Wednesday 8 July, 2009

ಚಿತ್ರ ೧೧೦



ತವಿಶ್ರೀ :

ಇದೇನಾ ಜಲಸಮಾಧಿ


ಗಾಳಿಯೊಡನೆ ಹಾರಿದ ಆಷಾಢ
ಹಿಂದೆಯೇ ಸೋ ಎನುವ ಶ್ರಾವಣ
ಎಲ್ಲೆಲ್ಲೂ ಎಡಬಿಡದ ಮುಸಲಧಾರೆ
ಕಳೆ ಕೀಳಲು ಹೊರಟಿಹಳು ನೀರೆ

ಸುರಿಯುತಿದೆ ಜೋರಿನ ಮಳೆ
ತಂಪಾಯಿತು ಕಾದು ರೋಸಿದೆ ಇಳೆ
ಹೊರಗೆ ತೊಳೆಯುತಿದೆ ಕೊಳೆ
ಒಳಗೆ ಕಲ್ಮಶದ ಹೊಳೆ

ಇಳಿಯುತಿದೆ ಗಾಜಿನ ಹೊರಗೆ ಹನಿ
ಪಸೆ ಆರಿದ ಬಾಯೊಳಗಿಲ್ಲ ಹನಿ
ಕಗ್ಗತ್ತಲ ನಿರ್ಮಿಸಿದ ಕಾರ್ಮೋಡ
ಆವ ಕಾಲದಲಿ ಚಕ್ರ ನೋಡುವುದು ಹೊಂಡ

ಮೊರೆತದ ಜಲರಾಶಿ ಒಳನುಗ್ಗಲು
ಸೆಟೆದುಕೊಳ್ಳುತಿಹ ಬಾಗಿಲು
ಇಂಧನವು ಕೈ ಮುಗಿದು ಮಲಗುತಿರಲು
ಭೋರ್ಗರೆಯುತಿದ್ದ ಕಾರು ತಣ್ಣಗಾಗಲು
ಆಗೊಲೊಲ್ಲದು ಒಳೆಗೆಳೆದ ಉಸಿರು ಹೊರಗೆ ಬಿಡಲು

ಸೂಚನೆ:

೨೦೦೭ನೆಯ ಇಸವಿ ಜುಲೈ ತಿಂಗಳಿನಲಿ ಇಂತಹ ಸನ್ನಿವೇಶಗಳು ಮುಂಬಯಿಯಲ್ಲಿ ಸಂಭವಿಸಿ ಹಲವು ಮಂದಿ, ತಾವು ಪ್ರಯಾಣಿಸುತ್ತಿದ್ದ ಕಾರಿನೊಳಗೇ ಸಾವನ್ನಪ್ಪಿದರು.

2 comments:

sunaath said...

A very imaginative photo!

Unknown said...

ಇದೇನಾ ಜಲಸಮಾಧಿ

ಗಾಳಿಯೊಡನೆ ಹಾರಿದ ಆಷಾಢ
ಹಿಂದೆಯೇ ಸೋ ಎನುವ ಶ್ರಾವಣ
ಎಲ್ಲೆಲ್ಲೂ ಎಡಬಿಡದ ಮುಸಲಧಾರೆ
ಕಳೆ ಕೀಳಲು ಹೊರಟಿಹಳು ನೀರೆ

ಸುರಿಯುತಿದೆ ಜೋರಿನ ಮಳೆ
ತಂಪಾಯಿತು ಕಾದು ರೋಸಿದೆ ಇಳೆ
ಹೊರಗೆ ತೊಳೆಯುತಿದೆ ಕೊಳೆ
ಒಳಗೆ ಕಲ್ಮಶದ ಹೊಳೆ

ಇಳಿಯುತಿದೆ ಗಾಜಿನ ಹೊರಗೆ ಹನಿ
ಪಸೆ ಆರಿದ ಬಾಯೊಳಗಿಲ್ಲ ಹನಿ
ಕಗ್ಗತ್ತಲ ನಿರ್ಮಿಸಿದ ಕಾರ್ಮೋಡ
ಆವ ಕಾಲದಲಿ ಚಕ್ರ ನೋಡುವುದು ಹೊಂಡ

ಮೊರೆತದ ಜಲರಾಶಿ ಒಳನುಗ್ಗಲು
ಸೆಟೆದುಕೊಳ್ಳುತಿಹ ಬಾಗಿಲು
ಇಂಧನವು ಕೈ ಮುಗಿದು ಮಲಗುತಿರಲು
ಭೋರ್ಗರೆಯುತಿದ್ದ ಕಾರು ತಣ್ಣಗಾಗಲು
ಆಗೊಲೊಲ್ಲದು ಒಳೆಗೆಳೆದ ಉಸಿರು ಹೊರಗೆ ಬಿಡಲು


ಸೂಚನೆ:

೨೦೦೭ನೆಯ ಇಸವಿ ಜುಲೈ ತಿಂಗಳಿನಲಿ ಇಂತಹ ಸನ್ನಿವೇಶಗಳು ಮುಂಬಯಿಯಲ್ಲಿ ಸಂಭವಿಸಿ ಹಲವು ಮಂದಿ, ತಾವು ಪ್ರಯಾಣಿಸುತ್ತಿದ್ದ ಕಾರಿನೊಳಗೇ ಸಾವನ್ನಪ್ಪಿದರು.