Thursday 19 March, 2009

ಚಿತ್ರ ೯೬



ತವಿಶ್ರೀ:
ಚೈತ್ರೋದಯ

ತಣ್ಣನೆಯ ಹಳದಿ ಕೆಂಪು ನಸು ಹಸುರು ಚಿಗುರು
ಚಿಗುರೆಡೆದು ಹೂವ ತೋರುವವು ಮಾವು ಹೊಂಗೆ
ತುಂಬಿ ತುಳುಕಲಿ ಬತ್ತುತಿಹ ಕಾವೇರಿ ತುಂಗೆ
ಹಾಡಿ ಪಾಡಲಿ ಮರೆಯಾಗುತಿಹ ಕೋಗಿಲೆ

ಕಾಲ ಉರುಳಿ ಉರುಳಿ ಸಾಗುತಿದೆ
ತಡೆಯಲ್ಯಾರಿಂದಲೂ ಆಗದೇ?
ಆಗದು, ಏನೇ ಮಾಡಬಲ್ಲ, ಏನನೂ ತಡೆಯಬಲ್ಲ
ಹುಲುಮಾನವನಿಂದಂತೂ ಅದಾಗದು!

ಸರ್ವಜಿತುವಿನಂತಿರಲಿಲ್ಲ ಸರ್ವಧಾರಿ
ಸರ್ವಧಾರಿಯಂತಲ್ಲ ವಿರೋಧಿ
ಎಲ್ಲ ವರುಷಗಳಲ್ಲೂ ಏಳು ಬೀಳು
ಬರುವ ವರುಷದಲಿ ಹಾಗಾಗದಿರಲೆಂದು ಕೇಳು

ಕಣ್ಣಿಗೆ ಕಂಡುದು ನೋವು ಸಾವುಗಳು ಸಾವಿರಾರು
ಕಣ್ಣಿಗೆ ಕಾಣದದು ನಲಿವು ಜನನಗಳು ಲಕ್ಷಾಂತರ
ಕಂಡುದರಿಂದ ಮನಕೆ ದುಃಖ ದುಮ್ಮಾನ ಆತಂಕ
ಕಾಣದುದರಿಂದ ಎಲ್ಲವೂ ನಿರಾತಂಕ

ಬಲ್ಲವರು ನುಡಿದುದು
ಬದಲಾವಣೆಯೇ ಜಗದ ನಿಯಮ
ಮೋಡದಿ ಕಾಲೂರಿ ನಡೆಯುವುದೂ
ಇನ್ನೊಂದು ಆಯಾಮ

ಹರಿದು ಹಂಚಿ ಹೋಗಿಹುದು ಈ ದಿರಿಸು
ತೇಪೆ ಹಚ್ಚಿ ಒಟ್ಟು ಮಾಡಿದರೆ ನೋಡಲು ಸೊಗಸು
ಏರಲಿ ಮೈ ಮೇಲೆ ಹೊಸ ವರುಷದ ಹೊಸ ಬಟ್ಟೆ
ಹಳೆಯ ನೆನಪು ಮಾಸದಿರುವಂತೆ ಮೂಲೆಯಲಿರಲಿ ಹಳೆ ಬಟ್ಟೆ

ಹೊಸ ವರುಷದಾಗಮನದಿ ಮನಗಳಲಿ ಹರುಷ
ಇದೇ ಎಲ್ಲರ ನಿರೀಕ್ಷೆ
ಕಳೆದುದ ಮತ್ತೆ ನಿರೀಕ್ಷಿಸುವುದು ಬೇಡ
ಹರುಷಕಾಗಿ ಎದುರಿಸಬಲ್ಲೆವು ಎಲ್ಲ ತೆರದ ಪರೀಕ್ಷೆ

1 comment:

Unknown said...

ಚೈತ್ರೋದಯ

ತಣ್ಣನೆಯ ಹಳದಿ ಕೆಂಪು ನಸು ಹಸುರು ಚಿಗುರು
ಚಿಗುರೆಡೆದು ಹೂವ ತೋರುವವು ಮಾವು ಹೊಂಗೆ
ತುಂಬಿ ತುಳುಕಲಿ ಬತ್ತುತಿಹ ಕಾವೇರಿ ತುಂಗೆ
ಹಾಡಿ ಪಾಡಲಿ ಮರೆಯಾಗುತಿಹ ಕೋಗಿಲೆ

ಕಾಲ ಉರುಳಿ ಉರುಳಿ ಸಾಗುತಿದೆ
ತಡೆಯಲ್ಯಾರಿಂದಲೂ ಆಗದೇ?
ಆಗದು, ಏನೇ ಮಾಡಬಲ್ಲ, ಏನನೂ ತಡೆಯಬಲ್ಲ
ಹುಲುಮಾನವನಿಂದಂತೂ ಅದಾಗದು!

ಸರ್ವಜಿತುವಿನಂತಿರಲಿಲ್ಲ ಸರ್ವಧಾರಿ
ಸರ್ವಧಾರಿಯಂತಲ್ಲ ವಿರೋಧಿ
ಎಲ್ಲ ವರುಷಗಳಲ್ಲೂ ಏಳು ಬೀಳು
ಬರುವ ವರುಷದಲಿ ಹಾಗಾಗದಿರಲೆಂದು ಕೇಳು

ಕಣ್ಣಿಗೆ ಕಂಡುದು ನೋವು ಸಾವುಗಳು ಸಾವಿರಾರು
ಕಣ್ಣಿಗೆ ಕಾಣದದು ನಲಿವು ಜನನಗಳು ಲಕ್ಷಾಂತರ
ಕಂಡುದರಿಂದ ಮನಕೆ ದುಃಖ ದುಮ್ಮಾನ ಆತಂಕ
ಕಾಣದುದರಿಂದ ಎಲ್ಲವೂ ನಿರಾತಂಕ

ಬಲ್ಲವರು ನುಡಿದುದು
ಬದಲಾವಣೆಯೇ ಜಗದ ನಿಯಮ
ಮೋಡದಿ ಕಾಲೂರಿ ನಡೆಯುವುದೂ
ಇನ್ನೊಂದು ಆಯಾಮ

ಹರಿದು ಹಂಚಿ ಹೋಗಿಹುದು ಈ ದಿರಿಸು
ತೇಪೆ ಹಚ್ಚಿ ಒಟ್ಟು ಮಾಡಿದರೆ ನೋಡಲು ಸೊಗಸು
ಏರಲಿ ಮೈ ಮೇಲೆ ಹೊಸ ವರುಷದ ಹೊಸ ಬಟ್ಟೆ
ಹಳೆಯ ನೆನಪು ಮಾಸದಿರುವಂತೆ ಮೂಲೆಯಲಿರಲಿ ಹಳೆ ಬಟ್ಟೆ

ಹೊಸ ವರುಷದಾಗಮನದಿ ಮನಗಳಲಿ ಹರುಷ
ಇದೇ ಎಲ್ಲರ ನಿರೀಕ್ಷೆ
ಕಳೆದುದ ಮತ್ತೆ ನಿರೀಕ್ಷಿಸುವುದು ಬೇಡ
ಹರುಷಕಾಗಿ ಎದುರಿಸಬಲ್ಲೆವು ಎಲ್ಲ ತೆರದ ಪರೀಕ್ಷೆ