Monday 4 February, 2008

ಚಿತ್ರ- ೩೯


ಈ ಚಿತ್ರವನ್ನು 'ಅನಿಕೇತನ' ಅವರು ಟೋಕಿಯೋದ ಮೇಜಿ ಜಿಂಗು ಉದ್ಯಾನವನದಲ್ಲಿ ತಮ್ಮ ಕೆಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಕುಮಾರಸ್ವಾಮಿಯವರು ತಮ್ಮ “ಮೂವರಲ್ಲಿ ಯಾರು ಹೆಚ್ಚು?” ಎನ್ನುವ ಕವನದಲ್ಲಿ ಮೂರು ಮನಸ್ಸಿನ ನಡುವಿನ ವಾದ ವಿವಾದವನ್ನು ಈ ಪರಿ ಹಂಚಿಕೊಂಡಿದ್ದಾರೆ.

ಮೂರು ಮನಸ್ಸುಗಳ ನಡುವೆ
ನಡೆದಿದೆ ವಾದ ವಿವಾದ
ಬದುಕೆಂದರೇನು ಶ್ರೇಷ್ಟ ಯಾವುದು
ನಾನೆ ಹೆಚ್ಚು ನನ್ನ ವಾದವೆ ಹಚ್ಚು
ಮೂವರಲಿ ಒಂದೇ ಕೆಚ್ಚು ನಾನೆ ಹಚ್ಚು

ಮನಸ್ಸು ಒಂದು..
ಸಾಲು ಬೆಟ್ಟ ಹಬ್ಬಿದ ಹಸಿರು ಒದಿಕೆ
ತರು ಲತೆ ಪುಷ್ಪ ಚೆಲ್ಲಿದಾ ಬಣ್ಣ
ಕೋಗಿಲೆ ಕಾಜಾಣ ಗುಬ್ಬಚ್ಚಿ ಗಿಡುಗ
ಗಂದರ್ವ ಭಾಷೆಯ ಗೀತೆ ಗಾಯನ
ಕೇಳಿ ನಲಿಯುತ ಮಾಡುವ ಪಯಣ
ಜಿಂಕೆ ಸಾರಂಗ ನರಿ ತೋಳ ಹುಲಿ
ನೆಗೆದೋಟ ಘರ್ಜನೆ ನಡೆಯುವ ಬೇಟೆ
ಪ್ರಕೃತಿ ಸಿರಿ ಸಂತೆಯಲ್ಲಿ ಜಾರಿ
ಅವರಂತೆ ನಾವಾಗಿ ನಾವೆ ಅವರಾಗಿ
ಸವಿದು ಮುಸ್ಸಂಜೆ ಹೊನ್ನ ಬಣ್ಣ
ತಾರೆ ತುಂಬಿದ ನಭೋಮಂಡಲ
ನೀಲಾಸಾಗರ ಏರಿ ಬರುವ ತೆರೆ
ನೋಡಿ ಸವಿಯುತ್ತ ನಾವೆ ಪ್ರಕೃತಿಯಾಗಿ
ಎಲ್ಲದರೊಳಗೊಂದಾಗಿ ಜೀವಿಸುವುದೇ
ನೈಜ ನಿಜ ಕಲೆಯೇ ಬದುಕು

ಮನಸ್ಸು ಎರಡು

ಪ್ರೀತಿ ಸರಸ ಸಲ್ಲಾಪ
ಬಾಹುಬಂದನ ಬಿಸಿ ಅಪ್ಪುಗೆ
ಕೆಂದುಟಿಯ ಸವಿ ಚುಂಬನ
ಚೆಲುವ ಸೌಂದರ್ಯ ನೋಟದೂಟ
ರತಿಯಾಟ ಶೃಂಗಾರ ಮಾಯಾವಿ
ರಸ ನಿಮಿಷ ಸವಿಯಲು ರಸದೂಟ
ಇದುವೇ ನಿಜವಾದ ರಸ ಜೀವನ

ಮನಸ್ಸು ಮೂರು ...

ಕಾಂಚಣ ಝಣ ಝಣ ಕೈಲಾಸ
ಅಧಿಕಾರ ಅಕ್ರಮಣ ಗಳಿಕೆ ಉಳಿಕೆ
ಒಡೆಯನಾದರೆ ಹಣ ಆಸ್ತಿಗೆ
ಕಟ್ಟಿದರೆ ಕೋಟಿ ಕೋಟಿ ಕಾಂಚಾಣ ರಾಜ್ಯ
ಶರಣು ಹೊಡೆಯುವರು ಗುಲಾಮರಾಗಿ
ಅನುಭವಿಸುವ ಹಕ್ಕು ನನ್ನದು
ಬೇಕು ಎಲ್ಲದು ಬೇರೆಯವರ ಚಿಂತೆ ಸಲ್ಲದು
ನಾನೇಳಿದಂತೆ ಕೇಳಲು ಹಣದ ತಾಕತ್ತು
ಕರುಣಿಸಿದರೆ ಬದುಕಿಗೇ ಆಪತ್ತು

ಮನುಷ್ಯನಿಗೊಂದು ಮನಸ್ಸು
ಮನಸ್ಸಿಗೊಂದು ನೋಟ
ನೋಟಕ್ಕೆ ಎಲ್ಲರು ದಿಟ
ಯಾರು ಇವರಲ್ಲಿ ಹಚ್ಚು
ನೋಟ ನಿನ್ನಲ್ಲಿ ಬಿಚ್ಚು

ಬದುಕುವ ನಿಜ ಮಾರ್ಗ
ಅರಿಯುವ ರಾಜಮಾರ್ಗ
ಅರಿತು ನಿನ್ನೋಳಗೆ
ನುರಿತು ಬದಿಕಿನೊಳಗೆ

ಬಾಳಿನ ನಿಜ ನೋಟ
ಕಾಣು ನಿನ್ನೋಳಗೆ
ಎಲ್ಲರಿಗೆ ಒಳಿತಾಗುವ
ದಿಟ್ಟ ಅಂತರನೋಟ

"ನಮಗ್ಯಾಕ್ ಅವರವರ ಯಾಚ್ನೆ" ಎನ್ನುವ ಕವನದಲ್ಲಿ ಸತೀಶ ತಮ್ಮ ಎಂದಿನ ಕವನದ ಚಾಪನ್ನು ಮೂಡಿಸಿದ್ದು ಈ ಕೆಳಗಿನಂತೆ:

ಪಶ್ಚಿಮಕ್ಕ್ ನೋಡೋ ಪೂರ್ವದ ಜನ್ರಿಗೆ
ಛಳಿಯಾಗಿರ್ಲಿಕ್ಕ್ ಸಾಕು
ತಮ್ಮದೇ ಹಳೇ ಸ್ವತ್ತೇ ಇದ್ರೂ
ಉಳಿದೋರ್ ವಸ್ತು ಬೇಕು

ಚಿಕ್ಕ ಜಾಗ ಹೆಚ್ಗೆ ಜನ
ಎಲ್ಲಾ ಒಟ್ಗೇ ಕೂತು
ಚೊಕ್ಕ ಜಾಗ ಚಿಕ್ಕ ಜನ
ಅವ್ರು ಆಳಿದ್ದೇ ಬಂತು.

ವಿಶ್ವಕ್ಕೆಲ್ಲ ಶಾಂತಿ ಮಂತ್ರ
ಹಂಚೋಕ್ ಮಾತ್ರ ಮುಂದೆ
ಅಲ್ಲಿಂದಿಲ್ಲಿಗೆ ದಳ್ಳಾಳೀ ಅಂತ
ಸುಳಿದಾಡೋದೇ ದಂದೆ.

ದೂರ್‌ದಲ್ಲಿ ಮರ ಹಿಂದಿನ್ ಬೆಳಕು
ಮುಳುಗೋಗುತ್ತೋ ಏನು
ಎಲ್ಲೋ ಕುಳಿತು ಸಮಯ ಸಾಗ್ಸೋ
ಜನರಿಗೆ ಕಾಣೋ ಬಾನು.

ತಲೆಗೊಂದ್ ಟೋಪಿ ಹೆಗಲಿಗೆ ಚೀಲ
ನಡಿತಿರೋ ಸಮಾಲೋಚ್ನೆ
ಯಾರೋ ಕುಳಿತು ಏನೋ ಮಾಡ್ಲಿ
ನಮಗ್ಯಾಕ್ ಅವರವರ ಯಾಚ್ನೆ.

2 comments:

ಕುಕೂಊ.. said...

ಮೂವರಲಿ ಯಾರು ಹೆಚ್ಚು?

ಮೂರು ಮನಸ್ಸುಗಳ ನಡುವೆ
ನಡೆದಿದೆ ವಾದ ವಿವಾದ
ಬದುಕೆಂದರೇನು ಶ್ರೇಷ್ಟ ಯಾವುದು
ನಾನೆ ಹೆಚ್ಚು ನನ್ನ ವಾದವೆ ಹಚ್ಚು
ಮೂವರಲಿ ಒಂದೇ ಕೆಚ್ಚು ನಾನೆ ಹಚ್ಚು

ಮನಸ್ಸು ಒಂದು..
ಸಾಲು ಬೆಟ್ಟ ಹಬ್ಬಿದ ಹಸಿರು ಒದಿಕೆ
ತರು ಲತೆ ಪುಷ್ಪ ಚೆಲ್ಲಿದಾ ಬಣ್ಣ
ಕೋಗಿಲೆ ಕಾಜಾಣ ಗುಬ್ಬಚ್ಚಿ ಗಿಡುಗ
ಗಂದರ್ವ ಭಾಷೆಯ ಗೀತೆ ಗಾಯನ
ಕೇಳಿ ನಲಿಯುತ ಮಾಡುವ ಪಯಣ
ಜಿಂಕೆ ಸಾರಂಗ ನರಿ ತೋಳ ಹುಲಿ
ನೆಗೆದೋಟ ಘರ್ಜನೆ ನಡೆಯುವ ಬೇಟೆ
ಪ್ರಕೃತಿ ಸಿರಿ ಸಂತೆಯಲ್ಲಿ ಜಾರಿ
ಅವರಂತೆ ನಾವಾಗಿ ನಾವೆ ಅವರಾಗಿ
ಸವಿದು ಮುಸ್ಸಂಜೆ ಹೊನ್ನ ಬಣ್ಣ
ತಾರೆ ತುಂಬಿದ ನಭೋಮಂಡಲ
ನೀಲಾಸಾಗರ ಏರಿ ಬರುವ ತೆರೆ
ನೋಡಿ ಸವಿಯುತ್ತ ನಾವೆ ಪ್ರಕೃತಿಯಾಗಿ
ಎಲ್ಲದರೊಳಗೊಂದಾಗಿ ಜೀವಿಸುವುದೇ
ನೈಜ ನಿಜ ಕಲೆಯೇ ಬದುಕು

ಮನಸ್ಸು ಎರಡು

ಪ್ರೀತಿ ಸರಸ ಸಲ್ಲಾಪ
ಬಾಹುಬಂದನ ಬಿಸಿ ಅಪ್ಪುಗೆ
ಕೆಂದುಟಿಯ ಸವಿ ಚುಂಬನ
ಚೆಲುವ ಸೌಂದರ್ಯ ನೋಟದೂಟ
ರತಿಯಾಟ ಶೃಂಗಾರ ಮಾಯಾವಿ
ರಸ ನಿಮಿಷ ಸವಿಯಲು ರಸದೂಟ
ಇದುವೇ ನಿಜವಾದ ರಸ ಜೀವನ

ಮನಸ್ಸು ಮೂರು ...

ಕಾಂಚಣ ಝಣ ಝಣ ಕೈಲಾಸ
ಅಧಿಕಾರ ಅಕ್ರಮಣ ಗಳಿಕೆ ಉಳಿಕೆ
ಒಡೆಯನಾದರೆ ಹಣ ಆಸ್ತಿಗೆ
ಕಟ್ಟಿದರೆ ಕೋಟಿ ಕೋಟಿ ಕಾಂಚಾಣ ರಾಜ್ಯ
ಶರಣು ಹೊಡೆಯುವರು ಗುಲಾಮರಾಗಿ
ಅನುಭವಿಸುವ ಹಕ್ಕು ನನ್ನದು
ಬೇಕು ಎಲ್ಲದು ಬೇರೆಯವರ ಚಿಂತೆ ಸಲ್ಲದು
ನಾನೇಳಿದಂತೆ ಕೇಳಲು ಹಣದ ತಾಕತ್ತು
ಕರುಣಿಸಿದರೆ ಬದುಕಿಗೇ ಆಪತ್ತು

ಮನುಷ್ಯನಿಗೊಂದು ಮನಸ್ಸು
ಮನಸ್ಸಿಗೊಂದು ನೋಟ
ನೋಟಕ್ಕೆ ಎಲ್ಲರು ದಿಟ
ಯಾರು ಇವರಲ್ಲಿ ಹಚ್ಚು
ನೋಟ ನಿನ್ನಲ್ಲಿ ಬಿಚ್ಚು

ಬದುಕುವ ನಿಜ ಮಾರ್ಗ
ಅರಿಯುವ ರಾಜಮಾರ್ಗ
ಅರಿತು ನಿನ್ನೋಳಗೆ
ನುರಿತು ಬದಿಕಿನೊಳಗೆ

ಬಾಳಿನ ನಿಜ ನೋಟ
ಕಾಣು ನಿನ್ನೋಳಗೆ
ಎಲ್ಲರಿಗೆ ಒಳಿತಾಗುವ
ದಿಟ್ಟ ಅಂತರನೋಟ

`~ ಕುಕೂ...
ಕುಮಾರಸ್ವಾಮಿ ಕಡಾಕೊಳ್ಳ
ಪುಣೆ.

Satish said...

ನಮಗ್ಯಾಕ್ ಅವರವರ ಯಾಚ್ನೆ

ಪಶ್ಚಿಮಕ್ಕ್ ನೋಡೋ ಪೂರ್ವದ ಜನ್ರಿಗೆ
ಛಳಿಯಾಗಿರ್ಲಿಕ್ಕ್ ಸಾಕು
ತಮ್ಮದೇ ಹಳೇ ಸ್ವತ್ತೇ ಇದ್ರೂ
ಉಳಿದೋರ್ ವಸ್ತು ಬೇಕು

ಚಿಕ್ಕ ಜಾಗ ಹೆಚ್ಗೆ ಜನ
ಎಲ್ಲಾ ಒಟ್ಗೇ ಕೂತು
ಚೊಕ್ಕ ಜಾಗ ಚಿಕ್ಕ ಜನ
ಅವ್ರು ಆಳಿದ್ದೇ ಬಂತು.

ವಿಶ್ವಕ್ಕೆಲ್ಲ ಶಾಂತಿ ಮಂತ್ರ
ಹಂಚೋಕ್ ಮಾತ್ರ ಮುಂದೆ
ಅಲ್ಲಿಂದಿಲ್ಲಿಗೆ ದಳ್ಳಾಳೀ ಅಂತ
ಸುಳಿದಾಡೋದೇ ದಂದೆ.

ದೂರ್‌ದಲ್ಲಿ ಮರ ಹಿಂದಿನ್ ಬೆಳಕು
ಮುಳುಗೋಗುತ್ತೋ ಏನು
ಎಲ್ಲೋ ಕುಳಿತು ಸಮಯ ಸಾಗ್ಸೋ
ಜನರಿಗೆ ಕಾಣೋ ಬಾನು.

ತಲೆಗೊಂದ್ ಟೋಪಿ ಹೆಗಲಿಗೆ ಚೀಲ
ನಡಿತಿರೋ ಸಮಾಲೋಚ್ನೆ
ಯಾರೋ ಕುಳಿತು ಏನೋ ಮಾಡ್ಲಿ
ನಮಗ್ಯಾಕ್ ಅವರವರ ಯಾಚ್ನೆ.