Monday 25 February, 2008

ಚಿತ್ರ - ೪೨


ಶ್ರೀನಿಧಿ ಅವರು ತೆಗೆದ ಛಾಯಾಚಿತ್ರ

ಬಳ್ಳಿ ಗೆಜ್ಜೆ

ಮುಂದಲಿಗೆಯ ಅಂಚಿನಲ್ಲಿ
ಒಂದು ಚಿಲುಮೆ ಹೊರಳು
ನೆಳಲು ಬೆಳಕಿನಾಟದಲ್ಲಿ
ನಿನ್ನ ಘಲಿಲು ಘಲಿಲು

ಇಟ್ಟ ಹೆಜ್ಜೆ ಜಾಡಿನಲ್ಲಿ
ಬಳ್ಳಿ ನಡೆಯ ಕುರುಹು
ಸುತ್ತ ಸರಿವ ನಾಡಿಯಲ್ಲಿ
ಜೀವಸೆಲೆಯ ಹೊಳಹು

ಎತ್ತಲಿರುವ ಭಾರದರಿವು
ಇರದ ಪುಟ್ಟ ಮುಕುಟ
ಎದ್ದುನಿಂತ ಧೀರನಂತೆ
ಬೆಣ್ಣೆ ಮುದ್ದೆ ಬೆಟ್ಟ

ಘಲ್ಲು ಗುಲ್ಲು ಮನೆಯಲೆಲ್ಲ
ತುಂಬಿಸಿದ್ದ ನಡಿಗೆ
ಈಗ ಮೌನದಾಟವಲ್ಲ
ನೋಟ ಬೇಕು ಅಡಿಗೆ
-ಸುಪ್ತದೀಪ್ತಿ

ಅಂಗೈಯಗಲದ ಆಸೆ

ಇಟ್ಟು ನೋಡಿದರೆ ಸಾಲದು
ಕಟ್ಟ ಬೇಕು ತಾಯಿ
ಬಿಳಿ ಬೆಳಕಿನ ಮೋಹದೆದುರು
ಆಸೆ ಕಿರಣದ ಹಾಯಿ.

ತೊಟ್ಟ ಗೆಜ್ಜೆಯೊಂದೇ ಸಾಕೇ
ಜೊತೆಗಿರಲಿ ನಾದ ನಿನಾದ
ಎಂಥ ಆಳದಲ್ಲೂ ಅಂಕೆಯಿರಲಿ
ನಿನ್ನ ಮೋದ ಕಾಮೋದ.

ವಸ್ತು ಸ್ಥಿತಿ ಸ್ಪಷ್ಟವೇನು
ಹೊಸತನದಲಿ ಹೊಳೆದು
ನಿಲ್ಲದಿರಲಿ ಅಭಿಯಾನ
ಉಗುರಿನ ಕೊಳೆ ತೆಗೆದು.

ಇಷ್ಟವಾಗಿ ಸ್ಪಷ್ಟವಾಯ್ತು
ನಿನ್ನ ಮನದ ಕನ್ನಡಿ
ಅಂಗೈಯಗಲದ ಆಸೆಗಿಷ್ಟು
ಬರೆದಂತೆ ಹೊಸ ಮುನ್ನುಡಿ.
-ಸತೀಶ

2 comments:

ಸುಪ್ತದೀಪ್ತಿ suptadeepti said...

ಬಳ್ಳಿ ಗೆಜ್ಜೆ
------------
ಮುಂದಲಿಗೆಯ ಅಂಚಿನಲ್ಲಿ
ಒಂದು ಚಿಲುಮೆ ಹೊರಳು
ನೆಳಲು ಬೆಳಕಿನಾಟದಲ್ಲಿ
ನಿನ್ನ ಘಲಿಲು ಘಲಿಲು

ಇಟ್ಟ ಹೆಜ್ಜೆ ಜಾಡಿನಲ್ಲಿ
ಬಳ್ಳಿ ನಡೆಯ ಕುರುಹು
ಸುತ್ತ ಸರಿವ ನಾಡಿಯಲ್ಲಿ
ಜೀವಸೆಲೆಯ ಹೊಳಹು

ಎತ್ತಲಿರುವ ಭಾರದರಿವು
ಇರದ ಪುಟ್ಟ ಮುಕುಟ
ಎದ್ದುನಿಂತ ಧೀರನಂತೆ
ಬೆಣ್ಣೆ ಮುದ್ದೆ ಬೆಟ್ಟ

ಘಲ್ಲು ಗುಲ್ಲು ಮನೆಯಲೆಲ್ಲ
ತುಂಬಿಸಿದ್ದ ನಡಿಗೆ
ಈಗ ಮೌನದಾಟವಲ್ಲ
ನೋಟ ಬೇಕು ಅಡಿಗೆ

ಕಾಣದೊಂದು ಕೋಣೆಯಲ್ಲಿ
ಎಳೆಯ ಬಿಸಿಲ ಕೋಲು
ಬೆಳಗುತಿರಲಿ ಬಾಳಿನಲ್ಲಿ
ಎಡವದಿರಲು ಕಾಲು

Satish said...

ಅಂಗೈಯಗಲದ ಆಸೆ

ಇಟ್ಟು ನೋಡಿದರೆ ಸಾಲದು
ಕಟ್ಟ ಬೇಕು ತಾಯಿ
ಬಿಳಿ ಬೆಳಕಿನ ಮೋಹದೆದುರು
ಆಸೆ ಕಿರಣದ ಹಾಯಿ.

ತೊಟ್ಟ ಗೆಜ್ಜೆಯೊಂದೇ ಸಾಕೇ
ಜೊತೆಗಿರಲಿ ನಾದ ನಿನಾದ
ಎಂಥ ಆಳದಲ್ಲೂ ಅಂಕೆಯಿರಲಿ
ನಿನ್ನ ಮೋದ ಕಾಮೋದ.

ವಸ್ತು ಸ್ಥಿತಿ ಸ್ಪಷ್ಟವೇನು
ಹೊಸತನದಲಿ ಹೊಳೆದು
ನಿಲ್ಲದಿರಲಿ ಅಭಿಯಾನ
ಉಗುರಿನ ಕೊಳೆ ತೆಗೆದು.

ಇಷ್ಟವಾಗಿ ಸ್ಪಷ್ಟವಾಯ್ತು
ನಿನ್ನ ಮನದ ಕನ್ನಡಿ
ಅಂಗೈಯಗಲದ ಆಸೆಗಿಷ್ಟು
ಬರೆದಂತೆ ಹೊಸ ಮುನ್ನುಡಿ.