Wednesday 7 May, 2008

ಚಿತ್ರ -52


ಚಿತ್ರ ಕವನಕ್ಕೆ ವರುಷ ತುಂಬಿತು. ಇದು 52ನೇ ಚಿತ್ರ. ಪ್ರತಿವಾರವೂ ನಾವು ಪೋಸ್ಟ್ ಮಾಡುತ್ತ ಬಂದ ಚಿತ್ರಗಳಿಗೆ ನೀವೆಲ್ಲ ನಿಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತ ಬಂದಿದ್ದೀರಿ, ಪ್ರೋತ್ಸಾಹ ನೀಡಿದ್ದೀರಿ. ಎಲ್ಲರಿಗೂ ನಾವು ಕೃತಜ್ಞರು.

- ಚಿತ್ರಕವನ ಬಳಗ.


ಕುಮಾರ ಸ್ವಾಮಿ ಕಡಾಕೊಳ್ಳ ರ ಕವನ ಹೀಗಿದೆ:

* ಕಲ್ಲು ಬಂಡೆ **

ಲಕ್ಷವರುಷಗಳಿಂದ ಸುರಿದ
ಒಂದು ಹನಿ ನಿಲ್ಲಲಿಲ್ಲ
ಜಾರಿ ಹೋದವೋ ಎಲ್ಲಿ
ಸುಳಿವುಗಳೇ ಇಲ್ಲ ||

ಕಲ್ಲು ಬಂಡೆಯ ಮೇಲೆ
ಕೂತ ಜೀವಿಗಳೆಷ್ಟೋ
ಎಣಿಸಿ ಹೇಳುವವರಿಲ್ಲ
ಮೌನವೇ ಸಾಕ್ಷಿ||

ತಾವು ಅರಸಿ ತೇಲಿ
ಬಂದ ಬೀಜಗಳೆಷ್ಟೋ
ಮೊಳೆಯೊಡೆದು ಬೆಳೆಯಲಿಲ್ಲ
ಕಳೆದು ಹೋದವು ಇಲ್ಲಿ||

ಬಂದು ಹೋದರು ಎಷ್ಟು
ಕುಂತು ಮಾತನಾಡಿದರೆಷ್ಟು
ಹತ್ತಿ ತುಳಿದರು ಎಷ್ಟು
ಬೇದವೆ ಕಾಣಲಿಲ್ಲ||

ಮೈಯ ಪರಚಿದರು ನನ್ನ
ಆರ ಮೇಲಿನ ಮೋಹಕೆ?
ಆರ ನೆನಪಿನ ಸಾಕ್ಷಿಗೆ?
ಆ ನೆನಪೇ ನನಗಿಲ್ಲ||

ಮೆತ್ತಿದರು ಕಲೆಗಳನು ನನ್ನ
ಮೈಯಮೇಲೆ ಕೆತ್ತಿ ಕೆತ್ತಿ
ಯಾವ ಉದ್ದೇಶಕೆ?
ಉಳಿದವು ಅಳಿಯಲೇ ಇಲ್ಲ||

ರಾತ್ರಿ ಹಗಲುಗಳು
ಸೂರ್ಯ ಚಂದ್ರ ಚಿಕ್ಕಿಗಳು
ಬೇರೆಯಲ್ಲ ನನಗೆ
ಬಂದು ಹೋಗುವವರು ಅಷ್ಟೆ||

ಬಿರಿಮಳೆಯೇ ಸುರಿದರೂ
ನೀರಲ್ಲಿ ಮುಳಿಗಿಸಿದರೂ
ನನ್ನೊಡಲು ತೋಯಲಿಲ್ಲ
ನಾನು ಕರಗದೇ ಉಳಿದೆ||

ಬಿಸಿಲು ಬೆಂಕಿ ಉರಿಸಿದರು
ಸಿಡಿಲುಗಳ ಸಿಡಿ ಸಿಡಿದರು
ಸುಟ್ಟು ಕರಕಲಾಗದೆ
ನಾನು ತಣ್ಣಗಾದೆನಲ್ಲ||

ದುಃಖವಾದಗ ಕಠೋರ
ಎಂದೆನ್ನ ಜೋಡಿಸಿ ದೂರಿದರು
ಆರಿಗೋ ದೈರ್ಯ ಹೇಳಲು
ಹೊಗಳಿದೆರೆನ್ನ, ನಾನು ಬದಲಾಗಲೇ ಇಲ್ಲ||

"ಘೋರ್ಕಲ್ಲ ಮೇಲೆ ನೀರು ಸುರಿದಂತೆ"
ಯಾರೋ ಮಾಡಿದ ತಪ್ಪಿಗೆ
ನಿಂದಿಸಿಸದರು ನನ್ನ ಹೆಸರಲ್ಲಿ
ತಪ್ಪು ನನ್ನದಲ್ಲವಲ್ಲ||

ಕಠೋರ ಕಲ್ಲೆಂದು
ಕಾಠಿಣ್ಯಕ್ಕೆ ಸಾಕ್ಷಿಯೆಂದೆನ್ನ
ಸಾರಿದರು ಜಗಕೆ, ಯಾಕೋ
ಕಾರಣ ನಾನಲ್ಲವಲ್ಲ||

ಬಿದ್ದ ಬಿಸಿಲಿಗೆಂದು
ಬೆದರಲೇ ಇಲ್ಲ
ಮೈಯೊಡ್ಡಿದೆ ತೆರೆದ ಬೈಲಿಗೆ
ಸೋಲಿನ ಸುಳಿವೇ ನನ್ನಲ್ಲಿಲ್ಲ||

ಸವಾಲಾಗಿದ್ದರು ನಾನು
ಸಾಯಲೇ ಬೇಕಲ್ಲ!
ಸಾಯುವೆನೊಂದು ದಿನ, ಆದರು
ಸಾವಿನೆಣಿಕೆನಗೆ ಗೊತ್ತೇ ಇಲ್ಲ||

ವಿಜಯಾರ ಚುಟುಕ:

ಗುರಿ ಕಣ್ಮುಂದಿರಲು
ಬೆಟ್ಟ ದಾಟಿ ಸಂತಸ
ಭಾವ ಮನತುಂಬಿರಲು
ಕಲ್ಲು ಮೀಟಿ ಸಂಗೀತ

ನೋವು ಬೆಟ್ಟವಾಗದೆ
ಹೃದಯ ಭಾರವಾಗದೆ
ನಗು ಬಾಳ ತುಂಬಿರಲು
ಸ್ವರ್ಗ ಸಾಟಿ ನಿಶ್ಚಿತ

ಸತೀಶ್ ರ ಕವನ ಹೀಗೆ ಹೇಳುತ್ತದೆ:

ನಮ್ಮೂರ್ ಹೈಕ್ಳು

ನಮ್ಮೂರ ಹೈಕ್ಳು ಭಾಳಾ ಶಾಣ್ಯಾ ಅದಾರ್ ನೋಡ್ರಿ
ಗುಡ್ಡಾ-ಮೇಡೂ ತಿರುಗಿ ಅವರ್ದೇ ಒಂದು ಹಾಡ್ರಿ.

ಬಿಸಿಲಾಗ ಸತ್ತ ಚಂದ್ರನ ಮುಖದಂಗಿರೋ
ನೆಲದ ಮ್ಯಾಗ ನಡದು ಏನ ಕಡದೀ ತಮ್ಮ
ಕುಡುಗೋಲ್ ನುಂಗಿ ಹಿಂಬದಿ ಹರಕಂಡ್
ಬ್ಯಾಡೇ ಬ್ಯಾಡಂದ್ರೂ ಬೆನ್ನ ಬಿಡದಾ ಗುಮ್ಮ.

ಕಾಡ ಮ್ಯಾಡ ಸುತ್ತೋ ಅಂದ್ರ
ಕಾಡಿಗ್ ಕಾಡೇ ಇಲ್ಲಾ ಅಂದಾಗ
ಕಾಡ ಬ್ಯಾಡ ಜೀವ್ನಾ ಪೂರ್ತಿ
ಯಾವ್ ಜೀವ್ನಾ ತೆಗೀ ಅತ್ಲಾಗ

ಎಲ್ಲಾರ್ ಹೋದ್ ದಾರೀಲ್ ಹೋಗೋ
ಹಳೇ ರೀತಿಗೆ ಜೋತ್ ಬಿದ್ದು
ನಿನ್ನ ದಾರೀ ನೀನೇ ಹುಡುಕೀ
ಕರ್ಮಾ ನೋಡೋರ್ ಕಣ್ ಬಿದ್ದು.

ಬೆಪ್ಪಿನ ಜೀವನ ತೆರೆದು ಹೊಸದನು ಪಡೆವುದು ಸೋಜಿಗವು
ಎತ್ತಣ ಬಾನು ಎಲ್ಲಿನ ಭುವಿಯು ಇಲ್ಲೇ ಸಿಗುವುದು ನಿಧಿಯು
ಮುಪ್ಪಿನ ಕಾಲಕೆ ಕಾಲೆಳೆಯುವುದು ಎಲ್ಲರ ಕಷ್ಟ ಇದ್ದದ್ದೇ
ಕೈಕಾಲ್ ಗಟ್ಟಿ ಇರೋವಾಗಲೇ ಹತ್ತಿ ಇಳಿಯುವುದು ದೊಡ್ಡದೆ.

4 comments:

ಕುಕೂಊ.. said...

** ಕಲ್ಲು ಬಂಡೆ **

ಲಕ್ಷವರುಷಗಳಿಂದ ಸುರಿದ
ಒಂದು ಹನಿ ನಿಲ್ಲಲಿಲ್ಲ
ಜಾರಿ ಹೋದವೋ ಎಲ್ಲಿ
ಸುಳಿವುಗಳೇ ಇಲ್ಲ ||

ಕಲ್ಲು ಬಂಡೆಯ ಮೇಲೆ
ಕೂತ ಜೀವಿಗಳೆಷ್ಟೋ
ಎಣಿಸಿ ಹೇಳುವವರಿಲ್ಲ
ಮೌನವೇ ಸಾಕ್ಷಿ||

ತಾವು ಅರಸಿ ತೇಲಿ
ಬಂದ ಬೀಜಗಳೆಷ್ಟೋ
ಮೊಳೆಯೊಡೆದು ಬೆಳೆಯಲಿಲ್ಲ
ಕಳೆದು ಹೋದವು ಇಲ್ಲಿ||

ಬಂದು ಹೋದರು ಎಷ್ಟು
ಕುಂತು ಮಾತನಾಡಿದರೆಷ್ಟು
ಹತ್ತಿ ತುಳಿದರು ಎಷ್ಟು
ಬೇದವೆ ಕಾಣಲಿಲ್ಲ||

ಮೈಯ ಪರಚಿದರು ನನ್ನ
ಆರ ಮೇಲಿನ ಮೋಹಕೆ?
ಆರ ನೆನಪಿನ ಸಾಕ್ಷಿಗೆ?
ಆ ನೆನಪೇ ನನಗಿಲ್ಲ||

ಮೆತ್ತಿದರು ಕಲೆಗಳನು ನನ್ನ
ಮೈಯಮೇಲೆ ಕೆತ್ತಿ ಕೆತ್ತಿ
ಯಾವ ಉದ್ದೇಶಕೆ?
ಉಳಿದವು ಅಳಿಯಲೇ ಇಲ್ಲ||

ರಾತ್ರಿ ಹಗಲುಗಳು
ಸೂರ್ಯ ಚಂದ್ರ ಚಿಕ್ಕಿಗಳು
ಬೇರೆಯಲ್ಲ ನನಗೆ
ಬಂದು ಹೋಗುವವರು ಅಷ್ಟೆ||

ಬಿರಿಮಳೆಯೇ ಸುರಿದರೂ
ನೀರಲ್ಲಿ ಮುಳಿಗಿಸಿದರೂ
ನನ್ನೊಡಲು ತೋಯಲಿಲ್ಲ
ನಾನು ಕರಗದೇ ಉಳಿದೆ||

ಬಿಸಿಲು ಬೆಂಕಿ ಉರಿಸಿದರು
ಸಿಡಿಲುಗಳ ಸಿಡಿ ಸಿಡಿದರು
ಸುಟ್ಟು ಕರಕಲಾಗದೆ
ನಾನು ತಣ್ಣಗಾದೆನಲ್ಲ||

ದುಃಖವಾದಗ ಕಠೋರ
ಎಂದೆನ್ನ ಜೋಡಿಸಿ ದೂರಿದರು
ಆರಿಗೋ ದೈರ್ಯ ಹೇಳಲು
ಹೊಗಳಿದೆರೆನ್ನ, ನಾನು ಬದಲಾಗಲೇ ಇಲ್ಲ||

"ಘೋರ್ಕಲ್ಲ ಮೇಲೆ ನೀರು ಸುರಿದಂತೆ"
ಯಾರೋ ಮಾಡಿದ ತಪ್ಪಿಗೆ
ನಿಂದಿಸಿಸದರು ನನ್ನ ಹೆಸರಲ್ಲಿ
ತಪ್ಪು ನನ್ನದಲ್ಲವಲ್ಲ||

ಕಠೋರ ಕಲ್ಲೆಂದು
ಕಾಠಿಣ್ಯಕ್ಕೆ ಸಾಕ್ಷಿಯೆಂದೆನ್ನ
ಸಾರಿದರು ಜಗಕೆ, ಯಾಕೋ
ಕಾರಣ ನಾನಲ್ಲವಲ್ಲ||

ಬಿದ್ದ ಬಿಸಿಲಿಗೆಂದು
ಬೆದರಲೇ ಇಲ್ಲ
ಮೈಯೊಡ್ಡಿದೆ ತೆರೆದ ಬೈಲಿಗೆ
ಸೋಲಿನ ಸುಳಿವೇ ನನ್ನಲ್ಲಿಲ್ಲ||

ಸವಾಲಾಗಿದ್ದರು ನಾನು
ಸಾಯಲೇ ಬೇಕಲ್ಲ!
ಸಾಯುವೆನೊಂದು ದಿನ, ಆದರು
ಸಾವಿನೆಣಿಕೆನಗೆ ಗೊತ್ತೇ ಇಲ್ಲ||

Vijaya said...

ಗುರಿ ಕಣ್ಮುಂದಿರಲು
ಬೆಟ್ಟ ದಾಟಿ ಸಂತಸ
ಭಾವ ಮನತುಂಬಿರಲು
ಕಲ್ಲು ಮೀಟಿ ಸಂಗೀತ

ನೋವು ಬೆಟ್ಟವಾಗದೆ
ಹೃದಯ ಭಾರವಾಗದೆ
ನಗು ಬಾಳ ತುಂಬಿರಲು
ಸ್ವರ್ಗ ಸಾಟಿ ನಿಶ್ಚಿತ

ಕುಕೂಊ.. said...

ವಿಜಯ,
ನಿಮ್ಮ ಕವಿತೆ ನನಗೆ ತುಂಬಾ ಇಷ್ಟವಾಯಿತು.ಭಾವ ಮನತುಂಬಿರಲು
ಕಲ್ಲು ಮೀಟಿ ಸಂಗೀತ
ಈ ಸಾಲುಗಳು ನನಗೆ ತುಂಬಾ ಖುಷಿ ಕೊಟ್ಟವು.

ಸ್ವಾಮಿ
ಪುಣೆ

Satish said...

ನಮ್ಮೂರ್ ಹೈಕ್ಳು

ನಮ್ಮೂರ ಹೈಕ್ಳು ಭಾಳಾ ಶಾಣ್ಯಾ ಅದಾರ್ ನೋಡ್ರಿ
ಗುಡ್ಡಾ-ಮೇಡೂ ತಿರುಗಿ ಅವರ್ದೇ ಒಂದು ಹಾಡ್ರಿ.

ಬಿಸಿಲಾಗ ಸತ್ತ ಚಂದ್ರನ ಮುಖದಂಗಿರೋ
ನೆಲದ ಮ್ಯಾಗ ನಡದು ಏನ ಕಡದೀ ತಮ್ಮ
ಕುಡುಗೋಲ್ ನುಂಗಿ ಹಿಂಬದಿ ಹರಕಂಡ್
ಬ್ಯಾಡೇ ಬ್ಯಾಡಂದ್ರೂ ಬೆನ್ನ ಬಿಡದಾ ಗುಮ್ಮ.

ಕಾಡ ಮ್ಯಾಡ ಸುತ್ತೋ ಅಂದ್ರ
ಕಾಡಿಗ್ ಕಾಡೇ ಇಲ್ಲಾ ಅಂದಾಗ
ಕಾಡ ಬ್ಯಾಡ ಜೀವ್ನಾ ಪೂರ್ತಿ
ಯಾವ್ ಜೀವ್ನಾ ತೆಗೀ ಅತ್ಲಾಗ
ಎಲ್ಲಾರ್ ಹೋದ್ ದಾರೀಲ್ ಹೋಗೋ
ಹಳೇ ರೀತಿಗೆ ಜೋತ್ ಬಿದ್ದು
ನಿನ್ನ ದಾರೀ ನೀನೇ ಹುಡುಕೀ
ಕರ್ಮಾ ನೋಡೋರ್ ಕಣ್ ಬಿದ್ದು.

ಬೆಪ್ಪಿನ ಜೀವನ ತೆರೆದು ಹೊಸದನು ಪಡೆವುದು ಸೋಜಿಗವು
ಎತ್ತಣ ಬಾನು ಎಲ್ಲಿನ ಭುವಿಯು ಇಲ್ಲೇ ಸಿಗುವುದು ನಿಧಿಯು
ಮುಪ್ಪಿನ ಕಾಲಕೆ ಕಾಲೆಳೆಯುವುದು ಎಲ್ಲರ ಕಷ್ಟ ಇದ್ದದ್ದೇ
ಕೈಕಾಲ್ ಗಟ್ಟಿ ಇರೋವಾಗಲೇ ಹತ್ತಿ ಇಳಿಯುವುದು ದೊಡ್ಡದೆ.