Tuesday 27 May, 2008

ಚಿತ್ರ ೫೫



ಚಿತ್ರ ೫೫ ಕ್ಕೆ ಅರುಣ್ ಮತ್ತು ಸತೀಶ್ ಅವರು ಕವನಗಳನ್ನ ಬರೆದಿದ್ದಾರೆ.


ಅರುಣ್ ರ ಕವನ -
ಹಣದಾತುರದಿಂ ಸೌಧಮಾಗಿರ್ಪುದುಮೊಳಗೆ

ಹೆಣದಾತುರದಿಂ ವಿಹರಿಪುದು ಹದ್ದು ನಭದಿ

ಹೆಣದ ನಾತ ಹೊಡೆಯಲು ಧನನುಂಗಿರ್ದ ಸ್ಥಳದಿಂ

ಹೊಣೆಯಾರಿಗೆಲೊ - ಚಿತ್ರಕವನ


ಸತೀಶ ರ ಕವನ -
ಮಹಲಿನ ಜೊತೆಗಿನ ಗತ್ತು

ನಿಂತಲ್ಲೇ ನಿಂತ ಸೌಧ ಸ್ವಚ್ಛಂದವಾಗಿ ತೆರೆದ ಮುಗಿಲು

ಕದ್ದು ಕಾಯುವ ಹದ್ದು ಕಾಣುವ ಮಲಗೆದ್ದ ಹಗಲು

ಬದುಕಿ ಸಾಯುವ ಆಹಾರ ಹೊಟ್ಟೆ ಗೋರಿಯ ಸೇರಿ

ಹಾರುವ ಪಕ್ಷಿಯ ಮನಸು ಸೌಧದ ತುದಿ ನಭವ ಮೀರಿ.

ಅಂತಹದೇನಿರಬಹುದು ಇದೆಲ್ಲದರ ವಿಶೇಷ

ಸುತ್ತಲ ಪ್ರತಿಯೊಂದೂ ಮೇಲೆ ಏರುವ ವೇಷ

ಅದ್ಯಾವುದೋ ಕಾರಣಕೆ ಮೇಲ್ಮುಖವ ಮಾಡಿ

ಮೇಲೆ ಹೋದಂತೆಲ್ಲ ತಮ್ಮ ಕೆಳಗಷ್ಟೇ ತೋಡಿ.

ಆಹಾರವೆಂದೂ ಈ ಜಗವು ಹುಡುಕುವ ರತ್ನ

ಎಲ್ಲ ಜೀವರಾಶಿಗಳ ಒಂದೊಂದು ಥರದ ಯತ್ನ

ಇಂದು ಇರದ ನಾಳೆಗಳಿಗೆ ಕೂಡಿ ಹಾಕುವರೆಷ್ಟು

ನಿನ್ನೆ ಇಂದಿನವರೆಗೆ ಹಸಿದೇ ಹಲಬುವರಷ್ಟು.

ಹಾರುವ ಹದ್ದಿನ ಕಷ್ಟ ನಿತ್ಯ ಹಸಿರಿನವರಿಗೇನು ಗೊತ್ತು

ನಾವು ಗುರುತಿಸಿಕೊಂಡ ಮಹಲಿನ ಜೊತೆಗೆ ನಮ್ಮ ಗತ್ತು.

3 comments:

Parisarapremi said...

ಹಣದಾತುರದಿಂ ಸೌಧಮಾಗಿರ್ಪುದುಮೊಳಗೆ
ಹೆಣದಾತುರದಿಂ ವಿಹರಿಪುದು ಹದ್ದು ನಭದಿ
ಹೆಣದ ನಾತ ಹೊಡೆಯಲು ಧನನುಂಗಿರ್ದ ಸ್ಥಳದಿಂ
ಹೊಣೆಯಾರಿಗೆಲೊ - ಚಿತ್ರಕವನ|

ತೇಜಸ್ವಿನಿ ಹೆಗಡೆ said...

ವಿಡಂಬನೆ ತುಂಬಾ ಚೆನ್ನಾಗಿದೆ ಪರಿಸರಪ್ರೇಮಿಯವರೆ..

Satish said...

ಮಹಲಿನ ಜೊತೆಗಿನ ಗತ್ತು

ನಿಂತಲ್ಲೇ ನಿಂತ ಸೌಧ ಸ್ವಚ್ಛಂದವಾಗಿ ತೆರೆದ ಮುಗಿಲು
ಕದ್ದು ಕಾಯುವ ಹದ್ದು ಕಾಣುವ ಮಲಗೆದ್ದ ಹಗಲು
ಬದುಕಿ ಸಾಯುವ ಆಹಾರ ಹೊಟ್ಟೆ ಗೋರಿಯ ಸೇರಿ
ಹಾರುವ ಪಕ್ಷಿಯ ಮನಸು ಸೌಧದ ತುದಿ ನಭವ ಮೀರಿ.

ಅಂತಹದೇನಿರಬಹುದು ಇದೆಲ್ಲದರ ವಿಶೇಷ
ಸುತ್ತಲ ಪ್ರತಿಯೊಂದೂ ಮೇಲೆ ಏರುವ ವೇಷ
ಅದ್ಯಾವುದೋ ಕಾರಣಕೆ ಮೇಲ್ಮುಖವ ಮಾಡಿ
ಮೇಲೆ ಹೋದಂತೆಲ್ಲ ತಮ್ಮ ಕೆಳಗಷ್ಟೇ ತೋಡಿ.

ಆಹಾರವೆಂದೂ ಈ ಜಗವು ಹುಡುಕುವ ರತ್ನ
ಎಲ್ಲ ಜೀವರಾಶಿಗಳ ಒಂದೊಂದು ಥರದ ಯತ್ನ
ಇಂದು ಇರದ ನಾಳೆಗಳಿಗೆ ಕೂಡಿ ಹಾಕುವರೆಷ್ಟು
ನಿನ್ನೆ ಇಂದಿನವರೆಗೆ ಹಸಿದೇ ಹಲಬುವರಷ್ಟು.

ಹಾರುವ ಹದ್ದಿನ ಕಷ್ಟ ನಿತ್ಯ ಹಸಿರಿನವರಿಗೇನು ಗೊತ್ತು
ನಾವು ಗುರುತಿಸಿಕೊಂಡ ಮಹಲಿನ ಜೊತೆಗೆ ನಮ್ಮ ಗತ್ತು.