Tuesday 24 June, 2008

ಚಿತ್ರ ೫೯




ಚಿತ್ರ ೫೯ ಕ್ಕೆ ತಿರುಕ,ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಎತ್ತಿನಾ ಗಾಡಿ

ನಮ್ಮ ತಾತ ಮಾಡಿಸಿದ್ದು
ಇದು ಗುಂಬದ ಚಕ್ಕಡಿ|

ಚಂದಾಗಿ ಉರುಳುತೈತೆ
ಯಾರು ಇದಕೆ ಸಾಟಿ|

ಬಿತ್ತಲು ಬೀಜ ಹೊತ್ತು ಬಂದೈತೆ
ನಮ್ಮ ಎತ್ತಿನಾ ಗಾಡಿ|

ನಿನ್ನೆ ತಾನೆ ಸುರಿದೈತೆ
ವೈನಾಗಿ ರೋಹಿಣಿ ಮಳೆ|

ಎತ್ತು ಹೆಗಲು ಊಡ್ಯಾವೆ
ಕೂರಿಗೆಯ ನೊಗಕೆ|

ಹೆಜ್ಜೆ ಇಡುತ ನಡೆದಾವೆ
ಸಾಲುಗಳ ನಡುವೆ|

ಗಾಳಿ ಸುಳಿದಾಡೈತೆ
ತಿರುಗಿ ಸುಳಿಸುಳಿಯಾಗಿ|

ಬತ್ತದುಲ್ಲು ಅರಡ್ಯಾತೆ
ಅತ್ತಿತ್ತ ಎತ್ಯತ್ತಲಾಗೆ|

ನೀಲಿ ಆಗಸದಾಗೆ ತೇಲಾವೆ
ನೋಡು ಬಿಳಿ ಬಿಳಿ ಮೋಡ|

ಇಂದು ಸಂಜೆ ಬರಬೌದು
ನಿನ್ನೆಯಂತೆ ಜೋರು ಮಳೆ|

ಬದುವಿನಾಗೆ ಬೆಳೆದಾವೆ
ಆಲ ಹಲಸು ಹುಣಿಸೆ ಮರ|

ಹಸುರಿನಲ್ಲಿ ತುಂಬಿ ಬೀಗ್ಯಾವೆ
ಎಂಷ್ಟು ಚಂದ ನೋಡ|

ಬಾರೋ ಗೆಳೆಯ ನೋಡಿ ಬರುವ
ನಮ್ಮ ಹಳ್ಳಿಯ ಸೊಬಗ|

ನಾವು ಕುಂತು ಓಡಿಸೋಣ
ಪುಳಕದಿ ನಮ್ಮ ಎತ್ತಿನ ಗಾಡೀ|

**ಕುಕೂಊ...


ತಿರುಕ
ಅವರ ಕವನ -

ಮೊಗವೆತ್ತಿ ನೀ ಹೇಳೇ
ನೊಗವೆತ್ತಿ ನಡೆದುದು ಸಾಕಾಯಿತೇ!
ಹಿಡಿದು ಬಂದ ಹಾದಿಯ ಒಮ್ಮೆ ಅವಲೋಕಿಸು
ಹರಿದ ಪಾದಗಳ ಚರ್ಮವೊಮ್ಮೆ ನಿರುಕಿಸು

ಹರಿದುದು ಮತ್ತೆ ಸೇರುವುದು
ಕಳೆದುದಕೆ ಮತ್ತೆ ಕೂಡುವುದು
ಇದುವೇ ಜಗದ ನಿಯಮ
ಜೀವನ ಪರಿಯ ತಿಳಿ ಹೇಳುವ ಆಯಾಮ

ಬೆನ್ನ ಮೇಲಿನ್ನೂ ಹೊರೆ ಇರುವುದು
ಬಗಲಿನ ಹಯನು ಜೀವ ಹೊರೆವುದು
ಕಾಯಕವಿನ್ನೂ ಕಾಯುತಿಹುದು
ಅರೆಕ್ಷಣದ ಬಳಲಿಕೆ ಆರುತಿಹುದು

ಏಳು ಏಳಿನ್ನು, ನಡೆ ನಡೆ
ಕಟ್ಟು ಆ ಹೆಡೆಮುಡೆ
ಸಂಸಾರದ ಗಾಡಿಯ ಎಳೆಯುವಾ
ದಿಗಂತಕೆ ಕೊನೆಯ ತೋರುವಾ


ಸತೀಶ್
ಅವರ ಕವನ -
ಹಳಿ ಕಟ್ಟಿದ ಗಾಲಿ

ನಿಂತಿರುವ ಗಾಡಿ ಚಲನೆಯನೆ ತೀಡಿ
ನೊಗಕಡ್ಡಲಾಗಿ ಮಲಗಿ ದೊಡ್ಡ ಕಂಬ
ಅಲ್ಲಲ್ಲಿ ಚೆದುರಿ ಹೊಡೆ ಹಾರಿ ಮೋಡ
ಮುಕ ಹಾರಿ ಕುಂತಿತ್ತು ಚಂದ್ರ ಬಿಂಬ.

ನೊಗ ಕಟ್ಟಿ ಎಳೆದು ಮಿಣಿ ಕಣ್ಣಿ ಮೀಟಿ
ಒಣ ನೆಲವು ಮೆಂದ ಹುಲ್ಲ ಹರಿವು
ಚೆದುರಿದಾ ಹುಲ್ಲು ಹರಡಿದಾ ನೆರಳು
ಅಗೆದಂತೆ ಮಣ್ಣಿನ ಬಣ್ಣ ಅರಿವು.

ಇದ್ದಾರೆ ಬಹವು ಎರೆಡೆರಡು ಗಾಲಿ
ಒಡನೆ ಸಮತೂಕ ಸಂಸಾರ ನೌಕೆ
ಹಳಿ ಕಟ್ಟಿ ಸುತ್ತ ಕೋಲುಗಳ ಪಾತ್ರ
ಉರಿ ಬಿಸಿಲಿನಲಿ ಹಿಂಗದಾ ಬಯಕೆ.

ಇತ್ತ ಎತ್ತು ಇಲ್ಲ ಅತ್ತ ಗೊತ್ತೇ ಇಲ್ಲ
ನಿಂತು ಹಾಡುವರ ತತ್ವ ಸಮವೋ
ಅರೆ ಸುಟ್ಟ ಸೌದೆ ಬರೆ ಕಟ್ಟ ಕಾಯ್ದೆ
ಒಳಗೆ ಏನಿಹುದು ಬಾಹ್ಯತಮವೋ.

3 comments:

ಕುಕೂಊ.. said...

** ನಮ್ಮ ಎತ್ತಿನಾ ಗಾಡಿ **

ನಮ್ಮ ತಾತ ಮಾಡಿಸಿದ್ದು
ಇದು ಗುಂಬದ ಚಕ್ಕಡಿ|

ಚಂದಾಗಿ ಉರುಳುತೈತೆ
ಯಾರು ಇದಕೆ ಸಾಟಿ|

ಬಿತ್ತಲು ಬೀಜ ಹೊತ್ತು ಬಂದೈತೆ
ನಮ್ಮ ಎತ್ತಿನಾ ಗಾಡಿ|

ನಿನ್ನೆ ತಾನೆ ಸುರಿದೈತೆ
ವೈನಾಗಿ ರೋಹಿಣಿ ಮಳೆ|

ಎತ್ತು ಹೆಗಲು ಊಡ್ಯಾವೆ
ಕೂರಿಗೆಯ ನೊಗಕೆ|

ಹೆಜ್ಜೆ ಇಡುತ ನಡೆದಾವೆ
ಸಾಲುಗಳ ನಡುವೆ|

ಗಾಳಿ ಸುಳಿದಾಡೈತೆ
ತಿರುಗಿ ಸುಳಿಸುಳಿಯಾಗಿ|

ಬತ್ತದುಲ್ಲು ಅರಡ್ಯಾತೆ
ಅತ್ತಿತ್ತ ಎತ್ಯತ್ತಲಾಗೆ|

ನೀಲಿ ಆಗಸದಾಗೆ ತೇಲಾವೆ
ನೋಡು ಬಿಳಿ ಬಿಳಿ ಮೋಡ|

ಇಂದು ಸಂಜೆ ಬರಬೌದು
ನಿನ್ನೆಯಂತೆ ಜೋರು ಮಳೆ|

ಬದುವಿನಾಗೆ ಬೆಳೆದಾವೆ
ಆಲ ಹಲಸು ಹುಣಿಸೆ ಮರ|

ಹಸುರಿನಲ್ಲಿ ತುಂಬಿ ಬೀಗ್ಯಾವೆ
ಎಂಷ್ಟು ಚಂದ ನೋಡ|

ಬಾರೋ ಗೆಳೆಯ ನೋಡಿ ಬರುವ
ನಮ್ಮ ಹಳ್ಳಿಯ ಸೊಬಗ|

ನಾವು ಕುಂತು ಓಡಿಸೋಣ
ಪುಳಕದಿ ನಮ್ಮ ಎತ್ತಿನ ಗಾಡೀ|

**ಕುಕೂಊ...

Unknown said...

ಮೊಗವೆತ್ತಿ ನೀ ಹೇಳೇ
ನೊಗವೆತ್ತಿ ನಡೆದುದು ಸಾಕಾಯಿತೇ!
ಹಿಡಿದು ಬಂದ ಹಾದಿಯ ಒಮ್ಮೆ ಅವಲೋಕಿಸು
ಹರಿದ ಪಾದಗಳ ಚರ್ಮವೊಮ್ಮೆ ನಿರುಕಿಸು

ಹರಿದುದು ಮತ್ತೆ ಸೇರುವುದು
ಕಳೆದುದಕೆ ಮತ್ತೆ ಕೂಡುವುದು
ಇದುವೇ ಜಗದ ನಿಯಮ
ಜೀವನ ಪರಿಯ ತಿಳಿ ಹೇಳುವ ಆಯಾಮ

ಬೆನ್ನ ಮೇಲಿನ್ನೂ ಹೊರೆ ಇರುವುದು
ಬಗಲಿನ ಹಯನು ಜೀವ ಹೊರೆವುದು
ಕಾಯಕವಿನ್ನೂ ಕಾಯುತಿಹುದು
ಅರೆಕ್ಷಣದ ಬಳಲಿಕೆ ಆರುತಿಹುದು

ಏಳು ಏಳಿನ್ನು, ನಡೆ ನಡೆ
ಕಟ್ಟು ಆ ಹೆಡೆಮುಡೆ
ಸಂಸಾರದ ಗಾಡಿಯ ಎಳೆಯುವಾ
ದಿಗಂತಕೆ ಕೊನೆಯ ತೋರುವಾ

Satish said...

ಹಳಿ ಕಟ್ಟಿದ ಗಾಲಿ

ನಿಂತಿರುವ ಗಾಡಿ ಚಲನೆಯನೆ ತೀಡಿ
ನೊಗಕಡ್ಡಲಾಗಿ ಮಲಗಿ ದೊಡ್ಡ ಕಂಬ
ಅಲ್ಲಲ್ಲಿ ಚೆದುರಿ ಹೊಡೆ ಹಾರಿ ಮೋಡ
ಮುಕ ಹಾರಿ ಕುಂತಿತ್ತು ಚಂದ್ರ ಬಿಂಬ.

ನೊಗ ಕಟ್ಟಿ ಎಳೆದು ಮಿಣಿ ಕಣ್ಣಿ ಮೀಟಿ
ಒಣ ನೆಲವು ಮೆಂದ ಹುಲ್ಲ ಹರಿವು
ಚೆದುರಿದಾ ಹುಲ್ಲು ಹರಡಿದಾ ನೆರಳು
ಅಗೆದಂತೆ ಮಣ್ಣಿನ ಬಣ್ಣ ಅರಿವು.

ಇದ್ದಾರೆ ಬಹವು ಎರೆಡೆರಡು ಗಾಲಿ
ಒಡನೆ ಸಮತೂಕ ಸಂಸಾರ ನೌಕೆ
ಹಳಿ ಕಟ್ಟಿ ಸುತ್ತ ಕೋಲುಗಳ ಪಾತ್ರ
ಉರಿ ಬಿಸಿಲಿನಲಿ ಹಿಂಗದಾ ಬಯಕೆ.

ಇತ್ತ ಎತ್ತು ಇಲ್ಲ ಅತ್ತ ಗೊತ್ತೇ ಇಲ್ಲ
ನಿಂತು ಹಾಡುವರ ತತ್ವ ಸಮವೋ
ಅರೆ ಸುಟ್ಟ ಸೌದೆ ಬರೆ ಕಟ್ಟ ಕಾಯ್ದೆ
ಒಳಗೆ ಏನಿಹುದು ಬಾಹ್ಯತಮವೋ.