Monday 3 December, 2007

ಚಿತ್ರ- ೩೦




ಸತೀಶ ಅವರು ಹೇಳಿದ್ದು... ನಾವೂ ಯೋಳು ಮಂದಿ

ನಾವೂ ಯೋಳು ಮಂದಿ
ಎಂಟೆದೆ ಗಂಟನು ಸೊಂಟಕೆ ಕಟ್ಟಿ
ಚೆಂದ ಚಿತ್ತಾರದ ಬಣ್ಣವ ಹೊದ್ದು
ಕೈಗೆ ಕಡಾಯಿಯ ಕಿಣಕಿಣ ಸದ್ದು
ದುಡಿಯೋ ಜೀವವ ದೂಡುತಲಿದ್ದು
ಮುಷ್ಟಿಯ ಹಿಟ್ಟಿಗೆ ಕಾಳಗ ನಡೆಸುವ.

ನಾವೂ ಯೋಳು ಮಂದಿ
ಯಾಡೀ ಯಾಡೀ ಎನ್ನುತ ಕರೆಯುವ
ಪರದೆಗೆ ರಂಗನು ಉಗಿದು ಒಮ್ಮೆಲೆ
ಕೈ ಕೈ ಹಿಡಿದು ಒಮ್ಮತ ತೋರುತ
ದಿನವಿಡಿ ದುಡಿತ ಬೆನ್ನದು ಬಾಗುತ
ಬಡಬಾನಲದ ಉರಿ ಹರಿಸುತಲಿರುವ.

ನಾವೂ ಯೋಳು ಮಂದಿ
ಸಿಂಬೆಯ ಜೊತೆಗೆ ಹುಟ್ಟಿದ ತಲೆಯು
ಮರಳು ಚಾಣಾ ಸುತ್ತಿಗೆ ಕುಟ್ಟಲು ಕಲ್ಲು
ಹಿಂದಿನ ಗೋಡೆಗೆ ಹೊತ್ತೆವು ನೀರು
ನೋವನು ದಪ್ಪ ಚರ್ಮದ ಸುಕ್ಕಿಗೆ ಮುಕ್ಕಿಸಿ
ಹಗುರ ಮನಸಿನ ಭಾರದ ಹೊಟ್ಟೆಯ
ನಾವೂ ಯೋಳು ಮಂದಿ.


ಸೀಮಾ ಹೇಳಿದ್ದು...

ಪ್ರತಿಯೊಂದು ಬಟ್ಟೆಗೂ ಬೇರೆ ಬಣ್ಣ,
ಪ್ರತಿಯೊಂದು ಸನ್ನಿವೇಶಕ್ಕೂ ಅದರದೇ ಬಣ್ಣ.
ಪ್ರತಿಯೊಬ್ಬ ಮನುಷ್ಯನಿಗೂ ಬೇರೆಯದೇ ಬಣ್ಣ,
ಎಲ್ಲರೂ ಮನಸ್ಸಿನಲ್ಲೂ ಒಂದೊಂದು ಬಣ್ಣ;
ಈ ಜಗತ್ತೊಂದು ಬಣ್ಣದ ಪೊಟ್ಟಣ!

3 comments:

Satish said...

ನಾವೂ ಯೋಳು ಮಂದಿ

ನಾವೂ ಯೋಳು ಮಂದಿ
ಎಂಟೆದೆ ಗಂಟನು ಸೊಂಟಕೆ ಕಟ್ಟಿ
ಚೆಂದ ಚಿತ್ತಾರದ ಬಣ್ಣವ ಹೊದ್ದು
ಕೈಗೆ ಕಡಾಯಿಯ ಕಿಣಕಿಣ ಸದ್ದು
ದುಡಿಯೋ ಜೀವವ ದೂಡುತಲಿದ್ದು
ಮುಷ್ಟಿಯ ಹಿಟ್ಟಿಗೆ ಕಾಳಗ ನಡೆಸುವ.

ನಾವೂ ಯೋಳು ಮಂದಿ
ಯಾಡೀ ಯಾಡೀ ಎನ್ನುತ ಕರೆಯುವ
ಪರದೆಗೆ ರಂಗನು ಉಗಿದು ಒಮ್ಮೆಲೆ
ಕೈ ಕೈ ಹಿಡಿದು ಒಮ್ಮತ ತೋರುತ
ದಿನವಿಡಿ ದುಡಿತ ಬೆನ್ನದು ಬಾಗುತ
ಬಡಬಾನಲದ ಉರಿ ಹರಿಸುತಲಿರುವ.

ನಾವೂ ಯೋಳು ಮಂದಿ
ಸಿಂಬೆಯ ಜೊತೆಗೆ ಹುಟ್ಟಿದ ತಲೆಯು
ಮರಳು ಚಾಣಾ ಸುತ್ತಿಗೆ ಕುಟ್ಟಲು ಕಲ್ಲು
ಹಿಂದಿನ ಗೋಡೆಗೆ ಹೊತ್ತೆವು ನೀರು
ನೋವನು ದಪ್ಪ ಚರ್ಮದ ಸುಕ್ಕಿಗೆ ಮುಕ್ಕಿಸಿ
ಹಗುರ ಮನಸಿನ ಭಾರದ ಹೊಟ್ಟೆಯ
ನಾವೂ ಯೋಳು ಮಂದಿ.

Seema S. Hegde said...

ಪ್ರತಿಯೊಂದು ಬಟ್ಟೆಗೂ ಬೇರೆ ಬಣ್ಣ,
ಪ್ರತಿಯೊಂದು ಸನ್ನಿವೇಶಕ್ಕೂ ಅದರದೇ ಬಣ್ಣ.
ಪ್ರತಿಯೊಬ್ಬ ಮನುಷ್ಯನಿಗೂ ಬೇರೆಯದೇ ಬಣ್ಣ,
ಎಲ್ಲರೂ ಮನಸ್ಸಿನಲ್ಲೂ ಒಂದೊಂದು ಬಣ್ಣ;
ಈ ಜಗತ್ತೊಂದು ಬಣ್ಣದ ಪೊಟ್ಟಣ!

ಕುಕೂಊ.. said...

'ಶಾಪ'

ಯಾರ ಶಾಪ, ಎಲ್ಲಿಯ ಪಾಪ,
ಯಾವ ವಿಧಿಯ ಪ್ರಕೋಪ ಆಟ
ಯಾಕೋ ಇನ್ನು ಮುಗಿಯದು ಜಂಜಾಟ
ಬಿಡದು ಯಾಕಿನ್ನು ಬತ್ತಿದ ಕಾಯ ಅಂಟಿದ ಜೀವ

ಹಿಂಗಿ ಹೋದ ಬದುಕ ಸೆಲೆ
ಮರೆಯಾಗಿ ಹೋದ ಕನಸ ನೆಲೆ
ದಹಿಸುತ್ತಿರುವ ಬಡತನ ಜ್ವಾಲೆ
ಬಿಡದೆ ಬಿಗಿದಪ್ಪಿದ ಭವದ ಬಲೆ

ಹಸಿದ ಒಡಲಿಗೆ ಸಿಗದ ಕೂಳು
ಸೂರೆ ಇಲ್ಲದ ಬಾಳ ತಾವು
ಹರಿದ ಅರಿವೆ ಮುಚ್ಚಿ ಸುಕ್ಕಿನ ಕಾಯ
ಸೀದ ದೇಹಕೆ ಮುರುಟಿದ ಅಟ್ಟೆ

ವ್ಯಸ್ತ ಮನಸುಗಳ ಕುಟಿಲ ಕಾಯದೆ
ಮೆಟ್ಟಿ ನಿಂತಿದೆ ಧೀನ ಅಧೀನನ
ನೂರು ಆಹತಕೆ ನತ ದೇಹವು
ಎತ್ತ ನೋಡಲು ಸಿಕ್ಕದ ಕಾರುಣ್ಯ

ಚದುರಿ ಹೋದ ಕರುಳ ಕುಡಿಗಳ
ಮರಳಿ ಬಾರದ ಗತವ ನೆನೆದು
ಕಳೆದ ಸಂಬಂಭ ಮರಳಿ ಹುಡುಕುತ
ಕಳೆದುಕೊಂಡು ಕಣ್ಣ ಹನಿಯನು

ಮಾಡಲಾಗದು ತೊರಿದೊಂದನು
ಬಿಟ್ಟು ಹೋಗದು ಬಿಟ್ಟೆನೆಂದರು
ವ್ಯಸನ ಬದುಕಿಗೆ ಬೆಸದ ಬೇಗೆಯು
ಕುಪಿತ ಒಡಲು ವಡಬ ತಾಣವು

ಸಾಕು ಮುಗಿಸೋ ಸೂತ್ರಧಾರನೆ
ಸೂತ್ರವಾಡಿಸಿದಂತೆ ಆಡಿ ಎಲ್ಲವ
ಸವೆದು ಹೋಗಿದೆ ಜೀವ ದೇಹವು
ಸೈರಿಸಲು ಉಳಿದಿಲ್ಲ ಏನು ಶರಣಾಗುವೆ ಇಂದೇ ನಾನು.