Monday 28 April, 2008

ಚಿತ್ರ- 51




ತ್ರಿವೇಣಿಯವರ ಸೊಗಸಾದ ಕವನ:

ರಕ್ತ ಕಣ್ಣೀರು


ಬಡವನಲ್ಲ ಸ್ವಾಮಿ ನಾನು, ಒಂದು ಕಾಲದ ಶ್ರೀಮಂತ
ಹತ್ತೂರ ಯಜಮಾನ ಹೆಸರು ಲಕ್ಷ್ಮೀಕಾಂತ
ಧನ-ಕನಕ, ಸುಖ-ಶಾಂತಿ ತುಂಬಿತ್ತು ನಮ್ಮನೆಯಲ್ಲಿ
ಸಿರಿದೇವಿ ಇದ್ದಳು ಕಾಲ್ಮುರಿದು ಮೂಲೆಯಲ್ಲಿ

ಬೆಳೆದೆ ರಾಜಕುಮಾರನಂತೆ, ಬದುಕೋ ಸುಖದ ಸುಪ್ಪತ್ತಿಗೆ
ಕೈಹಿಡಿದು ಬಂದಳು ಸುಗುಣೆ, ಸುಕುಮಾರಿ ಮಲ್ಲಿಗೆ
ದಾಂಪತ್ಯ ವಲ್ಲರಿಯಲಿ ಅರಳಿದವು ಮೊಗ್ಗೆರಡು
ನೋವೆಂಬುದಿರಲಿಲ್ಲ ಮನೆಯಾಗಿತ್ತು ನಲುಮೆ ಬೀಡು

ಏನಾಯ್ತೋ, ಹೇಗಾಯ್ತೋ ಬಿತ್ತೋ ಯಾರ ಕಣ್ಣು?
ಗಂಟುಬಿದ್ದಳು ಎಲ್ಲೋ ಥಳುಕು-ಬಳುಕಿನ ಮನೆಮುರುಕ ಹೆಣ್ಣು
ದುರ್ವ್ಯಸನ, ದುಷ್ಟ ಸಹವಾಸದಲಿ ಮುದಗೊಂಡಿತು ಮನಸ್ಸು
ಕ್ಷಯಿಸಿತ್ತು ಸಂಪತ್ತು ; ಜೊತೆಗೆ ಆರೋಗ್ಯ, ಆಯಸ್ಸು

ಮಹಾಮಾರಿಯಂಥ ರೋಗ ಅಡರಿತ್ತು ; ವಾಸಿಯಾಗದಂತೆ!
ಬಂಧು-ಬಳಗ, ಗೆಳೆಯರು ದೂರ ಓಡಿ ಮುಗಿದಿತ್ತು ಸಂತೆ
ಚಿಕಿತ್ಸೆಗೂ ಉಳಿಯದಂತೆ ನುಂಗಿ ನೊಣೆದಿದ್ದೆ ವಿತ್ತ
ಅಳಿದುಳಿದ ಬಾಳಿಗೆ ಹಳಹಳಿಕೆಯೇ ಪ್ರಾಯಶ್ಚಿತ್ತ !

ಮುನಿದರು ಮಕ್ಕಳು, ಮುದುಡಿದಳು ಮಡದಿ
ಈಗ ಮುರುಕು ಗುಡಿಸಲಿನಲ್ಲೇ ನನ್ನ ಬಿಡದಿ
ಹೊಟ್ಟೆ ಪಾಡಿಗೆ ಕೊನೆಗೆ ಈ ಭಿಕ್ಷಾಟನೆಯ ಕರ್ಮ
ನನ್ನಂತೆ ನೀವಾಗಬೇಡಿ, ಮಾಡಿ ಸ್ವಾಮಿ ಧರ್ಮ !



ಸತೀಶ್ ಈ ಬಾರಿ ಹೊಸ ಶೈಲಿಯ ಕವನದ ಮೂಲಕ ಹೀಗೆ ಹೇಳುತ್ತಾರೆ:

ಭಿಕ್ಷೆಯ ಬೇಡುವುದೇ ತಪ್ಪೇ

(ಪ್ರತಿ ಪ್ಯಾರಾದ ಎರಡನೆ ಸಾಲನ್ನು "|" ಚಿಹ್ನೆಯ ನಂತರದ ಪದವನ್ನು ಸೇರಿಸಿಕೊಂಡು ಮತ್ತೊಮ್ಮೆ ಓದಿಕೊಳ್ಳುವುದು)

ಎಲ್ಲೆಡೆ ಬೇಡುವ ಜನರಿರುವಾಗ
ತಲೆತಲೆಗೊಂದು ಹೊಸರಾಗ| ಇರುವ
ಜನರ ನಡುವೆ
ಭಿಕ್ಷೆಯ ಬೇಡುವುದೇ ತಪ್ಪೇ.

ಪ್ರೀತಿಯ ಭಿಕ್ಷೆ ಬೇಡುತ ಪಡ್ಡೇ ಹುಡುಗರು
ಹೊತ್ತುಗೊತ್ತಿರದ ಶೂರರು| ನಮ್ಮ
ಪಡ್ಡೆಗಳ ನಡುವೆ
ಭಿಕ್ಷೆಯ ಬೇಡುವುದೇ ತಪ್ಪೇ.

ರಾಮರಾಜ್ಯದ ಆಸೆಯ ತೋರಿ
ಬಡಬಾಯಿಯನು ಜಗತಿಗೆ ಸಾರಿ| ಪುಕ್ಕಲ
ಖಾದಿ ತೊಟ್ಟವರೆದುರು
ಭಿಕ್ಷೆಯ ಬೇಡುವುದೇ ತಪ್ಪೇ.

ಸರಕಾರಿ ಕೆಲಸ ದೇವರ ಕೆಲಸ
ಖಾಕಿಯ ಶಿಸ್ತನು ಕಲಿಸುವ ಕೆಲಸ| ಎನ್ನುತ
ಎಂಜಲ ಕಾಸು ಬೇಡುವರೆದುರು
ಭಿಕ್ಷೆಯ ಬೇಡುವುದೇ ತಪ್ಪೇ.

ಸಂಸಾರ ಬಿಟ್ಟು ಸನ್ಯಾಸ ತೊಟ್ಟು
ಕಾವಿಯ ತ್ಯಾಗವ ತಿಳಿಸುವರು| ಆದರೂ
ಗುಪ್ತ ಜೀವನ ಸವೆಸುವರೆದುರು
ಭಿಕ್ಷೆಯ ಬೇಡುವುದೇ ತಪ್ಪೇ.

ಇಲ್ಲದವರು ಇದ್ದವರೆದುರು ಬೇಡುವುದು ಸಹಜ
ಇದ್ದೂ ಇದ್ದೂ ಇಲ್ಲವೆನ್ನುವರು ನಿಜ| ಬುದ್ಧಿ
ತಿಳಿದ ಜನರೆದಿರು ನಾವು
ಭಿಕ್ಷೆಯ ಬೇಡುವುದೇ ತಪ್ಪೇ.


ಕುಮಾರ ಸ್ವಾಮಿ ಕಡಾಕೊಳ್ಳರ ಮನಮುಟ್ಟುವಕವನ:

* * ನನ್ನ ಗತಿ **

ಒಣಕಲಾಯಿತು ಅಟ್ಟೆ
ಸಣಕಲಾಯಿತು ಮೈ
ಗುಳಿಬಿದ್ದವು ಕಣ್ಣು
ಬಿಳಿಯೊಡೆದವು ಜವಿ
ಮಂದವಾಯಿತು ದ್ವನಿ
ಕುಗ್ಗುತಿಹ ನೋಟ
ಕರಗುತಿಹ ನೆನಪು
ಸೆಳವಿನಲಿ ಅಳವಿ
ಕೈಯಲ್ಲಿ ಊರುಗೋಲು
ಸರಿದ ಸಂಬಂಧಗಳು
ಬಿರದ ಬದುಕಿನ ದಾರಿ
ಕಣ್ಮರೆಯಾದ ಕನಸು
ದಿಶೆ ಕಾಣದ ನೋವು
ಉಕ್ಕುತಿಹ ದುಮ್ಮಳ
ಬಿಕ್ಕುತಿದೆ ಜೀವ
ಸ್ವಾರ್ಥ ಗಾಳಕ್ಕೆ ಸಿಕ್ಕಿ
ದಿಕ್ಕುಗಾಣದೆ ಬಿದ್ದಿಹೆನು
ತಿರುಪೆ ನೀಡಿರೋ
ಒಂದು
ತುತ್ತು ಕೊಡಿರೋ
ಬಿಟ್ಟು ಹೋಗದ
ಜೀವಾತ್ಮವನು
ಹೊತ್ತು ತಿರುಗಬೇಕು,

ಹಿಂದೆ ಹೇಗಿದ್ದೆ
ನನಗೆ ಯಾರು ಸಾಟಿ
ಎಂದು ಎದೆ ಮೀಟಿ
ಎಲ್ಲರೊಳು ಅಹಮ್ಮಿನಲಿ
ಕೂಗಿ ಮೆರೆದಿದ್ದೆ
ಕಾಲನ ನಿಯಮನ
ಮರೆತು ಸೆಟೆದಿದ್ದೆ
ಎಲ್ಲ ನನ್ನಹುದೆಂದು
ಕೊಂದು ತಿಂದಿದ್ದೆ
ಇಂದು ಬದುಕಲು
ಒಂದು ಅಗುಳು ಕೂಳಿಲ್ಲ
ಇಂದೆನಗೆ ನಿಮ್ಮನ್ನು
ಬೇಡದೆ ವಿಧಿಯಿಲ್ಲ
ಬೇಡುವೆನು ತಿರುಪೆ
ಕರುಣಿಸಿ ನೀಡಿರೋ
ಬದುಕಿ ಕರ್ಮ ತೀರಿಸಲು

ನನ್ನಂತೆ ನೀವಾಗದಿರಲು
ನನ್ನೊಂದು ಮಾತು ಕೇಳಿರೋ
ಸ್ವಾರ್ಥಕ್ಕಿರಲಿ ಕಿಂಚಿತ್ತು
ಬುದ್ಧಿಯಲಿ ಕಡಿವಾಣ,
ಇದೆಯೆಂದು ಅಧ್ವಾನ
ಮಾಡದೆ ನಿಧಿಯನ್ನು
ಹಾಸಿಗೆ ಇದ್ದಷ್ಟು ಕಾಲು
ಚಾಚಿ ಬದುಕಿರೋ

ಪದಗಳ ಅರ್ಥ:

ಅಟ್ಟೆ-ಚರ್ಮ, ತೊಗಲು
ಜವಿ-ಕೂದಲು
ಅಳವಿ-ಶಕ್ತಿ

3 comments:

sritri said...

ರಕ್ತ ಕಣ್ಣೀರು


ಬಡವನಲ್ಲ ಸ್ವಾಮಿ ನಾನು, ಒಂದು ಕಾಲದ ಶ್ರೀಮಂತ
ಹತ್ತೂರ ಯಜಮಾನ ಹೆಸರು ಲಕ್ಷ್ಮೀಕಾಂತ
ಧನ-ಕನಕ, ಸುಖ-ಶಾಂತಿ ತುಂಬಿತ್ತು ನಮ್ಮನೆಯಲ್ಲಿ
ಸಿರಿದೇವಿ ಇದ್ದಳು ಕಾಲ್ಮುರಿದು ಮೂಲೆಯಲ್ಲಿ

ಬೆಳೆದೆ ರಾಜಕುಮಾರನಂತೆ, ಬದುಕೋ ಸುಖದ ಸುಪ್ಪತ್ತಿಗೆ
ಕೈಹಿಡಿದು ಬಂದಳು ಸುಗುಣೆ, ಸುಕುಮಾರಿ ಮಲ್ಲಿಗೆ
ದಾಂಪತ್ಯ ವಲ್ಲರಿಯಲಿ ಅರಳಿದವು ಮೊಗ್ಗೆರಡು
ನೋವೆಂಬುದಿರಲಿಲ್ಲ ಮನೆಯಾಗಿತ್ತು ನಲುಮೆ ಬೀಡು

ಏನಾಯ್ತೋ, ಹೇಗಾಯ್ತೋ ಬಿತ್ತೋ ಯಾರ ಕಣ್ಣು?
ಗಂಟುಬಿದ್ದಳು ಎಲ್ಲೋ ಥಳುಕು-ಬಳುಕಿನ ಮನೆಮುರುಕ ಹೆಣ್ಣು
ದುರ್ವ್ಯಸನ, ದುಷ್ಟ ಸಹವಾಸದಲಿ ಮುದಗೊಂಡಿತು ಮನಸ್ಸು
ಕ್ಷಯಿಸಿತ್ತು ಸಂಪತ್ತು ; ಜೊತೆಗೆ ಆರೋಗ್ಯ, ಆಯಸ್ಸು

ಮಹಾಮಾರಿಯಂಥ ರೋಗ ಅಡರಿತ್ತು ; ವಾಸಿಯಾಗದಂತೆ!
ಬಂಧು-ಬಳಗ, ಗೆಳೆಯರು ದೂರ ಓಡಿ ಮುಗಿದಿತ್ತು ಸಂತೆ
ಚಿಕಿತ್ಸೆಗೂ ಉಳಿಯದಂತೆ ನುಂಗಿ ನೊಣೆದಿದ್ದೆ ವಿತ್ತ
ಅಳಿದುಳಿದ ಬಾಳಿಗೆ ಹಳಹಳಿಕೆಯೇ ಪ್ರಾಯಶ್ಚಿತ್ತ !

ಮುನಿದರು ಮಕ್ಕಳು, ಮುದುಡಿದಳು ಮಡದಿ
ಈಗ ಮುರುಕು ಗುಡಿಸಲಿನಲ್ಲೇ ನನ್ನ ಬಿಡದಿ
ಹೊಟ್ಟೆ ಪಾಡಿಗೆ ಕೊನೆಗೆ ಈ ಭಿಕ್ಷಾಟನೆಯ ಕರ್ಮ
ನನ್ನಂತೆ ನೀವಾಗಬೇಡಿ, ಮಾಡಿ ಸ್ವಾಮಿ ಧರ್ಮ !

Satish said...

ಭಿಕ್ಷೆಯ ಬೇಡುವುದೇ ತಪ್ಪೇ

(ಪ್ರತಿ ಪ್ಯಾರಾದ ಎರಡನೆ ಸಾಲನ್ನು "|" ಚಿಹ್ನೆಯ ನಂತರದ ಪದವನ್ನು ಸೇರಿಸಿಕೊಂಡು ಮತ್ತೊಮ್ಮೆ ಓದಿಕೊಳ್ಳುವುದು)

ಎಲ್ಲೆಡೆ ಬೇಡುವ ಜನರಿರುವಾಗ
ತಲೆತಲೆಗೊಂದು ಹೊಸರಾಗ| ಇರುವ
ಜನರ ನಡುವೆ
ಭಿಕ್ಷೆಯ ಬೇಡುವುದೇ ತಪ್ಪೇ.

ಪ್ರೀತಿಯ ಭಿಕ್ಷೆ ಬೇಡುತ ಪಡ್ಡೇ ಹುಡುಗರು
ಹೊತ್ತುಗೊತ್ತಿರದ ಶೂರರು| ನಮ್ಮ
ಪಡ್ಡೆಗಳ ನಡುವೆ
ಭಿಕ್ಷೆಯ ಬೇಡುವುದೇ ತಪ್ಪೇ.

ರಾಮರಾಜ್ಯದ ಆಸೆಯ ತೋರಿ
ಬಡಬಾಯಿಯನು ಜಗತಿಗೆ ಸಾರಿ| ಪುಕ್ಕಲ
ಖಾದಿ ತೊಟ್ಟವರೆದುರು
ಭಿಕ್ಷೆಯ ಬೇಡುವುದೇ ತಪ್ಪೇ.

ಸರಕಾರಿ ಕೆಲಸ ದೇವರ ಕೆಲಸ
ಖಾಕಿಯ ಶಿಸ್ತನು ಕಲಿಸುವ ಕೆಲಸ| ಎನ್ನುತ
ಎಂಜಲ ಕಾಸು ಬೇಡುವರೆದುರು
ಭಿಕ್ಷೆಯ ಬೇಡುವುದೇ ತಪ್ಪೇ.

ಸಂಸಾರ ಬಿಟ್ಟು ಸನ್ಯಾಸ ತೊಟ್ಟು
ಕಾವಿಯ ತ್ಯಾಗವ ತಿಳಿಸುವರು| ಆದರೂ
ಗುಪ್ತ ಜೀವನ ಸವೆಸುವರೆದುರು
ಭಿಕ್ಷೆಯ ಬೇಡುವುದೇ ತಪ್ಪೇ.

ಇಲ್ಲದವರು ಇದ್ದವರೆದುರು ಬೇಡುವುದು ಸಹಜ
ಇದ್ದೂ ಇದ್ದೂ ಇಲ್ಲವೆನ್ನುವರು ನಿಜ| ಬುದ್ಧಿ
ತಿಳಿದ ಜನರೆದಿರು ನಾವು
ಭಿಕ್ಷೆಯ ಬೇಡುವುದೇ ತಪ್ಪೇ.

ಕುಕೂಊ.. said...

* * ನನ್ನ ಗತಿ **

ಒಣಕಲಾಯಿತು ಅಟ್ಟೆ
ಸಣಕಲಾಯಿತು ಮೈ
ಗುಳಿಬಿದ್ದವು ಕಣ್ಣು
ಬಿಳಿಯೊಡೆದವು ಜವಿ
ಮಂದವಾಯಿತು ದ್ವನಿ
ಕುಗ್ಗುತಿಹ ನೋಟ
ಕರಗುತಿಹ ನೆನಪು
ಸೆಳವಿನಲಿ ಅಳವಿ
ಕೈಯಲ್ಲಿ ಊರುಗೋಲು
ಸರಿದ ಸಂಬಂಧಗಳು
ಬಿರದ ಬದುಕಿನ ದಾರಿ
ಕಣ್ಮರೆಯಾದ ಕನಸು
ದಿಶೆ ಕಾಣದ ನೋವು
ಉಕ್ಕುತಿಹ ದುಮ್ಮಳ
ಬಿಕ್ಕುತಿದೆ ಜೀವ
ಸ್ವಾರ್ಥ ಗಾಳಕ್ಕೆ ಸಿಕ್ಕಿ
ದಿಕ್ಕುಗಾಣದೆ ಬಿದ್ದಿಹೆನು
ತಿರುಪೆ ನೀಡಿರೋ
ಒಂದು
ತುತ್ತು ಕೊಡಿರೋ
ಬಿಟ್ಟು ಹೋಗದ
ಜೀವಾತ್ಮವನು
ಹೊತ್ತು ತಿರುಗಬೇಕು,

ಹಿಂದೆ ಹೇಗಿದ್ದೆ
ನನಗೆ ಯಾರು ಸಾಟಿ
ಎಂದು ಎದೆ ಮೀಟಿ
ಎಲ್ಲರೊಳು ಅಹಮ್ಮಿನಲಿ
ಕೂಗಿ ಮೆರೆದಿದ್ದೆ
ಕಾಲನ ನಿಯಮನ
ಮರೆತು ಸೆಟೆದಿದ್ದೆ
ಎಲ್ಲ ನನ್ನಹುದೆಂದು
ಕೊಂದು ತಿಂದಿದ್ದೆ
ಇಂದು ಬದುಕಲು
ಒಂದು ಅಗುಳು ಕೂಳಿಲ್ಲ
ಇಂದೆನಗೆ ನಿಮ್ಮನ್ನು
ಬೇಡದೆ ವಿಧಿಯಿಲ್ಲ
ಬೇಡುವೆನು ತಿರುಪೆ
ಕರುಣಿಸಿ ನೀಡಿರೋ
ಬದುಕಿ ಕರ್ಮ ತೀರಿಸಲು

ನನ್ನಂತೆ ನೀವಾಗದಿರಲು
ನನ್ನೊಂದು ಮಾತು ಕೇಳಿರೋ
ಸ್ವಾರ್ಥಕ್ಕಿರಲಿ ಕಿಂಚಿತ್ತು
ಬುದ್ಧಿಯಲಿ ಕಡಿವಾಣ,
ಇದೆಯೆಂದು ಅಧ್ವಾನ
ಮಾಡದೆ ನಿಧಿಯನ್ನು
ಹಾಸಿಗೆ ಇದ್ದಷ್ಟು ಕಾಲು
ಚಾಚಿ ಬದುಕಿರೋ

ಪದಗಳ ಅರ್ಥ:

ಅಟ್ಟೆ-ಚರ್ಮ, ತೊಗಲು
ಜವಿ-ಕೂದಲು
ಅಳವಿ-ಶಕ್ತಿ


** ಕುಕೂ...
ಪುಣೆ
05/05/08