Monday 10 March, 2008

ಚಿತ್ರ - ೪೪


ಶ್ರೀ ಅವರು ತೆಗೆದ ಒಂದು ಛಾಯಾಚಿತ್ರ



ನಮ್ಮೀಬಾಳು

ಬಿಳಿ,ನೀಲಿ ಒಳಹಂಗಿ ಬೆತ್ತಲೆ ಎದೆಯೊಡ್ಡಿ
ಬೆವರಿಳಿಸಿ ಮಣ್ಣಗೆವ ಕಾರುಬಾರಿನಲಿ
ನಿರತ ಅಪ್ಪ ಅಣ್ಣಂದಿರು ದಾಹವೇರಿ
ಜಲಹೀರಿ ದೇಹ ದಣಿವಾರಿಸಿತಿಹರು

ಹಸಿರ ಸೀರೆಯನುಟ್ಟು ಬಿಸಿಲಬಯಲಲಿ
ಸೆರಗುಸುತ್ತಿ ಬಿಗಿದು ಕಟ್ಟಿ ನತ್ತಿಗೆ
ಎತ್ತಿಹಾಕುತ ತುಂಬಿದಾ ಬುಟ್ಟಿಯನು
ಮಣ್ಣ ಕಸುಬಿನಲಿ ಅಮ್ಮ ದುಡಿತಿಹಳು

ಕಲ್ಲರಾಸಿಯ ಸಿಂಹಾಸನವೇರಿ
ವಲ್ಲಿ ಹೊದ್ದು ದೊಡ್ಡವರಂತೆ ಹೆಗಲಮೇಲೆ
ಮರೆತೆಲ್ಲ ಜಗದ ಆಟವನು ನಾವು
ಚರದೂರವಾಣಿಯನಿಡಿದು ಆಡುತಿಹೆವು

ಯಾರೋ ಧನಿಕನ ಅರಮನೆಯ ಪಾಯವಂತೆ
ಅಡಿಪಾಯವಾಕಲು ಗುಳಿತೋಡಬೇಕಂತೆ
ಕೊಟ್ಟೆರಡಾಣೆಗೆ ಧರೆವಗೆಯ ಕಾಯಕವ ಅವರೆಲ್ಲ
ದಣಿವಾದರು ಮೈಮುರಿದು ಮಾಡುತಿರಬೇಕಂತೆ

ಈ ಬಯಲೇ ನಮಗೆ ಶಾಲೆಯ ಬೀಡು
ಜೊತೆಸೇರಿ ಆಡುವುದು ನಮ್ಮಯ ಪಾಡು
ಮುಂದೊಂದು ದಿನ ನಮ್ಮದದುವೇಗೋಳು
ಕಡಾಯಿ ಗುದ್ದಲಿಗಂಟಿದೆ ನಮ್ಮೀಬಾಳು


- ಕುಮಾರಸ್ವಾಮಿ ಕಡಾಕೊಳ್ಳ


ಬಣ್ಣದ ಬದುಕು

ಸೆರಗನು ಕಟ್ಟಿ ಸಿಂಬೆಯ ಸುತ್ತಿ
ಬದುಕು ಬಾಣಲೆ ಹೊತ್ತಿಹುದು
ಉರಿಬಿಸಿಲಲ್ಲಿ ಅಳುಕದೆ ಇಲ್ಲಿ
ಜನಪದ ಗೊಂದಲ ಹಾಡಿಹುದು.

ಯಾರೋ ಕಟ್ಟಿದ ಕಟ್ಟಡವಿಂದು
ಅಗೆದರೆ ಕಲ್ಲನು ತೋರುವುದೇ
ಬಣ್ಣದ ಬಾಟಲಿ ಒಳಗಿನ ನೀರಿನ
ಬಣ್ಣವೆ ಜಗಕದು ತೋರಿಹುದೆ.

ಬಯಲಲಿ ಆಡುವ ಪೋರರಿಗಂತೂ
ಇದು ಬರಿ ಕಲ್ಲು ಮಣ್ಣಿನ ಸವಾಲು
ಕೈಯಲಿ ಯಂತ್ರವ ಹಿಡಿದು ಜಗವನು
ನಿರುಕಿಸೋ ಕಣ್ಣುಗಳ ಅಹವಾಲು.

ಸುಮ್ಮನೆ ಕಾಲ ತೆಗೆದಂತೆಲ್ಲ
ನಾಳೆಯು ದೂರವು ಓಡುವುದೇನು
ಇಂದಿನ ಬದುಕು ಹೀಗಿರುವಾಗ
ನಿನ್ನೆ-ನಾಳೆಗಳ ಗೋಜೇನು.

ಅಂಜಿಕೆ ಅಳುಕು ಯಾರಿಗೋ ಏನೋ
ಹೊಸ ಲೋಕವದು ಸೆಳೆದಂತೆ
ಕಣ್ಣಿಗೆ ಕಾಣುವ ಬಣ್ಣದ ಬದುಕು
ಜಗವನು ಕೈಯಲಿ ಹಿಡಿದಂತೆ.

- ಸತೀಶ

2 comments:

ಕುಕೂಊ.. said...

ನಮ್ಮೀಬಾಳು

ಬಿಳಿ,ನೀಲಿ ಒಳಹಂಗಿ ಬೆತ್ತಲೆ ಎದೆಯೊಡ್ಡಿ
ಬೆವರಿಳಿಸಿ ಮಣ್ಣಗೆವ ಕಾರುಬಾರಿನಲಿ
ನಿರತ ಅಪ್ಪ ಅಣ್ಣಂದಿರು ದಾಹವೇರಿ
ಜಲಹೀರಿ ದೇಹ ದಣಿವಾರಿಸಿತಿಹರು

ಹಸಿರ ಸೀರೆಯನುಟ್ಟು ಬಿಸಿಲಬಯಲಲಿ
ಸೆರಗುಸುತ್ತಿ ಬಿಗಿದು ಕಟ್ಟಿ ನತ್ತಿಗೆ
ಎತ್ತಿಹಾಕುತ ತುಂಬಿದಾ ಬುಟ್ಟಿಯನು
ಮಣ್ಣ ಕಸುಬಿನಲಿ ಅಮ್ಮ ದುಡಿತಿಹಳು

ಕಲ್ಲರಾಸಿಯ ಸಿಂಹಾಸನವೇರಿ
ವಲ್ಲಿ ಹೊದ್ದು ದೊಡ್ಡವರಂತೆ ಹೆಗಲಮೇಲೆ
ಮರೆತೆಲ್ಲ ಜಗದ ಆಟವನು ನಾವು
ಚರದೂರವಾಣಿಯನಿಡಿದು ಆಡುತಿಹೆವು

ಯಾರೋ ಧನಿಕನ ಅರಮನೆಯ ಪಾಯವಂತೆ
ಅಡಿಪಾಯವಾಕಲು ಗುಳಿತೋಡಬೇಕಂತೆ
ಕೊಟ್ಟೆರಡಾಣೆಗೆ ಧರೆವಗೆಯ ಕಾಯಕವ ಅವರೆಲ್ಲ
ದಣಿವಾದರು ಮೈಮುರಿದು ಮಾಡುತಿರಬೇಕಂತೆ

ಈ ಬಯಲೇ ನಮಗೆ ಶಾಲೆಯ ಬೀಡು
ಜೊತೆಸೇರಿ ಆಡುವುದು ನಮ್ಮಯ ಪಾಡು
ಮುಂದೊಂದು ದಿನ ನಮ್ಮದದುವೇಗೋಳು
ಕಡಾಯಿ ಗುದ್ದಲಿಗಂಟಿದೆ ನಮ್ಮೀಬಾಳು

**ಕುಕೂ....

Satish said...

ಬಣ್ಣದ ಬದುಕು

ಸೆರಗನು ಕಟ್ಟಿ ಸಿಂಬೆಯ ಸುತ್ತಿ
ಬದುಕು ಬಾಣಲೆ ಹೊತ್ತಿಹುದು
ಉರಿಬಿಸಿಲಲ್ಲಿ ಅಳುಕದೆ ಇಲ್ಲಿ
ಜನಪದ ಗೊಂದಲ ಹಾಡಿಹುದು.

ಯಾರೋ ಕಟ್ಟಿದ ಕಟ್ಟಡವಿಂದು
ಅಗೆದರೆ ಕಲ್ಲನು ತೋರುವುದೇ
ಬಣ್ಣದ ಬಾಟಲಿ ಒಳಗಿನ ನೀರಿನ
ಬಣ್ಣವೆ ಜಗಕದು ತೋರಿಹುದೆ.

ಬಯಲಲಿ ಆಡುವ ಪೋರರಿಗಂತೂ
ಇದು ಬರಿ ಕಲ್ಲು ಮಣ್ಣಿನ ಸವಾಲು
ಕೈಯಲಿ ಯಂತ್ರವ ಹಿಡಿದು ಜಗವನು
ನಿರುಕಿಸೋ ಕಣ್ಣುಗಳ ಅಹವಾಲು.

ಸುಮ್ಮನೆ ಕಾಲ ತೆಗೆದಂತೆಲ್ಲ
ನಾಳೆಯು ದೂರವು ಓಡುವುದೇನು
ಇಂದಿನ ಬದುಕು ಹೀಗಿರುವಾಗ
ನಿನ್ನೆ-ನಾಳೆಗಳ ಗೋಜೇನು.

ಅಂಜಿಕೆ ಅಳುಕು ಯಾರಿಗೋ ಏನೋ
ಹೊಸ ಲೋಕವದು ಸೆಳೆದಂತೆ
ಕಣ್ಣಿಗೆ ಕಾಣುವ ಬಣ್ಣದ ಬದುಕು
ಜಗವನು ಕೈಯಲಿ ಹಿಡಿದಂತೆ.