Monday 11 February, 2008

ಚಿತ್ರ - ೪೦


ನೆನಗೊಂಜನ್ - ತಕೆ ದೇವಸ್ಥಾನಕ್ಕೆ ಹೋಗುವ ಹಾದಿಯಲ್ಲಿ ಕ್ಲಿಕ್ಕಿಸಿದ ಒಂದು ಛಾಯಾಚಿತ್ರ (ಅನಿಕೇತನ)

ಛಿದ್ರಗೊಂಡಿದ್ದ ಕನಸುಗಳು ಒಂದುಗೂಡಿವೆ ಎಂದು ತನ್ ಹಾಯಿ ಹೇಳಿದ್ದು;
ಒಂಟಿ ದಾರಿ..


ಇದೇ ತರಹದ ಹಾದಿಯಲ್ಲಿ ಅದೆಷ್ಟು ಬಾರಿ ನಡೆದಿಲ್ಲ ನಾನು? ಅದೇ ತಿರುವಿನ ಬಳಿಯ ಕಲ್ಲ ಮೇಲೆ ಎಷ್ಟು ಬಾರಿ ದಾರಿಗಾಣದೆ ಕುಳಿತಿಲ್ಲ? ಜೊತೆಗಿದ್ದದ್ದು ಇಬ್ಬರೇ.. ನಾನು ಮತ್ತು ನನ್ನ ಛಿದ್ರ ಕನಸುಗಳು.. ಅವುಗಳ ಒಟ್ಟುಗೂಡಿಸಲು ಪ್ರಯತ್ನಿಸಿ ಸೋತಿದ್ದೆ.

ಈಗ ತಿರುವಿದೆ. ಅದೇ ಒಂಟಿ ದಾರಿ. ಆದರೆ ಕನಸುಗಳಿಗೊಂದು ರೂಪು ಸಿಕ್ಕಿದೆ. ಜೊತೆಗೆ ನೀವಿದ್ದೀರಿ. ದಾರಿ ತಪ್ಪುವ ಭಯವಿಲ್ಲ!


ನೋಡುವ ನೋಟ ಬೇರೆ ಅದರೂ ಸೇರುವ ತೀರ ಒಂದೇ ಎಂದು ಕುಮಾರಸ್ವಾಮಿ ಕಡಾಕೊಳ್ಳ ಹೇಳಿದ್ದು;
ಜೊತೆ ಪಯಣ


ಈ ಪಯಣ ನಮ್ಮದು
ಬಾಳಿನ ದೂರ ಪಯಣ
ನಸುನಗುತ ಹಸನಾಗಿ
ಜೊತೆಯಾಗಿ ಸಾಗಿಸೋಣ

ಏಳು ಬೀಳಿನ ಬಾಳು
ಅಂಕು ಡೊಂಕಿನ ಜಾಡು
ನುರಿತು ಅರಿವಿನೋಳು
ನಡೆಸೋಣ ದಿಟ್ಟ ಬಾಳು

ದುಃಖ ದುಮ್ಮಳಗಳು
ಬಿಡದ ಬವಣೆಗಳು
ಮರೆತು ಎಲ್ಲಾ ಗೋಳು
ಬದುಕೋಣ ಜಗದೋಳು

ಬಿರುಕುಗಳು ಸಹಜ
ಮನಸ್ಸುಗಳ ನಡುವೆ
ಬೆಸೆಯೋಣ ಹಸನಾಗಿ
ಸ್ನೇಹದ ಸೋಗಿನಲಿ

ಹಚ್ಚ ಹಸುರಿನ ಬಯಲು
ಪ್ರೀತಿ ತುಂಬಿದ ಮನವು
ಜೊನ್ನ ಜೇನ ಸವಿಯು
ಇದ ಅರಿತು ಬಾಳಲು

ನಿನ್ನ ನನ್ನೋಳು ಬೇದ
ಇವರು ಅವರೊಳು ಬೇದ
ಬೇದಗಳು ಇರಲು ನೂರು
ಖೇದ ಖಂಡಿಸಿ ಬಾಳು

ನೋಡೋ ನೋಟ ಬೇರೆ
ನಡೆವ ದಾರಿ ಬೇರೆ
ಉಡುಗೆ ತೊಡುಗೆ ಬೇರೆ
ನಾವು ಸೇರುವ ತೀರ ಒಂದೇ

ಮನಕೆ ಭಾವದ ತಂತು
ಬಿಗಿದು ನುಡಿಸು ನಂಟು
ನೆನಪಿನ ಶೃತಿ ರಾಗ ಲಯವು
ಹೊಮ್ಮಿಸಿ ಬಾಳಿನ ಸರಿಗಮ

ಮುಂದೆ ನಡೆದರೆ ಗೊತ್ತಿಲ್ಲದೆ ಇರುವ ಯಾವುದೋ ಬದುಕಿದೆ ಎಂದು ಸತೀಶ ಹೇಳಿದ್ದು;
ತಿರುಗುಗಳು ಅಪಾರ

ಯಾರೋ ಅಗೆದು ಮುಚ್ಚಿದ ರಸ್ತೆ
ಬೆಚ್ಚಗೆ ಹೊದ್ದು ಮಲಗಿದ ವ್ಯವಸ್ಥೆ
ತಿರುಗಿನಲ್ಲಿ ದಿವ್ಯ ದೃಷ್ಟಿಯ ಮಸೂರ
ಪಯಣದ ತಿರುಗುಗಳು ಅಪಾರ.

ತಿರುಗುವ ಒಂದು ಕಾಲು ಮುಂದೆ
ಮರುಗುವ ಮತ್ತೊಂದು ಅದರ ಹಿಂದೆ
ಎತ್ತಲು ಸುತ್ತಲು ಮುತ್ತಿದ ವನರಾಶಿ
ಕತ್ತಲ ಬುಡಕೆ ದಿಕ್ಕೇ ಕಾಣದ ಖುಷಿ.

ಮುಂದಿನ ರಸ್ತೆ ಎಲ್ಲಿಗೋ ಪಯಣ
ಯಾರದೋ ಗುರಿಗೆ ಯಾರೋ ಕಾರಣ
ಕರಿಯ ರಸ್ತೆಗೆ ಕರಿಯ ಹಿಮ್ಮಡಿ
ಅಡಿ ಅಡಿ ಇಟ್ಟೇ ತಲುಪುವ ಗಡಿ.

ಅರಿವಿಗೆ ಬಾರದು ಮುಂದಿನ ಹಾದಿ
ನಡೆಯುತ ಹೋದರೆ ತೆರೆವ ವಿಧಿ
ಯಾರೋ ಅಂದರು ತಿರುವನು ನಂಬಿದೆ
ಮುಂದೆ ನಡೆದರೆ ಅದೇನೋ ಬದುಕಿದೆ.


4 comments:

ತನ್ ಹಾಯಿ said...

ಒಂಟಿ ದಾರಿ..
ಇದೇ ತರಹದ ಹಾದಿಯಲ್ಲಿ ಅದೆಷ್ಟು ಬಾರಿ ನಡೆದಿಲ್ಲ ನಾನು? ಅದೇ ತಿರುವಿನ ಬಳಿಯ ಕಲ್ಲ ಮೇಲೆ ಎಷ್ಟು ಬಾರಿ ದಾರಿಗಾಣದೆ ಕುಳಿತಿಲ್ಲ? ಜೊತೆಗಿದ್ದದ್ದು ಇಬ್ಬರೇ.. ನಾನು ಮತ್ತು ನನ್ನ ಛಿದ್ರ ಕನಸುಗಳು.. ಅವುಗಳ ಒಟ್ಟುಗೂಡಿಸಲು ಪ್ರಯತ್ನಿಸಿ ಸೋತಿದ್ದೆ.
ಈಗ ತಿರುವಿದೆ. ಅದೇ ಒಂಟಿ ದಾರಿ. ಆದರೆ ಕನಸುಗಳಿಗೊಂದು ರೂಪು ಸಿಕ್ಕಿದೆ. ಜೊತೆಗೆ ನೀವಿದ್ದೀರಿ. ದಾರಿ ತಪ್ಪುವ ಭಯವಿಲ್ಲ!

ಕುಕೂಊ.. said...

ಈ ಪಯಣ ನಮ್ಮದು
ಬಾಳಿನ ದೂರ ಪಯಣ
ನಸುನಗುತ ಹಸನಾಗಿ
ಜೊತೆಯಾಗಿ ಸಾಗಿಸೋಣ

ಏಳು ಬೀಳಿನ ಬಾಳು
ಅಂಕು ಡೊಂಕಿನ ಜಾಡು
ನುರಿತು ಅರಿವಿನೋಳು
ನಡೆಸೋಣ ದಿಟ್ಟ ಬಾಳು

ದುಃಖ ದುಮ್ಮಳಗಳು
ಬಿಡದ ಬವಣೆಗಳು
ಮರೆತು ಎಲ್ಲಾ ಗೋಳು
ಬದುಕೋಣ ಜಗದೋಳು

ಬಿರುಕುಗಳು ಸಹಜ
ಮನಸ್ಸುಗಳ ನಡುವೆ
ಬೆಸೆಯೋಣ ಹಸನಾಗಿ
ಸ್ನೇಹದ ಸೋಗಿನಲಿ

ಹಚ್ಚ ಹಸುರಿನ ಬಯಲು
ಪ್ರೀತಿ ತುಂಬಿದ ಮನವು
ಜೊನ್ನ ಜೇನ ಸವಿಯು
ಇದ ಅರಿತು ಬಾಳಲು

ನಿನ್ನ ನನ್ನೋಳು ಬೇದ
ಇವರು ಅವರೊಳು ಬೇದ
ಬೇದಗಳು ಇರಲು ನೂರು
ಖೇದ ಖಂಡಿಸಿ ಬಾಳು

ನೋಡೋ ನೋಟ ಬೇರೆ
ನಡೆವ ದಾರಿ ಬೇರೆ
ಉಡುಗೆ ತೊಡುಗೆ ಬೇರೆ
ನಾವು ಸೇರುವ ತೀರ ಒಂದೇ

ಮನಕೆ ಭಾವದ ತಂತು
ಬಿಗಿದು ನುಡಿಸು ನಂಟು
ನೆನಪಿನ ಶೃತಿ ರಾಗ ಲಯವು
ಹೊಮ್ಮಿಸಿ ಬಾಳಿನ ಸರಿಗಮ

*~ಕುಕೂ..

ಕುಕೂಊ.. said...

....ಜೊತೆ ಪಯಣ....

ಮೇಲಿನ ಕವಿತೆಗೆ ಶ್ರೀಷಿಕೆ ..ಜೊತೆ ಪಯಣ...ಎಂದಿರಲಿ.


ಕುಕೂ

Satish said...

ತಿರುಗುಗಳು ಅಪಾರ

ಯಾರೋ ಅಗೆದು ಮುಚ್ಚಿದ ರಸ್ತೆ
ಬೆಚ್ಚಗೆ ಹೊದ್ದು ಮಲಗಿದ ವ್ಯವಸ್ಥೆ
ತಿರುಗಿನಲ್ಲಿ ದಿವ್ಯ ದೃಷ್ಟಿಯ ಮಸೂರ
ಪಯಣದ ತಿರುಗುಗಳು ಅಪಾರ.

ತಿರುಗುವ ಒಂದು ಕಾಲು ಮುಂದೆ
ಮರುಗುವ ಮತ್ತೊಂದು ಅದರ ಹಿಂದೆ
ಎತ್ತಲು ಸುತ್ತಲು ಮುತ್ತಿದ ವನರಾಶಿ
ಕತ್ತಲ ಬುಡಕೆ ದಿಕ್ಕೇ ಕಾಣದ ಖುಷಿ.

ಮುಂದಿನ ರಸ್ತೆ ಎಲ್ಲಿಗೋ ಪಯಣ
ಯಾರದೋ ಗುರಿಗೆ ಯಾರೋ ಕಾರಣ
ಕರಿಯ ರಸ್ತೆಗೆ ಕರಿಯ ಹಿಮ್ಮಡಿ
ಅಡಿ ಅಡಿ ಇಟ್ಟೇ ತಲುಪುವ ಗಡಿ.

ಅರಿವಿಗೆ ಬಾರದು ಮುಂದಿನ ಹಾದಿ
ನಡೆಯುತ ಹೋದರೆ ತೆರೆವ ವಿಧಿ
ಯಾರೋ ಅಂದರು ತಿರುವನು ನಂಬಿದೆ
ಮುಂದೆ ನಡೆದರೆ ಅದೇನೋ ಬದುಕಿದೆ.