Monday 30 June, 2008

ಚಿತ್ರ ೬೦



ಚಿತ್ರ ೬೦ ಕ್ಕೆ ತಿರುಕ,ಸತೀಶ್, ವಿಜಯ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ವಿಜಯ ಅವರ ಚುಟುಕು ಸಾಲುಗಳು.

ದೂಡದಿರಲಿ ಮುಗಿಲ ಬೀಸಿ ಗಾಳಿ
ಬಾರದಿರಲಿ ಬಿಸಿಲು ಮೋಡ ಸೀಳಿ
ನೀರಾಗಿ ಸುರಿಯಲಿ ಕಪ್ಪಿಟ್ಟ ಬಾನು
ಮನದ ಮುಗಿಲಾಗಲಿ ಹಗುರ ತಾನು.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನಗಳು -
ಕರೆ

ಬಾನು ತೇಜನು
ಸುತ್ತಿ ನಭವನು
ನಿತ್ಯ ಕಾಯಕ
ಮಾಡಿ ನಡೆದಿಹನು

ಬೆಳಗಿ ಇಳೆಯನು
ಕಿರಣ ಕುಂಜದಿ
ಕತ್ತೆಲೆಯ ಗೂಡಿನು
ಸೇರುವ ನಿರತನು

ಹೊನ್ನ ರಶ್ಮಿಯ
ಗೋಧೂಳಿ ಸಮಯ
ಕಾರ್ಮೋಡ ಮುತ್ತಿ
ಹನಿಯಾಗುವ ಕ್ಷಣಗಣನೆ

ಸುಳಿಯಾಗಿ ಗಾಳಿ
ಬೋರೆಂದು ಬೀಸಿ
ತರುಲತೆ ಬಾಗಿತೂಗಿ
ವನವೆಲ್ಲ ತಲ್ಲಣ

ಸಿರಿಯಲ್ಲಿ ಧರೆಯು
ಉಸಿರಾಗಿ ಹಸುರು
ಬೀಗಿದೆ ಹರ್ಷದಿ
ಸುರಿವ ಮಳೆಯಲ್ಲಿ

ಪ್ರಕೃತಿಯ ಮೈಸಿರಿ
ಮನೋಹರ ನೋಟ
ನೀನೋಡಲು ಬಾಗೆಳೆಯ
ಗಿರಿಶಿಕರದ ತುದಿಗೆ

** ಕುಕೂಊ...

ಕವಿಸಮಯ

ಆಕಾಶ ಮುತ್ತಿರಲು
ಮೋಡಗಳ ದಂಡು
ರವಿಯು ಮರೆಯಲ್ಲಿ
ಕೆಂಪಾಗಿ ಕಾಣಲು
ಬೆಟ್ಟದ ತುದಿಯಲ್ಲಿ
ಅವಳು ಬರುವಳೆಂದು
ನಾನಿಂತು ಕಾದಿರಲು
ಕಾಣುವುದೆಲ್ಲ ಅವಳ
ರೂಪದಂತೆ ತಳವೆಳಗು

ಮೋಡಕ್ಕೆ ಹನಿಯಾಗಿ
ಸುರಿಯುವ ತವಕ
ಹನಿಯು ನದಿಯಾಗಿ
ಹರಿಯುವ ನೆನಹು
ನದಿಯು ಸಾಗರವನು
ಸೇರುವ ಕನಸು
ಬೆಳಕು ಬಣ್ಣವಾಗಿ
ಬಾನಲ್ಲಿ ಬಾಗಿಬಿಲ್ಲಾಗಿ
ನನ್ನವಳ ಮೊಗವನ್ನು
ತೋರುವ ಸಿರಿಯು

ಸಂಜೆ ಸಂಭ್ರದಲಿ
ಸೃಷ್ಠಿ ನಾಚಿರಲು
ತುತ್ತ ತುದಿಯಲ್ಲಿ
ನಾನಿಂತು ನೋಡಲು
ಅವಳ ನೆನಪೊಂದು
ಮನದಾಗಸದಲ್ಲಿ ಮೂಡಲು
ಮಾತು ಮೌನವಾಗಿ
ಕೊರಳು ಮೂಕವಾಗಲು
ನನ್ನೆದಯ ಕವಿಭಾವ
ಕಾವ್ಯವಾಗಿ ಚಿಮ್ಮಲು
ಬರೆದೆ ನಾನಾಗ
ಅವಳ ಮೌನರಾಗ

**ಕುಕೂಊ...

ತಿರುಕ
ಅವರ ಕವನ -
ಯಾರೀತ?

ಎಂದೂ ಬರಡಾಗದ
ವಸುಂಧರೆಯ ಕಂದ
ನಂಬಿದ
ಆ ದೇವರನೆಂದೂ ಪೊರೆವ
ಪೋರ
ಅಣುವ ನೋಡಿ
ಚರಿತೆಯ ಮೂಡಿಸಬಲ್ಲ
ಚತುರ
ತಾಯ ಭಾಷೆಯೇ ಸರ್ವಸ್ವ
ವೆಂದು ತಿಳಿದ, ತಿಳಿಸುವ
ಕುವರ
ಒಮ್ಮೆ ಕಣ್ಣಲಿ ಕಣ್ಣಿಡಲು
ಮನ ಗೆಲುವ
ಪೋರ

ತನ್ನ ಕೋಣೆಯ ಕತ್ತಲಲ್ಲಿಟ್ಟು
ಜಗಕ್ಕೆಲ್ಲಾ ಬೆಳಕನೀಯುವ
ದೀಪ
ಪಾಪ
ತಾನುರಿದು
ಶಕ್ತಿಯನೆಲ್ಲವನೂ ಕಳೆದು
ನಂಬಿದ ನಂಬದವರಿಗೆಲ್ಲರಿಗೂ
ಚೇತನವೀಯುವ ಪುಟ್ಟ ಪಾಪ
ಬೆಳಕಿನ ಸ್ವರೂಪ
ಶಕ್ತಿಯ ಜನಕ

ಉಜ್ಜಿದಷ್ಟೂ ಹೊಳಪನೀವ
ಅನರ್ಘ್ಯ ರತ್ನ
ತಾನು ಅನ್ನ ಕಾಣ
ದಿದ್ದರೂ ಪರವಾಗಿಲ್ಲವೆನ್ನುವ
ಜಗಕೆ ಅನ್ನವೀಯುವ
ಕಾಯಕವ ತೊರೆಯದ
ಅನ್ನದಾತ
ನಂಬಿದ ಭೂತಾಯಿಯ ಪೊರೆದು, ಹೊರೆದು
ಮೆರೆಸುವ

ಯಾರೀತ?

ಸತೀಶ್ ಅವರ ಕವನ -
ಮುಸುಗುಗಟ್ಟಿದ ಬಾನದಾರಿ

ಮೋಡದ ಮರೆಯಲಿ ಸೂರ್ಯ ಜಾರಿದಂತೆ
ಅದೆಲ್ಲಿಂದಲೋ ಕಾರ್ಮೋಡಗಳು ಬಂದವಲ್ಲ
ಈಗಾಗಲೇ ಕಿಚ್ಚೆದ್ದು ಬೆಳ್ಳಗೆ ಹೊಳೆದ ಜಗಕೆ
ಮಳೆಯ ಸೂಸುವ ನೆಪದೆ ಕಪ್ಪು ಮುಸುಕಿತಲ್ಲ.

ಅದೇನೋ ಬುಗುರಿಯ ಹಾಗೆ ತಿರುಗೋ ಜಗವಂತೆ
ಇಂದಿಲ್ಲಿ ಕಪ್ಪು ಮತ್ತೆ ಇನ್ನೆಲ್ಲೋ ಬಿಳುಪು ಸಹಜ
ಇನ್ನೇನು ಇಲ್ಲಿ ಬಿದ್ದೇ ಹೋದ ಸೂರ್ಯ ಎನ್ನುವಾಗ
ಇನ್ಯಾವುದೋ ನೆಲೆಯಲ್ಲಿ ಆಗಷ್ಟೆ ಉದಯಿಸುವ ನಿಜ.

ನಿನ್ನೆ ಶಾಂತಿ ಇಂದು ಆರ್ಭಟ ಹಲವು ರೀತಿನೀತಿ
ಅಬ್ಬರವ ತೋರೋ ಮುಸುಗುಗಟ್ಟಿದ ಬಾನದಾರಿ
ಹಳೆಯದನೆಲ್ಲವ ಬೇಡವೆಂದರೂ ಹೊತ್ತು ತಿರುಗೋ
ಈ ಸಮಯದ ತತ್ವವ ನೆತ್ತಿಯ ಮೇಲಿಟ್ಟ ಬಾಳದಾರಿ.

ಬರೀ ತಿರುಗುತಿರುವ ಸೂರ್ಯ ಮಂಡಲಕೋ ಹಲವು ಬಗೆ
ನಾಳೆ ಎನ್ನುವ ನಮ್ಮದೋ ಹೊಟ್ಟೆಯಲಿ ಹೂತಿಟ್ಟ ನಗೆ.

6 comments:

ಯುವಪ್ರೇಮಿ said...

ಮೇಡಮ್..!

ಈ ರಾಗಿ ಮುದ್ದೆ ಯಂತ್ರವನ್ನು ಸದ್ಯಕ್ಕೆ ನಾವು ಮಾಡೋಣ ಅಂತ ಅಂದುಕೊಂಡಿರೋದೆ ಸಂತೋಷದ ವಿಶಯ ಅಲ್ಲವೆ ?
ಯೋಚನೆ ಮಾಡಬೇಡಿ, ಈ ರಾಗಿಮುದ್ದೆ ಯಂತ್ರವನ್ನು ನೀವು ಆದಷ್ಟು ಬೇಗ ಕೊಂಡುಕೊಳ್ಳಬಹುದು. ಈ ಯಂತ್ರವು ಪ್ರಪಂಚದಲ್ಲಿ ಎಲ್ಲೆಲ್ಲಿ ರಾಗಿ ಮುದ್ದೆ ಪ್ರಿಯರು ಇದ್ದಾರೊ ಅಲ್ಲಲ್ಲಿ ಸಿಗುವಂತೆ ವ್ಯವಸ್ತೆ ಮಾಡಲಾಗುತ್ತದೆ.

ಜೈ ರಾಗಿ ಮುದ್ದೆ...!
"ಮುದ್ದೆ ತಿಂದಂ,ಬೆಟ್ಟಂ ಕಿತ್ತಿಟಂ"

ಅಂದ ಹಾಗೆ ಈ ಮಾನವನ ಚಿತ್ರ ಬಹಳ ಸುಂದರವಾಗಿದೆ.
-ಯುವಪ್ರೇಮಿ

Vijaya said...

ದೂಡದಿರಲಿ ಮುಗಿಲ ಬೀಸಿ ಗಾಳಿ
ಬಾರದಿರಲಿ ಬಿಸಿಲು ಮೋಡ ಸೀಳಿ
ನೀರಾಗಿ ಸುರಿಯಲಿ ಕಪ್ಪಿಟ್ಟ ಬಾನು
ಮನದ ಮುಗಿಲಾಗಲಿ ಹಗುರ ತಾನು

ಕುಕೂಊ.. said...

** ಕರೆ **

ಬಾನು ತೇಜನು
ಸುತ್ತಿ ನಭವನು
ನಿತ್ಯ ಕಾಯಕ
ಮಾಡಿ ನಡೆದಿಹನು

ಬೆಳಗಿ ಇಳೆಯನು
ಕಿರಣ ಕುಂಜದಿ
ಕತ್ತೆಲೆಯ ಗೂಡಿನು
ಸೇರುವ ನಿರತನು

ಹೊನ್ನ ರಶ್ಮಿಯ
ಗೋಧೂಳಿ ಸಮಯ
ಕಾರ್ಮೋಡ ಮುತ್ತಿ
ಹನಿಯಾಗುವ ಕ್ಷಣಗಣನೆ

ಸುಳಿಯಾಗಿ ಗಾಳಿ
ಬೋರೆಂದು ಬೀಸಿ
ತರುಲತೆ ಬಾಗಿತೂಗಿ
ವನವೆಲ್ಲ ತಲ್ಲಣ

ಸಿರಿಯಲ್ಲಿ ಧರೆಯು
ಉಸಿರಾಗಿ ಹಸುರು
ಬೀಗಿದೆ ಹರ್ಷದಿ
ಸುರಿವ ಮಳೆಯಲ್ಲಿ

ಪ್ರಕೃತಿಯ ಮೈಸಿರಿ
ಮನೋಹರ ನೋಟ
ನೀನೋಡಲು ಬಾಗೆಳೆಯ
ಗಿರಿಶಿಕರದ ತುದಿಗೆ

** ಕುಕೂಊ...

ಕುಕೂಊ.. said...

** ಕವಿಸಮಯ **

ಆಕಾಶ ಮುತ್ತಿರಲು
ಮೋಡಗಳ ದಂಡು
ರವಿಯು ಮರೆಯಲ್ಲಿ
ಕೆಂಪಾಗಿ ಕಾಣಲು
ಬೆಟ್ಟದ ತುದಿಯಲ್ಲಿ
ಅವಳು ಬರುವಳೆಂದು
ನಾನಿಂತು ಕಾದಿರಲು
ಕಾಣುವುದೆಲ್ಲ ಅವಳ
ರೂಪದಂತೆ ತಳವೆಳಗು

ಮೋಡಕ್ಕೆ ಹನಿಯಾಗಿ
ಸುರಿಯುವ ತವಕ
ಹನಿಯು ನದಿಯಾಗಿ
ಹರಿಯುವ ನೆನಹು
ನದಿಯು ಸಾಗರವನು
ಸೇರುವ ಕನಸು
ಬೆಳಕು ಬಣ್ಣವಾಗಿ
ಬಾನಲ್ಲಿ ಬಾಗಿಬಿಲ್ಲಾಗಿ
ನನ್ನವಳ ಮೊಗವನ್ನು
ತೋರುವ ಸಿರಿಯು

ಸಂಜೆ ಸಂಭ್ರದಲಿ
ಸೃಷ್ಠಿ ನಾಚಿರಲು
ತುತ್ತ ತುದಿಯಲ್ಲಿ
ನಾನಿಂತು ನೋಡಲು
ಅವಳ ನೆನಪೊಂದು
ಮನದಾಗಸದಲ್ಲಿ ಮೂಡಲು
ಮಾತು ಮೌನವಾಗಿ
ಕೊರಳು ಮೂಕವಾಗಲು
ನನ್ನೆದಯ ಕವಿಭಾವ
ಕಾವ್ಯವಾಗಿ ಚಿಮ್ಮಲು
ಬರೆದೆ ನಾನಾಗ
ಅವಳ ಮೌನರಾಗ

**ಕುಕೂಊ...

Unknown said...


ಯಾರೀತ?


ಎಂದೂ ಬರಡಾಗದ
ವಸುಂಧರೆಯ ಕಂದ
ನಂಬಿದ
ಆ ದೇವರನೆಂದೂ ಪೊರೆವ
ಪೋರ
ಅಣುವ ನೋಡಿ
ಚರಿತೆಯ ಮೂಡಿಸಬಲ್ಲ
ಚತುರ
ತಾಯ ಭಾಷೆಯೇ ಸರ್ವಸ್ವ
ವೆಂದು ತಿಳಿದ, ತಿಳಿಸುವ
ಕುವರ
ಒಮ್ಮೆ ಕಣ್ಣಲಿ ಕಣ್ಣಿಡಲು
ಮನ ಗೆಲುವ
ಪೋರ

ತನ್ನ ಕೋಣೆಯ ಕತ್ತಲಲ್ಲಿಟ್ಟು
ಜಗಕ್ಕೆಲ್ಲಾ ಬೆಳಕನೀಯುವ
ದೀಪ
ಪಾಪ
ತಾನುರಿದು
ಶಕ್ತಿಯನೆಲ್ಲವನೂ ಕಳೆದು
ನಂಬಿದ ನಂಬದವರಿಗೆಲ್ಲರಿಗೂ
ಚೇತನವೀಯುವ ಪುಟ್ಟ ಪಾಪ
ಬೆಳಕಿನ ಸ್ವರೂಪ
ಶಕ್ತಿಯ ಜನಕ

ಉಜ್ಜಿದಷ್ಟೂ ಹೊಳಪನೀವ
ಅನರ್ಘ್ಯ ರತ್ನ
ತಾನು ಅನ್ನ ಕಾಣ
ದಿದ್ದರೂ ಪರವಾಗಿಲ್ಲವೆನ್ನುವ
ಜಗಕೆ ಅನ್ನವೀಯುವ
ಕಾಯಕವ ತೊರೆಯದ
ಅನ್ನದಾತ
ನಂಬಿದ ಭೂತಾಯಿಯ ಪೊರೆದು, ಹೊರೆದು
ಮೆರೆಸುವ

ಯಾರೀತ?

ಬಡ್ಡೆತ್ತದ್ದೆ :)

Satish said...

ಮುಸುಗುಗಟ್ಟಿದ ಬಾನದಾರಿ

ಮೋಡದ ಮರೆಯಲಿ ಸೂರ್ಯ ಜಾರಿದಂತೆ
ಅದೆಲ್ಲಿಂದಲೋ ಕಾರ್ಮೋಡಗಳು ಬಂದವಲ್ಲ
ಈಗಾಗಲೇ ಕಿಚ್ಚೆದ್ದು ಬೆಳ್ಳಗೆ ಹೊಳೆದ ಜಗಕೆ
ಮಳೆಯ ಸೂಸುವ ನೆಪದೆ ಕಪ್ಪು ಮುಸುಕಿತಲ್ಲ.

ಅದೇನೋ ಬುಗುರಿಯ ಹಾಗೆ ತಿರುಗೋ ಜಗವಂತೆ
ಇಂದಿಲ್ಲಿ ಕಪ್ಪು ಮತ್ತೆ ಇನ್ನೆಲ್ಲೋ ಬಿಳುಪು ಸಹಜ
ಇನ್ನೇನು ಇಲ್ಲಿ ಬಿದ್ದೇ ಹೋದ ಸೂರ್ಯ ಎನ್ನುವಾಗ
ಇನ್ಯಾವುದೋ ನೆಲೆಯಲ್ಲಿ ಆಗಷ್ಟೆ ಉದಯಿಸುವ ನಿಜ.

ನಿನ್ನೆ ಶಾಂತಿ ಇಂದು ಆರ್ಭಟ ಹಲವು ರೀತಿನೀತಿ
ಅಬ್ಬರವ ತೋರೋ ಮುಸುಗುಗಟ್ಟಿದ ಬಾನದಾರಿ
ಹಳೆಯದನೆಲ್ಲವ ಬೇಡವೆಂದರೂ ಹೊತ್ತು ತಿರುಗೋ
ಈ ಸಮಯದ ತತ್ವವ ನೆತ್ತಿಯ ಮೇಲಿಟ್ಟ ಬಾಳದಾರಿ.

ಬರೀ ತಿರುಗುತಿರುವ ಸೂರ್ಯ ಮಂಡಲಕೋ ಹಲವು ಬಗೆ
ನಾಳೆ ಎನ್ನುವ ನಮ್ಮದೋ ಹೊಟ್ಟೆಯಲಿ ಹೂತಿಟ್ಟ ನಗೆ.