Monday 21 January, 2008

ಚಿತ್ರ- ೩೭



ಕ್ರೂರ ಇತಿಹಾಸ

ಪ್ರೇಮಾಲಯವಲ್ಲದ ದೇವಾಲಯವಿದು
ಶಿವಾಲಯದ ಮೇಲೊಂದು ಸಮಾದಿ ಇಂದು
ಅಳಿದ ವೇದ ಮಂತ್ರ ಜಪ ತಪ ಅಂದು
ಪುಸಿ ಪ್ರೇಮಗೀತೆಯ ಹುಸಿ ಚರಣವಿಂದು

ವಿಕೃತರ ಅಟ್ಟಹಾಸ ಇತಿಹಾಸ ಮೆಟ್ಟಿನಿಂತು
ವಿಕಾರ ಮನಸ್ಸುಗಳ ರೂಪಾಂತರ ಇಂದು
ಶಿವನಾಮ ಜಪನಾಮ ಪುಣ್ಯಪೂಜೆ ಅಂದು
ಷಹಜಾನ್ ಮಮತಾಜ್ ಪ್ರೇಮ ಪೂಜೆ ಇಂದು

ತೇಜೋಮಂದಿರ ತೇಜೋವದೆಯಾಗಿ 'ತಾಜ' ಅವತಾರ
ಅರಿಯದ ಜನಸ್ತೋಮ ನೆರದಿಹದು ಸುತ್ತಲು
ಮಾಡಿದೆ ಗುಣಗಾನ ಷಹಜಾನನ ಅಮರ ಪ್ರೇಮ
ಮರುಗಿದೆ ಮಮತಾಜಳಿಲ್ಲದ ವಿರಹದ ಕ್ಷಣ ನೆನದು

ಕ್ರೂರ ಇತಿಹಾಸ ನೆನದ ಸಾಧುವಿನ ಮನಸ್ಸೊಂದು
ಕೋಟಿ ಕೋಟಿವಾರಸುದಾರರಿದ್ದರು ಅಳಿದ ತನ್ನತನವನ್ನು
ಮಿಡಿದು ನರಳುತ್ತಿದೆ ತಿರುಚಿದ ಗತನೆನೆದು
ಮೌನಿಸಿ ಧ್ಯಾನವ ಅರಿಸಿ ಕುಳಿತಿದೆ ಇಲ್ಲಿಂದು

ಯಾರು ಹೊಣೆಯಾರು ಬದಲಾದ ಇತಿಹಾಸಕ್ಕೆ
ಅಕ್ರಮ ಅಟ್ಟಹಾಸದಿ ಮೆಟ್ಟಿ ಬಂದ ಮೊಘಲರೋ
ದಿಟ್ಟತನದಿ ಮೆಟ್ಟಿ ನಿಂತು ನೀಚರ ಹುಟ್ಟಡಗಿಸದೆ
ಅತ್ಮಸಾಕ್ಷಿಯ ಮರೆತು ಸೋತುಹೋದ ನಾವೆಲ್ಲರೋ

ವಸುದೇವಕುಟುಂಬಕಮ್ ವಿಶ್ವವೇ ಕುಂಟುಂಬವೆಂದರಸಿ
ಸರ್ವೇ ಭವಂತು ಸುಖಿನ ಸರ್ವೇ ಸಂತು ನಿರಾಮಯ
ಸರ್ವೇ ಭದ್ರಾಣಿಪಶ್ಯಂತು ಮಾ ಕಶ್ಚಿದುಃಖ ಭಾಗ್ ಭವೇತ್
ಜಗವೆಲ್ಲ ಸುಖಿಯಾಗಿರಲಿ ಎಂಬ ವೇದವಾಣಿಯ ಭಾರತ ಸೋಲಲು ಕಾರಣರಾರು

ಗತವನ್ನೇ ನೆನೆಯುತ್ತ ವಾಸ್ತವ ಮರೆಯುತ್ತ
ಜಾತಿ ಮತ ಪಂತ ಮೇಲುಕೀಳಿನ ನಡುವೆ ಸಿಲುಕಿ
ನಮ್ಮತನವ ಮರೆತು ಪರನಿಂದನೆಯ ಮಾಡುತ್ತ
ಮತ್ತೆ ಭಾರತದ ಸ್ವರ್ಣ ಇತಿಹಾಸ ಕಟ್ಟವ ಕನಸು ಕಾಣದ ನಾವು ಕಾರಣರು

ಇದು ಅಲ್ಲ ಇದು ಅಲ್ಲ ನನ್ನ ಕನಸಿನ ಭಾರತ
ವೇದ ವೇದಾಂತ ಮೊಳಗಿಸಿ ಬೆಳಗಿದ ಭಾರತ
ಇಂದು ಕಾಣುತ್ತಿರುವುದು ಬರಿ ತೋರಿಕೆಯ ಬರಿದಾದ ಭಾರತ
ಬನ್ನಿ ಕೈಜೋಡಿಸಿ ಕಟ್ಟೋಣ ವೇದಾಂತ ಭಾರತ ಬರೆಯೋಣ ಮತ್ತೊಮ್ಮೆ ಹೊಸ ಇತಿಹಾಸ
- ಕುಮಾರಸ್ವಾಮಿ ಕಡಾಕೊಳ್ಳ


ಒಂದಷ್ಟು ಸ್ವಗತಗಳು

ವರ್ಷವೆಷ್ಟುರುಳಿದವೊ ಮುಮ್ತಾಜಳ ಗೋರಿಯಾಗಿ
ಮೂರುನೂರರ ಮೇಲೆ ಹತ್ತಾರಾಗಿರಬೇಕು
ಅಮೃತಶಿಲೆಯ ಬಿಳುಪು ಹೊಳಪು; ಪಚ್ಚೆ
ಹರಳು, ಮುತ್ತು ರತ್ನದ ಕುಸುರಿ ಒನಪು
ಸಿರಿ ಸಂಪತ್ತಿನ ಸೂರೆ ಅದೆಷ್ಟೆ ಇರಲಿ,
ಅರಸನೊಲವಿನ ಆಚ್ಛಾದನೆಯಾಗಿರದಿದ್ದರೆ
ಗೋರಿ ಸುತ್ತಿದ ಬಿಳಿ ಬಟ್ಟೆಯಷ್ಟೆ ತಾನೆ!

ತಾಜ್ ಮಹಲೊ ಇದು ತೇಜೋ ಮಹಾಲಯವೊ
ಗೋರಿ ಮುಮ್ತಾಜಳದ್ದೊ, ಹಿಂದೂ ಇತಿಹಾಸದ್ದೊ
ಕಾಲಗರ್ಭದೊಳಿಣುಕಿ ಹೇಳಬಾರದೆ ಕಂಡವರು
’ಕಮಂಡಲ’ದ ನೀರಿಗೆನ್ನ ತಪವನೆರೆದರೆ ಸಿಕ್ಕೀತೆ
ಇತಿಹಾಸದ ಆ ಪುಟದ ಸತ್ಯ ನನಗೇನಾದರು?

ಹಸಿರು ಹಾಸಿನ ಕೊನೆಗೆ ಹೊಳೆವ ಮಹಲು
ನೀಲಿ ಬಾನ ಬೆಳಗಿರುವ ಪರಿ ನೋಡ
ಚಿತ್ರಕಾರನ ಕೈಚಳಕವೋ ಇದೆ ನಿಜರೂಪವೊ;
ನಂಬಲಾರೆ, ಹಿಂದೊಮ್ಮೆ ಸೆಪ್ಟೆಂಬರಿನಾರ್ದ್ರತೆ,
ಉರಿವ ಸೂರ್ಯ, ಸುರಿವ ಬೆವರಿಗೆ ತೊಯ್ದ
ಅರಿವೆ ಅಂಟಿದ ಮೈ ಜಿಗಿಗೆ ಮನ ರೋಸಿ
’ಇದೇನಾ ತಾಜ್’ ಎಂದಸಡ್ಢೆಯಿಂದಂದದ್ದು
ಇದರ ಮುಂದೆ ನಿಂತೇ ಎಂದು!
- ಅನಿಲ ಜೋಶಿ


ಮಹಲು ಮನಸ್ಸು

ಯಾರು ಏನು ಬೇಕಾದರೂ ಮಾಡಲಿ
ಅವರವರ ಗೋರಿಗಳನ್ನ ಮಾತ್ರ ಚೆನ್ನಾಗಿ
ಕಟ್ಟಿಕೋಬೇಕು ಅನ್ನೋದಕ್ಕೆ ಈ ಮಹಲೇ ಸಾಕ್ಷಿ
ಬೆಳ್ಳಗೆ ಬೆಳಗೋ ಮಿನಾರಗಳಿಂದ ಸ್ವಲ್ಪ
ದೂರದಲ್ಲೇ ಬೆತ್ತಲಾಗಿ ಹೆಚ್ಚು ಜನ ನೋಡದೇ
ಬಿದ್ದುಕೊಂಡಿರುವ ಅಕ್ಬರನ ದೇಹದ ಪಕ್ಷಿ.

ಹಾಸಿಕೊಂಡ ಹಸಿರ ಮೇಲೆ ಕೂತು ಮಲಗುವ ಜನ
ಉರಿ ಬಿಸಿಲ ಜಳಕದ ಹಿಂದಿನ ಛಳಿಗೆ ಹೊದ್ದ ಮನ.

ಅಳಿದ ನಮ್ಮವರಿಗೆ ಕಟ್ಟಿದ್ದೇವೆ ಮಿನಾರಗಳನು ಕ್ಷಮಿಸಿ
ನೀವು ಕಟ್ಟುವುದೇನೂ ಬೇಡ ನಿಮ್ಮ ಕಸವನ್ನು ಎತ್ತಿ ಬೀಸಿ
ಅಷ್ಟೇ ಎಂದು ಬದಿಗೆ ತವಕದಿ ಚಿಂದಿ ಆಯುವ ಮಂದಿ
ಯಾರೋ ಉಸಿರು ತೊರೆದು ಮಲಗಿದಲ್ಲಿ ಪ್ರೇಮವಿರಬಹುದು
ಹುಡುಕುತ್ತಾ ತುಡುಗು ದನಗಳು ಹಾದು ಬರಬಹುದು
ಹಲಬುವ ಮನಸುಗಳೇನೇ ಇದ್ದರೂ ಅವು ಗುಂಬಜದ ಬಂಧಿ.

ಹರಿಯುವ ಯಮುನೆಗೆ ಗೊತ್ತು ಕರ್ಕಷ ಕಾರ್ಖಾನೆಗೆಳ ಗೋಳು
ಕಾರ್ಮೋಡವನೂ ಬಿಟ್ಟಿಲ್ಲ ಸುತ್ತಿ ತಿರುಗುವ ಧೂಳು.

ಯಾರು ಸತ್ತರೇನು ಬಿಟ್ಟರೇನು ಮಹಲಿನ ಮನಸನು ಬಲ್ಲರೇನು
ಗುಂಬಜವ ತೋರಿಸಲು ಬಾಗಿದ ಕಂಭಗಳ ಕಷ್ಟ ಅರಿತಿಹರೇನು.
- ಸತೀಶ

3 comments:

ಕುಕೂಊ.. said...

~~``~~ಕ್ರೂರ ಇತಿಹಾಸ~~``~~

ಪ್ರೇಮಾಲಯವಲ್ಲದ ದೇವಾಲಯವಿದು
ಶಿವಾಲಯದ ಮೇಲೊಂದು ಸಮಾದಿ ಇಂದು
ಅಳಿದ ವೇದ ಮಂತ್ರ ಜಪ ತಪ ಅಂದು
ಪುಸಿ ಪ್ರೇಮಗೀತೆಯ ಹುಸಿ ಚರಣವಿಂದು

ವಿಕೃತರ ಅಟ್ಟಹಾಸ ಇತಿಹಾಸ ಮೆಟ್ಟಿನಿಂತು
ವಿಕಾರ ಮನಸ್ಸುಗಳ ರೂಪಾಂತರ ಇಂದು
ಶಿವನಾಮ ಜಪನಾಮ ಪುಣ್ಯಪೂಜೆ ಅಂದು
ಷಹಜಾನ್ ಮಮತಾಜ್ ಪ್ರೇಮ ಪೂಜೆ ಇಂದು

ತೇಜೋಮಂದಿರ ತೇಜೋವದೆಯಾಗಿ 'ತಾಜ' ಅವತಾರ
ಅರಿಯದ ಜನಸ್ತೋಮ ನೆರದಿಹದು ಸುತ್ತಲು
ಮಾಡಿದೆ ಗುಣಗಾನ ಷಹಜಾನನ ಅಮರ ಪ್ರೇಮ
ಮರುಗಿದೆ ಮಮತಾಜಳಿಲ್ಲದ ವಿರಹದ ಕ್ಷಣ ನೆನದು

ಕ್ರೂರ ಇತಿಹಾಸ ನೆನದ ಸಾಧುವಿನ ಮನಸ್ಸೊಂದು
ಕೋಟಿ ಕೋಟಿವಾರಸುದಾರರಿದ್ದರು ಅಳಿದ ತನ್ನತನವನ್ನು
ಮಿಡಿದು ನರಳುತ್ತಿದೆ ತಿರುಚಿದ ಗತನೆನೆದು
ಮೌನಿಸಿ ಧ್ಯಾನವ ಅರಿಸಿ ಕುಳಿತಿದೆ ಇಲ್ಲಿಂದು

ಯಾರು ಹೊಣೆಯಾರು ಬದಲಾದ ಇತಿಹಾಸಕ್ಕೆ
ಅಕ್ರಮ ಅಟ್ಟಹಾಸದಿ ಮೆಟ್ಟಿ ಬಂದ ಮೊಘಲರೋ
ದಿಟ್ಟತನದಿ ಮೆಟ್ಟಿ ನಿಂತು ನೀಚರ ಹುಟ್ಟಡಗಿಸದೆ
ಅತ್ಮಸಾಕ್ಷಿಯ ಮರೆತು ಸೋತುಹೋದ ನಾವೆಲ್ಲರೋ

ವಸುದೇವಕುಟುಂಬಕಮ್ ವಿಶ್ವವೇ ಕುಂಟುಂಬವೆಂದರಸಿ
ಸರ್ವೇ ಭವಂತು ಸುಖಿನ ಸರ್ವೇ ಸಂತು ನಿರಾಮಯ
ಸರ್ವೇ ಭದ್ರಾಣಿಪಶ್ಯಂತು ಮಾ ಕಶ್ಚಿದುಃಖ ಭಾಗ್ ಭವೇತ್
ಜಗವೆಲ್ಲ ಸುಖಿಯಾಗಿರಲಿ ಎಂಬ ವೇದವಾಣಿಯ ಭಾರತ ಸೋಲಲು ಕಾರಣರಾರು

ಗತವನ್ನೇ ನೆನೆಯುತ್ತ ವಾಸ್ತವ ಮರೆಯುತ್ತ
ಜಾತಿ ಮತ ಪಂತ ಮೇಲುಕೀಳಿನ ನಡುವೆ ಸಿಲುಕಿ
ನಮ್ಮತನವ ಮರೆತು ಪರನಿಂದನೆಯ ಮಾಡುತ್ತ
ಮತ್ತೆ ಭಾರತದ ಸ್ವರ್ಣ ಇತಿಹಾಸ ಕಟ್ಟವ ಕನಸು ಕಾಣದ ನಾವು ಕಾರಣರು

ಇದು ಅಲ್ಲ ಇದು ಅಲ್ಲ ನನ್ನ ಕನಸಿನ ಭಾರತ
ವೇದ ವೇದಾಂತ ಮೊಳಗಿಸಿ ಬೆಳಗಿದ ಭಾರತ
ಇಂದು ಕಾಣುತ್ತಿರುವುದು ಬರಿ ತೋರಿಕೆಯ ಬರಿದಾದ ಭಾರತ
ಬನ್ನಿ ಕೈಜೋಡಿಸಿ ಕಟ್ಟೋಣ ವೇದಾಂತ ಭಾರತ ಬರೆಯೋಣ ಮತ್ತೊಮ್ಮೆ ಹೊಸ ಇತಿಹಾಸ

ಕುಕೂ...ಕುಮಾರಸ್ವಾಮಿ ಕಡಾಕೊಳ್ಳ. ಪುಣೆ

Unknown said...

ಒಂದಷ್ಟು ಸ್ವಗತಗಳು

ವರ್ಷವೆಷ್ಟುರುಳಿದವೊ ಮುಮ್ತಾಜಳ ಗೋರಿಯಾಗಿ
ಮೂರುನೂರರ ಮೇಲೆ ಹತ್ತಾರಾಗಿರಬೇಕು
ಅಮೃತಶಿಲೆಯ ಬಿಳುಪು ಹೊಳಪು; ಪಚ್ಚೆ
ಹರಳು, ಮುತ್ತು ರತ್ನದ ಕುಸುರಿ ಒನಪು
ಸಿರಿ ಸಂಪತ್ತಿನ ಸೂರೆ ಅದೆಷ್ಟೆ ಇರಲಿ,
ಅರಸನೊಲವಿನ ಆಚ್ಛಾದನೆಯಾಗಿರದಿದ್ದರೆ
ಗೋರಿ ಸುತ್ತಿದ ಬಿಳಿ ಬಟ್ಟೆಯಷ್ಟೆ ತಾನೆ!

ತಾಜ್ ಮಹಲೊ ಇದು ತೇಜೋ ಮಹಾಲಯವೊ
ಗೋರಿ ಮುಮ್ತಾಜಳದ್ದೊ, ಹಿಂದೂ ಇತಿಹಾಸದ್ದೊ
ಕಾಲಗರ್ಭದೊಳಿಣುಕಿ ಹೇಳಬಾರದೆ ಕಂಡವರು
’ಕಮಂಡಲ’ದ ನೀರಿಗೆನ್ನ ತಪವನೆರೆದರೆ ಸಿಕ್ಕೀತೆ
ಇತಿಹಾಸದ ಆ ಪುಟದ ಸತ್ಯ ನನಗೇನಾದರು?

ಹಸಿರು ಹಾಸಿನ ಕೊನೆಗೆ ಹೊಳೆವ ಮಹಲು
ನೀಲಿ ಬಾನ ಬೆಳಗಿರುವ ಪರಿ ನೋಡ
ಚಿತ್ರಕಾರನ ಕೈಚಳಕವೋ ಇದೆ ನಿಜರೂಪವೊ;
ನಂಬಲಾರೆ, ಹಿಂದೊಮ್ಮೆ ಸೆಪ್ಟೆಂಬರಿನಾರ್ದ್ರತೆ,
ಉರಿವ ಸೂರ್ಯ, ಸುರಿವ ಬೆವರಿಗೆ ತೊಯ್ದ
ಅರಿವೆ ಅಂಟಿದ ಮೈ ಜಿಗಿಗೆ ಮನ ರೋಸಿ
’ಇದೇನಾ ತಾಜ್’ ಎಂದಸಡ್ಢೆಯಿಂದಂದದ್ದು
ಇದರ ಮುಂದೆ ನಿಂತೇ ಎಂದು!

Satish said...

ಮಹಲು ಮನಸ್ಸು

ಯಾರು ಏನು ಬೇಕಾದರೂ ಮಾಡಲಿ
ಅವರವರ ಗೋರಿಗಳನ್ನ ಮಾತ್ರ ಚೆನ್ನಾಗಿ
ಕಟ್ಟಿಕೋಬೇಕು ಅನ್ನೋದಕ್ಕೆ ಈ ಮಹಲೇ ಸಾಕ್ಷಿ
ಬೆಳ್ಳಗೆ ಬೆಳಗೋ ಮಿನಾರಗಳಿಂದ ಸ್ವಲ್ಪ
ದೂರದಲ್ಲೇ ಬೆತ್ತಲಾಗಿ ಹೆಚ್ಚು ಜನ ನೋಡದೇ
ಬಿದ್ದುಕೊಂಡಿರುವ ಅಕ್ಬರನ ದೇಹದ ಪಕ್ಷಿ.

ಹಾಸಿಕೊಂಡ ಹಸಿರ ಮೇಲೆ ಕೂತು ಮಲಗುವ ಜನ
ಉರಿ ಬಿಸಿಲ ಜಳಕದ ಹಿಂದಿನ ಛಳಿಗೆ ಹೊದ್ದ ಮನ.

ಅಳಿದ ನಮ್ಮವರಿಗೆ ಕಟ್ಟಿದ್ದೇವೆ ಮಿನಾರಗಳನು ಕ್ಷಮಿಸಿ
ನೀವು ಕಟ್ಟುವುದೇನೂ ಬೇಡ ನಿಮ್ಮ ಕಸವನ್ನು ಎತ್ತಿ ಬೀಸಿ
ಅಷ್ಟೇ ಎಂದು ಬದಿಗೆ ತವಕದಿ ಚಿಂದಿ ಆಯುವ ಮಂದಿ
ಯಾರೋ ಉಸಿರು ತೊರೆದು ಮಲಗಿದಲ್ಲಿ ಪ್ರೇಮವಿರಬಹುದು
ಹುಡುಕುತ್ತಾ ತುಡುಗು ದನಗಳು ಹಾದು ಬರಬಹುದು
ಹಲಬುವ ಮನಸುಗಳೇನೇ ಇದ್ದರೂ ಅವು ಗುಂಬಜದ ಬಂಧಿ.

ಹರಿಯುವ ಯಮುನೆಗೆ ಗೊತ್ತು ಕರ್ಕಷ ಕಾರ್ಖಾನೆಗೆಳ ಗೋಳು
ಕಾರ್ಮೋಡವನೂ ಬಿಟ್ಟಿಲ್ಲ ಸುತ್ತಿ ತಿರುಗುವ ಧೂಳು.

ಯಾರು ಸತ್ತರೇನು ಬಿಟ್ಟರೇನು ಮಹಲಿನ ಮನಸನು ಬಲ್ಲರೇನು
ಗುಂಬಜವ ತೋರಿಸಲು ಬಾಗಿದ ಕಂಭಗಳ ಕಷ್ಟ ಅರಿತಿಹರೇನು.