Tuesday 7 October, 2008

ಚಿತ್ರ ೭೩




ತಿರುಕ ಹೇಳುತ್ತಾರೆ:

ಬೇಕಿತ್ತೇ ಈ ಐಷಾರಾಮ

ಅಮಾವಾಸ್ಯೆಯ ರಾತ್ರಿಯೋ!
ಹುಣ್ಣಿಮೆಯ ಬೆಳದಿಂಗಳೋ?
ಎಂಬ ಅನುಮಾನವೇ
ಕಣ್ಣು ಕೋರೈಸುವ ದೀಪಾಲಂಕೃತ ಮನೆಯೇ?
ಮನೆಯಲ್ಲ ಸ್ವಾಮಿ ಇದು ಅರಮನೆ
ಅರ್ಧ ಮನೆ ಅರ್ಧ ಗೋರಿ :(

ಅತ್ತ ನೋಡುವ ಬದಲು ಇತ್ತ ನೋಡಿ ಸ್ವಾಮಿ
ನನ್ನ ಕಡೆಯೊಮ್ಮೆ ನೋಡಿ
ನಮ್ಮ ಗುಡ್ಲಿನ ಕಡೆಗೊಮ್ಮೆ ಕಣ್ಣು ಹಾಯಿಸಿ
ಕಟ್ಟುಕಥೆಯ ಕೇಳುವ ಬದಲು
ಪಟ್ಟಪಾಡಿನ ವ್ಯಥೆಯ ಕಡೆಗೊಮ್ಮೆ
ಕಿವಿಗೊಡಿ

ಅರಮನೆಯ ಕಟ್ಟಲು ನಮ್ಮವರೂ ಇದ್ದರು
ಅಂದಿನಿಂದ ಇಂದಿಗೂ ನಾವು ಬಡವರು
ಒಂದು ಸಂತತಿಯ ಐಷಾರಾಮಕ್ಕೆ ಬೆವರು ತೆತ್ತರು
ಬೆವರಿನಂತೆ ಸುರಿದುದು ಅವರ ನೆತ್ತರು

ಅಣ್ಣಗಳಿರಾ, ಅಕ್ಕಗಳಿರಾ - ಏಳಿರಿ ಎದ್ದೇಳಿರಿ
ಸಾಕಿನ್ನು ನಮಗೆ ಈ ಉಪವಾಸದ ಆಚರಣೆ
ಕೋಟಿ ಜನರು ನಮ್ಮ ಕೆಲಸ ನೋಡಿ ಸಂತೋಷಿಸುವುದು ಸಾಕು
ಗೇಣು ಹೊಟ್ಟೆಗೆ ಎರಡಗುಳು ಅನ್ನವು ಬೇಕು

ಮುನಿಯ ಮಂಜಣ್ಣ
ರಾಜಪ್ಪ ಕರೀಮಣ್ಣರ
ಬೆವರು ರಕ್ತ ಮಾಂಸ ಮೂಳೆಗಳೇ
ಅಡಿಪಾಯದ ಕಲ್ಲುಗಳು
ಗೋಡೆಯ ಇಟ್ಟಿಗೆಗಳು

ನಮ್ಮ ನಿಮ್ಮ ಪಿತೃಗಳು ಬುನಾದಿಯಾದರು
ತಣ್ಣನೆಯ ಹವೆಯಲಿ ಕುಳಿತವರು
ಬೆಚ್ಚನೆ ಹಬೆಯಲಿ ಮಿಂದವರು
ಎಂದೂ ಬೆವರು ಸುರಿಸದವರು
ಸುಖದ ಸೋಪಾನದಲಿ ತೇಲಿದವರು


ನಾವೆಲ್ಲ ಒಂದೇ
ಮನುಜ ಕುಲ ಒಂದೇ
ಕನ್ನಡಮ್ಮನ ಮಕ್ಕಳೆಲ್ಲ ಒಂದೇ
ಎಮ್ಮೆಲ್ಲರದೊಂದೇ ನೆಲವೆಂಬುದ ಮರೆತವರು

ಎಮ್ಮ ಭಿಕ್ಷೆಯಲಿಯೂ
ಆರನೆಯ ಒಂದು ಭಾಗ ರಾಜಧನವ ಕಸಿದುಕೊಂಡವರು
ರಾಜ ಮಹಾರಾಜರಿವರು - ರಾಜ್ಯವಾಳಿದವರು
ಮುಗ್ಧ ಜನಗಳ ಅಳಿಸಿದವರು
ತಮ್ಮ ಪುಂಡಾಟಗಳ ಮೆರೆಸಿ
ಬಡವರ ಹೆಜ್ಜೆ ಗುರುತುಗಳ ಅಳಿಸಿದವರು

ಅಂದು ಶೋಷಿಸಿದವರವರು
ಇಂದು ಶೋಷಿಸುತಿರುವವರಿವರು
ಎಂದಿಗೆ ನಮ್ಮ ಪೋಷಿಪರು

ಈ ವ್ಯರ್ಥ ಆಚರಣೆ ನಮಗೆ ಬೇಕಿತ್ತೇ?



ಸತೀಶ್ ಕವನ ಹೀಗಿದೆ:

ವಿಸ್ಮಯದ ಬೆಳಕು

ನಾಡು ಬೆಳಗಿತು ತೋಪು ಹಾರಿತು
ಎಲ್ಲೆಡೆ ವಿಜಯದ ಸಂಭ್ರಮವು
ಡಿಂಡಿಮ ನುಡಿಯಿತು ಗುಂಡಿಗೆ ಬಡಿಯಿತು
ಬೆಳಕಿನೆಲೆ ನೋಟದ ವಿಸ್ಮಯವು.

ವಿಶ್ವವು ನಮ್ಮೆಡೆ ನೋಡುವುದಣ್ಣ
ಇತಿಹಾಸದುದ್ದಕು ಅಲಂಕಾರ
ದಸರೆ ಬೆಳಕಲಿ ಮುಗಿಲಿಗು ಬಣ್ಣ
ರಾಕ್ಷಸ ಗುಣಗಳ ಸಂಹಾರ.

ಸೂರಿರುವ ನಾವು ಬೇರಿನೆಡೆ ನೋವು
ಗುರಿಯತ್ತ ನೋಟ ನಿರ್ಲಕ್ಷ್ಯ ತಾರದಿರಲಿ
ಓಡುತಲೆ ನಾವು ಬೆಳಕಿನಡಿಯ ತಮವು
ನುಡಿ ಹಳೆಯದನು ಮರೆಸದಿರಲಿ.

ಅರಿಯುವ ಪರಿ ಹಳೆಯದನು ಹಳಿಯದಿರಲಿ
ಇಂದಿನ ಸರಿ ನಿನ್ನೆ ನಾಳೆಗಳ ತೂಗುತಿರಲಿ.

2 comments:

Unknown said...

ಬೇಕಿತ್ತೇ ಈ ಐಷಾರಾಮ

ಅಮಾವಾಸ್ಯೆಯ ರಾತ್ರಿಯೋ!
ಹುಣ್ಣಿಮೆಯ ಬೆಳದಿಂಗಳೋ?
ಎಂಬ ಅನುಮಾನವೇ
ಕಣ್ಣು ಕೋರೈಸುವ ದೀಪಾಲಂಕೃತ ಮನೆಯೇ?
ಮನೆಯಲ್ಲ ಸ್ವಾಮಿ ಇದು ಅರಮನೆ
ಅರ್ಧ ಮನೆ ಅರ್ಧ ಗೋರಿ :(

ಅತ್ತ ನೋಡುವ ಬದಲು ಇತ್ತ ನೋಡಿ ಸ್ವಾಮಿ
ನನ್ನ ಕಡೆಯೊಮ್ಮೆ ನೋಡಿ
ನಮ್ಮ ಗುಡ್ಲಿನ ಕಡೆಗೊಮ್ಮೆ ಕಣ್ಣು ಹಾಯಿಸಿ
ಕಟ್ಟುಕಥೆಯ ಕೇಳುವ ಬದಲು
ಪಟ್ಟಪಾಡಿನ ವ್ಯಥೆಯ ಕಡೆಗೊಮ್ಮೆ
ಕಿವಿಗೊಡಿ

ಅರಮನೆಯ ಕಟ್ಟಲು ನಮ್ಮವರೂ ಇದ್ದರು
ಅಂದಿನಿಂದ ಇಂದಿಗೂ ನಾವು ಬಡವರು
ಒಂದು ಸಂತತಿಯ ಐಷಾರಾಮಕ್ಕೆ ಬೆವರು ತೆತ್ತರು
ಬೆವರಿನಂತೆ ಸುರಿದುದು ಅವರ ನೆತ್ತರು

ಅಣ್ಣಗಳಿರಾ, ಅಕ್ಕಗಳಿರಾ - ಏಳಿರಿ ಎದ್ದೇಳಿರಿ
ಸಾಕಿನ್ನು ನಮಗೆ ಈ ಉಪವಾಸದ ಆಚರಣೆ
ಕೋಟಿ ಜನರು ನಮ್ಮ ಕೆಲಸ ನೋಡಿ ಸಂತೋಷಿಸುವುದು ಸಾಕು
ಗೇಣು ಹೊಟ್ಟೆಗೆ ಎರಡಗುಳು ಅನ್ನವು ಬೇಕು

ಮುನಿಯ ಮಂಜಣ್ಣ
ರಾಜಪ್ಪ ಕರೀಮಣ್ಣರ
ಬೆವರು ರಕ್ತ ಮಾಂಸ ಮೂಳೆಗಳೇ
ಅಡಿಪಾಯದ ಕಲ್ಲುಗಳು
ಗೋಡೆಯ ಇಟ್ಟಿಗೆಗಳು

ನಮ್ಮ ನಿಮ್ಮ ಪಿತೃಗಳು ಬುನಾದಿಯಾದರು
ತಣ್ಣನೆಯ ಹವೆಯಲಿ ಕುಳಿತವರು
ಬೆಚ್ಚನೆ ಹಬೆಯಲಿ ಮಿಂದವರು
ಎಂದೂ ಬೆವರು ಸುರಿಸದವರು
ಸುಖದ ಸೋಪಾನದಲಿ ತೇಲಿದವರು


ನಾವೆಲ್ಲ ಒಂದೇ
ಮನುಜ ಕುಲ ಒಂದೇ
ಕನ್ನಡಮ್ಮನ ಮಕ್ಕಳೆಲ್ಲ ಒಂದೇ
ಎಮ್ಮೆಲ್ಲರದೊಂದೇ ನೆಲವೆಂಬುದ ಮರೆತವರು

ಎಮ್ಮ ಭಿಕ್ಷೆಯಲಿಯೂ
ಆರನೆಯ ಒಂದು ಭಾಗ ರಾಜಧನವ ಕಸಿದುಕೊಂಡವರು
ರಾಜ ಮಹಾರಾಜರಿವರು - ರಾಜ್ಯವಾಳಿದವರು
ಮುಗ್ಧ ಜನಗಳ ಅಳಿಸಿದವರು
ತಮ್ಮ ಪುಂಡಾಟಗಳ ಮೆರೆಸಿ
ಬಡವರ ಹೆಜ್ಜೆ ಗುರುತುಗಳ ಅಳಿಸಿದವರು

ಅಂದು ಶೋಷಿಸಿದವರವರು
ಇಂದು ಶೋಷಿಸುತಿರುವವರಿವರು
ಎಂದಿಗೆ ನಮ್ಮ ಪೋಷಿಪರು

ಈ ವ್ಯರ್ಥ ಆಚರಣೆ ನಮಗೆ ಬೇಕಿತ್ತೇ?

Satish said...

ವಿಸ್ಮಯದ ಬೆಳಕು

ನಾಡು ಬೆಳಗಿತು ತೋಪು ಹಾರಿತು
ಎಲ್ಲೆಡೆ ವಿಜಯದ ಸಂಭ್ರಮವು
ಡಿಂಡಿಮ ನುಡಿಯಿತು ಗುಂಡಿಗೆ ಬಡಿಯಿತು
ಬೆಳಕಿನೆಲೆ ನೋಟದ ವಿಸ್ಮಯವು.

ವಿಶ್ವವು ನಮ್ಮೆಡೆ ನೋಡುವುದಣ್ಣ
ಇತಿಹಾಸದುದ್ದಕು ಅಲಂಕಾರ
ದಸರೆ ಬೆಳಕಲಿ ಮುಗಿಲಿಗು ಬಣ್ಣ
ರಾಕ್ಷಸ ಗುಣಗಳ ಸಂಹಾರ.

ಸೂರಿರುವ ನಾವು ಬೇರಿನೆಡೆ ನೋವು
ಗುರಿಯತ್ತ ನೋಟ ನಿರ್ಲಕ್ಷ್ಯ ತಾರದಿರಲಿ
ಓಡುತಲೆ ನಾವು ಬೆಳಕಿನಡಿಯ ತಮವು
ನುಡಿ ಹಳೆಯದನು ಮರೆಸದಿರಲಿ.

ಅರಿಯುವ ಪರಿ ಹಳೆಯದನು ಹಳಿಯದಿರಲಿ
ಇಂದಿನ ಸರಿ ನಿನ್ನೆ ನಾಳೆಗಳ ತೂಗುತಿರಲಿ.