Wednesday 21 May, 2008

ಚಿತ್ರ ೫೪



ಈ ಬಾರಿಯ ಚಿತ್ರಕ್ಕ ಕುಮಾರ ಸ್ವಾಮಿ ಕಡಾಕೊಳ್ಳರು ಮೂರು ಕವನಗಳನ್ನ ಬರೆದಿದ್ದಾರೆ.

** ಗೊಡ್ಡ ಮೇಷ್ಟ್ರುಗಳು **

ಎಂತ ಹೆಡ್ಡರೋ ಈ ಗೊಡ್ಡ ಮೇಷ್ಟ್ರುಗಳು|
ಗುಡ್ಡಗಾಡಿನೋರಿಗಿಂತ ದೊಡ್ಡ ದಡ್ಡರು||

ದೇವರೇ ಇಲ್ಲಂತ ದಿನವೆಲ್ಲ ಬೊಗಳೆ ಹೇಳ್ತಾರೆ|
ಮುಂದಿನ ದಿನ ಬೂದಿ ಬಳ್ಕಂಡ್ ಗುಡಿಗೆ ಹೋಗ್ತಾರೆ||

ಬೀಡಿ ಸಿಗರೇಟ್ ದೇಹಕ್ಕೆ ಕೆಟ್ಟದ್ದಂತ ಕೂಯ್ತಾರೆ|
ಗೋಡೆ ಮರೆಯಲ್ಲಿ ಹೋಗಿ ತಾವೆ ಹೊಗೆ ಬಿಡ್ತಾರೆ||

ತಮ್ಮ ಕೆಲಸ ತಾವೆ ಮಾಡ್ಕೋಬೇಕಂತ ಕೊರಿತಾರೆ|
ಚಹ ಕಾಫಿ ನೀರು ಬೀಡಿ ತರಲು ನಮ್ಮನೇ ಕಳಸ್ತಾರೆ||

ಅಪ್ಪ ಅಮ್ಮ ದೇವರ ಸಮಾನ ಅಂತ ವೇದಾಂತ ಹೇಳ್ತಾರೆ|
ತಮ್ಮ ಅಪ್ಪ ಅಮ್ಮನ್ನೇ ಮನೆಯಿಂದ ಆಚೆ ದೂಕಿದ್ದಾರೆ||

ರಾಮ ಕೃಷ್ಣ ಬುದ್ಧ ಬಸವ ಅಲ್ಲ ಕ್ರಿಸ್ತ ಎಲ್ಲರು ಒಂದೇ ಅಂತ್ಹೇತಾರೆ|
ಊರಲ್ಲೇಲ್ಲಾ ನಮ್ಮ ದೇವರೆ ದೊಡ್ಡದಂತ ಕೂಗಾಡ್ತಾರೆ||

ವರದಕ್ಷಿಣಿ ಮಹಾಪಾಪ ಅನ್ನೋ ಪಾಠನ ಆಪಾಟಿ ಹೇಳ್ತಾರೆ|
ಊರಲ್ಲಿ ಎಲ್ಲರಿಗಿಂತ ಇವರೆ ಜಾಸ್ತಿ ವರದಕ್ಷಿಣೆ ತೊಗೊಂತಾರೆ||

ಸುಳ್ಳು ಹೇಳ್ಬಾರ್ದು ಅಂತ ನಮಗೆ ಹೊಡೆದು ಹೊಡೆದು ಹೇಳ್ತಾರೆ|
ಮೇಲಿನ ಇಷ್ಟೆಲ್ಲ ಸುಳ್ಳನ್ನ ಮುಂಜಾನೆಯಿಂದ ಸಂಜೆವರಿಗೆ ಹೇಳ್ತಾರೆ||

ಹೇಗೆ ನಂಬೋದು ಇವರನ್ನ ನಂಗೇನು ತಿಳಿವಲ್ದೂ|
ಏನಾದರು ಆಗಲಿ ನಾಳಿಂದ ಇಂತ ಶಾಲೇಗೆ ಬರಬಾರದು||


** ಅಲ್ಲಿದೆ ನಮ್ಮೂರು **

ಅಲ್ಲಿದೆ ನಮ್ಮೂರು
ಅಂದ ಚಂದದ ತವರೂರು|
ಇಲ್ಲಿಂದ ನಡದೋದರೆ
ಘಳಿಗೆಯಲಿ ಸಿಕ್ಕುವುದು||

ಹೋಗಿ ಬರೋಣವೇ
ಆಡುತ್ತ ನಾವಿಂದು|
ಅಜ್ಜ ಅಜ್ಜಿಯ ಕೂಡಿ
ಕೇಳೋಣ ನಮ್ಮೂರಿಗೆ ಬಾ ಎಂದು||

ಕಬ್ಬು ಬೆಳೆದಿರುತೈತೆ
ನಮ್ಮ ದಿನ್ನೆಯ ಹೊಲದಲ್ಲಿ|
ಸಿಗಿಸಿಗಿದು ತಿನ್ನುತ್ತ ಸವಿಯೋಣ
ಹಿಗ್ಗಿನಲಿ ನಾವೆಲ್ಲ ಕೂಡಿಕೊಂಡು||

ನಮ್ಮನೆಯ ಬಿಳಿ ಹಸು
ಈದೈತೆ ಸಣ್ಣ ಕೆಂಗರು|
ಹಿಡಿಯಾಕೆ ಹೋದರೆ
ಚಂಗನೆ ನಗೆದೋಡುವುದು||

ಊರಚೆ ತುಂಬಿ ತುಳುಕಾಡೈತೆ
ನಮ್ಮೂರ ದೊಡ್ಡ ಕೆರೆಯು|
ತೇಲಿ ಬಿಡೋಣ ನೀರಲ್ಲಿ
ನಮ್ಮ ಕಾಗದದ ಡೋಣಿಗಳನು||

ತೆಂಗಿನ ಮರ ತುಂಬ್ಯಾವೆ
ನಮ್ಮ ತೋಟದ ತುಂಬೆಲ್ಲ|
ಕುಡಿದು ಬರೋಣವೆ
ದೊಡ್ಡ ಎಳೆಗಾಯಿ ನೀರು||

ಹಾಲುಬೆಳೆಸೆ ತುಂಬಿರುತಾವೆ
ತೂಗುವಾ ರಾಗಿಯ ಹೊಲದಾಗೆ|
ಉರಿಹಾಕಿ ಗರಿಗೊಂಚಲಿಗೆ
ಸುಟ್ಟ ಬೆಳೆಸೆ ಬಿಡಿಸಿ ತಿನ್ನೋಣ||

ಮಾವೀನ ಮರದ ತೋಪು
ಕಾಡಂತೆ ತೂಗಿ ಬೆಳೆದಿರುತೈತೆ|
ಎಲ್ಲಿ ನೊಡಿದರು ಅಲ್ಲಿ
ನವಿಲುಗಳೇ ಇರುತಾವೆ ನೋಡು||

ನಮ್ಮೂರಿಗೆ ಹೋದರೆ ಸಿಕ್ಕುವು
ನಮಗೆ ಉಪ್ಪು ಹುಣಿಸೆ ಹಣ್ಣು|
ಈ ದೊಡ್ಡ ಗುಟ್ಟು ಯಾರಿಗು
ಹೇಳೋಣ ಬ್ಯಾಡ ನೋಡು||

ಹಳ್ಳದಲಿ ಇರುತಾವೆ ಬಣ್ಣ ಬಣ್ಣದ
ಹಕ್ಕಿಗಳು ಹಿಂಡು ಹಿಂಡಾಗಿ|
ಮರ ಕೊಂಬೆ ಗಿಡ ಪೊದೆಯಲಿ
ಕಟ್ಟಿರುತ್ತಾವೆ ಸಣ್ಣ ಸಣ್ಣ ಗೂಡು||

ತೋಟದ ಬೇಲಿಯಲಿ ಇರುತಾವೆ
ಹತ್ತಾರು ಜೇನಿನ ಗೂಡು|
ನಮ್ಮೂರ ತಿಮ್ಮನಿಗೆ ಕೇಳಿದರೆ
ದೊಡ್ಡದು ಬಿಡಿಸಿ ಕೊಡುವನು ನೊಡು||

ನಮ್ಮ ಮನೆಯಲಿ ಇರುತಾವೆ
ದೊಡ್ಡ ಬಿಳಿ ಎತ್ತಿನ ಜೋಡು|
ಚಕ್ಕಡಿಗೆ ಹೂಡಿದರೆ ಅವುಗಳ
ಜೋರಿನ ಓಟ ಬಲು ಸೊಬಗು ನೋಡು||

ಅಲ್ಲಿ ಇರುವುದಿಲ್ಲ ನಮಗೆ
ಈ ಶಾಲೆಯ ತಂಟೆ ತಕರಾರು|
ನಮ್ಮೂರ ಗೆಳೆಯ ಗುಂಪಲ್ಲಿ
ನಾವೇ ಯುವರಾಣಿಯರು(ರಾಜರು) ನೋಡು||

ಅಲ್ಲಿಂಟು ಏನೆಲ್ಲ ನಮಗಿಲ್ಲಿ ಕಾಣದ್ದು
ಅಲ್ಲಿಂಟು ಏನೆಲ್ಲ ಇಲ್ಯಾರು ಹೇಳದ್ದು|
ಸ್ನೇಹ ಉಂಟು, ಸಲಿಗೆಯುಂಟು, ಸಿರಿಯುಂಟು
ಎಲ್ಲರೂ, ಎಲ್ಲದೂ ನಮ್ಮದೆಂಬ ಭಾವವುಂಟು||

ಹೋಗೋಣ ಬನ್ನಿರೇ ಗಂಗೆ, ಗೌರಿ
ಅಲ್ಲಿ ಇರುತಾರೆ ಸೀತೆ, ಸುಬ್ಬಿ, ಸುವ್ವಿ||
ದಿನವೆಲ್ಲ ತಿರುಗಾಡಿ ಜೊತೆಯಲ್ಲಿ ಕುಣಿದಾಡಿ
ಸಂಜೀಗೆ ಬರೋಣ ಗುಟ್ಟು ನಮ್ಮಲ್ಲೇ ಇರಲಿ||


** ಅಕ್ಕರೆಯ ಗೆಳತಿಯರು **

ಮುನಿಸಿ ಕೊಂಡಾಳೆ ನನ್ನ ಜೊತೆ ಯಾಕೋ ತಿಳಿಯದು
ತಿಳಿಸಿ ಹೇಳು ನಿನಾದರು ಅವಳಿಗೊಮ್ಮೆ ಇಂದು|
ಕಾರಣ ಕೇಳಿದರೆ ಊದಿಸುತ್ತಾಳೆ ಕೆಂಪಗೆ ಮಾಡಿ ಕೆನ್ನೆ
ಉರಿಗಣ್ಣಿನಲಿ ನೋಡುತ್ತ ಸುಟ್ಟು ಬಿಡುವವಳಂತೆ||

ನಿನ್ನೆ ಹೇಳಿದ್ದೆ ಇವಳಿಗೆ ಕಜ್ಜಾಯ ತರುವೆನೆಂದು
ಅಮ್ಮನ ಕೇಳಿದ್ದಕ್ಕೆ ಒದೆ ತಿಂದು ಬಂದೆ|
ಎಷ್ಟು ಹೇಳಿದರು ಇವಳಿಗೆ ಅರ್ಥವಾಗದು ಇಂದು
ನೀನೇ ತಂದು ಕೊಡು ಇವಳಿಗೆ ಎರಡು ಲಡ್ಡು ಉಂಡೆ||

ಅವಳೆಂದರೆ ನನಗೆ ಎಲ್ಲಿಲ್ಲದ ಅಕ್ಕರೆ
ಜೊತೆಗಿದ್ದರೆ ಅದುವೆ ನನಗೆ ಸಿಹಿ ಜೇನು ಸಕ್ಕರೆ|
ನಮ್ಮಲ್ಲಿದ್ದಂತೆ ಅವಳಲ್ಲಿ ಇಲ್ಲನೋಡು ಬ್ಯಾಗು
ಅದಕೆ ಕೊಟ್ಟು ಬಿಡುವೆ ಇಂದೇ ನನ್ನ ಕೆಂಪು ಬ್ಯಾಗು||

ನಾನು ಬರೆದಿಲ್ಲ ಮೇಷ್ಟ್ರುಕೊಟ್ಟ ಮನೆಕೆಲಸದ ಪಾಠ
ನೀವು ತೋರಿಸಿರಿ ಈಗಲೆ ಬರದು ಮುಗಿಸುವೆ ಪಟಪಟ|
ಯಾಕೊ ಬೇಸರಿಕೆ ನೀವಿಲ್ಲದ ಮನೆಯಲ್ಲಿನ ಪಾಠ
ನಮ್ಮ ಮನೆಯಲ್ಲಿ ಸೇರಿ ಓದೋಣ ಇದಕೆ ನಾನು ದಿಟ||

ನಮ್ಮಮ್ಮ ಮಾಡಿ ಡಬ್ಬಿಯಲಿ ಇಟ್ಟಾಳೆ ಚಿತ್ರನ್ನ ಬೋಂಡ
ನಿಮಗಾಗಿ ಕದ್ದು ತಂದಿನಿ ಚಕ್ಕುಲಿ ಕೋಡುಬಳೆ ವಡ|
ನೀವೇನು ತಂದಿರುವಿರಿ ನಾನಾಗಲೆ ಕದ್ದು ನೋಡಿರುವೆ
ತಿಂದು ಮುಗಿಸೋಣ ಅವರೆಲ್ಲ ಬರುವ ಮೊದಲೆ||

ಬಿಟ್ಟು ಹೋಗಬೇಡಿರಿ ನಾನೇನಾದರು ತಪ್ಪು ಮಾಡಿದರೆ
ತಿದ್ದಬೇಕು ಒಬ್ಬರಿಗೊಬ್ಬರು ಜೊತೆಗಿದ್ದುಕೊಂಡು|
ಯಾವಾಗಲು ಜೊತೆಗೆ ಇರೋಣ ಜಗಳವಾಡದೆ ಎಂದು
ಇದಕೆ ಸಾಕ್ಷಿಯಾಗಿ ಇರಲಿ ಈ ಕಲ್ಲುಬಂಡೆಯ ಕಟ್ಟೆಯು||


ತ್ರಿವೇಣಿಯವರ ಕವನ:

ಮುಡಿಗೇರಲಿ ಸಾಧನೆ

ಕೇಳಿರೆ ಗೆಳತಿಯರೇ, ನಿಮ್ಮಮ್ಮ, ಅಜ್ಜಿಗಿಂತ ನೀವೇ ಪುಣ್ಯವಂತರು
ಓದಿ-ಬರೆದು ಮಾಡಲು, ಅವರಿಗ್ಯಾರು ನೆರವು ಕೊಟ್ಟರು?
ಹೆಣ್ಣಿಗೇಕೆ ಶಿಕ್ಷಣ? ಅದು ಪರರ ಮನೆಯ ಬೆಳಕು
ಕಸೂತಿ, ರಂಗೋಲಿ, ಹಾಡು-ಹಸೆ ಬಂದರಾಯಿತು, ಸಾಕು

ವರ್ಷ ಎಂಟಕ್ಕೇ ಮದುವೆ, ಬಸುರು, ಬಾಣಂತನದ ಕಾಟ
ಕಸಮುಸುರೆ, ಹೊರೆಗೆಲಸ; ಮನೆಮಂದಿಗೆ ಹೊತ್ತುಹೊತ್ತಿನೂಟ
ಮೂವತ್ತಕ್ಕೇ ಮುದಿಯಾಗಿ ಅಡರಿತ್ತು ಹರಯದಲ್ಲೇ ಮುಪ್ಪು
ಹೆಣ್ಣಾಗಿ ಹುಟ್ಟಿದ್ದೊಂದೇ ಅವರು ಮಾಡಿದಂಥ ತಪ್ಪು!

ಕೇಳಿ ಮುದ್ದು ಹುಡುಗಿಯರೇ, ಇಂದು ಕಾಲ ಬದಲಾಗಿದೆ
ಗಂಡಿಗಿಂತ ಹೆಣ್ಣಿನದೇ ಒಂದು ಕೈ ಮೇಲಾಗಿದೆ
ಅಂದಾಗಿಹ ಅನ್ಯಾಯಕೆ ಇಂದು ನ್ಯಾಯ ಪಡೆಯಿರಿ
ಛಲದಿಂದ ಮುಂದೆ ನುಗ್ಗಿ ಯಶದ ಬೆನ್ನು ಹಿಡಿಯಿರಿ

ಹಾಳುಹರಟೆಯಲ್ಲಿ ನೋಡಿ, ಹೇಗೆ ಹೋಗುತಿದೆ ನಿಮ್ಮ ಹೊತ್ತು?
ತಿಳಿದಿಲ್ಲವೇ- ಕಳೆದ ಕಾಲ ಸಿಗದು, ಅದು ಒಡೆದ ಮುತ್ತು
ಇರಲಿ ನೋಟ ಗುರಿಯ ಕಡೆಗೆ, ಮುಡಿಗೇರಿಸಿ ಸಾಧನೆ
ನಿಮ್ಮ ಬದುಕೇ ನೀಡಲಿ ಉಳಿದವರಿಗೂ ಪ್ರಚೋದನೆ!



ಸತೀಶ ರ ಕವನ
ಕನಸುಗಳ ಜಮಖಾನದ ಮೇಲೆ ಕೂತು ತೇಲುತ್ತಾ

ಎರಡು ಜಡೆ ಬೆನ್ನಿಗೊಂದೊಂದು ಚೀಲ
ಸುಡುವ ಬಿಸಿಲಿದ್ದರೂ ಅಂಧಾನುಕರಣೆಯ
ಕಾಲ್ ಚೀಲ ಸಮವಸ್ತ್ರ ಸಮವನ್ನು ಸಾರಿ
ಭಿನ್ನಮತದೊಳಗೆ ಒಮ್ಮತವನು ತೋರಿ.

ನಿರೀಕ್ಷೆಯಿದೆ ಮುಂಬರುವ ನಾಳೆಗಳ ಬೆನ್ನ ಸವರುವ
ಕನಸುಗಳ ಜಮಖಾನದ ಮೇಲೆ ಕೂತು ತೇಲುತ್ತಾ
ಪರೀಕ್ಷೆಯಿದೆ ವರ್ಷಕ್ಕೊಂದೆರಡು ಮತ್ತೆ ಆಗಾಗ್ಗೆ
ಅಲ್ಲಲ್ಲಿ ಅದೇನೇನೋ ಜನ ನಮ್ಮನ್ನೇ ಕಿತ್ತು ನೋಡುತ್ತಾ
ಕೂತರೂ ತಪ್ಪು ನಿಂತರೂ ತಪ್ಪು ಎನ್ನುವ ಮನೆಯವರು
ಹೊಸತನವೆಲ್ಲದರಲಿ ಹರಡಿರುವ ಭಾವನೆಗಳು ನವಿರು.

ಹೆಣ್ಣು ಭ್ರೂಣದ ಉಳಿವಿನಿಂದ ಹಿಡಿದು ಎತ್ತರದ ನಿಲುವನ್ನು
ತಳೆಯುವುದರಲ್ಲಿಯವರೆಗೆ ನಮ್ಮ ಗುರಿ ದೂರವಿದೆ
ಪುರುಷನಿಗೆ ಸಮನಾಗಿ ದುಡಿದು ಸಂಸಾರ ನಡೆಸುವಲ್ಲಿಂದ
ಹಿಡಿದು ಆದರ್ಶ ನಾರಿಯಾಗಿ ಬದುಕುವ ಛಲವಿದೆ.

ನಾವೆಲ್ಲ ಬದಲಾಗಿದ್ದೇವೆ ಪೈಪೋಟಿ ಇದೆ ನಮ್ಮೊಳಗೆ
ಹುಟ್ಟುವಾಗಲೇ ಪಡೆದು ಬಂದ ರತ್ನ ನಾವಾದರೂ
ಅದೆಲ್ಲೋ ಬಿದ್ದು ಧೂಳಿನಲಿ ಸಿಕ್ಕಿರುವ ಕಾರಣಕ್ಕಾದರೂ
ನಾವು ನಮ್ಮೊಳಗಿನ ನಮ್ಮತನವ ಹೊರತರಬೇಕು
ಎಲ್ಲಿಟ್ಟರೇನು ಹೇಗಿದ್ದರೇನು ರತ್ನ ರತ್ನವೇ ಎಂದು
ನಂಬುವುದಕ್ಕಿಂತ ಪಡೆದಿದ್ದನ್ನು ಮಾಡಿ ತೋರಿಸಬೇಕು.

6 comments:

ಕುಕೂಊ.. said...

** ಗೊಡ್ಡ ಮೇಷ್ಟ್ರುಗಳು **

ಎಂತ ಹೆಡ್ಡರೋ ಈ ಗೊಡ್ಡ ಮೇಷ್ಟ್ರುಗಳು|
ಗುಡ್ಡಗಾಡಿನೋರಿಗಿಂತ ದೊಡ್ಡ ದಡ್ಡರು||

ದೇವರೇ ಇಲ್ಲಂತ ದಿನವೆಲ್ಲ ಬೊಗಳೆ ಹೇಳ್ತಾರೆ|
ಮುಂದಿನ ದಿನ ಬೂದಿ ಬಳ್ಕಂಡ್ ಗುಡಿಗೆ ಹೋಗ್ತಾರೆ||

ಬೀಡಿ ಸಿಗರೇಟ್ ದೇಹಕ್ಕೆ ಕೆಟ್ಟದ್ದಂತ ಕೂಯ್ತಾರೆ|
ಗೋಡೆ ಮರೆಯಲ್ಲಿ ಹೋಗಿ ತಾವೆ ಹೊಗೆ ಬಿಡ್ತಾರೆ||

ತಮ್ಮ ಕೆಲಸ ತಾವೆ ಮಾಡ್ಕೋಬೇಕಂತ ಕೊರಿತಾರೆ|
ಚಹ ಕಾಫಿ ನೀರು ಬೀಡಿ ತರಲು ನಮ್ಮನೇ ಕಳಸ್ತಾರೆ||

ಅಪ್ಪ ಅಮ್ಮ ದೇವರ ಸಮಾನ ಅಂತ ವೇದಾಂತ ಹೇಳ್ತಾರೆ|
ತಮ್ಮ ಅಪ್ಪ ಅಮ್ಮನ್ನೇ ಮನೆಯಿಂದ ಆಚೆ ದೂಕಿದ್ದಾರೆ||

ರಾಮ ಕೃಷ್ಣ ಬುದ್ಧ ಬಸವ ಅಲ್ಲ ಕ್ರಿಸ್ತ ಎಲ್ಲರು ಒಂದೇ ಅಂತ್ಹೇತಾರೆ|
ಊರಲ್ಲೇಲ್ಲಾ ನಮ್ಮ ದೇವರೆ ದೊಡ್ಡದಂತ ಕೂಗಾಡ್ತಾರೆ||

ವರದಕ್ಷಿಣಿ ಮಹಾಪಾಪ ಅನ್ನೋ ಪಾಠನ ಆಪಾಟಿ ಹೇಳ್ತಾರೆ|
ಊರಲ್ಲಿ ಎಲ್ಲರಿಗಿಂತ ಇವರೆ ಜಾಸ್ತಿ ವರದಕ್ಷಿಣೆ ತೊಗೊಂತಾರೆ||

ಸುಳ್ಳು ಹೇಳ್ಬಾರ್ದು ಅಂತ ನಮಗೆ ಹೊಡೆದು ಹೊಡೆದು ಹೇಳ್ತಾರೆ|
ಮೇಲಿನ ಇಷ್ಟೆಲ್ಲ ಸುಳ್ಳನ್ನ ಮುಂಜಾನೆಯಿಂದ ಸಂಜೆವರಿಗೆ ಹೇಳ್ತಾರೆ||

ಹೇಗೆ ನಂಬೋದು ಇವರನ್ನ ನಂಗೇನು ತಿಳಿವಲ್ದೂ|
ಏನಾದರು ಆಗಲಿ ನಾಳಿಂದ ಇಂತ ಶಾಲೇಗೆ ಬರಬಾರದು||

** ಕುಕೂ....
21/05/08
ಪುಣೆ

ಕುಕೂಊ.. said...

** ಅಲ್ಲಿದೆ ನಮ್ಮೂರು **

ಅಲ್ಲಿದೆ ನಮ್ಮೂರು
ಅಂದ ಚಂದದ ತವರೂರು|
ಇಲ್ಲಿಂದ ನಡದೋದರೆ
ಘಳಿಗೆಯಲಿ ಸಿಕ್ಕುವುದು||

ಹೋಗಿ ಬರೋಣವೇ
ಆಡುತ್ತ ನಾವಿಂದು|
ಅಜ್ಜ ಅಜ್ಜಿಯ ಕೂಡಿ
ಕೇಳೋಣ ನಮ್ಮೂರಿಗೆ ಬಾ ಎಂದು||

ಕಬ್ಬು ಬೆಳೆದಿರುತೈತೆ
ನಮ್ಮ ದಿನ್ನೆಯ ಹೊಲದಲ್ಲಿ|
ಸಿಗಿಸಿಗಿದು ತಿನ್ನುತ್ತ ಸವಿಯೋಣ
ಹಿಗ್ಗಿನಲಿ ನಾವೆಲ್ಲ ಕೂಡಿಕೊಂಡು||

ನಮ್ಮನೆಯ ಬಿಳಿ ಹಸು
ಈದೈತೆ ಸಣ್ಣ ಕೆಂಗರು|
ಹಿಡಿಯಾಕೆ ಹೋದರೆ
ಚಂಗನೆ ನಗೆದೋಡುವುದು||

ಊರಚೆ ತುಂಬಿ ತುಳುಕಾಡೈತೆ
ನಮ್ಮೂರ ದೊಡ್ಡ ಕೆರೆಯು|
ತೇಲಿ ಬಿಡೋಣ ನೀರಲ್ಲಿ
ನಮ್ಮ ಕಾಗದದ ಡೋಣಿಗಳನು||

ತೆಂಗಿನ ಮರ ತುಂಬ್ಯಾವೆ
ನಮ್ಮ ತೋಟದ ತುಂಬೆಲ್ಲ|
ಕುಡಿದು ಬರೋಣವೆ
ದೊಡ್ಡ ಎಳೆಗಾಯಿ ನೀರು||

ಹಾಲುಬೆಳೆಸೆ ತುಂಬಿರುತಾವೆ
ತೂಗುವಾ ರಾಗಿಯ ಹೊಲದಾಗೆ|
ಉರಿಹಾಕಿ ಗರಿಗೊಂಚಲಿಗೆ
ಸುಟ್ಟ ಬೆಳೆಸೆ ಬಿಡಿಸಿ ತಿನ್ನೋಣ||

ಮಾವೀನ ಮರದ ತೋಪು
ಕಾಡಂತೆ ತೂಗಿ ಬೆಳೆದಿರುತೈತೆ|
ಎಲ್ಲಿ ನೊಡಿದರು ಅಲ್ಲಿ
ನವಿಲುಗಳೇ ಇರುತಾವೆ ನೋಡು||

ನಮ್ಮೂರಿಗೆ ಹೋದರೆ ಸಿಕ್ಕುವು
ನಮಗೆ ಉಪ್ಪು ಹುಣಿಸೆ ಹಣ್ಣು|
ಈ ದೊಡ್ಡ ಗುಟ್ಟು ಯಾರಿಗು
ಹೇಳೋಣ ಬ್ಯಾಡ ನೋಡು||

ಹಳ್ಳದಲಿ ಇರುತಾವೆ ಬಣ್ಣ ಬಣ್ಣದ
ಹಕ್ಕಿಗಳು ಹಿಂಡು ಹಿಂಡಾಗಿ|
ಮರ ಕೊಂಬೆ ಗಿಡ ಪೊದೆಯಲಿ
ಕಟ್ಟಿರುತ್ತಾವೆ ಸಣ್ಣ ಸಣ್ಣ ಗೂಡು||

ತೋಟದ ಬೇಲಿಯಲಿ ಇರುತಾವೆ
ಹತ್ತಾರು ಜೇನಿನ ಗೂಡು|
ನಮ್ಮೂರ ತಿಮ್ಮನಿಗೆ ಕೇಳಿದರೆ
ದೊಡ್ಡದು ಬಿಡಿಸಿ ಕೊಡುವನು ನೊಡು||

ನಮ್ಮ ಮನೆಯಲಿ ಇರುತಾವೆ
ದೊಡ್ಡ ಬಿಳಿ ಎತ್ತಿನ ಜೋಡು|
ಚಕ್ಕಡಿಗೆ ಹೂಡಿದರೆ ಅವುಗಳ
ಜೋರಿನ ಓಟ ಬಲು ಸೊಬಗು ನೋಡು||

ಅಲ್ಲಿ ಇರುವುದಿಲ್ಲ ನಮಗೆ
ಈ ಶಾಲೆಯ ತಂಟೆ ತಕರಾರು|
ನಮ್ಮೂರ ಗೆಳೆಯ ಗುಂಪಲ್ಲಿ
ನಾವೇ ಯುವರಾಣಿಯರು(ರಾಜರು) ನೋಡು||

ಅಲ್ಲಿಂಟು ಏನೆಲ್ಲ ನಮಗಿಲ್ಲಿ ಕಾಣದ್ದು
ಅಲ್ಲಿಂಟು ಏನೆಲ್ಲ ಇಲ್ಯಾರು ಹೇಳದ್ದು|
ಸ್ನೇಹ ಉಂಟು, ಸಲಿಗೆಯುಂಟು, ಸಿರಿಯುಂಟು
ಎಲ್ಲರೂ, ಎಲ್ಲದೂ ನಮ್ಮದೆಂಬ ಭಾವವುಂಟು||

ಹೋಗೋಣ ಬನ್ನಿರೇ ಗಂಗೆ, ಗೌರಿ
ಅಲ್ಲಿ ಇರುತಾರೆ ಸೀತೆ, ಸುಬ್ಬಿ, ಸುವ್ವಿ||
ದಿನವೆಲ್ಲ ತಿರುಗಾಡಿ ಜೊತೆಯಲ್ಲಿ ಕುಣಿದಾಡಿ
ಸಂಜೀಗೆ ಬರೋಣ ಗುಟ್ಟು ನಮ್ಮಲ್ಲೇ ಇರಲಿ||

** ಕುಕೂ...
21/05/08

ಕುಕೂಊ.. said...

** ಅಕ್ಕರೆಯ ಗೆಳತಿಯರು **

ಮುನಿಸಿ ಕೊಂಡಾಳೆ ನನ್ನ ಜೊತೆ ಯಾಕೋ ತಿಳಿಯದು
ತಿಳಿಸಿ ಹೇಳು ನಿನಾದರು ಅವಳಿಗೊಮ್ಮೆ ಇಂದು|
ಕಾರಣ ಕೇಳಿದರೆ ಊದಿಸುತ್ತಾಳೆ ಕೆಂಪಗೆ ಮಾಡಿ ಕೆನ್ನೆ
ಉರಿಗಣ್ಣಿನಲಿ ನೋಡುತ್ತ ಸುಟ್ಟು ಬಿಡುವವಳಂತೆ||

ನಿನ್ನೆ ಹೇಳಿದ್ದೆ ಇವಳಿಗೆ ಕಜ್ಜಾಯ ತರುವೆನೆಂದು
ಅಮ್ಮನ ಕೇಳಿದ್ದಕ್ಕೆ ಒದೆ ತಿಂದು ಬಂದೆ|
ಎಷ್ಟು ಹೇಳಿದರು ಇವಳಿಗೆ ಅರ್ಥವಾಗದು ಇಂದು
ನೀನೇ ತಂದು ಕೊಡು ಇವಳಿಗೆ ಎರಡು ಲಡ್ಡು ಉಂಡೆ||

ಅವಳೆಂದರೆ ನನಗೆ ಎಲ್ಲಿಲ್ಲದ ಅಕ್ಕರೆ
ಜೊತೆಗಿದ್ದರೆ ಅದುವೆ ನನಗೆ ಸಿಹಿ ಜೇನು ಸಕ್ಕರೆ|
ನಮ್ಮಲ್ಲಿದ್ದಂತೆ ಅವಳಲ್ಲಿ ಇಲ್ಲನೋಡು ಬ್ಯಾಗು
ಅದಕೆ ಕೊಟ್ಟು ಬಿಡುವೆ ಇಂದೇ ನನ್ನ ಕೆಂಪು ಬ್ಯಾಗು||

ನಾನು ಬರೆದಿಲ್ಲ ಮೇಷ್ಟ್ರುಕೊಟ್ಟ ಮನೆಕೆಲಸದ ಪಾಠ
ನೀವು ತೋರಿಸಿರಿ ಈಗಲೆ ಬರದು ಮುಗಿಸುವೆ ಪಟಪಟ|
ಯಾಕೊ ಬೇಸರಿಕೆ ನೀವಿಲ್ಲದ ಮನೆಯಲ್ಲಿನ ಪಾಠ
ನಮ್ಮ ಮನೆಯಲ್ಲಿ ಸೇರಿ ಓದೋಣ ಇದಕೆ ನಾನು ದಿಟ||

ನಮ್ಮಮ್ಮ ಮಾಡಿ ಡಬ್ಬಿಯಲಿ ಇಟ್ಟಾಳೆ ಚಿತ್ರನ್ನ ಬೋಂಡ
ನಿಮಗಾಗಿ ಕದ್ದು ತಂದಿನಿ ಚಕ್ಕುಲಿ ಕೋಡುಬಳೆ ವಡ|
ನೀವೇನು ತಂದಿರುವಿರಿ ನಾನಾಗಲೆ ಕದ್ದು ನೋಡಿರುವೆ
ತಿಂದು ಮುಗಿಸೋಣ ಅವರೆಲ್ಲ ಬರುವ ಮೊದಲೆ||

ಬಿಟ್ಟು ಹೋಗಬೇಡಿರಿ ನಾನೇನಾದರು ತಪ್ಪು ಮಾಡಿದರೆ
ತಿದ್ದಬೇಕು ಒಬ್ಬರಿಗೊಬ್ಬರು ಜೊತೆಗಿದ್ದುಕೊಂಡು|
ಯಾವಾಗಲು ಜೊತೆಗೆ ಇರೋಣ ಜಗಳವಾಡದೆ ಎಂದು
ಇದಕೆ ಸಾಕ್ಷಿಯಾಗಿ ಇರಲಿ ಈ ಕಲ್ಲುಬಂಡೆಯ ಕಟ್ಟೆಯು||

**ಕುಕೂ...
21/05/08
ಪುಣೆ

sritri said...
This comment has been removed by the author.
sritri said...

ಮುಡಿಗೇರಲಿ ಸಾಧನೆ



ಕೇಳಿರೆ ಗೆಳತಿಯರೇ, ನಿಮ್ಮಮ್ಮ, ಅಜ್ಜಿಗಿಂತ ನೀವೇ ಪುಣ್ಯವಂತರು
ಓದಿ-ಬರೆದು ಮಾಡಲು, ಅವರಿಗ್ಯಾರು ನೆರವು ಕೊಟ್ಟರು?
ಹೆಣ್ಣಿಗೇಕೆ ಶಿಕ್ಷಣ? ಅದು ಪರರ ಮನೆಯ ಬೆಳಕು
ಕಸೂತಿ, ರಂಗೋಲಿ, ಹಾಡು-ಹಸೆ ಬಂದರಾಯಿತು, ಸಾಕು

ವರ್ಷ ಎಂಟಕ್ಕೇ ಮದುವೆ, ಬಸುರು, ಬಾಣಂತನದ ಕಾಟ
ಕಸಮುಸುರೆ, ಹೊರೆಗೆಲಸ; ಮನೆಮಂದಿಗೆ ಹೊತ್ತುಹೊತ್ತಿನೂಟ
ಮೂವತ್ತಕ್ಕೇ ಮುದಿಯಾಗಿ ಅಡರಿತ್ತು ಹರಯದಲ್ಲೇ ಮುಪ್ಪು
ಹೆಣ್ಣಾಗಿ ಹುಟ್ಟಿದ್ದೊಂದೇ ಅವರು ಮಾಡಿದಂಥ ತಪ್ಪು!

ಕೇಳಿ ಮುದ್ದು ಹುಡುಗಿಯರೇ, ಇಂದು ಕಾಲ ಬದಲಾಗಿದೆ
ಗಂಡಿಗಿಂತ ಹೆಣ್ಣಿನದೇ ಒಂದು ಕೈ ಮೇಲಾಗಿದೆ
ಅಂದಾಗಿಹ ಅನ್ಯಾಯಕೆ ಇಂದು ನ್ಯಾಯ ಪಡೆಯಿರಿ
ಛಲದಿಂದ ಮುಂದೆ ನುಗ್ಗಿ ಯಶದ ಬೆನ್ನು ಹಿಡಿಯಿರಿ

ಹಾಳುಹರಟೆಯಲ್ಲಿ ನೋಡಿ, ಹೇಗೆ ಹೋಗುತಿದೆ ನಿಮ್ಮ ಹೊತ್ತು?
ತಿಳಿದಿಲ್ಲವೇ- ಕಳೆದ ಕಾಲ ಸಿಗದು, ಅದು ಒಡೆದ ಮುತ್ತು
ಇರಲಿ ನೋಟ ಗುರಿಯ ಕಡೆಗೆ, ಮುಡಿಗೇರಿಸಿ ಸಾಧನೆ
ನಿಮ್ಮ ಬದುಕೇ ನೀಡಲಿ ಉಳಿದವರಿಗೂ ಪ್ರಚೋದನೆ!

Satish said...

ಕನಸುಗಳ ಜಮಖಾನದ ಮೇಲೆ ಕೂತು ತೇಲುತ್ತಾ

ಎರಡು ಜಡೆ ಬೆನ್ನಿಗೊಂದೊಂದು ಚೀಲ
ಸುಡುವ ಬಿಸಿಲಿದ್ದರೂ ಅಂಧಾನುಕರಣೆಯ
ಕಾಲ್ ಚೀಲ ಸಮವಸ್ತ್ರ ಸಮವನ್ನು ಸಾರಿ
ಭಿನ್ನಮತದೊಳಗೆ ಒಮ್ಮತವನು ತೋರಿ.

ನಿರೀಕ್ಷೆಯಿದೆ ಮುಂಬರುವ ನಾಳೆಗಳ ಬೆನ್ನ ಸವರುವ
ಕನಸುಗಳ ಜಮಖಾನದ ಮೇಲೆ ಕೂತು ತೇಲುತ್ತಾ
ಪರೀಕ್ಷೆಯಿದೆ ವರ್ಷಕ್ಕೊಂದೆರಡು ಮತ್ತೆ ಆಗಾಗ್ಗೆ
ಅಲ್ಲಲ್ಲಿ ಅದೇನೇನೋ ಜನ ನಮ್ಮನ್ನೇ ಕಿತ್ತು ನೋಡುತ್ತಾ
ಕೂತರೂ ತಪ್ಪು ನಿಂತರೂ ತಪ್ಪು ಎನ್ನುವ ಮನೆಯವರು
ಹೊಸತನವೆಲ್ಲದರಲಿ ಹರಡಿರುವ ಭಾವನೆಗಳು ನವಿರು.

ಹೆಣ್ಣು ಭ್ರೂಣದ ಉಳಿವಿನಿಂದ ಹಿಡಿದು ಎತ್ತರದ ನಿಲುವನ್ನು
ತಳೆಯುವುದರಲ್ಲಿಯವರೆಗೆ ನಮ್ಮ ಗುರಿ ದೂರವಿದೆ
ಪುರುಷನಿಗೆ ಸಮನಾಗಿ ದುಡಿದು ಸಂಸಾರ ನಡೆಸುವಲ್ಲಿಂದ
ಹಿಡಿದು ಆದರ್ಶ ನಾರಿಯಾಗಿ ಬದುಕುವ ಛಲವಿದೆ.

ನಾವೆಲ್ಲ ಬದಲಾಗಿದ್ದೇವೆ ಪೈಪೋಟಿ ಇದೆ ನಮ್ಮೊಳಗೆ
ಹುಟ್ಟುವಾಗಲೇ ಪಡೆದು ಬಂದ ರತ್ನ ನಾವಾದರೂ
ಅದೆಲ್ಲೋ ಬಿದ್ದು ಧೂಳಿನಲಿ ಸಿಕ್ಕಿರುವ ಕಾರಣಕ್ಕಾದರೂ
ನಾವು ನಮ್ಮೊಳಗಿನ ನಮ್ಮತನವ ಹೊರತರಬೇಕು
ಎಲ್ಲಿಟ್ಟರೇನು ಹೇಗಿದ್ದರೇನು ರತ್ನ ರತ್ನವೇ ಎಂದು
ನಂಬುವುದಕ್ಕಿಂತ ಪಡೆದಿದ್ದನ್ನು ಮಾಡಿ ತೋರಿಸಬೇಕು.