Thursday 12 March, 2009

ಚಿತ್ರ ೯೫



ತವಿಶ್ರೀ:

ನನ್ನಳಲು


ಜಗವು ಮದವೇರಿದ ಬಿಸಿಯಾರುವಿಕೆಯ ಆಲಯ
ಮನದಲಿ ಭುಗಿಲೇಳುವಿಕೆಯ ಸಮಯ
ತಂಬೆಳಕಿನಲಿ ತಂಪೆರೆಯುತಿಹ ತಂಗಾಳಿ
ಮನ ಸೋತುಹೋಗುತಿದೆ ನಿಸರ್ಗದ ಬಳಿ

ದಿಗಂತವ ಸೇರುತಿಹುದು ಕಲ್ಪವೃಕ್ಷದ ಬೀಡು
ಕಾಣ ಹೊರಟಿಹೆ ಕಾಣದ ಕಾಡು
ಕಾಯಕದಿ ಪಡೆದದ್ದೇ ಬೆನ್ನ ಹಿಂದೆ
ಕರ್ಮಫಲ ಅರುಹಬೇಕಿದೆ ಸರ್ವಶಕ್ತನ ಮುಂದೆ

ಬಳಿ ಸಾಗಲು ದಾಟಿಯೇನೇ ಆಳದ ನದಿಪಾತ್ರ
ಆಸರೆಯೊಂದೇ ಅಂಬಿಗ ಆತನ ದೋಣಿ
ನಂಬದಿರಲಾದೀತೇ ಆತನ ದೋಣಿ
ನಂಬದಿರೆ ಬಾಳಿಲ್ಲ ನಂಬಿದುದೇ ಬದುಕೆಲ್ಲ

ಆಳದ ನದಿಯ ದಾಟಿಸಲು ನಂಬಿಹೆನು
ಅಂಬಿಗನ ಉದ್ದನೆಯ ಊರುಗೋಲು
ಜಗವ ಪಾರಿಸಲು ಬಿಡದೆ ಉಸುರುತಿಹೆ
ಶ್ರೀಹರಿಯ ಬಳಿ ನನ್ನಳಲು

2 comments:

sunaath said...

ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ!

Unknown said...

ನನ್ನಳಲು

ಜಗವು ಮದವೇರಿದ ಬಿಸಿಯಾರುವಿಕೆಯ ಆಲಯ
ಮನದಲಿ ಭುಗಿಲೇಳುವಿಕೆಯ ಸಮಯ
ತಂಬೆಳಕಿನಲಿ ತಂಪೆರೆಯುತಿಹ ತಂಗಾಳಿ
ಮನ ಸೋತುಹೋಗುತಿದೆ ನಿಸರ್ಗದ ಬಳಿ

ದಿಗಂತವ ಸೇರುತಿಹುದು ಕಲ್ಪವೃಕ್ಷದ ಬೀಡು
ಕಾಣ ಹೊರಟಿಹೆ ಕಾಣದ ಕಾಡು
ಕಾಯಕದಿ ಪಡೆದದ್ದೇ ಬೆನ್ನ ಹಿಂದೆ
ಕರ್ಮಫಲ ಅರುಹಬೇಕಿದೆ ಸರ್ವಶಕ್ತನ ಮುಂದೆ

ಬಳಿ ಸಾಗಲು ದಾಟಿಯೇನೇ ಆಳದ ನದಿಪಾತ್ರ
ಆಸರೆಯೊಂದೇ ಅಂಬಿಗ ಆತನ ದೋಣಿ
ನಂಬದಿರಲಾದೀತೇ ಆತನ ದೋಣಿ
ನಂಬದಿರೆ ಬಾಳಿಲ್ಲ ನಂಬಿದುದೇ ಬದುಕೆಲ್ಲ

ಆಳದ ನದಿಯ ದಾಟಿಸಲು ನಂಬಿಹೆನು
ಅಂಬಿಗನ ಉದ್ದನೆಯ ಊರುಗೋಲು
ಜಗವ ಪಾರಿಸಲು ಬಿಡದೆ ಉಸುರುತಿಹೆ
ಶ್ರೀಹರಿಯ ಬಳಿ ನನ್ನಳಲು