ;
ಅಂಗಿ ಚಡ್ಡಿ ತೊಟ್ಟು
ಸ್ಲೇಟು ಬಳಪ ಹಿಡಿದು
ಶಾಲೆಗೆ ಹೊರಟು ನಿಂತಾಗ
"ಹುಡುಗ" ಎಂದು ಹುರಿದುಂಬಿಸಿದಿರಿ ;
ಮೀಸೆ ಮೊಳೆತು ಆಸೆ ಬೆಳೆದು
ಹರಯದ ಹುರುಪು
ತೋಳುಗಳಲ್ಲಿ ಖಂಡಗಟ್ಟಿದಾಗ
"ಯುವಕ" ಎಂದು ಉಬ್ಬಿಸಿದಿರಿ ;
ಈಗಲೂ ಹಾಗೇ ಇದೆ
ನನ್ನ ಮಗುವಿನ ಮನಸ್ಸು
ಈಗಲೂ ಹಾಗೇ ಇದೆ
ಕಂಡಿದ್ದೆಲ್ಲ ಕಲಿಯುವ ಹುಮ್ಮಸ್ಸು
ಈಗಲೂ ಕಣ್ಮುಂದೆ ಬರತ್ತೆ
ಹರಯದಲ್ಲಿ ಕಂಡ ಕನಸು
ಮತ್ತೆ ಈಗೇಕೆ ನೀವೆಲ್ಲ
ನನ್ನ "ಮುದುಕ" ಅಂತೀರಿ?
Post a Comment