Monday 7 April, 2008

ಚಿತ್ರ -48





ಅನ್ನಪೂರ್ಣ ದೈತೋಟರ ಚುಟುಕು ಹೀಗಿದೆ...

ಅದೋ ಅಲ್ಲಿಹುದೆನ್ನ ಕನಸುಗಳು !
ಹೂವಿನ ಹಾದಿಯಿದೆ ರವಿಯ ಪ್ರಭೆ ಇದೆ
ಆ ಪ್ರಭೆ ನನ್ನ ಕಣ್ಣುಗಳಲ್ಲಿ ಬೆಳಗುತಿದೆ
ಅಲ್ಲಿರುವೆ ಒಂದು ದಿನ ನನ್ನ ಕನಸುಗಳ ನನಸಿನಲ್ಲಿ..

ಶ್ರೀನಿವಾಸ್ ಹಸಿಮನಸಿನ ಕಾತರವನ್ನು ಹೀಗೆ ಹಿಡಿದಿಟ್ಟಿದ್ದಾರೆ..

ನಿನ್ನೆ ನೋಡಲು ಬಂದವರು
ಮಲ್ಲಿಗೆಯ ದಂಡ ಇತ್ತವರು
ನಾಚಿ ತಗ್ಗಿದ ಮೊಗವೆತ್ತಿದವರು
ಅದೇಕೋ ಅದುಹೇಗೋ
ಮನದೊಳಗಚ್ಚಳಿಯದೇ
ನಿಂದಿಹರು

ಬೇಗ ಬರುತ್ತೀನೆಂದವರು
ಯಾಕೋ ಇನ್ನೂ ಬರಲಿಲ್ವೇ?
ಬೆಳಗಿನ ಗಾಡಿ ಬಂದಾಗಿದೆ
ಸಂಜೆಯ ಗಾಡಿ ಹೊರಡಲನುವಾಗಿದೆ

ಎಡಗಣ್ಯಾಕೋ ಅದುರುತಿಹುದಲ್ಲ
ಅಧರ ನಡುಗುತಿಹುದಲ್ಲ
ಎದೆ ಬಡಿತ ಮುಗಿಲೆಡೆ ಓಡುತಿದೆ
ಅದಾಗಬಾರದಲ್ಲ
ಹಾಗಾಗಬಾರದಲ್ಲ
ಹುಸಿಯಾಗಸಲು
ನೀ ಬೇಗ ಬಾರೆಯಲ್ಲ

ನಿನ್ನೆ ಮುಡಿದ ಹೂ
ಅರಳಿದ್ದ ಜಾಜಿ ಮೊಲ್ಲೆ ಮಲ್ಲಿಗೆಯ ದಂಡು
ನಿನ್ನೆ ಅರಳಿತು
ಮುಡಿಯಲಿ ನಗುತಿತ್ತು
ಇಂದು ಕಿಟಕಿಯ ಸರಳಿನ ಮೇಲೆ
ಮುದುಡಿದೆ, ತೂಗಾಡಿದೆ
ಅವುಗಳ ಮೊಗವೇಕೋ ಬಾಡಿದೆ

ಮಲ್ಲಿಗೆ ಜಾಜಿ ನಿಮ್ಮ ಹಾಗೆ
ನಾ ಆಗಬಾರದಲ್ಲವೇನೇ?
ಹೀಗಾಗಬಾರದಲ್ಲವೇನೇ
ಮನದಲಿ ಮೂಡುತಿಹುದು
ಸುಳ್ಳಾಗಲಿ ತಾನೆ?

ಸಮಯ ಓಡುವುದು ಬೇಡ
ಸವಿಗಳಿಗೆಯ ಇನ್ನೂ ಸವಿಯುವುದಿದೆಯಲ್ಲ
ಗಡಿಯಾರ ನಿಂತು ಹೋಗಬಾರದೇ
ಮುಳ್ಳು ಮುನ್ನಡೆಯಬಾರದೇ!
ಮುದುಡಿದ ಹೂ ಅರಳಬಾರದೇ
ಸುಕ್ಕಿಡುತಿಹ ಮೊಗವರಳಬಾರದೇ!

ಎನ್ನ ಕಾಪಾಡು ಹರಿಯೇ
ನಾ ಹೊಗುವೆ ನಿನ್ನ ಮೊರೆಯೇ
ಯಾರ ಬಳಿ ಸುರಿಯಲಿ ಎನ್ನ ಅಳಲು
ಬೇಗ ಬಂದು ತುಂಬಬಾರದೇ ನನ್ನೊಡಲು

ವಿಜಯಾರ ಹಾರೈಕೆ ಹೀಗಿದೆ...

ನಿತ್ಯ ನೂತನ ಹೂವು ದಿವ್ಯ ಮುಡಿಯನು ಅರಸಿ
ದಿಟ್ಟ ನೋಟ ಬೆಚ್ಚನೆಯ ಬೆಳಕಿನೆಡೆಗೆ ನಡೆಸಿ
ನಿಂತ ನೋವನು ಮರೆಸಿ, ನಲಿವನ್ನು ಕೈಚಾಚಿ ವರಿಸಿ
ಇಟ್ಟ ಹೆಜ್ಜೆ ಧೃತಿಗೆಡದೆ ಹಸನಾಗಲಿ ಬಾಳು ... ಹರಸಿ :-)


ಭಾವ ದರ್ಪಣ ವಿರಹವನ್ನು ವಿವರಿಸುವ ಪರಿ ಇದು...

ಈಗಷ್ಟೇ ಬಂದು ಹೋದ ನೀನು..
ಈಗಷ್ಟೇ ಮುಡಿದು ತೆಗೆದ ಮಲ್ಲಿಗೆ..
ಮಲ್ಲಿಗೆ ಘಮವಿನ್ನೂ ತಾಜಾ..
ನೀನೇಕೆ ಅಷ್ಟು ದೂರ ಹೋದೆ ನನ್ನ ರಾಜ..??

ಸರಳುಗಳು, ಸರಪಳಿಗಳು
ಕಾಣವು ನನಗೆ ಅವುಗಳೆಲ್ಲವೂ..
ಯಾವ ಬಂಧನವಿಲ್ಲ ಈ ಮಲ್ಲಿಗೆ ಘಮಕೆ
ಅಂತೆ ಯಾವ ಬೇಲಿಗಳಿಲ್ಲ ಎನ್ನೊಲವಿನ ನೋಟಕೆ..

ಹೀಗೆ ಬಂದು ಹಾಗೆ ಹೋಗುವ ನಿನ್ನೊಲವ ರೀತಿ
ಆದರೂ ಕಂಗಳಲೇಕೋ ತುಳುಕುತಿದೆ
ನಿನಗಾಗೇ ನನ್ನ ಪ್ರೀತಿ..

ಈ ನನ್ನ ಪ್ರೀತಿ ಒರತೆ
ಕಣ್ಣ ಹನಿಯಾಗುವ ಮುಂಚೆ
ಮತ್ತೆ ಬಂದೆನ್ನ ಸೇರು ಗೆಳೆಯ
ಇನ್ನೆಂದೂ ಬೇರೆಯಾಗದಂತೆ ಮೆಲ್ಲಗೆ..
ನೀನಾಗು ನನ್ನ ಬಾಳಲಿ ನಗುವ ಸದಾ-ಮಲ್ಲಿಗೆ..

ಕುಮಾರ ಸ್ವಾಮಿ ಕಡಾಕೊಳ್ಳ ಈ ಚಿತ್ರದಲ್ಲಿ ಕಾಯುವಿಕೆಯನ್ನು ಕಂಡಿದ್ದಾರೆ.....

** ಕಾದಿರುವೆ ಅಭಿಸಾರಿಕೆ **

ಇನಿಯ ನಿನ್ನ ಕನಸನ್ನು ಕಂಗಳಲಿ ಕಟ್ಟಿ
ಕಾದಿಹೆನು ಎವೆಮುಚ್ಚದೆ ಕಾತುರದಿಂದ
ನಿದ್ದೆಯಲಿ ಜಾರಿಬಿಡುವೆನೆಂಬ ಆತಂಕ
ಕಂಗಳ ತೆರೆದು ನಿನ್ನ ಹುಡುಕುತಿರುವೆನು

ನಿನ್ನೆ ನೀ ತಂದು ಮುಡಿಸಿದ ಮಲ್ಲೆ
ಮುದುಡಿ ಬಾಡಿ ಮುನಿಸಿ ಮಾಸಿಹವು
ಇಂದು ತರುವೆಯ ಬಿಳಿದುಂಡು ಮಲ್ಲಿಗೆ?
ಎಂದು ಮನಸು ಮೌನದಲಿ ಕೇಳಿಹುದು

ಕಂಗಳ ಕೊಳದೊಳಗೆ ನಿನ್ನದೇ ಬಿಂಬ
ಸನಿಹವಿರದ ನಿನ್ನನ್ನು ಅಲ್ಲಿ ಕಾಣುತಿಹೆನು
ವಿರಹ ವಡಬಾನಲವಾಗಿ ಕುದಿಯುತಿಹುದು
ಬಾರೋ ಕಾಂತ ಕೊಳಬತ್ತುವ ಮೊದಲು

ಒಂಟಿಯಾಗಿ ಕುಳಿತಿರುವೆ ಗೋಡೆಗಳ ನಡುವೆ
ನೆನವುತ್ತ ಮುದದಿ ನೀಕೊಟ್ಟ ಚುಂಬನ
ಆದರದಿ ನೀನು ಬಿಗಿದಪ್ಪಿದ ಬಿಸಿ ಆಲಿಂಗನ
ಮೈಯಲ್ಲಿ ನವುರು ಯಾತನೆ, ಅಣೆಯಲ್ಲಿ ಬೆವರು

ಹಸಿವಿನ ಅರಿವಿಲ್ಲ ಉದರ ಬರಿದಾದರು
ಬರಿ ನಿನ್ನದೇ ನೆನಪು ಕ್ಷಣಕ್ಷಣವು ಕನವರಿಕೆ
ಕಾಲಸೂಚಕನ ಮುಳ್ಳು ತಿರುಗದೆ ತಡದಂತೆ
ಗಳಿಗೆ ಯುಗವಾಗಿ ಬಳಲಿರುವೆ ಬಾರೋ

ಹಲ್ಲಿ ಲೊಚಗುಟ್ಟಿದರೂ, ಕರು ನೆಗೆದರೂ
ಇರುವೆ ನಡೆವ ಶಬ್ದ ಸುಳಿದರೂ ಸಾಕು
ಮನಕೆ ನೀ ನಡೆದು ಬಂದೆಂಬ ತಳವೆಳಗು
ಮುನಿಸು ಮನದಲ್ಲಿ ಜಗದ ಜಂಜಾಟದಲ್ಲಿ

ಇಣುಕಿದೆ ಸೂರ್ಯ ರಶ್ಮಿ ತೆರದ ಕಿಟಕಿಯಲಿ
ಸುಯ್ಯುತಿದೆ ಗಾಳಿ ಸುಳಿ ಸುಳಿಯಾಗಿ
ವಾಲುತ್ತ ಪಡುವಣದಿ ನಿತ್ಯ ನಡೆದಿಹನು
ತಡ ಇನ್ನುಯಾಕೋ ಇನಿಯ ನೀಬಾರೋ ಬೇಗ

ಕಾಲಲ್ಲಿ ಕಿರುಗೆಜ್ಜೆಯ ಗಲಿರು ಗಲಿರು ನಾದ
ಕೋಣೆಯಲಿ ಕೈ ಬಳೆಯ ಮನ ಮೋಹಕ ಸದ್ದು
ಉಸಿರ ಬಿಸಿ ಏರುತಿದೆ ನೆನಪಿನ ಸುಳಿದಾಟಕೆ
ರತಿಬಯಕೆಯ ಬಸಿರು ಕ್ಷಣಗಣಿಕೆಯ ನಡೆಸಿದೆ

ಬಿಸಿಕೂಳ ಕೈತುತ್ತು ಉಣಿಸುವ ಬಯಕೆ
ಜೇನುತುಪ್ಪ ಸೇರಿಸಿ ಹಾಲುಸಕ್ಕರೆ ಬೆರಸಿ
ನಿನಗೆ ಕುಡಿಸುವ ಹಂಬಲವು ಮನದಲ್ಲಿ
ಅಂಗನೆ ಅಭಿಸಾರಿಕೆ ನಾನು, ಕಾದಿರುವೆ ಬಾರೋ

ಮನಸ್ವಿನಿ ನೆನಪುಗಳನ್ನು ಮರೆಯಲಾರದೆ ಚಡಪಡಿಸಿದ್ದಾರೆ...:)

ಮರೆತೇನೆ!

ಮರೆತೇನು, ಮನಸಾ ಮರೆತೇನು
ಇದು ಬರಿ ಭ್ರಮೆಯೇನು!
ಮರೆತೆನೆಂಬ ಅರಿವು ನಿಜವಲ್ಲ
ನಿನ್ನ ನೆನಪು ನನ್ನ ಬಿಡದಲ್ಲ!

ಕನಸು ಕಪ್ಪಾಯ್ತು, ಅಸೆಗಳು ಬತ್ತಾಯ್ತು
ಬರಿ ನೆನಪು ಮಾತ್ರ ನನದಾಯ್ತು
ನೀ ಬರುವ ಹಾದಿಯಲಿ, ನಿನ್ನ ಕಾಯುತ ನಾನು
ಕಳೆದಾಯ್ತು ಇನಿಯ, ಯುಗವನ್ನು

ಬತ್ತಿದ ಮನವಿತ್ತು, ಬಾಡಿದ ಮುಖವಿಟ್ಟು
ನೀ ತೊರೆದ ಸತ್ಯವನೂ ಮುಚ್ಚಿಟ್ಟು
ಕಾದು ಕೂತಿಹೆನು ಶಬರಿಯಂತೆ
ಬಾ ನನ್ನ ಉಸಿರಿಗೆ ಉಸಿರಂತೆ

ಸತೀಶ್-ರದ್ದು ವಾಸ್ತವಕ್ಕೆ ಶರಣು ಹೋಗುವ ತಂತ್ರ...:)

...ಶರಣು ಹೋಗಿಹ ಕೂಗು

ಮುಂಬರುವ ಬಾಳ್ವೆಯ ಬೆಳಕಿನ
ದಾರಿಯ ಅಡ್ಡಡ್ಡ ಸೀಳುವ ಕಂಬಿಗಳಿವೆ
ನೆಟ್ಟ ನೋಟದ ತೆರೆದಂಕದ ಪರದೆಯ
ಮುಂದೆ ಅದೆಲ್ಲೋ ಹುದುಗಿಹ ಕಥೆಯಿವೆ.

ಕತ್ತಲೊಳಗೆ ಕುಳಿತು ಕನಸ ಹೆಣೆಯುವ
ಮನಕಂಜಿ ಹೆದರಿದಂತಿಹ ಆಸೆಗಳು
ಬೆಳಕಿನ ಕತ್ತನು ಅಲ್ಲೇ ಹಿಸುಗಿಹ ಪರದೆಯ
ಕೊನೆಯಿಂದ ಕೊನೆಗೆ ಚಾಚಿಕೊಂಡ ಗಳು.

ಬಿಡಿಸಿ ಪೋಣಿಸಿ ಮುಡಿದು ಬದಿಗೊತ್ತಿದ
ಹೂಗಳ ಗುಂಪಿನಲ್ಲೂ ಇನ್ನೂ ಉಳಿದ ನಗು
ಕಾಲವನು ಕತ್ತಲೆಯೊಳಗೆ ಸೇರಿಸಿ ಸುಪ್ತತೆ
ತಪ್ತತೆಗಳಿಗೆ ಶರಣು ಹೋಗಿಹ ಕೂಗು.

ನಿರೀಕ್ಷೆಗಳೇ ಹೀಗೆ ನಾವಂದುಕೊಂಡ ಹಾಗೆ
ಎಂದಾದರೂ ಏನಾದರೂ ಆದದ್ದಿದೆಯೇ
ಬೇಡವೆಂದರೂ ಸುಮ್ಮನೇ ಮುಂದೆ ಹೋಗುತ್ತಲೇ
ಇರುವ ಕಾಲ ಚಿಂತಿಸುವವರನ್ನು ತಡೆದದ್ದಿದೆಯೇ.

ಇರು ನೀನು ಹೇಗೆ ಎಲ್ಲಿ ಬೇಕಾದರೂ
ನನ್ನ ಮನದಾಳದಲ್ಲಿ ಸದಾ ಸುಪ್ತವಾಗಿ
ನಿನ್ನೊಡನೆ ನಾನು ನನ್ನೊಡನೆ ನೀನು
ಎಂದು ಹಾಡುವ ದಿನಗಳು ಶಾಶ್ವತವಾಗಿ.

9 comments:

Annapoorna Daithota said...

adO allihudenna kanasugalu !
hoovina haadiyide raviya prabheyide, aa prabhe nanna kannugalalli belagutide
alliruve ondu dina nanna kanasugala nanasinalli !

ಕುಕೂಊ.. said...

ಅನ್ನಪೂರ್ಣ ದೈತೋಟ ರವರು ತಮ್ಮ ಚುಟುಕು ಕವನವನ್ನು ಕಂಗ್ಲೀಷ್ ನಲ್ಲಿ ಕೀಲಿಸಿದ್ದರು. ನನಗ್ಯಾಕೋ ಕಂಗ್ಲೀಷ್ ನಲ್ಲಿ ಓದಲು ಮತ್ತು ನೋಡಲು ಸರಿ ಎನ್ನಿಸಲಿಲ್ಲ. ಅದಕ್ಕೆ ಅದನ್ನ ಕನ್ನಡದಲ್ಲಿ ಕೀಲಿಸಿರುವೆ. ಅನ್ನಪೂರ್ಣರವರೇ ನಿಮ್ಮ ಅನುಮತಿ ಇಲ್ಲದೇ ನಾನು ಈ ಕೆಲಸ ಮಾಡುತಿದ್ದೇನೆ. ತಪ್ಪಾಗಿದ್ದರೆ ಕ್ಷಮಿಸಿ. ನಿಮಗೆ ಕನ್ನಡ ಕೀಲಿಸುವ ಸೌಕರ್ಯ ಇಲ್ಲವೆಂದುಕೊಂಡು ಈ ಕೆಲಸ ಮಾಡಿದೆ.

ಅದೋ ಅಲ್ಲಿಹುದೆನ್ನ ಕನಸುಗಳು !
ಹೂವಿನ ಹಾದಿಯಿದೆ ರವಿಯ ಪ್ರಭೆ ಇದೆ
ಆ ಪ್ರಭೆ ನನ್ನ ಕಣ್ಣುಗಳಲ್ಲಿ ಬೆಳಗುತಿದೆ
ಅಲ್ಲಿರುವೆ ಒಂದು ದಿನ ನನ್ನ ಕನಸುಗಳ ನನಸಿನಲ್ಲಿ..

** ಕುಕೂ.....
ಪುಣೆ

Annapoorna Daithota said...

Dhanyavadagalu Kumara Swami,
nanna kashta artha madkondu thaavu ee kelsa madiddikke :)

bhadra said...

ನಿನ್ನೆ ನೋಡಲು ಬಂದವರು
ಮಲ್ಲಿಗೆಯ ದಂಡ ಇತ್ತವರು
ನಾಚಿ ತಗ್ಗಿದ ಮೊಗವೆತ್ತಿದವರು
ಅದೇಕೋ ಅದುಹೇಗೋ
ಮನದೊಳಗಚ್ಚಳಿಯದೇ
ನಿಂದಿಹರು

ಬೇಗ ಬರುತ್ತೀನೆಂದವರು
ಯಾಕೋ ಇನ್ನೂ ಬರಲಿಲ್ವೇ?
ಬೆಳಗಿನ ಗಾಡಿ ಬಂದಾಗಿದೆ
ಸಂಜೆಯ ಗಾಡಿ ಹೊರಡಲನುವಾಗಿದೆ

ಎಡಗಣ್ಯಾಕೋ ಅದುರುತಿಹುದಲ್ಲ
ಅಧರ ನಡುಗುತಿಹುದಲ್ಲ
ಎದೆ ಬಡಿತ ಮುಗಿಲೆಡೆ ಓಡುತಿದೆ
ಅದಾಗಬಾರದಲ್ಲ
ಹಾಗಾಗಬಾರದಲ್ಲ
ಹುಸಿಯಾಗಸಲು
ನೀ ಬೇಗ ಬಾರೆಯಲ್ಲ

ನಿನ್ನೆ ಮುಡಿದ ಹೂ
ಅರಳಿದ್ದ ಜಾಜಿ ಮೊಲ್ಲೆ ಮಲ್ಲಿಗೆಯ ದಂಡು
ನಿನ್ನೆ ಅರಳಿತು
ಮುಡಿಯಲಿ ನಗುತಿತ್ತು
ಇಂದು ಕಿಟಕಿಯ ಸರಳಿನ ಮೇಲೆ
ಮುದುಡಿದೆ, ತೂಗಾಡಿದೆ
ಅವುಗಳ ಮೊಗವೇಕೋ ಬಾಡಿದೆ

ಮಲ್ಲಿಗೆ ಜಾಜಿ ನಿಮ್ಮ ಹಾಗೆ
ನಾ ಆಗಬಾರದಲ್ಲವೇನೇ?
ಹೀಗಾಗಬಾರದಲ್ಲವೇನೇ
ಮನದಲಿ ಮೂಡುತಿಹುದು
ಸುಳ್ಳಾಗಲಿ ತಾನೆ?

ಸಮಯ ಓಡುವುದು ಬೇಡ
ಸವಿಗಳಿಗೆಯ ಇನ್ನೂ ಸವಿಯುವುದಿದೆಯಲ್ಲ
ಗಡಿಯಾರ ನಿಂತು ಹೋಗಬಾರದೇ
ಮುಳ್ಳು ಮುನ್ನಡೆಯಬಾರದೇ!
ಮುದುಡಿದ ಹೂ ಅರಳಬಾರದೇ
ಸುಕ್ಕಿಡುತಿಹ ಮೊಗವರಳಬಾರದೇ!

ಎನ್ನ ಕಾಪಾಡು ಹರಿಯೇ
ನಾ ಹೊಗುವೆ ನಿನ್ನ ಮೊರೆಯೇ
ಯಾರ ಬಳಿ ಸುರಿಯಲಿ ಎನ್ನ ಅಳಲು
ಬೇಗ ಬಂದು ತುಂಬಬಾರದೇ ನನ್ನೊಡಲು
...

Vijaya said...

kannadadalli kavana bardu abhyasa illa ... nanage annisiddu ...

ನಿತ್ಯ ನೂತನ ಹೂವು ದಿವ್ಯ ಮುಡಿಯನು ಅರಸಿ
ದಿಟ್ಟ ನೋಟ ಬೆಚ್ಚನೆಯ ಬೆಳಕಿನೆಡೆಗೆ ನಡೆಸಿ
ನಿಂತ ನೋವನು ಮರೆಸಿ, ನಲಿವನ್ನು ಕೈಚಾಚಿ ವರಿಸಿ
ಇಟ್ಟ ಹೆಜ್ಜೆ ಧೃತಿಗೆಡದೆ ಹಸನಾಗಲಿ ಬಾಳು ... ಹರಸಿ :-)

Manjula said...

ಈಗಷ್ಟೇ ಬಂದು ಹೋದ ನೀನು..
ಈಗಷ್ಟೇ ಮುಡಿದು ತೆಗೆದ ಮಲ್ಲಿಗೆ..
ಮಲ್ಲಿಗೆ ಘಮವಿನ್ನೂ ತಾಜಾ..
ನೀನೇಕೆ ಅಷ್ಟು ದೂರ ಹೋದೆ ನನ್ನ ರಾಜ..??

ಸರಳುಗಳು, ಸರಪಳಿಗಳು
ಕಾಣವು ನನಗೆ ಅವುಗಳೆಲ್ಲವೂ..
ಯಾವ ಬಂಧನವಿಲ್ಲ ಈ ಮಲ್ಲಿಗೆ ಘಮಕೆ
ಅಂತೆ ಯಾವ ಬೇಲಿಗಳಿಲ್ಲ ಎನ್ನೊಲವಿನ ನೋಟಕೆ..

ಹೀಗೆ ಬಂದು ಹಾಗೆ ಹೋಗುವ ನಿನ್ನೊಲವ ರೀತಿ
ಆದರೂ ಕಂಗಳಲೇಕೋ ತುಳುಕುತಿದೆ
ನಿನಗಾಗೇ ನನ್ನ ಪ್ರೀತಿ..

ಈ ನನ್ನ ಪ್ರೀತಿ ಒರತೆ
ಕಣ್ಣ ಹನಿಯಾಗುವ ಮುಂಚೆ
ಮತ್ತೆ ಬಂದೆನ್ನ ಸೇರು ಗೆಳೆಯ
ಇನ್ನೆಂದೂ ಬೇರೆಯಾಗದಂತೆ ಮೆಲ್ಲಗೆ..
ನೀನಾಗು ನನ್ನ ಬಾಳಲಿ ನಗುವ ಸದಾ-ಮಲ್ಲಿಗೆ..

ಕುಕೂಊ.. said...

** ಕಾದಿರುವೆ ಅಭಿಸಾರಿಕೆ **

ಇನಿಯ ನಿನ್ನ ಕನಸನ್ನು ಕಂಗಳಲಿ ಕಟ್ಟಿ
ಕಾದಿಹೆನು ಎವೆಮುಚ್ಚದೆ ಕಾತುರದಿಂದ
ನಿದ್ದೆಯಲಿ ಜಾರಿಬಿಡುವೆನೆಂಬ ಆತಂಕ
ಕಂಗಳ ತೆರೆದು ನಿನ್ನ ಹುಡುಕುತಿರುವೆನು

ನಿನ್ನೆ ನೀ ತಂದು ಮುಡಿಸಿದ ಮಲ್ಲೆ
ಮುದುಡಿ ಬಾಡಿ ಮುನಿಸಿ ಮಾಸಿಹವು
ಇಂದು ತರುವೆಯ ಬಿಳಿದುಂಡು ಮಲ್ಲಿಗೆ?
ಎಂದು ಮನಸು ಮೌನದಲಿ ಕೇಳಿಹುದು

ಕಂಗಳ ಕೊಳದೊಳಗೆ ನಿನ್ನದೇ ಬಿಂಬ
ಸನಿಹವಿರದ ನಿನ್ನನ್ನು ಅಲ್ಲಿ ಕಾಣುತಿಹೆನು
ವಿರಹ ವಡಬಾನಲವಾಗಿ ಕುದಿಯುತಿಹುದು
ಬಾರೋ ಕಾಂತ ಕೊಳಬತ್ತುವ ಮೊದಲು

ಒಂಟಿಯಾಗಿ ಕುಳಿತಿರುವೆ ಗೋಡೆಗಳ ನಡುವೆ
ನೆನವುತ್ತ ಮುದದಿ ನೀಕೊಟ್ಟ ಚುಂಬನ
ಆದರದಿ ನೀನು ಬಿಗಿದಪ್ಪಿದ ಬಿಸಿ ಆಲಿಂಗನ
ಮೈಯಲ್ಲಿ ನವುರು ಯಾತನೆ, ಅಣೆಯಲ್ಲಿ ಬೆವರು

ಹಸಿವಿನ ಅರಿವಿಲ್ಲ ಉದರ ಬರಿದಾದರು
ಬರಿ ನಿನ್ನದೇ ನೆನಪು ಕ್ಷಣಕ್ಷಣವು ಕನವರಿಕೆ
ಕಾಲಸೂಚಕನ ಮುಳ್ಳು ತಿರುಗದೆ ತಡದಂತೆ
ಗಳಿಗೆ ಯುಗವಾಗಿ ಬಳಲಿರುವೆ ಬಾರೋ

ಹಲ್ಲಿ ಲೊಚಗುಟ್ಟಿದರೂ, ಕರು ನೆಗೆದರೂ
ಇರುವೆ ನಡೆವ ಶಬ್ದ ಸುಳಿದರೂ ಸಾಕು
ಮನಕೆ ನೀ ನಡೆದು ಬಂದೆಂಬ ತಳವೆಳಗು
ಮುನಿಸು ಮನದಲ್ಲಿ ಜಗದ ಜಂಜಾಟದಲ್ಲಿ

ಇಣುಕಿದೆ ಸೂರ್ಯ ರಶ್ಮಿ ತೆರದ ಕಿಟಕಿಯಲಿ
ಸುಯ್ಯುತಿದೆ ಗಾಳಿ ಸುಳಿ ಸುಳಿಯಾಗಿ
ವಾಲುತ್ತ ಪಡುವಣದಿ ನಿತ್ಯ ನಡೆದಿಹನು
ತಡ ಇನ್ನುಯಾಕೋ ಇನಿಯ ನೀಬಾರೋ ಬೇಗ

ಕಾಲಲ್ಲಿ ಕಿರುಗೆಜ್ಜೆಯ ಗಲಿರು ಗಲಿರು ನಾದ
ಕೋಣೆಯಲಿ ಕೈ ಬಳೆಯ ಮನ ಮೋಹಕ ಸದ್ದು
ಉಸಿರ ಬಿಸಿ ಏರುತಿದೆ ನೆನಪಿನ ಸುಳಿದಾಟಕೆ
ರತಿಬಯಕೆಯ ಬಸಿರು ಕ್ಷಣಗಣಿಕೆಯ ನಡೆಸಿದೆ

ಬಿಸಿಕೂಳ ಕೈತುತ್ತು ಉಣಿಸುವ ಬಯಕೆ
ಜೇನುತುಪ್ಪ ಸೇರಿಸಿ ಹಾಲುಸಕ್ಕರೆ ಬೆರಸಿ
ನಿನಗೆ ಕುಡಿಸುವ ಹಂಬಲವು ಮನದಲ್ಲಿ
ಅಂಗನೆ ಅಭಿಸಾರಿಕೆ ನಾನು, ಕಾದಿರುವೆ ಬಾರೋ



** ಕುಕೂ....


ತಳವೆಳಗು-ಭ್ರಮೆ

ಮನಸ್ವಿನಿ said...

ಮರೆತೇನೆ!

ಮರೆತೇನು, ಮನಸಾ ಮರೆತೇನು
ಇದು ಬರಿ ಭ್ರಮೆಯೇನು!
ಮರೆತೆನೆಂಬ ಅರಿವು ನಿಜವಲ್ಲ
ನಿನ್ನ ನೆನಪು ನನ್ನ ಬಿಡದಲ್ಲ!

ಕನಸು ಕಪ್ಪಾಯ್ತು, ಅಸೆಗಳು ಬತ್ತಾಯ್ತು
ಬರಿ ನೆನಪು ಮಾತ್ರ ನನದಾಯ್ತು
ನೀ ಬರುವ ಹಾದಿಯಲಿ, ನಿನ್ನ ಕಾಯುತ ನಾನು
ಕಳೆದಾಯ್ತು ಇನಿಯ, ಯುಗವನ್ನು

ಬತ್ತಿದ ಮನವಿತ್ತು, ಬಾಡಿದ ಮುಖವಿಟ್ಟು
ನೀ ತೊರೆದ ಸತ್ಯವನೂ ಮುಚ್ಚಿಟ್ಟು
ಕಾದು ಕೂತಿಹೆನು ಶಬರಿಯಂತೆ
ಬಾ ನನ್ನ ಉಸಿರಿಗೆ ಉಸಿರಂತೆ

Satish said...

...ಶರಣು ಹೋಗಿಹ ಕೂಗು

ಮುಂಬರುವ ಬಾಳ್ವೆಯ ಬೆಳಕಿನ
ದಾರಿಯ ಅಡ್ಡಡ್ಡ ಸೀಳುವ ಕಂಬಿಗಳಿವೆ
ನೆಟ್ಟ ನೋಟದ ತೆರೆದಂಕದ ಪರದೆಯ
ಮುಂದೆ ಅದೆಲ್ಲೋ ಹುದುಗಿಹ ಕಥೆಯಿವೆ.

ಕತ್ತಲೊಳಗೆ ಕುಳಿತು ಕನಸ ಹೆಣೆಯುವ
ಮನಕಂಜಿ ಹೆದರಿದಂತಿಹ ಆಸೆಗಳು
ಬೆಳಕಿನ ಕತ್ತನು ಅಲ್ಲೇ ಹಿಸುಗಿಹ ಪರದೆಯ
ಕೊನೆಯಿಂದ ಕೊನೆಗೆ ಚಾಚಿಕೊಂಡ ಗಳು.

ಬಿಡಿಸಿ ಪೋಣಿಸಿ ಮುಡಿದು ಬದಿಗೊತ್ತಿದ
ಹೂಗಳ ಗುಂಪಿನಲ್ಲೂ ಇನ್ನೂ ಉಳಿದ ನಗು
ಕಾಲವನು ಕತ್ತಲೆಯೊಳಗೆ ಸೇರಿಸಿ ಸುಪ್ತತೆ
ತಪ್ತತೆಗಳಿಗೆ ಶರಣು ಹೋಗಿಹ ಕೂಗು.

ನಿರೀಕ್ಷೆಗಳೇ ಹೀಗೆ ನಾವಂದುಕೊಂಡ ಹಾಗೆ
ಎಂದಾದರೂ ಏನಾದರೂ ಆದದ್ದಿದೆಯೇ
ಬೇಡವೆಂದರೂ ಸುಮ್ಮನೇ ಮುಂದೆ ಹೋಗುತ್ತಲೇ
ಇರುವ ಕಾಲ ಚಿಂತಿಸುವವರನ್ನು ತಡೆದದ್ದಿದೆಯೇ.

ಇರು ನೀನು ಹೇಗೆ ಎಲ್ಲಿ ಬೇಕಾದರೂ
ನನ್ನ ಮನದಾಳದಲ್ಲಿ ಸದಾ ಸುಪ್ತವಾಗಿ
ನಿನ್ನೊಡನೆ ನಾನು ನನ್ನೊಡನೆ ನೀನು
ಎಂದು ಹಾಡುವ ದಿನಗಳು ಶಾಶ್ವತವಾಗಿ.