Monday 26 November, 2007

ಚಿತ್ರ - ೨೯


ರಾಧಾಕೃಷ್ಣ ಆನೆಗುಂಡಿ ಅವರ ಕಲ್ಪನೆಯಲ್ಲಿ ಹದಿನಾರರ ಕನಸುಗಳು...

ಇನ್ನೂ ವರುಷ ಹದಿನಾರು
ಕನಸುಗಳು ಸಾವಿರ
ಮೊಗೆದಷ್ಟು ಮುಗಿಯುವುದಿಲ್ಲ....

ಸೂರ್ಯ ಮುಳುಗುವ ಬಗ್ಗೆ ಕಾತುರ
ಕೆಂಪಾಗುವುದಾದರು ಹೇಗೆ ಎನ್ನುವುದೇ ಪ್ರಶ್ನೆ
ಕಡಲಲ್ಲಿ ಮಾಯಾವಾಗುವುದಾದರು ಹೇಗೆ ?

ಹಂಚಿಕೊಳ್ಳಲು ಸಾಕಷ್ಟಿದೆ
ಕಡಲ ಅಲೆಯ ಅಬ್ಬರದ ನಡುವೆ ಆಲಿಸುವವರಾದರು ಯಾರು?
ಮನಸ್ಸೆ ಹೀಗೆ ಒಮ್ಮೆ ಅಬ್ಬರಿಸಿದರೆ
ಮತ್ತೊಮ್ಮೆ ಶಾಂತವಾಗುತ್ತದೆ.

ಕನಸುಗಳು ಅಷ್ಟೆ ಕಡಲ ಅಬ್ಬರಕ್ಕಿಂತ ಭಿನ್ನವಲ್ಲ.
ವರ್ಷ ಬದಲಾದಂತೆ ಕನಸು ಬದಲಾಗುತ್ತದೆ
ಅದಕ್ಕೆ ಚಿಂತೆ ಹದಿನಾರು ದಾಟುವುದಾದರು ಹೇಗೆ.


ಸತೀಶ ಅವರ ನೋಟದಲ್ಲಿ ಗಾಳಿಗಣಗಿಸುವ ಅಲೆಗಳು...

ಇಲ್ಲಿ ಯಾರೋ ಕುಳಿತು ನೋಡಿಯೇ ನೋಡುವ
ನಂಬಿಕೆಯಲ್ಲಿ ಮರದ ಧಿಮ್ಮಿಗಳ ಆಸನಗಳ ಸಾಲು
ಅದೋ ಅಲ್ಲಿ ಯಾರು ಬರಲಿ ಬರದಿರಲಿ ಎನ್ನುವ
ಬಂದು ಹೋಗುವ ಗಾಳಿಗಣಗಿಸುವ ಅಲೆಗಳ ಪಾಲು.

ಅದೆಷ್ಟೋ ದೂರದಲ್ಲಿರುವ ಅದ್ಯಾವುದೋ ಲೋಕದಲ್ಲಿ
ಎಂದೋ ಹರಳುಗಟ್ಟುವ ಕನಸುಗಳು ಅಲೆಗಳಂತೆ
ಯಾವುದ್ಯಾವುದೋ ನದಿ ನೀರು ಬಂದು ಸೇರಿ ಕೂಡಿದಲ್ಲಿ
ಜಂಗಮದ ರೂಪವನು ಹೊದ್ದುಕೊಂಡ ತೆರೆಗಳಂತೆ.

ಶತಮಾನ ಬಾಳುವಂತೆ ಉಸುಕಿನಲ್ಲಿ ಹುದುಗಿಸಿದ ಆಸನಗಳು
ನೀರಿದ್ದರೂ ನೊರೆಯಿದ್ದರೂ ಬೇರುಗಳನ್ನು ಚಿಗುರಿಸಲಾರವು
ಪದೇ ಪದೇ ಬಂದು ಹಿಂದೆ ಹೋಗುವ ಅಲೆಯ ದಿಬ್ಬಣಗಳು
ದಡವನ್ನು ಅಪ್ಪಿ ಹಿಡಿದು ಆವರಿಸಿದ ಮರಳನ್ನು ತೋಯಿಸಲಾರವು.

ನೀನೇನೇ ಹೇಳು ಗೆಳೆಯಾ...
ಬರಿಯ ಅಲೆಯನಷ್ಟೇ ನೋಡದಿರು ಎನ್ನುವುದು ನಮ್ಮ ನಿಯಮ
ಈಗ ಕೈ ಮೈಗೆಲ್ಲ ನಮ್ಮ ಬರಹಗಳನು ಅಂಟಿಸಿಕೊಳುವ ಕಾಲದಲಿ
ನಾವೇಳಿಸೋ ಪ್ರತೀ ಅಲೆಗಳಲೆ ನಮ್ಮನಳೆವುದೇ ಮರ್ಮ.


ಸೀಮಾ ನೋಡಿದ್ದು ಬೇರೆಯಾಗುತ್ತಿರುವ ಗೆಳೆಯರನ್ನು...

ಹುಟ್ಟಿದ್ದು ಎಲ್ಲೋ, ಬಾಲ್ಯ ಇನ್ನೆಲ್ಲೋ
ಓದಿದ್ದು ಮಾತ್ರ ಜೊತೆಯಲ್ಲಿ
ಕನಸ ಕಟ್ಟುತ್ತಾ ಕಾಲ ಕಳೆಯುವುದು ಮಾತ್ರ ಇಲ್ಲಿ...
ಇದೇ ಸಮುದ್ರದ ದಡದಲ್ಲಿ.

ಕಣ್ಮುಚ್ಚಿ ಒಡೆಯುವುದರಲ್ಲಿ
ಮುಗಿದೇ ಹೋಯಿತು ಓದು ನೋಡು,
ಇನ್ನೇನಿದ್ದರೂ ಜೀವನದಲ್ಲಿ
ಅರಸುತ್ತಾ ಹೋಗುವುದು ಬೇರೇನೋ ಜಾಡು.

ಕವಲೊಡೆಯುತ್ತಿದೆ ಜೀವನದ ದಾರಿ...
ಈ ಸಮಯದಲ್ಲಿ ಒಂದೇ ಹಾರೈಕೆ ಸರಿ.
ಇದ್ದರೂ ನೀನು ದೇಹದಿಂದ ದೂರ,
ಇರು ಎಂದೆಂದೂ ಮನಸ್ಸಿಗೆ ಹತ್ತಿರ.

ಆದರೂ ಏಕೋ ಕೊರಗುತ್ತಿದೆ ಮನಸ್ಸು...
ಕೂಡಿ ಕಟ್ಟಿದ ಕನಸು ಮಾತ್ರ ಜೊತೆಯಲ್ಲಿ,
ನಿನ್ನಂತಹ ಗೆಳೆಯ ಇರುವುದಿಲ್ಲ ಬಳಿಯಲ್ಲಿ.
ಕೂಡಿ ಬಂದರೆ ಕಾಲ
ಮುಂದೆಂದಾದರೂ ಜೊತೆಯಾಗೋಣ ಇಳಿ ವಯಸ್ಸಿನಲ್ಲಿ.

4 comments:

ರಾಧಾಕೃಷ್ಣ ಆನೆಗುಂಡಿ. said...

ಇನ್ನೂ ವರುಷ ಹದಿನಾರು
ಕನಸುಗಳು ಸಾವಿರ
ಮೊಗೆದಷ್ಟು ಮುಗಿಯುವುದಿಲ್ಲ....

ಸೂರ್ಯ ಮುಳುಗುವ ಬಗ್ಗೆ ಕಾತುರ
ಕೆಂಪಾಗುವುದಾದರು ಹೇಗೆ ಎನ್ನುವುದೇ ಪ್ರಶ್ನೆ
ಕಡಲಲ್ಲಿ ಮಾಯಾವಾಗುವುದಾದರು ಹೇಗೆ ?

ಹಂಚಿಕೊಳ್ಳಲು ಸಾಕಷ್ಟಿದೆ
ಕಡಲ ಅಲೆಯ ಅಬ್ಬರದ ನಡುವೆ ಆಲಿಸುವವರಾದರು ಯಾರು?
ಮನಸ್ಸೆ ಹೀಗೆ ಒಮ್ಮೆ ಅಬ್ಬರಿಸಿದರೆ
ಮತ್ತೊಮ್ಮೆ ಶಾಂತವಾಗುತ್ತದೆ.

ಕನಸುಗಳು ಅಷ್ಟೆ ಕಡಲ ಅಬ್ಬರಕ್ಕಿಂತ ಭಿನ್ನವಲ್ಲ.
ವರ್ಷ ಬದಲಾದಂತೆ ಕನಸು ಬದಲಾಗುತ್ತದೆ
ಅದಕ್ಕೆ ಚಿಂತೆ ಹದಿನಾರು ದಾಟುವುದಾದರು ಹೇಗೆ.

ರಾಧಾಕೃಷ್ಣ ಆನೆಗುಂಡಿ

Satish said...

ಗಾಳಿಗಣಗಿಸುವ ಅಲೆಗಳು

ಇಲ್ಲಿ ಯಾರೋ ಕುಳಿತು ನೋಡಿಯೇ ನೋಡುವ
ನಂಬಿಕೆಯಲ್ಲಿ ಮರದ ಧಿಮ್ಮಿಗಳ ಆಸನಗಳ ಸಾಲು
ಅದೋ ಅಲ್ಲಿ ಯಾರು ಬರಲಿ ಬರದಿರಲಿ ಎನ್ನುವ
ಬಂದು ಹೋಗುವ ಗಾಳಿಗಣಗಿಸುವ ಅಲೆಗಳ ಪಾಲು.

ಅದೆಷ್ಟೋ ದೂರದಲ್ಲಿರುವ ಅದ್ಯಾವುದೋ ಲೋಕದಲ್ಲಿ
ಎಂದೋ ಹರಳುಗಟ್ಟುವ ಕನಸುಗಳು ಅಲೆಗಳಂತೆ
ಯಾವುದ್ಯಾವುದೋ ನದಿ ನೀರು ಬಂದು ಸೇರಿ ಕೂಡಿದಲ್ಲಿ
ಜಂಗಮದ ರೂಪವನು ಹೊದ್ದುಕೊಂಡ ತೆರೆಗಳಂತೆ.

ಶತಮಾನ ಬಾಳುವಂತೆ ಉಸುಕಿನಲ್ಲಿ ಹುದುಗಿಸಿದ ಆಸನಗಳು
ನೀರಿದ್ದರೂ ನೊರೆಯಿದ್ದರೂ ಬೇರುಗಳನ್ನು ಚಿಗುರಿಸಲಾರವು
ಪದೇ ಪದೇ ಬಂದು ಹಿಂದೆ ಹೋಗುವ ಅಲೆಯ ದಿಬ್ಬಣಗಳು
ದಡವನ್ನು ಅಪ್ಪಿ ಹಿಡಿದು ಆವರಿಸಿದ ಮರಳನ್ನು ತೋಯಿಸಲಾರವು.

ನೀನೇನೇ ಹೇಳು ಗೆಳೆಯಾ...
ಬರಿಯ ಅಲೆಯನಷ್ಟೇ ನೋಡದಿರು ಎನ್ನುವುದು ನಮ್ಮ ನಿಯಮ
ಈಗ ಕೈ ಮೈಗೆಲ್ಲ ನಮ್ಮ ಬರಹಗಳನು ಅಂಟಿಸಿಕೊಳುವ ಕಾಲದಲಿ
ನಾವೇಳಿಸೋ ಪ್ರತೀ ಅಲೆಗಳಲೆ ನಮ್ಮನಳೆವುದೇ ಮರ್ಮ.

Seema S. Hegde said...
This comment has been removed by a blog administrator.
Seema S. Hegde said...

ಹುಟ್ಟಿದ್ದು ಎಲ್ಲೋ, ಬಾಲ್ಯ ಇನ್ನೆಲ್ಲೋ
ಓದಿದ್ದು ಮಾತ್ರ ಜೊತೆಯಲ್ಲಿ
ಕನಸ ಕಟ್ಟುತ್ತಾ ಕಾಲ ಕಳೆಯುವುದು ಮಾತ್ರ ಇಲ್ಲಿ...
ಇದೇ ಸಮುದ್ರದ ದಡದಲ್ಲಿ.

ಕಣ್ಮುಚ್ಚಿ ಒಡೆಯುವುದರಲ್ಲಿ
ಮುಗಿದೇ ಹೋಯಿತು ಓದು ನೋಡು,
ಇನ್ನೇನಿದ್ದರೂ ಜೀವನದಲ್ಲಿ
ಅರಸುತ್ತಾ ಹೋಗುವುದು ಬೇರೇನೋ ಜಾಡು.

ಕವಲೊಡೆಯುತ್ತಿದೆ ಜೀವನದ ದಾರಿ...
ಈ ಸಮಯದಲ್ಲಿ ಒಂದೇ ಹಾರೈಕೆ ಸರಿ.
ಇದ್ದರೂ ನೀನು ದೇಹದಿಂದ ದೂರ,
ಇರು ಎಂದೆಂದೂ ಮನಸ್ಸಿಗೆ ಹತ್ತಿರ.

ಆದರೂ ಏಕೋ ಕೊರಗುತ್ತಿದೆ ಮನಸ್ಸು...
ಕೂಡಿ ಕಟ್ಟಿದ ಕನಸು ಮಾತ್ರ ಜೊತೆಯಲ್ಲಿ,
ನಿನ್ನಂತಹ ಗೆಳೆಯ ಇರುವುದಿಲ್ಲ ಬಳಿಯಲ್ಲಿ.
ಕೂಡಿ ಬಂದರೆ ಕಾಲ
ಮುಂದೆಂದಾದರೂ ಜೊತೆಯಾಗೋಣ ಇಳಿ ವಯಸ್ಸಿನಲ್ಲಿ.