Thursday 2 July, 2009

ಚಿತ್ರ ೧೦೯



ತವಿಶ್ರೀ:

ರಾಮು, ಪುಟ್ಟ, ಪುಟ್ಟಿ ಮತ್ತು ಕೃಷ್ಣ ಗೆಳೆಯರು. ಅದೊಂದು ಭಾನುವಾರ. ಒಮ್ಮೆ ರಾಮುವಿನ ತಂದೆ ಮನೆಯಲ್ಲಿರಲಿಲ್ಲ. ಕಛೇರಿಗೆ ಪ್ರತಿದಿನ ಒಯ್ಯುತ್ತಿದ್ದ ಬೈಸಿಕಲ್ಲನ್ನು ಮನೆಯಲ್ಲಿಯೇ ಬಿಟ್ಟು, ಸಂತೆಯಿಂದ ತರಕಾರಿ ತರಲು ಹೋಗಿದ್ದರು. ಎಂದಿನಂತೆ ಅಮ್ಮ ಊರ ಬಾವಿಯಿಂದ ಸಿಹಿನೀರನ್ನು ತರಲು ಹೋಗಿದ್ದಳು. ತುಂಟ ರಾಮು ತನ್ನ ತಮ್ಮ ಕೃಷ್ಣ ಮತ್ತು ಪಕ್ಕದ ಮನೆಯ ಪುಟ್ಟ ಪುಟ್ಟಿಯನ್ನು ಜೊತೆ ಮಾಡಿಕೊಂಡು ಮನೆಯ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಸೈಕಲ್ ಕಲಿಸಲು ಕರೆದೊಯ್ದನು.

ರಾಮುವಿಗೆ ಸೈಕಲ್ ಸವಾರಿ ಮಾಡಲು ಬರುತ್ತಿತ್ತು. ಆದರೆ ಇನ್ನು ಮೂವರು ಚಿಣ್ಣರಿಗೆ ಅದು ತಿಳಿಯದು. ಬಹಳ ದಿನಗಳಿಂದ ’ಸೈಕಲ್ ಸವಾರಿ ಕಲಿಸಿಕೊಡೆಂದು’ ರಾಮುವನ್ನು ಪೀಡಿಸುತ್ತಿದ್ದವರಿಗೆ ಇಂದು ಸಕಾಲ ಒದಗಿತ್ತು. ಸ್ವತಂತ್ರ ಪಕ್ಷಿಯಂತೆ ರಾಮುವು ಉದ್ಯಾನವನವನ್ನು ಒಂದು ಸುತ್ತು ಹಾಕಿದ ನಂತರ ಒಂದೇ ಕೈನಲ್ಲಿ ಸೈಕಲಿನ ಕೈಪಿಡಿಯನ್ನು ಹಿಡಿದು ಇನ್ನೊಂದು ಸುತ್ತು ಹಾಕಿದ. ತದನಂತರ ಪುಟ್ಟಿಯನ್ನು ಹಿಂದೆ ಕುಳ್ಳಿರಿಸಿಕೊಂಡು ಒಂದು ಸುತ್ತು ಹಾಕಿ, ನಂತರದ ಸುತ್ತಿನಲ್ಲಿ ಮುಂದೆ ಪುಟ್ಟ ಮತ್ತು ಹಿಂದೆ ಪುಟ್ಟಿಯರನ್ನು ಸುತ್ತು ಹಾಕಿಸಿದ. ಇದೆಲ್ಲವನ್ನೂ ತದೇಕಚಿತ್ತದಿಂದ ನೋಡುತ್ತಿದ್ದ, ಸೈಕಲ್ ಸವಾರಿ ಬಾರದ ಕೃಷ್ಣ ತನಗೂ ಒಂದು ಸುತ್ತು ಕೊಡು ಎಂದ. ಅದಕ್ಕೆ ಉತ್ತರವಾಗಿ ರಾಮುವು, ಮೊದಲು ಹಿಂದೆ ಕುಳಿತು ಒಂದು ಸುತ್ತು ಹೋಗೋಣ ಬಾ, ನಂತರ ನೀನು ಕಲಿಯುವಂತೆ ಎಂದು ಹೇಳಿದ. ಸ್ವಲ್ಪ ಮೊಂಡು ಸ್ವಭಾವದ ಕೃಷ್ಣ ಅಷ್ಟು ಸುಲಭಕ್ಕೆ ಅಣ್ಣನಿಗೆ ಮಣಿಯಲಿಲ್ಲ. ತನಗೆ ಸವಾರಿ ಬರುವುದೆಂದೂ, ತಕ್ಷಣವೇ ಸೈಕಲನ್ನು ತನಗೆ ಕೊಡಬೇಕೆಂದೂ, ಇಲ್ಲದಿದ್ದರೆ ಅಪ್ಪ ಅಮ್ಮನಿಗೆ ಹೇಳಿ ತಕ್ಕ ಶಾಸ್ತಿ ಮಾಡಿಸುತ್ತೇನೆಂದೂ ಹೆದರಿಸಿದ. ಈ ಮಾತುಗಳಿಗೆ ಹೆದರಿದ ರಾಮುವು ಸೈಕಲನ್ನು ಕೃಷ್ಣನಿಗೆ ಕೊಟ್ಟುಬಿಟ್ಟನು. ಸುಲಭದಲ್ಲಿ ಮೊದಲ ಬಾರಿಗೆ ತನ್ನ ಕೈಗೆ ಸೈಕಲ್ ಸಿಕ್ಕಿದ ಸಂಭ್ರಮದಲ್ಲಿ ಹೀಗೆ ಹಾಡು ಹೇಳಿಕೊಂಡು ಸವಾರಿ ಮಾಡಲು ಅಣಿಯಾದ, ಪುಟ್ಟ ಕೃಷ್ಣ.

ಸೈಕಲೇರಿ ಹೋಗುವಾ ಒಂದು ಸುತ್ತು
ಬಾರೇ ಜುಟ್ಟು, ಬಾರೋ ಪುಟ್ಟು, ಬಾರೋ ಕಿಟ್ಟು
ಮನೆಯಲ್ಲಿಲ್ಲ ಅಮ್ಮ ಅಪ್ಪ
ಇನ್ಯಾರ ಭಯ ನಮಗಿಲ್ಲಪ್ಪ

ನಾನೇ ನಿಮಗೆಲ್ಲ ಲೀಡರ್
ಇಲ್ಲೀಗ ಸೈಕಲಿನ ಡೀಲರ್
ಹೇಳಿದಂತೆ ನೀವು ಕೇಳದಿರೋ
ನಿಂಗೊಂದ ಛಾನ್ಸು ಕೊಡುವಿನೆರೋ

ಹಾಡುತಾ ಆಡುತಾ ನಮ್ಮ ಪುಟ್ಟು
ಹಾಕಿದ ಉದ್ಯಾನವನವ ಒಂದು ಸುತ್ತು
ಹಿಂದಿನ ಚಕ್ರಕ್ಕೆ ಮುಳ್ಳೊಂದು ಚುಚ್ಚಿತ್ತು
ಠುಸ್ಸೆಂದು ಅದರೊಳ ಗಾಳಿ ಇಲ್ಲವಾಗಿತ್ತು

ಸೈಕಲಿಂದ ಕೆಳಗೆ ಬಿದ್ದ
ಆಸರೆ ಇಲ್ಲದೇ ಮೇಲೇಳೇದಾಗಿದ್ದ
ಪೆಡಲು ಬಾರಿನ ಮಧ್ಯೆ ಕಾಲು
ಅರಳಿದ್ದ ಮುಖ ಜೋಲು ಜೋಲು

ಏಳಲಾಗದೇ ನೋವೆಂದು ಒದರಿದ್ದ
ರಾಮುವಿನ ಆಸರೆಯಲಿ ಮನೆ ಸೇರಿದ್ದ
ಕಾಲಿನ ಮೂಳೆ ಮುರಿದಿತ್ತು
ನೋವಿನಿಂದ ಕಣ್ಣೀರು ಸುರಿದಿತ್ತು

ಅಪ್ಪ ಅಮ್ಮಗೆ ತಿಳಿಯದೇ ಸೈಕಲಿಗೆ ಬಂದದ್ದು ತಪ್ಪೆಂದರಿವಾಗಿತ್ತು.


ಸುಪ್ತದೀಪ್ತಿ :

ಬೇಸಿಗೆ ರಜೆಯಲಿ ಬಾಡಿಗೆ ಸೈಕಲು
ಜೊತೆಯಲಿ ನಡೆದರು ಬೀದಿಯ ಮಕ್ಕಳು
ಊರಿನ ತೋಪಲಿ ಹೊಸದೇ ಆಟ
ಅರಿಯದ ಕಿರಿಯಗೆ ಹಿರಿಯನ ಪಾಠ

ಕತ್ತರಿ ಕಾಲು ಹಾಕುತ ಏರು
ಪೆಡಲ್ ತುಳಿದು ಹಿಡಿ ಹ್ಯಾಂಡಲ್ ಬಾರು
ಹಾದಿಯ ಮೇಲೆ ಇರಬೇಕು ಗಮನ
ಕಲಿಕೆಯೇನಲ್ಲ ರಾಕೆಟ್ ವಿಜ್ಞಾನ

ನೀನೂ ಬಾರಮ್ಮ, ಮುಂದಿನ ಸುತ್ತಿಗೆ
ನಾವಿದ್ದೇವೆ ಭಯಬೇಡ, ಹತ್ತು ಮೆಲ್ಲಗೆ
ಎಲ್ಲರಿಗೂ ಇದೆ ಸಮಯಾವಕಾಶ
ಕಲಿಕೆಗೆ ಕೊಡುವನು ಸೈಕಲಂಗಡಿ ಪಾಷ

2 comments:

Unknown said...

ರಾಮು, ಪುಟ್ಟ, ಪುಟ್ಟಿ ಮತ್ತು ಕೃಷ್ಣ ಗೆಳೆಯರು. ಅದೊಂದು ಭಾನುವಾರ. ಒಮ್ಮೆ ರಾಮುವಿನ ತಂದೆ ಮನೆಯಲ್ಲಿರಲಿಲ್ಲ. ಕಛೇರಿಗೆ ಪ್ರತಿದಿನ ಒಯ್ಯುತ್ತಿದ್ದ ಬೈಸಿಕಲ್ಲನ್ನು ಮನೆಯಲ್ಲಿಯೇ ಬಿಟ್ಟು, ಸಂತೆಯಿಂದ ತರಕಾರಿ ತರಲು ಹೋಗಿದ್ದರು. ಎಂದಿನಂತೆ ಅಮ್ಮ ಊರ ಬಾವಿಯಿಂದ ಸಿಹಿನೀರನ್ನು ತರಲು ಹೋಗಿದ್ದಳು. ತುಂಟ ರಾಮು ತನ್ನ ತಮ್ಮ ಕೃಷ್ಣ ಮತ್ತು ಪಕ್ಕದ ಮನೆಯ ಪುಟ್ಟ ಪುಟ್ಟಿಯನ್ನು ಜೊತೆ ಮಾಡಿಕೊಂಡು ಮನೆಯ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಸೈಕಲ್ ಕಲಿಸಲು ಕರೆದೊಯ್ದನು.

ರಾಮುವಿಗೆ ಸೈಕಲ್ ಸವಾರಿ ಮಾಡಲು ಬರುತ್ತಿತ್ತು. ಆದರೆ ಇನ್ನು ಮೂವರು ಚಿಣ್ಣರಿಗೆ ಅದು ತಿಳಿಯದು. ಬಹಳ ದಿನಗಳಿಂದ ’ಸೈಕಲ್ ಸವಾರಿ ಕಲಿಸಿಕೊಡೆಂದು’ ರಾಮುವನ್ನು ಪೀಡಿಸುತ್ತಿದ್ದವರಿಗೆ ಇಂದು ಸಕಾಲ ಒದಗಿತ್ತು. ಸ್ವತಂತ್ರ ಪಕ್ಷಿಯಂತೆ ರಾಮುವು ಉದ್ಯಾನವನವನ್ನು ಒಂದು ಸುತ್ತು ಹಾಕಿದ ನಂತರ ಒಂದೇ ಕೈನಲ್ಲಿ ಸೈಕಲಿನ ಕೈಪಿಡಿಯನ್ನು ಹಿಡಿದು ಇನ್ನೊಂದು ಸುತ್ತು ಹಾಕಿದ. ತದನಂತರ ಪುಟ್ಟಿಯನ್ನು ಹಿಂದೆ ಕುಳ್ಳಿರಿಸಿಕೊಂಡು ಒಂದು ಸುತ್ತು ಹಾಕಿ, ನಂತರದ ಸುತ್ತಿನಲ್ಲಿ ಮುಂದೆ ಪುಟ್ಟ ಮತ್ತು ಹಿಂದೆ ಪುಟ್ಟಿಯರನ್ನು ಸುತ್ತು ಹಾಕಿಸಿದ. ಇದೆಲ್ಲವನ್ನೂ ತದೇಕಚಿತ್ತದಿಂದ ನೋಡುತ್ತಿದ್ದ, ಸೈಕಲ್ ಸವಾರಿ ಬಾರದ ಕೃಷ್ಣ ತನಗೂ ಒಂದು ಸುತ್ತು ಕೊಡು ಎಂದ. ಅದಕ್ಕೆ ಉತ್ತರವಾಗಿ ರಾಮುವು, ಮೊದಲು ಹಿಂದೆ ಕುಳಿತು ಒಂದು ಸುತ್ತು ಹೋಗೋಣ ಬಾ, ನಂತರ ನೀನು ಕಲಿಯುವಂತೆ ಎಂದು ಹೇಳಿದ. ಸ್ವಲ್ಪ ಮೊಂಡು ಸ್ವಭಾವದ ಕೃಷ್ಣ ಅಷ್ಟು ಸುಲಭಕ್ಕೆ ಅಣ್ಣನಿಗೆ ಮಣಿಯಲಿಲ್ಲ. ತನಗೆ ಸವಾರಿ ಬರುವುದೆಂದೂ, ತಕ್ಷಣವೇ ಸೈಕಲನ್ನು ತನಗೆ ಕೊಡಬೇಕೆಂದೂ, ಇಲ್ಲದಿದ್ದರೆ ಅಪ್ಪ ಅಮ್ಮನಿಗೆ ಹೇಳಿ ತಕ್ಕ ಶಾಸ್ತಿ ಮಾಡಿಸುತ್ತೇನೆಂದೂ ಹೆದರಿಸಿದ. ಈ ಮಾತುಗಳಿಗೆ ಹೆದರಿದ ರಾಮುವು ಸೈಕಲನ್ನು ಕೃಷ್ಣನಿಗೆ ಕೊಟ್ಟುಬಿಟ್ಟನು. ಸುಲಭದಲ್ಲಿ ಮೊದಲ ಬಾರಿಗೆ ತನ್ನ ಕೈಗೆ ಸೈಕಲ್ ಸಿಕ್ಕಿದ ಸಂಭ್ರಮದಲ್ಲಿ ಹೀಗೆ ಹಾಡು ಹೇಳಿಕೊಂಡು ಸವಾರಿ ಮಾಡಲು ಅಣಿಯಾದ, ಪುಟ್ಟ ಕೃಷ್ಣ.

ಸೈಕಲೇರಿ ಹೋಗುವಾ ಒಂದು ಸುತ್ತು
ಬಾರೇ ಜುಟ್ಟು, ಬಾರೋ ಪುಟ್ಟು, ಬಾರೋ ಕಿಟ್ಟು
ಮನೆಯಲ್ಲಿಲ್ಲ ಅಮ್ಮ ಅಪ್ಪ
ಇನ್ಯಾರ ಭಯ ನಮಗಿಲ್ಲಪ್ಪ

ನಾನೇ ನಿಮಗೆಲ್ಲ ಲೀಡರ್
ಇಲ್ಲೀಗ ಸೈಕಲಿನ ಡೀಲರ್
ಹೇಳಿದಂತೆ ನೀವು ಕೇಳದಿರೋ
ನಿಂಗೊಂದ ಛಾನ್ಸು ಕೊಡುವಿನೆರೋ

ಹಾಡುತಾ ಆಡುತಾ ನಮ್ಮ ಪುಟ್ಟು
ಹಾಕಿದ ಉದ್ಯಾನವನವ ಒಂದು ಸುತ್ತು
ಹಿಂದಿನ ಚಕ್ರಕ್ಕೆ ಮುಳ್ಳೊಂದು ಚುಚ್ಚಿತ್ತು
ಠುಸ್ಸೆಂದು ಅದರೊಳ ಗಾಳಿ ಇಲ್ಲವಾಗಿತ್ತು

ಸೈಕಲಿಂದ ಕೆಳಗೆ ಬಿದ್ದ
ಆಸರೆ ಇಲ್ಲದೇ ಮೇಲೇಳೇದಾಗಿದ್ದ
ಪೆಡಲು ಬಾರಿನ ಮಧ್ಯೆ ಕಾಲು
ಅರಳಿದ್ದ ಮುಖ ಜೋಲು ಜೋಲು

ಏಳಲಾಗದೇ ನೋವೆಂದು ಒದರಿದ್ದ
ರಾಮುವಿನ ಆಸರೆಯಲಿ ಮನೆ ಸೇರಿದ್ದ
ಕಾಲಿನ ಮೂಳೆ ಮುರಿದಿತ್ತು
ನೋವಿನಿಂದ ಕಣ್ಣೀರು ಸುರಿದಿತ್ತು

ಅಪ್ಪ ಅಮ್ಮಗೆ ತಿಳಿಯದೇ ಸೈಕಲಿಗೆ ಬಂದದ್ದು ತಪ್ಪೆಂದರಿವಾಗಿತ್ತು

ಸುಪ್ತದೀಪ್ತಿ suptadeepti said...

ಬೇಸಿಗೆ ರಜೆಯಲಿ ಬಾಡಿಗೆ ಸೈಕಲು
ಜೊತೆಯಲಿ ನಡೆದರು ಬೀದಿಯ ಮಕ್ಕಳು
ಊರಿನ ತೋಪಲಿ ಹೊಸದೇ ಆಟ
ಅರಿಯದ ಕಿರಿಯಗೆ ಹಿರಿಯನ ಪಾಠ

ಕತ್ತರಿ ಕಾಲು ಹಾಕುತ ಏರು
ಪೆಡಲ್ ತುಳಿದು ಹಿಡಿ ಹ್ಯಾಂಡಲ್ ಬಾರು
ಹಾದಿಯ ಮೇಲೆ ಇರಬೇಕು ಗಮನ
ಕಲಿಕೆಯೇನಲ್ಲ ರಾಕೆಟ್ ವಿಜ್ಞಾನ

ನೀನೂ ಬಾರಮ್ಮ, ಮುಂದಿನ ಸುತ್ತಿಗೆ
ನಾವಿದ್ದೇವೆ ಭಯಬೇಡ, ಹತ್ತು ಮೆಲ್ಲಗೆ
ಎಲ್ಲರಿಗೂ ಇದೆ ಸಮಯಾವಕಾಶ
ಕಲಿಕೆಗೆ ಕೊಡುವನು ಸೈಕಲಂಗಡಿ ಪಾಷ