Monday 7 January, 2008

ಚಿತ್ರ- ೩೫



ಸುಪ್ತದೀಪ್ತಿ ಅವರ ಕಲ್ಪನೆಯಲ್ಲಿ ಕೈಯನ್ನು ಹಿಡಿದು ನಡೆಯುವ ತಮ್ಮ

ನನ್ನ ಕೈಯ ಹಿಡಿಯುತ
ಎರಡು ಹೆಜ್ಜೆ ನಡೆಯುತ
ಸಾಗು ಮುಂದು ಮುಂದಕೆ, ನನ್ನ ತಮ್ಮ.

ಪುಟ್ಟ ಪಾದ ಎತ್ತುತ
ದಿಟ್ಟ ದಿಕ್ಕ ಹುಡುಕುತ
ಜೊತೆಯಾಗಿ ನಡೆಯುವ, ನನ್ನ ತಮ್ಮ.

ಜಗದ ಅಗಲ ಅಳೆಯುವ
ಜನರ ನೋಟ ಸೆಳೆಯುವ
ಎಲ್ಲೆ ಮೀರಿ ಬೆಳೆಯುವ, ನನ್ನ ತಮ್ಮ.

ದಾರಿ ತೋರ ಬಲ್ಲೆನು
ಭಾರ ಎತ್ತಬಲ್ಲೆನು
ನಿನ್ನ ಹೆಗಲಿಗೆಣೆಯಾಗಿ, ನನ್ನ ತಮ್ಮ.

ಕಾಲ ಇಲ್ಲೆ ನಿಲ್ಲಲಿ
ನಾಳೆ ನಮ್ಮ ಕಣ್ಣಲಿ
ಸೂರ್ಯ ಚಂದ್ರ ನಾವೇ ಇನ್ನು, ನೋಡು ತಮ್ಮ.


ಕುಮಾರ ಸ್ವಾಮಿ ಕಡಾಕೊಳ್ಳ ಹೇಳಿದ್ದು ಬಾರೋ ಅಂಗಳಕೆ

ಬಾರೋ ಅಂಗಳಕೆ ಓಡುತ್ತಾ ಬಾರೋ
ಬೆಳಕು ಚೆಲ್ಲಿದೆ ಧರೆಯ ತುಂಬಾ ನೋಡೋ
ಹಸಿರ ಇಸಲೆಯ ನಡುವೆ ನುಸುಳಿ ಜಾರಿಹುದು
ಬೀಸುವ ಸುಳಿಗಾಳಿಗೆ ನಾಟ್ಯವಾಡುತ ನಕ್ಕಿಹುದು

ಕೇಕೆ ಹಾಕುತ್ತ ಗೆಳೆಯರ ಕೂಗಿ ಕರೆಯೋಣ
ಹಕ್ಕಿಯ ಹಾಡಿಗೆ ತಾಳವ ಹಾಕೋಣ
ಕುಣಿ ಕುಣಿ ಕುಣಿ ಕುಣಿದು ನಲಿಯೋಣ
ಕೈಯಿಗೆ ಕೈ ಹಿಡಿದು ಸಂಗವ ಮಾಡೋಣ

ರಾಸಿ ಮರಳಿನ ಮೇಲೆ ಮೈಯ ಹಾಸೋಣ
ಸೂಸಿ ಬೀಸುವ ಗಾಳಿಯಲಿ ತೇಲಿ ಹೋಗೋಣ
ತೇಲೋ ಮೋಡ ಹಿಡಿಯಲು ಹೊಂಚ ಹಾಕೋಣ
ಹಿಡಿದು ಇಳಿಸಿ ತಂದು ಧರೆಗೆ ನೀರ ಉಣಿಸೋಣ

ಆಲದ ಮರವೇರುತ ಮರಕೋತಿ ಆಟ ಆಡೋಣ
ಮಾವಿನ ತೊಟಕೆ ನುಗ್ಗಿ ಹಣ್ಣು ಕೀಳೋಣ
ಬೆಟ್ಟದ ತುದಿಗೆ ಏರಿ ಬುಕ್ಕಿ ಹಣ್ಣು ಹುಡುಕೋಣ
ಬಾವಿ ನೀರಗೆ ಧುಮುಕಿ ಈಜಿ ತಣಿಯೋಣ

ಕೆರೆಯ ಅಂಗಳದಾಗೆ ಚಿನ್ನಿ ದಂಡವ ಆಡಿ
ಗೌಡರ ಕೇರಿಯಾಗೆ ಲಗೋರಿಯ ಹೂಡಿ
ಗುಡಿಯ ಸಾಲಲ್ಲಿ ಅವಿತು ಕಣ್ಣು ಮುಚ್ಚಾಲೆ ಆಡಿ
ಸೇರೋಣ ಮನೆಯನ್ನ ಸರ ಸರನೆ ಓಡಿ

ಬಾರೋ ಅಂಗಳಕೆ ಬೇಗ ದುಗುಡ ದೂರ ದೂಡಿ
ಹೂಡಿ ಸಾಗಿಸೋಣ ಬದುಕು ಆಡಿ ಆಡಿ


ಬೆಲೆ ಕಟ್ಟಲಾರದ ಬಾಂಧವ್ಯದ ಬಗ್ಗೆ ಹೇಳಿದ್ದು ಸೀಮಾ

ಅಕ್ಕ- ತಂಗಿ, ಅಕ್ಕ- ತಮ್ಮ
ಅಣ್ಣ- ತಂಗಿ, ಅಣ್ಣ-ತಮ್ಮ
ಎಂಬೆಲ್ಲಾ ಬಾಂಧವ್ಯದ ಬಲೆ.

ಅನುಭವಿಸಿದವರೆನ್ನುವರು,
ಕಟ್ಟಲಾರೆವು ನಾವಿದಕ್ಕೆ ಬೆಲೆ.

ಅನುಭವಿಸದವರೆನ್ನುವರು,
ನಮಗಿಲ್ಲವಾಯಿತು ಈ ಅಮೃತದ ಸೆಲೆ.


ಸತೀಶ ಹೇಳಿದ್ದು ಚಿಂತೇ ಬೇಡಾ ತಮ್ಮಾ

ಇಬ್ರೂ ರಸ್ತೆ ದಾಟೋದ್ರಿಂದ
ದೊಡ್ಡೋಳಾದ ನಾನೇ ಆ ಕಡೆ ಈ ಕಡೆ
ನೋಡಿ ಕೈ ಹಿಡಿದ್ ನಡೆಸ್ತೀನ್ ನಿನ್ನ
ಚಿಂತೇ ಬೇಡಾ ತಮ್ಮಾ.

ಇಬ್ರೂ ಮುಂದೆ ಹೋಗೋದಿದೆ
ಸದಾ ಜೊತೆಯಾಗಿರೋ ನಾನೇ ಇಂದು
ಯೋಚಿಸಿ ಮುಂದೆ ಕರಕೊಂಡ್ ಹೋಗ್ತೀನ್ ನಿನ್ನ
ಚಿಂತೇ ಬೇಡಾ ತಮ್ಮಾ.

ಈ ಕಡೆ ಸಲೀಸೀದೆ ಆ ಕಡೆ ಏನೋ
ಎಂಬ ಯೋಚನೆ ಬಿಟ್ಟು ಕೈ ಹಿಡಿದಿರು
ನೀನೇ ಮುಂದಕೆ ಹೆಜ್ಜೆ ಹಾಕೋವಂತೆ ಏನೂ
ಚಿಂತೇ ಬೇಡಾ ತಮ್ಮಾ.

5 comments:

ಸುಪ್ತದೀಪ್ತಿ suptadeepti said...

ನನ್ನ ಕೈಯ ಹಿಡಿಯುತ
ಎರಡು ಹೆಜ್ಜೆ ನಡೆಯುತ
ಸಾಗು ಮುಂದು ಮುಂದಕೆ, ನನ್ನ ತಮ್ಮ.

ಪುಟ್ಟ ಪಾದ ಎತ್ತುತ
ದಿಟ್ಟ ದಿಕ್ಕ ಹುಡುಕುತ
ಜೊತೆಯಾಗಿ ನಡೆಯುವ, ನನ್ನ ತಮ್ಮ.

ಜಗದ ಅಗಲ ಅಳೆಯುವ
ಜನರ ನೋಟ ಸೆಳೆಯುವ
ಎಲ್ಲೆ ಮೀರಿ ಬೆಳೆಯುವ, ನನ್ನ ತಮ್ಮ.

ದಾರಿ ತೋರ ಬಲ್ಲೆನು
ಭಾರ ಎತ್ತಬಲ್ಲೆನು
ನಿನ್ನ ಹೆಗಲಿಗೆಣೆಯಾಗಿ, ನನ್ನ ತಮ್ಮ.

ಕಾಲ ಇಲ್ಲೆ ನಿಲ್ಲಲಿ
ನಾಳೆ ನಮ್ಮ ಕಣ್ಣಲಿ
ಸೂರ್ಯ ಚಂದ್ರ ನಾವೇ ಇನ್ನು, ನೋಡು ತಮ್ಮ.

sunaath said...

ಸುಪ್ತದೀಪ್ತಿಯವರ ಕವನ ಭಾವಪೂರ್ಣವಾಗಿದೆ. ಅಭಿನಂದನೆಗಳು.

ಕುಕೂಊ.. said...

ಬಾರೋ ಅಂಗಳಕೆ

ಬಾರೋ ಅಂಗಳಕೆ ಓಡುತ್ತಾ ಬಾರೋ
ಬೆಳಕು ಚೆಲ್ಲಿದೆ ಧರೆಯ ತುಂಬಾ ನೋಡೋ
ಹಸಿರ ಇಸಲೆಯ ನಡುವೆ ನುಸುಳಿ ಜಾರಿಹುದು
ಬೀಸುವ ಸುಳಿಗಾಳಿಗೆ ನಾಟ್ಯವಾಡುತ ನಕ್ಕಿಹುದು

ಕೇಕೆ ಹಾಕುತ್ತ ಗೆಳೆಯರ ಕೂಗಿ ಕರೆಯೋಣ
ಹಕ್ಕಿಯ ಹಾಡಿಗೆ ತಾಳವ ಹಾಕೋಣ
ಕುಣಿ ಕುಣಿ ಕುಣಿ ಕುಣಿದು ನಲಿಯೋಣ
ಕೈಯಿಗೆ ಕೈ ಹಿಡಿದು ಸಂಗವ ಮಾಡೋಣ

ರಾಸಿ ಮರಳಿನ ಮೇಲೆ ಮೈಯ ಹಾಸೋಣ
ಸೂಸಿ ಬೀಸುವ ಗಾಳಿಯಲಿ ತೇಲಿ ಹೋಗೋಣ
ತೇಲೋ ಮೋಡ ಹಿಡಿಯಲು ಹೊಂಚ ಹಾಕೋಣ
ಹಿಡಿದು ಇಳಿಸಿ ತಂದು ಧರೆಗೆ ನೀರ ಉಣಿಸೋಣ

ಆಲದ ಮರವೇರುತ ಮರಕೋತಿ ಆಟ ಆಡೋಣ
ಮಾವಿನ ತೊಟಕೆ ನುಗ್ಗಿ ಹಣ್ಣು ಕೀಳೋಣ
ಬೆಟ್ಟದ ತುದಿಗೆ ಏರಿ ಬುಕ್ಕಿ ಹಣ್ಣು ಹುಡುಕೋಣ
ಬಾವಿ ನೀರಗೆ ಧುಮುಕಿ ಈಜಿ ತಣಿಯೋಣ

ಕೆರೆಯ ಅಂಗಳದಾಗೆ ಚಿನ್ನಿ ದಂಡವ ಆಡಿ
ಗೌಡರ ಕೇರಿಯಾಗೆ ಲಗೋರಿಯ ಹೂಡಿ
ಗುಡಿಯ ಸಾಲಲ್ಲಿ ಅವಿತು ಕಣ್ಣು ಮುಚ್ಚಾಲೆ ಆಡಿ
ಸೇರೋಣ ಮನೆಯನ್ನ ಸರ ಸರನೆ ಓಡಿ

ಬಾರೋ ಅಂಗಳಕೆ ಬೇಗ ದುಗುಡ ದೂರ ದೂಡಿ
ಹೂಡಿ ಸಾಗಿಸೋಣ ಬದುಕು ಆಡಿ ಆಡಿ

Seema S. Hegde said...

ಅಕ್ಕ- ತಂಗಿ, ಅಕ್ಕ- ತಮ್ಮ
ಅಣ್ಣ- ತಂಗಿ, ಅಣ್ಣ-ತಮ್ಮ
ಎಂಬೆಲ್ಲಾ ಬಾಂಧವ್ಯದ ಬಲೆ.

ಅನುಭವಿಸಿದವರೆನ್ನುವರು,
ಕಟ್ಟಲಾರೆವು ನಾವಿದಕ್ಕೆ ಬೆಲೆ.

ಅನುಭವಿಸದವರೆನ್ನುವರು,
ನಮಗಿಲ್ಲವಾಯಿತು ಈ ಅಮೃತದ ಸೆಲೆ.

Satish said...

ಚಿಂತೇ ಬೇಡಾ ತಮ್ಮಾ

ಇಬ್ರೂ ರಸ್ತೆ ದಾಟೋದ್ರಿಂದ
ದೊಡ್ಡೋಳಾದ ನಾನೇ ಆ ಕಡೆ ಈ ಕಡೆ
ನೋಡಿ ಕೈ ಹಿಡಿದ್ ನಡೆಸ್ತೀನ್ ನಿನ್ನ
ಚಿಂತೇ ಬೇಡಾ ತಮ್ಮಾ.

ಇಬ್ರೂ ಮುಂದೆ ಹೋಗೋದಿದೆ
ಸದಾ ಜೊತೆಯಾಗಿರೋ ನಾನೇ ಇಂದು
ಯೋಚಿಸಿ ಮುಂದೆ ಕರಕೊಂಡ್ ಹೋಗ್ತೀನ್ ನಿನ್ನ
ಚಿಂತೇ ಬೇಡಾ ತಮ್ಮಾ.

ಈ ಕಡೆ ಸಲೀಸೀದೆ ಆ ಕಡೆ ಏನೋ
ಎಂಬ ಯೋಚನೆ ಬಿಟ್ಟು ಕೈ ಹಿಡಿದಿರು
ನೀನೇ ಮುಂದಕೆ ಹೆಜ್ಜೆ ಹಾಕೋವಂತೆ ಏನೂ
ಚಿಂತೇ ಬೇಡಾ ತಮ್ಮಾ.

ಪ್ರತೀ ರಸ್ತೆ ದಾಟಬೇಕು ಎಲ್ಲವನ್ನೂ
ಗೆಲ್ಲಬೇಕು ಅನ್ನೋದೇ ಬದುಕಂತೆ
ಮುಂದೆ ದಾರಿಗಳು ಬದಲಾಗಿರುವುದು ನಿಜವಾದರೂ
ಚಿಂತೇ ಬೇಡಾ ತಮ್ಮಾ.