Tuesday 29 July, 2008

ಚಿತ್ರ ೬೪



ಚಿತ್ರ ೬೪ ಕ್ಕೆ ಸತೀಶ್ , ತಿರುಕ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ಸತೀಶ್ ಅವರ ಕವನ -
ನಿಂತಲ್ಲಿ ನಿಂತವರ ಕಷ್ಟ


ನಿಂತಲ್ಲೇ ನಿಂತವರ ಸಮಸ್ಯೆಗಳು ಒಂದಾದ್ರೆ
ಸದಾ ಚಲನೆಯಲ್ಲಿರೋ ಕಷ್ಟಾ ಇನೊಂದ್ ಥರ
ಅಲ್ಲಲ್ಲೇ ಬದಲಾಗೋ ಋತುಮಾನ ಕಾಲನ
ಮೋಡಿಗೆ ಒಳಗಾಗದೆ ಬದುಕೋದೇ ದುಸ್ತರ.

ಆನೆ ಕುದುರೆ ಓಡಾಡಿ ಸೈನ್ಯದವ್ರು ಕಾದಾಡಿ
ದೇಶಕ್ಕೆ ತಾನೇ ಬಾಗಿಲು ಅನ್ನೋ ಮಹಾದ್ವಾರ
ಇಂದು ಸೂರೇ ಇಲ್ದೇ ದಿಕ್ಕಿಗೆ ದಿಕ್ಕು ತಪ್ಪಿಸಿ ನಿಂತ
ಅವಶೇಷಗಳೆಡೆ ದಿಕ್ಕೆಟ್ಟ ಪ್ರವಾಸಿಗರ ಮಹಾಪೂರ.

ಎಲ್ಲಾ ಬದಲಾಗುತ್ತೆ, ಕಾಲ ಹೇಳೋದನ್ನ ಕೇಳಿ-ಬಿಡಿ
ಎಲ್ಲಾ ಸರಿಹೋಗುತ್ತೆ, ಸುತ್ಲೂ ಆಗೋದನ್ನ ನಂಬಿ-ನೋಡಿ.

ಗೋಪುರವನ್ನಾದ್ರೂ ಕಟ್ಟಿ ಗುಂಬಜವನ್ನಾದ್ರೂ ನಿಲ್ಲಿಸಿ
ಕೋಟಿ ವರುಷಗಳ ಲೆಕ್ಕದ ಪ್ರಕೃತಿಗೇನಾಯ್ತು
ಒಂದು ರೂಪದ ವಸ್ತುವಿನಿಂದ ಮತ್ತೊಂದನ್ನು ನಿರ್ಮಿಸಿ
ಕೆರೆಯಿಂದ ಕೆರೆಗೆ ನೀರನ್ನು ಚೆಲ್ಲಿದಂತಾಯ್ತು.

ಏನೂ ಇರದ ಜಾಗೆಯಲ್ಲಿ ಇನ್ನೊಂದೇನನ್ನೋ ಕಟ್ಟಿ
ಬರಿಗೈಯಲ್ಲಿ ಹೋಗುವವರಿಗೆ ಕೊಂಡೊಯ್ಯುವ ಬಯಕೆ
ವಿಪರ್ಯಾಸವೆನ್ನೋಣವೇ ಬಾಗಿಲುಗಳಿರದ ಗೋಡೆ ತಟ್ಟಿ
ನೋಡಿ ಹಳೆಯದರಿಂದ ಹೊಸತನ್ನು ಕಲಿವ ಉತ್ಸಾಹಕೆ.

ತಿರುಕ ಅವರ ಕವನ -
ಶಿಥಿಲ ಆಧಾರಿಯ ವ್ಯಥೆಯ ಕಥೆ

ಕೇಳುವಿರೇನು ಎನ್ನ ಕಥೆ
ನಂತರ ಹಳಿಯದಿರಿ ’ಇದು ಬರೀ ವ್ಯಥೆ’
ಹೇಳದಿರೆ ಎನ್ನ ಮನ ಕುದಿವುದು
ಹೇಳಿದರೆ ಸ್ವಲ್ಪ ದುಃಖ ತಣಿವುದು

ಒಮ್ಮೆ ನಂಬಿದ್ದರು ಎನ್ನ ಮಂದಿ ಹಲವು
ಎನ್ನ ಸಲಹಲು ಮುಂದೆ ಬಂದವರು ಕೆಲವು
ವೈರಿಗಳ ಅಟ್ಟಹಾಸ ಮೊಟಕುತ್ತಿದ್ದೆ
ನಂಬಿದವರ ನಿಶ್ಚಿಂತ ನಿದ್ರೆಗೆ ಅನುವಾಗುತ್ತಿದ್ದೆ

ಅನುಚಣ ಮೈ ಮರೆತು ಕಣ್ಮುಚ್ಚಿದ್ದೆ
ಗುಂಡು ಮದ್ದುಗಳಿಗೆ ಬಲಿಯಾಗಿದ್ದೆ
ಕೈಗಳು ನಿಸ್ಸಹಾಯಕವಾಗಿ ನೆಲದ ಮೇಲೆ ಮಲಗಿರಲು
ಚೇತನ ನಿಶ್ಚೇತನವಾಗಿ ಮರುಗುತಿರಲು

ವೈರಿಯ ದೇಶ ಭಾಷೆ ಜಾತಿ ಮತ
ಗಳ ಹೇಳಿ ಪ್ರಯೋಜನವೇನು?
ಆತ ಮತ್ತೆ ಕೈಗೆ ಸಿಗುವನೇನು?
ಆತನ ಮಕ್ಕಳು ಮಾಡಿದ ತಪ್ಪೇನು?
ಶಿಕ್ಷಿಸಲರ್ಹರೇನು?
ಕಳೆದುದ ಮತ್ತೆ ಪಡೆದೇನೇ?

ಎಮ್ಮ ಸಂತತಿಯ ನೋಡಿಹರಿಲ್ಲಿ
ಎನ್ನ ತುಂಡು ಕಾಲು ಕೈಗಳ ನೋಡಲು ಬಂದಿಹರಿಲ್ಲಿ
ಎನ್ನ ದುಃಖದ ಚಿತ್ರವ ತೆಗೆಯುತಿಹರಿಲ್ಲಿ
ಅವರಿವರಿಗೆ ತೋರಿಸಿ ನಲಿಯುವರಲ್ಲಿಲ್ಲಿ

ಎಮ್ಮ ಸಂತತಿಗಳು ದಂಡು ದಂಡಾಗಿಹರಿಲ್ಲಿ
ತಮ್ಮ ತೀಟೆಗಳ ತೀರಿಸುಕೊಳ್ಳುವರು ನನ್ನ ಬದಿಯಲ್ಲಿ
ತಮ್ಮ ನೆನಪುಗಳ ಕಲ್ಲುಗಳಲಿ ಕೆತ್ತುತ್ತಿಹರು
ಇರುವ ಅಲ್ಪ ಸ್ವಲ್ಪ ಅಂಗವನೂ ತುಂಡರಿಸುತಿಹರು

ಹಳೆಯ ಶತ್ರುವಿನ ಸಂತತಿಯ ಹೀಗಳೆಯಲೋ
ಎನ್ನ ಸಂತತಿಯ ಶಪಿಸಲೋ
ತಿಳಿಯದಾಗಿದೆ - ತಿಳಿಯ ಪಡಿಸುವಿರಾ
ಓ ಮಹಾ ಜನಗಳೇ!
ನಿಮ್ಮ ರಕ್ಷಿಸಿದವನ ರಕ್ಷಿಸುವಿರಾ?
ದಯನೀಯ ಕೂಗ ಕೇಳುತಿಹಿರಾ!

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಗೋಡೆಯ ಕಿವಿಮಾತು

ಪಾಳು ಬಿದ್ದವು ಹೇಗೆ
ಅನಾಥವಾದವು ಏಕೆ
ಯಾವ ನೆನಪಿಗಾಗಿ
ನಿಂತಿರುವವು ಕಾಣೆ
ಗುಡಿ ಗೋಪುರವೋ
ಗುಂಬಾಜ್ ಮಸೀದಿಯೋ
ಏನೇನೋ ಹೆಸರುಗಳು
ನಾವುಗಳೇ ಇಟ್ಟೆವು
ಸಾಕ್ಷಿಯಾರು ಇದಕೆ

ನಡೆದಿತ್ತು ಒಡ್ಡೋಲಗ
ನೆರೆದ ಜನಗಳ ನಡುವೆ
ಮೆರೆವ ರಾಜನ ಮುಂದೆ
ಮಂತ್ರಿ ಮಹೋದಯನ
ಸೂತ್ರಗಳ ಜೊತೆಗೆ
ತಾಣವಾಗಿಗೆ ಇಂದು
ಗೂಬೆ ಪಾರಿವಾಳಕೆ
ಬಿಲವಾಯಿತು ಸಂದು
ಹಾವು ಇಲಿ ಓತಿಕೇತಕೆ

ಕಟ್ಟಿಸಿದರೋ ಯಾರೋ
ಯಾವ ಉದ್ದೇಶಕೋ
ಕಟ್ಟಿದರು ಯಾರೋ
ಇಟ್ಟು ಇಟ್ಟಿಗೆ ಕಲ್ಲು
ಗಾರೆ ಮಣ್ಣನ್ನು
ಗುಟ್ಟು ಬಿಟ್ಟು ಕೊಡೆನು
ಎನ್ನುವಾ ಗತ್ತಿನಲಿ
ಮೋಟಾಗಿ ಗೋಟಂತೆ
ನಿಂತಿರುವವು ಗೋಡೆಗಳು
ಘಾಟಿ ಗಾಳಿಗೆ ಅಂಜದೆ
ಸುರಿವ ಮಳೆಗೆ ಕರಗದೆ

ಬರುವರು ಜನಗಳು
ದಿನಾಲು ಹಿಂಡುಹಿಂಡಾಗಿ
ನೋಡಲು ಎಲ್ಲವನು
ಕೇಳಿದ ಕಥೆಯೊಂದರ
ಸಾಕ್ಷಿಗೆ ಇದುಎಂದು
ಯಾವುದು ಸರಿಯೋ
ಯಾವುದು ತಪ್ಪೋ
ಇತಿಹಾಸದ ಗೋಜಿಗೆ
ಈಗ ನಮಗೇಕೆ
ಗೋಡೆಯ ಕಿವಿಮಾತು
ಅಲಿಸಿ ಅರಿಯಬೇಕಷ್ಟೆ

ಯಾವುದು ಶಾಶ್ವತವಲ್ಲ
ನಶ್ವರಕೆ ಅಂಟಿದರೆ
ಯಾರಿಗೂ ಶಾಂತಿಯಿಲ್ಲ
ಇದನು ಅರಿತವರಿಗೆ
ಬದುಕೆಲ್ಲ ಬೆಳಕಂತೆ
ಇದುವೆ ಗುಟ್ಟಂತೆ
ಗುಟ್ಟು ರಟ್ಟಾಯಿತಂತೆ
ನೀ ಕಲಿ ಇದರಿಂದ
ನಾನೇಳುವುದೇ ಇಷ್ಟನ್ನ

**ಕುಕೂಊ..

7 comments:

ಕುಕೂಊ.. said...

ಈ ಚಿತ್ರದ ಬಗ್ಗೆ ವಿವರ ಕೊಡುವಿರ?

ಅಮರ said...

ಈ ಚಿತ್ರವನ್ನ ದೆಹಲಿಯ ಕುತುಬ್ ಮಿನಾರ್ ಪ್ರದೇಶದಲ್ಲಿ ತೆಗೆದದ್ದು.

Satish said...

ನಿಂತಲ್ಲಿ ನಿಂತವರ ಕಷ್ಟ

ನಿಂತಲ್ಲೇ ನಿಂತವರ ಸಮಸ್ಯೆಗಳು ಒಂದಾದ್ರೆ
ಸದಾ ಚಲನೆಯಲ್ಲಿರೋ ಕಷ್ಟಾ ಇನೊಂದ್ ಥರ
ಅಲ್ಲಲ್ಲೇ ಬದಲಾಗೋ ಋತುಮಾನ ಕಾಲನ
ಮೋಡಿಗೆ ಒಳಗಾಗದೆ ಬದುಕೋದೇ ದುಸ್ತರ.

ಆನೆ ಕುದುರೆ ಓಡಾಡಿ ಸೈನ್ಯದವ್ರು ಕಾದಾಡಿ
ದೇಶಕ್ಕೆ ತಾನೇ ಬಾಗಿಲು ಅನ್ನೋ ಮಹಾದ್ವಾರ
ಇಂದು ಸೂರೇ ಇಲ್ದೇ ದಿಕ್ಕಿಗೆ ದಿಕ್ಕು ತಪ್ಪಿಸಿ ನಿಂತ
ಅವಶೇಷಗಳೆಡೆ ದಿಕ್ಕೆಟ್ಟ ಪ್ರವಾಸಿಗರ ಮಹಾಪೂರ.

ಎಲ್ಲಾ ಬದಲಾಗುತ್ತೆ, ಕಾಲ ಹೇಳೋದನ್ನ ಕೇಳಿ-ಬಿಡಿ
ಎಲ್ಲಾ ಸರಿಹೋಗುತ್ತೆ, ಸುತ್ಲೂ ಆಗೋದನ್ನ ನಂಬಿ-ನೋಡಿ.

ಗೋಪುರವನ್ನಾದ್ರೂ ಕಟ್ಟಿ ಗುಂಬಜವನ್ನಾದ್ರೂ ನಿಲ್ಲಿಸಿ
ಕೋಟಿ ವರುಷಗಳ ಲೆಕ್ಕದ ಪ್ರಕೃತಿಗೇನಾಯ್ತು
ಒಂದು ರೂಪದ ವಸ್ತುವಿನಿಂದ ಮತ್ತೊಂದನ್ನು ನಿರ್ಮಿಸಿ
ಕೆರೆಯಿಂದ ಕೆರೆಗೆ ನೀರನ್ನು ಚೆಲ್ಲಿದಂತಾಯ್ತು.

ಏನೂ ಇರದ ಜಾಗೆಯಲ್ಲಿ ಇನ್ನೊಂದೇನನ್ನೋ ಕಟ್ಟಿ
ಬರಿಗೈಯಲ್ಲಿ ಹೋಗುವವರಿಗೆ ಕೊಂಡೊಯ್ಯುವ ಬಯಕೆ
ವಿಪರ್ಯಾಸವೆನ್ನೋಣವೇ ಬಾಗಿಲುಗಳಿರದ ಗೋಡೆ ತಟ್ಟಿ
ನೋಡಿ ಹಳೆಯದರಿಂದ ಹೊಸತನ್ನು ಕಲಿವ ಉತ್ಸಾಹಕೆ.

Unknown said...
This comment has been removed by the author.
Unknown said...

ಶಿಥಿಲ ಆಧಾರಿಯ ವ್ಯಥೆಯ ಕಥೆ

ಕೇಳುವಿರೇನು ಎನ್ನ ಕಥೆ
ನಂತರ ಹಳಿಯದಿರಿ ’ಇದು ಬರೀ ವ್ಯಥೆ’
ಹೇಳದಿರೆ ಎನ್ನ ಮನ ಕುದಿವುದು
ಹೇಳಿದರೆ ಸ್ವಲ್ಪ ದುಃಖ ತಣಿವುದು

ಒಮ್ಮೆ ನಂಬಿದ್ದರು ಎನ್ನ ಮಂದಿ ಹಲವು
ಎನ್ನ ಸಲಹಲು ಮುಂದೆ ಬಂದವರು ಕೆಲವು
ವೈರಿಗಳ ಅಟ್ಟಹಾಸ ಮೊಟಕುತ್ತಿದ್ದೆ
ನಂಬಿದವರ ನಿಶ್ಚಿಂತ ನಿದ್ರೆಗೆ ಅನುವಾಗುತ್ತಿದ್ದೆ

ಅನುಚಣ ಮೈ ಮರೆತು ಕಣ್ಮುಚ್ಚಿದ್ದೆ
ಗುಂಡು ಮದ್ದುಗಳಿಗೆ ಬಲಿಯಾಗಿದ್ದೆ
ಕೈಗಳು ನಿಸ್ಸಹಾಯಕವಾಗಿ ನೆಲದ ಮೇಲೆ ಮಲಗಿರಲು
ಚೇತನ ನಿಶ್ಚೇತನವಾಗಿ ಮರುಗುತಿರಲು

ವೈರಿಯ ದೇಶ ಭಾಷೆ ಜಾತಿ ಮತ
ಗಳ ಹೇಳಿ ಪ್ರಯೋಜನವೇನು?
ಆತ ಮತ್ತೆ ಕೈಗೆ ಸಿಗುವನೇನು?
ಆತನ ಮಕ್ಕಳು ಮಾಡಿದ ತಪ್ಪೇನು?
ಶಿಕ್ಷಿಸಲರ್ಹರೇನು?
ಕಳೆದುದ ಮತ್ತೆ ಪಡೆದೇನೇ?

ಎಮ್ಮ ಸಂತತಿಯ ನೋಡಿಹರಿಲ್ಲಿ
ಎನ್ನ ತುಂಡು ಕಾಲು ಕೈಗಳ ನೋಡಲು ಬಂದಿಹರಿಲ್ಲಿ
ಎನ್ನ ದುಃಖದ ಚಿತ್ರವ ತೆಗೆಯುತಿಹರಿಲ್ಲಿ
ಅವರಿವರಿಗೆ ತೋರಿಸಿ ನಲಿಯುವರಲ್ಲಿಲ್ಲಿ

ಎಮ್ಮ ಸಂತತಿಗಳು ದಂಡು ದಂಡಾಗಿಹರಿಲ್ಲಿ
ತಮ್ಮ ತೀಟೆಗಳ ತೀರಿಸುಕೊಳ್ಳುವರು ನನ್ನ ಬದಿಯಲ್ಲಿ
ತಮ್ಮ ನೆನಪುಗಳ ಕಲ್ಲುಗಳಲಿ ಕೆತ್ತುತ್ತಿಹರು
ಇರುವ ಅಲ್ಪ ಸ್ವಲ್ಪ ಅಂಗವನೂ ತುಂಡರಿಸುತಿಹರು

ಹಳೆಯ ಶತ್ರುವಿನ ಸಂತತಿಯ ಹೀಗಳೆಯಲೋ
ಎನ್ನ ಸಂತತಿಯ ಶಪಿಸಲೋ
ತಿಳಿಯದಾಗಿದೆ - ತಿಳಿಯ ಪಡಿಸುವಿರಾ
ಓ ಮಹಾ ಜನಗಳೇ!
ನಿಮ್ಮ ರಕ್ಷಿಸಿದವನ ರಕ್ಷಿಸುವಿರಾ?
ದಯನೀಯ ಕೂಗ ಕೇಳುತಿಹಿರಾ!

sunaath said...

ಅಮರರೆ,
ಸ್ವತಃ ಚಿತ್ರಕವನ ಬರೆಯಲು ನನಗೆ ಆಗದಿದ್ದರೂ ಸಹ , ಗೆಳೆಯರು ಬರೆದ ಚಿತ್ರಕವನಗಳನ್ನು ಓದಿ ಖುಶಿಪಡುತ್ತಿದ್ದೇನೆ.
ಅಂತಹ ಅವಕಾಶ ಸೃಷ್ಟಿಸುತ್ತಿರುವ ನಿಮಗೆ ಧನ್ಯವಾದಗಳು.

ಕುಕೂಊ.. said...

** ಗೋಡೆಯ ಕಿವಿಮಾತು **

ಪಾಳು ಬಿದ್ದವು ಹೇಗೆ
ಅನಾಥವಾದವು ಏಕೆ
ಯಾವ ನೆನಪಿಗಾಗಿ
ನಿಂತಿರುವವು ಕಾಣೆ
ಗುಡಿ ಗೋಪುರವೋ
ಗುಂಬಾಜ್ ಮಸೀದಿಯೋ
ಏನೇನೋ ಹೆಸರುಗಳು
ನಾವುಗಳೇ ಇಟ್ಟೆವು
ಸಾಕ್ಷಿಯಾರು ಇದಕೆ

ನಡೆದಿತ್ತು ಒಡ್ಡೋಲಗ
ನೆರೆದ ಜನಗಳ ನಡುವೆ
ಮೆರೆವ ರಾಜನ ಮುಂದೆ
ಮಂತ್ರಿ ಮಹೋದಯನ
ಸೂತ್ರಗಳ ಜೊತೆಗೆ
ತಾಣವಾಗಿಗೆ ಇಂದು
ಗೂಬೆ ಪಾರಿವಾಳಕೆ
ಬಿಲವಾಯಿತು ಸಂದು
ಹಾವು ಇಲಿ ಓತಿಕೇತಕೆ

ಕಟ್ಟಿಸಿದರೋ ಯಾರೋ
ಯಾವ ಉದ್ದೇಶಕೋ
ಕಟ್ಟಿದರು ಯಾರೋ
ಇಟ್ಟು ಇಟ್ಟಿಗೆ ಕಲ್ಲು
ಗಾರೆ ಮಣ್ಣನ್ನು
ಗುಟ್ಟು ಬಿಟ್ಟು ಕೊಡೆನು
ಎನ್ನುವಾ ಗತ್ತಿನಲಿ
ಮೋಟಾಗಿ ಗೋಟಂತೆ
ನಿಂತಿರುವವು ಗೋಡೆಗಳು
ಘಾಟಿ ಗಾಳಿಗೆ ಅಂಜದೆ
ಸುರಿವ ಮಳೆಗೆ ಕರಗದೆ

ಬರುವರು ಜನಗಳು
ದಿನಾಲು ಹಿಂಡುಹಿಂಡಾಗಿ
ನೋಡಲು ಎಲ್ಲವನು
ಕೇಳಿದ ಕಥೆಯೊಂದರ
ಸಾಕ್ಷಿಗೆ ಇದುಎಂದು
ಯಾವುದು ಸರಿಯೋ
ಯಾವುದು ತಪ್ಪೋ
ಇತಿಹಾಸದ ಗೋಜಿಗೆ
ಈಗ ನಮಗೇಕೆ
ಗೋಡೆಯ ಕಿವಿಮಾತು
ಅಲಿಸಿ ಅರಿಯಬೇಕಷ್ಟೆ

ಯಾವುದು ಶಾಶ್ವತವಲ್ಲ
ನಶ್ವರಕೆ ಅಂಟಿದರೆ
ಯಾರಿಗೂ ಶಾಂತಿಯಿಲ್ಲ
ಇದನು ಅರಿತವರಿಗೆ
ಬದುಕೆಲ್ಲ ಬೆಳಕಂತೆ
ಇದುವೆ ಗುಟ್ಟಂತೆ
ಗುಟ್ಟು ರಟ್ಟಾಯಿತಂತೆ
ನೀ ಕಲಿ ಇದರಿಂದ
ನಾನೇಳುವುದೇ ಇಷ್ಟನ್ನ

**ಕುಕೂಊ..