Monday 27 August, 2007

ಚಿತ್ರ - 16

ಸಾಗರ ಅವರು ಹೇಳಿದ್ದು :


ನನ್ನ ಪ್ರೀತಿಯ ಹುಡುಗಿ ,
ನಾನು ಜನರ, ಆತ್ಮೀಯರ ಮಧ್ಯದಲ್ಲಿದ್ದರೂ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಒಬ್ಬಂಟಿಯಾದಂತೆ ಅನಿಸಿಬಿಡುತ್ತಿದೆ.
ಈ ಶೂನ್ಯ ಸ್ಥಿತಿ ನನ್ನ ನೆರಳು. ಎಲ್ಲ ಒಬ್ಬಂಟಿತನಕ್ಕೆ ,ಶೂನ್ಯತೆಗೆ ಉತ್ತರವನ್ನು ಅರಸಿ ಬಸವಳಿಯುವುದು ಕೊನೆಗೆ Relax ಆಗುವುದು ' ನಿನ್ನ ಧ್ಯಾನವೆಂಬ ' ಜಗಲಿಯಲ್ಲಿ., ನಿನ್ನ ನಿಷ್ಕಳಂಕ, ಹೃದಯಪೂರ್ವಕ ನಗುವಿನ ಮನಮೋಹಕ ಕ್ಷಣಗಳ ಆ ಮಧುರ ನೆನಪಿನಲ್ಲಿ. ಈ ಧ್ಯಾನ ಮೋಹಕವಾದದ್ದು. ಕಾರಣ ಈ ಧ್ಯಾನಕ್ಕೆ ಸಾಕ್ಷಿ ಭಾವವೇ ನೀನು !
ನಿನ್ನ ಸ್ಥಿತಿವಂತಿಕೆಗೆ ಎರಡು ಮಾತಿಲ್ಲ. ನೀನು ಭಾವನೆಗಳ ಆಗರ. ನೀನು ಜೊತೆಯಲ್ಲಿದ್ದರೆ ಭಾವನೆಗಳ ದಾರಿದ್ರ್ಯವಿಲ್ಲ.ನಾನು ಧನ್ಯ! ನೀನು ನನ್ನ ಯೌವ್ವನಕ್ಕೆ ಒಂದು ಅರ್ಥ ನೀಡಿದವಳು, ನಿನ್ನ ನಿಷ್ಕಳಂಕ ಪ್ರೇಮದಿಂದ....

ಸತೀಶ , ತಮ್ಮ ಎಂದಿನ ಲಯಬದ್ದ ದಾಟಿಯಲ್ಲಿ ಬರೆದಿದ್ದು :
'ಅತ್ತಲೋ ಇತ್ತಲೋ ಬೇಗನೇ ಹೊರಡಿ '
ನಿಂತು ಹೊರಡುವ ಪಯಣಿಗರು ನಾವು
ಯೋಚಿಸಿ ಆಯ್ದುಕೊಳ್ಳುವೆವೊಂದು ತಾವು
ಎತ್ತೆತ್ತಲಿಂದ ಹುಲುಸಾಗಿ ಬಂದ ಭೌದ್ಧ ಕರ್ಮ
ಬಿರು ಬೇಸುಗೆಗೂ ಬಾಡದೆಮ್ಮ ಹಳದಿ ಚರ್ಮ.

ಕಿರಿದಾದ ಗಲ್ಲಿಯಲೂ ಸ್ವಚ್ಛತೆಯ ಮಂತ್ರ
ಓರೆ ಕಣ್ಣ ನೋಟದಲಿ ಅಡಗಿಹುದು ವಿಶ್ವಸೂತ್ರ
ಪೂರ್ವದಾ ಪೂರ್ವ ನಮ್ಮೊಳಗೆ ಇಹುದು
ಹೊರ ಹೊಮ್ಮೋ ತತ್ವ ಹೊಸದು.

ಚಂಚಲದ ಚಿತ್ತ ಮೈವೆತ್ತ ಪುರುಷನದು
ಚಿತ್ತಾರವಿಹ ನಿಲುವಂಗಿಯಷ್ಟೇ ಹೊಸದು
ಅಚಲವಾಗಿಹ ಅಬಲೆಯೊಲುಮೆಯಡಿ
ಶತಶತಮಾನಗಳ ಹಸೆಯ ಹಾಡಿ.

ಕೈ ಬೀಸಿ ಸಮಯ ಮುಂದೆ ಹಾಯುತಿದೆ
ಈ ಘಳಿಗೆ ಸಿಗದೇ ಹಾಗೇ ಹೋಗುತಿದೆ
ಬಲುಬೇಗ ನಿರ್ಧರಿತ ನೆಮ್ಮದಿಯ ಫಲ
ಆಳಿಗೊಂದರಂತೆ ಅವರದೇ ಆದ ಚೀಲ.

ಕಾಲನು ಜೋಡಿಸಿ ನಿಂತರದಾಗದು
ಕಾಲವು ಹಾಗೇ ಸುಮ್ಮನೆ ಹೋಗ್ವುದು
ಅತ್ತಲೋ ಇತ್ತಲೋ ಬೇಗನೇ ಹೊರಡಿ
ಮುಂದಿನ ಪಾತ್ರಕೆ ತಡೆಯದ ಗಡಿಬಿಡಿ.

ಪಾರಿಜಾತ ಅವರು ಬರೆದಿದ್ದು ಈ ರೀತಿಯಲ್ಲಿ :
ಕಳೆದುಹೋದರು ಎಂದು ಎಮ ನೋಡಿ ಮರುಗದಿರಿ
ನಮ್ಮ ಪಥದಲಿ ನೇರ ನಡೆಯುತಿಹೆವು
ಸುತ್ತಲಿನ ಜಗಕಿಂತ ಬೇರೆಯಲ್ಲವು ನಾವು
ನಮ್ಮ ಮನದಲಿ ದ್ವಿಧೆಯು ಕಾಣಸಿಗದು
ಚಿಗುರು ಹೊಸದಾದರೂ ಬೇರು ಹಳೆಯದೆ ತಾನೆ
ಬೇರನ್ನು ಬಿಡದೆ ನಾವ್ ಹಿಡಿದಿರುವೆವು
ಸಂಪ್ರದಾಯವ ಬಿಟ್ಟು ಕದಲದೆಯೆ ಇದ್ದರೂ
ಹೊಸದರಂಗೀಕಾರ ನಮಗೆ ಹಳತು!

ಶ್ರೀತ್ರಿಯವರು ' ಜಾಕಿಚಾನ್ 'ದಲ್ಲಿ ಬರೆದಿದ್ದು ಹೀಗೆ :
ನಡು ದಾರೀಲಿ ಏನ್ ಕಂಡು
ಬೆಕ್ಕಸ ಬೆರಗಾಗ್ ನಿಂತೆ ನೀನು?
ಶೂಟಿಂಗ್ ಮುಗೀತು ಪ್ಯಾಕಪ್ ಆಯ್ತು
ಮೇಕಪ್ ತೆಗಿ ಅಯ್ಯಾ ಜಾಕಿಚಾನು!

ಯಾವ ಸಿನಿಮಾ ಅಂತೆ ಇದು
ಮತ್ತೊಂದ್ ರಷ್ ಅವರ್ರು?
ಯಾವುದೋ ಒಂದು ಕೇಳ್ದೋರ್ ಯಾರು
ನಿಮ್ಮ ಹಾಗೆ ನಾವೂ ಈಗಲೇ ಬಂದೋರು!

4 comments:

Unknown said...

ನನ್ನ ಪ್ರೀತಿಯ ಹುಡುಗಿ ,
ನಾನು ಜನರ, ಆತ್ಮೀಯರ ಮಧ್ಯದಲ್ಲಿದ್ದರೂ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಒಬ್ಬಂಟಿಯಾದಂತೆ ಅನಿಸಿಬಿಡುತ್ತಿದೆ.
ಈ ಶೂನ್ಯ ಸ್ಥಿತಿ ನನ್ನ ನೆರಳು. ಎಲ್ಲ ಒಬ್ಬಂಟಿತನಕ್ಕೆ ,ಶೂನ್ಯತೆಗೆ ಉತ್ತರವನ್ನು ಅರಸಿ ಬಸವಳಿಯುವುದು ಕೊನೆಗೆ Relax ಆಗುವುದು ' ನಿನ್ನ ಧ್ಯಾನವೆಂಬ ' ಜಗಲಿಯಲ್ಲಿ., ನಿನ್ನ ನಿಷ್ಕಳಂಕ, ಹೃದಯಪೂರ್ವಕ ನಗುವಿನ ಮನಮೋಹಕ ಕ್ಷಣಗಳ ಆ ಮಧುರ ನೆನಪಿನಲ್ಲಿ. ಈ ಧ್ಯಾನ ಮೋಹಕವಾದದ್ದು. ಕಾರಣ ಈ ಧ್ಯಾನಕ್ಕೆ ಸಾಕ್ಷಿ ಭಾವವೇ ನೀನು !
ನಿನ್ನ ಸ್ಥಿತಿವಂತಿಕೆಗೆ ಎರಡು ಮಾತಿಲ್ಲ. ನೀನು ಭಾವನೆಗಳ ಆಗರ. ನೀನು ಜೊತೆಯಲ್ಲಿದ್ದರೆ ಭಾವನೆಗಳ ದಾರಿದ್ರ್ಯವಿಲ್ಲ.ನಾನು ಧನ್ಯ! ನೀನು ನನ್ನ ಯೌವ್ವನಕ್ಕೆ ಒಂದು ಅರ್ಥ ನೀಡಿದವಳು, ನಿನ್ನ ನಿಷ್ಕಳಂಕ ಪ್ರೇಮದಿಂದ....

Satish said...

ಅತ್ತಲೋ ಇತ್ತಲೋ ಬೇಗನೇ ಹೊರಡಿ

ನಿಂತು ಹೊರಡುವ ಪಯಣಿಗರು ನಾವು
ಯೋಚಿಸಿ ಆಯ್ದುಕೊಳ್ಳುವೆವೊಂದು ತಾವು
ಎತ್ತೆತ್ತಲಿಂದ ಹುಲುಸಾಗಿ ಬಂದ ಭೌದ್ಧ ಕರ್ಮ
ಬಿರು ಬೇಸುಗೆಗೂ ಬಾಡದೆಮ್ಮ ಹಳದಿ ಚರ್ಮ.

ಕಿರಿದಾದ ಗಲ್ಲಿಯಲೂ ಸ್ವಚ್ಛತೆಯ ಮಂತ್ರ
ಓರೆ ಕಣ್ಣ ನೋಟದಲಿ ಅಡಗಿಹುದು ವಿಶ್ವಸೂತ್ರ
ಪೂರ್ವದಾ ಪೂರ್ವ ನಮ್ಮೊಳಗೆ ಇಹುದು
ಹೊರ ಹೊಮ್ಮೋ ತತ್ವ ಹೊಸದು.

ಚಂಚಲದ ಚಿತ್ತ ಮೈವೆತ್ತ ಪುರುಷನದು
ಚಿತ್ತಾರವಿಹ ನಿಲುವಂಗಿಯಷ್ಟೇ ಹೊಸದು
ಅಚಲವಾಗಿಹ ಅಬಲೆಯೊಲುಮೆಯಡಿ
ಶತಶತಮಾನಗಳ ಹಸೆಯ ಹಾಡಿ.

ಕೈ ಬೀಸಿ ಸಮಯ ಮುಂದೆ ಹಾಯುತಿದೆ
ಈ ಘಳಿಗೆ ಸಿಗದೇ ಹಾಗೇ ಹೋಗುತಿದೆ
ಬಲುಬೇಗ ನಿರ್ಧರಿತ ನೆಮ್ಮದಿಯ ಫಲ
ಆಳಿಗೊಂದರಂತೆ ಅವರದೇ ಆದ ಚೀಲ.

ಕಾಲನು ಜೋಡಿಸಿ ನಿಂತರದಾಗದು
ಕಾಲವು ಹಾಗೇ ಸುಮ್ಮನೆ ಹೋಗ್ವುದು
ಅತ್ತಲೋ ಇತ್ತಲೋ ಬೇಗನೇ ಹೊರಡಿ
ಮುಂದಿನ ಪಾತ್ರಕೆ ತಡೆಯದ ಗಡಿಬಿಡಿ.

parijata said...

ಕಳೆದುಹೋದರು ಎಂದು ಎಮ ನೋಡಿ ಮರುಗದಿರಿ
ನಮ್ಮ ಪಥದಲಿ ನೇರ ನಡೆಯುತಿಹೆವು
ಸುತ್ತಲಿನ ಜಗಕಿಂತ ಬೇರೆಯಲ್ಲವು ನಾವು
ನಮ್ಮ ಮನದಲಿ ದ್ವಿಧೆಯು ಕಾಣಸಿಗದು
ಚಿಗುರು ಹೊಸದಾದರೂ ಬೇರು ಹಳೆಯದೆ ತಾನೆ
ಬೇರನ್ನು ಬಿಡದೆ ನಾವ್ ಹಿಡಿದಿರುವೆವು
ಸಂಪ್ರದಾಯವ ಬಿಟ್ಟು ಕದಲದೆಯೆ ಇದ್ದರೂ
ಹೊಸದರಂಗೀಕಾರ ನಮಗೆ ಹಳತು!

sritri said...

ಜಾಕಿಚಾನ್

ನಡು ದಾರೀಲಿ ಏನ್ ಕಂಡು
ಬೆಕ್ಕಸ ಬೆರಗಾಗ್ ನಿಂತೆ ನೀನು?
ಶೂಟಿಂಗ್ ಮುಗೀತು ಪ್ಯಾಕಪ್ ಆಯ್ತು
ಮೇಕಪ್ ತೆಗಿ ಅಯ್ಯಾ ಜಾಕಿಚಾನು!

ಯಾವ ಸಿನಿಮಾ ಅಂತೆ ಇದು
ಮತ್ತೊಂದ್ ರಷ್ ಅವರ್ರು?
ಯಾವುದೋ ಒಂದು ಕೇಳ್ದೋರ್ ಯಾರು
ನಿಮ್ಮ ಹಾಗೆ ನಾವೂ ಈಗಲೇ ಬಂದೋರು!